ಅನುಬಂಧ

ದಿಟ್ಟತನದಲ್ಲಿ ಭಾತೃತ್ವವನ್ನು ಹುಡುಕಿ
ಹೊರಟವಳಿಗೆ ದೊರಕಿದುದು
ದೂರದಲ್ಲೊಂದು ಆಶಾಕಿರಣ…..
ಬಾಲ್ಯದಲ್ಲಿ ಬೆಸೆದಿದ್ದ ಸಂಬಂಧಗಳು
ಹೇಳಹೆಸರಿಲ್ಲದೆ ಅಳಿದಿಹವು

ಕಾಲೇಜಿನಲ್ಲಿ ರಕ್ಷಾಬಂಧನದ ಹೆಸರಿನಲ್ಲಿ
ಎಷ್ಟೊಂದು ಸಹೋದರರು
ಬಣ್ಣಬಣ್ಣದ ಅನುಬಂಧಗಳವು
ಈ ಸಂಬಂಧಗಳು ದಿನಕಳೆದಂತೆ
ಬಣ್ಣ ಕಳೆದುಕೊಂಡಿದೆ.

ಕಾಲ ಚಕ್ರ ಉರುಳಿದಂತೆ
ಸಂಬಂಧಗಳ ಮಹತ್ವ ಅರಿತು
ಹುಡುಕಿದವಳಿಗೆ……
ಜನಪದರು ನೆನಪಾಗದೆ ಇರದು
ಬೆನ್ನಿಗೊಬ್ಬ ಸೂರ್ಯನಂತಹ ಅಣ್ಣ
ಚಂದ್ರನಂತ ತಮ್ಮ ಇರಬೇಕೆಂಬ
ಮಾತು ದಿಟ….

ಒಂದೇ ಬಳ್ಳಿ ಎಂದು ಜತನ ಮಾಡಿ
ಬೆಳೆಸಿದ ಅಪ್ಪ-ಅಮ್ಮ ಕಂಗಾಲಾಗಬೇಕೀಗ…
ಆದರೂ ಸಹೋದರರು ಸಿಗರೆ….

ಪುಟ್ಟ ತಮ್ಮನೊಬ್ಬ ಅಚಾನಕ್ಕಾಗಿ
ದೊರೆತು ಅಕ್ಕಾ ಎಂದಾಗ….
ಅಪರೂಪದ ಅನುಬಂಧ ಬೆಸೆದು
ಹೃದಯದ ಭಾವನೆಗಳೆಲ್ಲಾ ಅಳಿದು
ಸಂತಸದ ಒಡಲು ತುಂಬಿ
ರಕ್ಷಾಬಂಧನದ ದಿನ ರಕ್ಷೆ ಕಟ್ಟಿ
ಹಾರೈಸಿದಾಗ ಮನ ಸಂತಸದ
ಗೂಡಾಗಿತ್ತು.

ದಿವ್ಯ .ಎಲ್.ಎನ್.ಸ್ವಾಮಿ

Related post

Leave a Reply

Your email address will not be published. Required fields are marked *