ಅನಿಮಿತ್ತ ಬಂಧು… ನಿಮ್ಮ ಇದುವರೆಗಿನ ಜೀವನದಲ್ಲಿ ಯಾರಿಗೊ ಒಬ್ಬರಿಗಾದರು ನೀವು ಅನಿಮಿತ್ತ ಬಂಧುವಾಗಿದ್ದೀರಾ ?! ಆಗಿದ್ದರೆ ಕಂಗ್ರಾಟ್ಸ್, ನಿಮ್ಮೊಳಗಿನ ಪರಮಾತ್ಮ ಜಾಗೃತವಾಗಿದ್ದಾನೆಂದರ್ಥ. ಒಂದಷ್ಟು ಬೇಕು-ಬೇಡ, ಇರುವ-ಇಲ್ಲದಿರುವಿಕೆಯ ಹುಡುಕಾಟ, ಗೊಂದಲ, ಕೆಲವೊಮ್ಮೆ ಕಾಡುವ ಅಸ್ತಿತ್ವ… ಈ ಎಲ್ಲದರೊಳಗೆ ಅರ್ಧ ಆಯುಷ್ಯ ಜರುಗಿ ಹೋಗಿರುತ್ತದೆ. ನಡುನಡುವೆ ಅನೇಕರು ಬದುಕಿನೊಳಗೆ ಬಂದು ಹೋಗಿರುತ್ತಾರೆ. ನಾವೂ ಅನೇಕರ ಬದುಕಿನೊಳಗೆ ನಡೆದು ಹೋಗಿರುತ್ತೇವೆ. ಬಂದು ಹೋದವರಲ್ಲಿ ನೆನಪಲ್ಲಿ ಉಳಿದುಹೋದವರೆಷ್ಟೊ ? ಮತ್ತು ನೆಪದಲ್ಲಿ ಎದ್ದು ಹೋದವರೆಷ್ಟೊ ?! ಲೆಕ್ಕಾಚಾರಕ್ಕೆ ಕೂತರೆ ಅಗಣಿತ ತಾರೆಗಳು. ಯಾರಿದ್ದರೂ, […]Read More
ಮೊಬೈಲ್ ಅಥವಾ ಪುಸ್ತಕನಾ….. ಮೊಬೈಲ್ ಅಥವಾ ಪುಸ್ತಕನಾ….. ಮೊಬೈಲ್ ಇದ್ದರೆ ಟೈಮ್ ಪಾಸ್, ಕೈಯಲ್ಲಿ ಪುಸ್ತಕವಿದ್ದರೆ ಗುರಿ! ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಒಂದು ಮಾಯಾಲೋಕ. ಬೆರಳ ತುದಿಯಲ್ಲಿ ಇಡೀ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಈ ಸೌಲಭ್ಯದ ಹಿಂದೆ ಒಂದು ದೊಡ್ಡ ಅಪಾಯವೂ ಅಡಗಿದೆ. ಅದೇ ಸಮಯದ ವ್ಯರ್ಥ. ಮೊಬೈಲ್ ನೀಡುವ ಮನರಂಜನೆ ತಾತ್ಕಾಲಿಕ. ಅದು ನಮಗೆ ಮಜಾ ನೀಡಬಹುದು, ಆದರೆ ಜ್ಞಾನವನ್ನಲ್ಲ. ಮೊಬೈಲ್ ಬೇಡ ಅನ್ನುತ್ತಿಲ್ಲ ಆದರೆ ಅದು ನಮ್ಮನ್ನು ಆಳಬಾರದು, ಅಷ್ಟರ […]Read More
ಬದುಕೆಂಬ ಅಚ್ಚರಿ “ಬದುಕು” ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು. ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನು ಪಡೆಯಲಾರೆವು. ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ, ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ. ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ […]Read More
ಮಂಥರೆಯರಿದ್ದಾರೆ ಎಚ್ಚರಿಕೆ!!! ಮಂಥರೆ ನಿರ್ಗತಿಕಳು, ಕೈಕೇಯಿಯ ವಿವಾಹ ಕಾಲದಲ್ಲಿ ದಾಸಿಯಾಗಿ ಅವಳ ಜೊತೆಯಲ್ಲಿಯೇ ಬಳುವಳಿಯಾಗಿ ಬಂದವಳು. ಕುಳ್ಳಾಗಿಯೂ, ಅಷ್ಟಾವಕ್ರಳಾಗಿಯೂ ಇದ್ದ ಅವಳಿಗೆ ಅರಮನೆಯ ಆಶ್ರಯ ದೊರೆತದ್ದು ಅವಳ ವಿಕಾರ ರೂಪದಿಂದಲೇ. ದಶರಥನು ತನ್ನ ಹಿರಿಯ ಮಗ ರಾಮನಿಗೆ ಪಟ್ಟಾಭಿಷೇಕ ಮಾಡಲು ಯೋಚಿಸುತ್ತಿದ್ದಾನೆ ಎಂದು ಕೇಳಿದಾಗ ಅವಳು ಕೋಪಗೊಂಡು ಕೈಕೇಯಿಗೆ ಸುದ್ದಿಯನ್ನು ಹೇಳುತ್ತಾಳೆ. ಕೈಕೇಯಿ ಸಂತೋಷಪಡುತ್ತಾಳೆ ಮತ್ತು ಮಂಥರೆಗೆ ಮುತ್ತಿನ ಹಾರವನ್ನು ಕೊಡುತ್ತಾಳೆ. ಅದನ್ನು ಸ್ವೀಕರಿಸದ ಮಂಥರೆಯು ನಿನ್ನ ಮಗನನ್ನು ನಿನ್ನ ತವರಿಗೆ ಕಳುಹಿಸಿ, ಅವನಿಲ್ಲದೇ ಇರುವಾಗ ಇಲ್ಲಿ […]Read More
ನಮ್ ಕಂಪನಿ – ಹಾಸ್ಯ ನಾಟಕ ಅಶ್ವಥ್ ಕಲಾಭವನದಲ್ಲಿ “ವೇದಿಕೆ ಫೌಂಡೇಷನ್” ಕನ್ನಡ ರಂಗಭೂಮಿಗೆ ಹಲವಾರು ಉತ್ತಮ ನಾಟಕಗಳನ್ನು ಕೊಟ್ಟಿದೆ. ಈಗ ಇದೇ ತಂಡವು ಟಿ ಪಿ ಕೈಲಾಸಂ ಅವರ “ನಮ್ ಕಂಪನಿ” ಎಂಬ ಸಂಗೀತಮಯ ಹಾಸ್ಯ ನಾಟಕವನ್ನು ಅಶ್ವಥ್ ಕಲಾಭವನದಲ್ಲಿ ಇದೇ ಮಾರ್ಚ್ 21 ರ ಶನಿವಾರ ಸಂಜೆ 7ಕ್ಕೆ ಪ್ರದರ್ಶಿಸುತ್ತಿದೆ. ಟಿ ಪಿ ಕೈಲಾಸಂ ಅವರ ಕಂಪನಿ ಶೈಲಿಯ ಸಂಗೀತಮಯ ಹಾಸ್ಯ ನಾಟಕ ಇದಾಗಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು […]Read More
ನವ ನವೀನತೆಯ ಆರಂಭ – ಯುಗಾದಿ ಯುಗಾದಿ ಎಂದರೆ ಮೊದಲು ನೆನಪಾಗುವುದು ಬೇವುಬೆಲ್ಲದ ಮಿಶ್ರಣ, ಜೊತೆಗೆ ವಸಂತಮಾಸದ ಚಿಗುರು. ಯುಗಾದಿ ಹಲವು ಆರಂಭಗಳಿಗೆ ಮುನ್ನುಡಿ. ಚೈತ್ರ ಶುದ್ಧ ಪಾಡ್ಯಮಿಯ ದಿನವೆ ಯುಗಾದಿ. ಋತುಗಳ ರಾಜ ವಸಂತಕಾಲ ಆರಂಭವಾಗುವ ಈ ದಿನದಿಂದ ಸೂರ್ಯ ಕೊಂಚ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಕಾಲ. ಅಧಿಕೃತವಾಗಿ ಬೇಸಿಗೆಕಾಲ ಆರಂಭವಾಗುವ ದಿನ. ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಪ್ರತೀವರ್ಷದ ಯುಗಾದಿಗೂ ಹಳತರ ಅಂತ್ಯ ಮತ್ತು ಹೊಸ ಸಂವತ್ಸರದ ಆರಂಭವಾಗುತ್ತದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ […]Read More
ನಗುಮುಖದ ಮಂದಾರ…..ಅಪ್ಪು ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರುಸನಾದಿ ಅಪ್ಪಣ್ಣನಲಿ ನಟನಾ ಚತುರನಾದರುತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದರು ಕನ್ನಡ ಚಿತ್ರರಂಗಕ್ಕೆ ಹೊಸಬೆಳಕಾದವನುವಸಂತ ಗೀತೆಯ ಹಾಡಿದ ಮೌರ್ಯನುಪಡೆದರು ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿಯನುಯಾರಿವನು ಅಂದವರಿಗೆ ದೊಡ್ಮನೆ ಮಗನಾದನು ನಗು ನಗುತಾ ಬಾಳಿದ ಪರಶುರಾಮನುಅಪ್ಪಿ ಮುದ್ದಾಡಿತು ಕರುನಾಡು ಅಪ್ಪುವನುಅರ್ಪಿಸಿದರು ವೀರ ಕನ್ನಡಿಗನಿಗೆ […]Read More
ಸನ್ಮಾರ್ಗದ ದುಂಬಿ – ಕವನ ಸಂಕಲನ ಇತ್ತೀಚೆಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆಯಾದ ಪುಸ್ತಕ ಆತ್ಮೀಯರಾದ ಸಹೋದರ ಶ್ರೀ ಮುತ್ತು ಸರ್ ರವರು ರಚಿಸಿದ ಕವನ ಸಂಕಲನ ‘ಸನ್ಮಾರ್ಗದ ದುಂಬಿ’. ಅತ್ಯಂತ ಸರಳವಾಗಿ ಬಿಡುಗೊಡೆಗೊಳಿಸಿದ್ದು ಎಲ್ಲರಿಗೂ ಇದೊಂದು ಮಾದರಿ. ಮನುಷ್ಯನ ಅಂತರಂಗದ ಭಾವನೆಯನ್ನು ವ್ಯಕ್ತಪಡಿಸುವ ಸಾಧನಗಳು ಈ ಕವನ ಸಂಕಲನಗಳು. ಸನ್ಮಾರ್ಗದ ದುಂಬಿ ಕವನ ಸಂಕಲನದಲ್ಲಿ 69 ಕವನಗಳಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮುತ್ತು ಸರ್ ರವರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ.ಅವರಿಗೆ […]Read More
ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ!?… ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ ಕನಕದಾಸರ ಪ್ರಮುಖ ಕೀರ್ತನೆಯ ಸಾಲಿದು. ಅವರು ಆಧ್ಯಾತ್ಮಿಕವಾಗಿ ಬೇರೆಯದೇ ಅರ್ಥ ಉದ್ದೇಶದಿಂದ ಹೇಳಿದ್ದರೂ, ಲೌಕಿಕವಾಗಿ ಪ್ರಸ್ತುತ ಕಾಲಮಾನಕ್ಕೆ ಸರಿಯಾಗಿ ಒಪ್ಪುವಂತ ಸಾಲುಗಳಿವು. ಈಗೀಗ ಅಂತರ್ಜಾಲದ ಸಾಮಾಜಿಕ ಜಾಲತಾಣಗಳ ಮಾಯಾಜಾಲಕ್ಕೆ ಸಿಲುಕದವರಿಲ್ಲ ಎನ್ನುವಂತಾಗಿದೆ. ಸಣ್ಣ ಮಕ್ಕಳು ಮತ್ತು ಯುವಕರಿಂದ ಮುದುಕರವರೆಗೂ ಎಲ್ಲಾ ವಯಸ್ಸಿನ ಜನರು ಈ ಮಾಯಾಜಾಲದೊಳಗೆ ಸಿಲುಕಿರುವವರು ಸಿಗುತ್ತಾರೆ. ಆ ಮಾಯಾಜಾಲಾದೊಳಗೆ ಇವರಿದ್ದಾರೋ ಅಥವಾ ಅದೇ ಇವರನ್ನೆಲ್ಲ ಆವರಿಸಿದೆಯೋ ತಿಳಿಯದಷ್ಟು ಮುಳುಗಿದ್ದಾರೆ. ತತ್ಪರಿಣಾಮ ಮಾನಸಿಕ ಆರೋಗ್ಯ […]Read More
ತೋಳ – ಪಾಠ ಇಂದು, ನಾವೆಲ್ಲ ಒಂದು, ನಾವೆಲ್ಲ ಬಂಧು,ಓಡಬೇಡಿ ಯಾರೂ ನನಗಿಂತ ಮುಂದುಮಹಾಮಂತ್ರ ಸಮತೆ, ಇರಲಿ ಮಮತೆಆನೆಯತ್ತ ನೋಡಿತು ದುರದುರಗುಟ್ಟುತೆ ಕೂಡಿ ಬಾಳಿದರೆ ತಮ್ಮ, ಅದೇ ಸ್ವರ್ಗ ಸುಖನಾನು ನಿಮ್ಮ ಅಣ್ಣ, ನಾನು ನಿಮ್ಮ ಸಖದುಃಖ ಬಂದರೆ ಸಹಿಸಬೇಡಿ, ಜಗಳ ಯಾಕಆನೆ ಆನೆಗಳ ಕದನ, ತಮ್ಮ ಸಹನೆ ಜಪಿಸಬೇಕ ಎಲ್ಲರಿಗೂ ಇದೆ ತಲೆ ಎತ್ತಿ ಬದುಕುವ ಹಕ್ಕುಎಷ್ಟೊಂದು ಓಡುತಿದೆ ಈ ಕುದುರೆಗೂ ಸೊಕ್ಕುಆನೆಗೂ ಅಂಕುಶವಿಟ್ಟೆನಗೆ ನೀನ್ಯಾವ ಲೆಕ್ಕುಛಟಾ..ರೆಂದಿತು ಚಾಟಿ, ಕೆಳಗೆ ಬೂಟಿನ ಕಿಕ್ಕು ನಾಡಿನಾ ಕಾಡುಗಳಲಿ […]Read More