ನವಮಾಸದಲ್ಲಿ ನವಶಕ್ತಿ ನನ್ನವ್ವ

ನವಮಾಸದಲ್ಲಿ ನವಶಕ್ತಿ ನನ್ನವ್ವ ಕರುಳಕುಡಿ ಒಡಮೂಡಿದ್ದನ್ನುವೈದ್ಯರಿಂದ ಕೇಳಿ ಖುಷಿಯಾದಳುಮೊದಲ ತಿಂಗಳಲ್ಲಿ ನನ್ನವ್ವ ಗಂಡನ ಪ್ರೀತಿ ವಾತ್ಸಲ್ಯದ ಮಾತುಕೇಳಿ ಖುಷಿಯಾದಳು ಎರಡನೇ ತಿಂಗಳಲ್ಲಿತವರು ಮನೆಯ ಬರುವಿಕೆಯ ಸುದ್ದಿ ತಿಳಿದುಖುಷಿಯಾದಳು ಮೂರನೇ ತಿಂಗಳಲ್ಲಿ ಅತ್ತೆ ಮಾವರ ಆರೈಕೆಗೆ ಮನಸೋತುಖುಷಿಯಾದಳು ನಾಲ್ಕನೇ ತಿಂಗಳಲ್ಲಿತವರು ಮನೆಯ ಸೀಮಂತದಲ್ಲಿ ಹಸಿರು ಬಳೆ ಹಸಿರುಸೀರೆಯ ಉಟ್ಟು ಖುಷಿಯಾದಳು ಐದನೇ ತಿಂಗಳಲ್ಲಿ ಅಕ್ಕ ತಂಗಿಯರ ಕಚಗುಳಿಯ ಮಾತುಗಳಿಂದಖುಷಿಯಾದಳು ಆರನೇ ತಿಂಗಳಲ್ಲಿಮೈದುನ ನಾದಿನಿಯರು ನೀಡಿದಹುಳಿ ಹಣ್ಣುಗಳನ್ನು ಮನಸಾರೆ ಸವಿದುಖುಷಿಯಾದಳು ಏಳನೇ ತಿಂಗಳಲ್ಲಿ ಗರ್ಭದಲ್ಲಿರುವ ತನ್ನ ಕಂದನ ಮೆದುಗಾಲು ಒದೆವಾಗಖುಷಿಯಾದಳು […]Read More

ಹೊತ್ತಿಗೆಯ ಮಹತ್ವದ ಹೊತ್ತು

ಹೊತ್ತಿಗೆಯ ಮಹತ್ವದ ಹೊತ್ತು ರಾಶಿ ಹೂಗಳ ಮಧ್ಯೆಯಲಿಹೊತ್ತಿಗೆಯು ಇದೆ ನಡುವಲಿ!ಕಂಗಳಿಗಿಂಪು ಪುಷ್ಪಗಳ ನೋಟ..ಬುಧ್ದಿಗೆ ತಂಪು ಪುಸ್ತಕದ ಪಾಠ!! ಪ್ರಕೃತಿಯ ಹಸಿರದೆನಿತು ಸುಂದರನೈಸರ್ಗಿಕ ನೆಲೆಯ ಭಂಡಾರ!ಪುಸ್ತಕದಲಿಹ ಅಮಿತ ಜ್ಞಾನ..ಚಿರಾಯುವದು ಮಾಡಿದಾಗ ಮನನ!! ಸುಂದರ ಗಿರಿ ಶಿಖರದೊಳುಕಳೆಯುವ ಸಮಯವೇ ಚೆಂದ!ಹೊತ್ತಿಗೆಯ ನಿತ್ಯ ಓದುತಿರಲು..ಮನವಿರಲು ಅದರಲಿ,ಬಿಡದೀ ಬಂಧ!! ಕಣ್ತೆರೆದು ಹೂಬನವ ನೋಡಿದಾಗನಿಸರ್ಗವೆಂದಿಗೂ ಉಲ್ಲಾಸಮಯ!ಮನತೆರೆದು ಪುಸ್ತಕವ ಓದಿದಾಗ..ಜೀವನಪಾಠವು ಆನಂದಮಯ!! ಸುಮನಾ ರಮಾನಂದಮುಂಬೈRead More

ಶಾಯಿರಿ

ಶಾಯಿರಿ ಹಸಿರಾಗಿರಲಿ ಹಣ್ಣ ಹಣ್ಣ ಮುದುಕಿಯಾದ್ರೂನಿನ್ನ ಮುಖದಾಗಿನ ನಗು ಮಾಸದಂಗಿರ್ಲಿ!ನಾವಿಬ್ರೂ ಹಣ್ಣ ಹಣ್ಣ ಮುದುಕರಾದ್ರೂನಮ್ಮಿಬ್ಬರ ಪ್ರೀತಿ ಮಾತ್ರ ಸದಾ ಹಸಿರಾಗಿರ್ಲಿ!! ಚಂದ ಕಾಣತಿ ಸಿಟ್ಟ ಮಾಡಕೊಂಡಾಗೆಲ್ಲಾ ನೀನಎಷ್ಟ ಚಂದ ಕಾಣತೀ ಅಂದ್ರಇಡೀ ದಿನ ನಿನಗ ಸಿಟ್ಟಬರಸಗೊಂತನ ಇರಬೇಕನ್ನಸತೈತಿ!! ಬರ್ತೀನಿ ಪ್ರತೀ ರಾತ್ರಿ ಸ್ವಲ್ಪ ಕಿಡಕಿ ವಾರಿ ಮಾಡಿನನ್ನ ಹೆಸರು ತಗೊಂಡ ಮಲಗು !ನಿನ್ನ ಬಾಜೂಕ ಸ್ವಲ್ಪ ಜಗಾ ಬಿಟ್ಟೀರುತಪ್ಪದ ನಿನ್ನ ಕನಸನ್ಯಾಗ ಬರ್ತೀನಿ ! ಚಡಪಡಿಕೆ ನನ್ನ ಮನಸನ್ಯಾಗ ನಿನ್ನ ಹೆಸರುಅದೆಂಗ ಗಟ್ಟಿಯಾಗಿ ಅಚ್ಚೊತ್ತೇತಿ ಅಂದ್ರ ,ನಿನ್ನ […]Read More

ಪರಿಶುದ್ಧ

ಪರಿಶುದ್ಧ ಇರಲೆಮ್ಮ ಮನಮಂದಾನಿಲದ ತೆರದಿಸುಳಿಗಾಳಿ, ಬಿರುಗಾಳಿಯಾಗೊಡವೆ ಬೇಕಿಲ್ಲ! ಇರಲೆಮ್ಮ ಮನನಂದಾದೀಪದಂದದಿಹೊಟ್ಟೆಕಿಚ್ಚು ಹಚ್ಚದಿರಲಿಕಾಳ್ಗಿಚ್ಚನೆಲ್ಲೆಡೆ! ಇರಲೆಮ್ಮ ಮನತಿಳಿನೀರಿನಂದದಿ,ಬಗ್ಗಡವಾಗದಿರಲಿಅಗ್ಗದ ನುಡಿಗೆ! ಇರಲೆಮ್ಮ ಮನಧರಣಿಯ ತಾಳ್ಮೆಯಲಿ,ತುಳಿವವರಿಗೂ ನೀಡುತಆಸರೆಯನು! ಇರಲೆಮ್ಮ ಮನಆಗಸದ ಅನಂತತೆಯಂತೆ,ಮುಚ್ಚುಮರೆಯಿಲ್ಲದೆಪರಿಶುದ್ಧವಾಗಿ!! ಶ್ರೀವಲ್ಲಿ ಮಂಜುನಾಥಬೆಂಗಳೂರುRead More

ಸ್ವಾರ್ಥವಿಲ್ಲದ ಸಹಾಯ

ಸ್ವಾರ್ಥವಿಲ್ಲದ ಸಹಾಯ ಹಸ್ತಿನಾಪುರದ ಯುವರಾಜನಾದ ದುರ್ಯೋಧನನು ದುರಾಸೆಯಿಂದ ಪಾಂಡುವಿನ ಪುತ್ರರಾದ ಪಾಂಡವರನ್ನು ಇಂದ್ರಪ್ರಸ್ಥ ಅರಮನೆಯಿಂದ ಓಡಿಸಿ ಅವರ ಆಸ್ತಿಯನ್ನೂ ಕಬಳಿಸುವ ಉದ್ದೇಶದಿಂದ ಮಾವ ಶಕುನಿಯ ಕುತಂತ್ರದಂತೆ ಹಸ್ತಿನಾವತಿಗೆ ಪಗಡೆಯಾಟಕ್ಕೆ ಆಹ್ವಾನಿಸುತ್ತಾನೆ. ಶಕುನಿಯ ಹೆಣೆದ ಕುತಂತ್ರದಿಂದ ಧರ್ಮರಾಯನು ಪಗಡೆಯಾಟದಲ್ಲಿ ಸೋತು, ತಾನು ಗಳಿಸಿದ ಅಷ್ಟೂ ಸಂಪತ್ತು, ಗಳಿಸಿದ್ದ ಆಸ್ತಿ, ತನ್ನ ಸೈನ್ಯ, ಸಾವಿರಾರು ಕುದುರೆಗಳನ್ನು ಕಳೆದುಕೊಳ್ಳುತ್ತಾನೆ. ನಂತರದಲ್ಲಿ ಇಂದ್ರಪ್ರಸ್ಥ ಅರಮನೆ, ಸಹೋದರರಾದ ನಕುಲ, ಸಹದೇವ, ಅರ್ಜುನ, ಭೀಮ ಕೊನೆಗೆ ತನ್ನನ್ನೇ ತಾನು ಪಂದ್ಯಕ್ಕಿಟ್ಟು ಯುಧಿಷ್ಠಿರನು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಪಗಡೆಯಾಟದಲ್ಲಿ […]Read More

ಸಂಕ್ರಮಣ ಕಾಲ…

ಸಂಕ್ರಮಣ ಕಾಲ… ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬೆಳೆದ ಧಾನ್ಯ ರಾಶಿ ಹಾಕಿ, ಪೂಜೆ ಮಾಡಿ, ಭೂದೇವಿಗೆ ಕೃತಜ್ಞತೆ ಅರ್ಪಿಸುವ ಸಂಪ್ರದಾಯವು ಇದೆ. ಪೂಜೆಯ ಪ್ರಸದಾರ್ಥವಾಗಿ, ನೆನೆಸಿಟ್ಟ ಅಕ್ಕಿಗೆ, ಬೆಲ್ಲ ಮತ್ತು ಕಾಯಿತುರಿ ಸೇರಿಸಿ ನೈವೇದ್ಯ ಮಾಡಿ ತಿನ್ನಲು ಕೊಡುತ್ತಾರೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣ ಇವೆ..! ನಮ್ಮ ದೇಶದ ಆಚಾರ, […]Read More

ಡಾ. ಮನ್‌ಮೋಹನ್ ಸಿಂಗ್ ಆರ್ಥಿಕ ಶಾಸ್ತ್ರಜ್ಞ

ಡಾ. ಮನ್‌ಮೋಹನ್ ಸಿಂಗ್ ಆರ್ಥಿಕ ಶಾಸ್ತ್ರಜ್ಞ ಭಾರತದ ಆರ್ಥಿಕ ವಲಯದಲ್ಲಿ ಪ್ರಭಾವಿತ ವ್ಯಕ್ತಿತ್ವ ಡಾ. ಮನ್‌ಮೋಹನ್ ಸಿಂಗ್ ಅವರದು, ಅವರು ಆರ್ಥಿಕ ಹೂಡಿಕೆಗೆ ಮಹತ್ವಪೂರ್ಣ ಕೊಡುಗೆ ನೀಡಿದವರಾಗಿದ್ದಾರೆ. ಆರ್ಥಿಕತೆಯಲ್ಲಿ ವಿಶೇಷ ಶೈಲಿಯಲ್ಲಿನ ಬದಲಾವಣೆಗಳನ್ನು ತರಲು ಭಾಗಿಯಾಗಿದ್ದ ಅವರು ಭಾರತದ ಇತಿಹಾಸದಲ್ಲಿ ಬಹುಪಾಲು ಪ್ರಭಾವ ಬೀರುವ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಆರ್ಥಿಕ ಶಾಸ್ತ್ರಜ್ಞನಾಗಿ ಡಾ. ಮನ್‌ಮೋಹನ್ ಸಿಂಗ್ ಅವರು ಆರಂಭದಲ್ಲಿ ಆರ್ಥಿಕ ಶಾಸ್ತ್ರಜ್ಞನಾಗಿ ತಮ್ಮ ಪಥವನ್ನು ಆರಂಭಿಸಿದರು. 1950 ರ ದಶಕದಲ್ಲಿ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಆರ್ಥಿಕಶಾಸ್ತ್ರದಲ್ಲಿ ಪದವಿ […]Read More

ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ

ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ ಬಗೆ ಬಗೆಯ ಪ್ರಾಣಿ ಪಕ್ಷಿಗಳಲ್ಲಿ ವಿಧವಿಧವಾದ ಬೇಟೆಯ ಕ್ರಮಗಳಿವೆ, ಮಿಂಚುಳ್ಳಿ ಹಕ್ಕಿಯ ಬೇಟೆಯ ವಿಧಾನ ಬಹಳ ಆಕರ್ಷಕ. ನದಿ ತೊರೆಗಳ ಮೇಲೆ ಚಾಚಿದ ಮರಗಳ ಕೊಂಬೆಗಳಲ್ಲಿ ಅಥವಾ ನೀರಿನ ಹೆಬ್ಬಂಡೆಗಳ ಮೇಲೆ ತಪಸ್ಸಿಗೆ ಕೂತ ಮುನಿಗಳಂತೆ ಏಕಾಗ್ರತೆಯಿಂದ ಕಾದು ಕುಳಿತು, ದಿಡೀರನೆ ನೀರಿಗೆ ಚಂಗನೆ ನೆಗೆದು ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಬರುತ್ತವೆ. ಮೀನನ್ನು ಬೇಟೆಯಾಡುವ ಪಕ್ಷಿಗಳಲ್ಲೇ ಅತ್ಯಂತ ನಿಖರವಾಗಿ ನೀರಿನ ಆಳಕ್ಕೆ ಜಿಗಿದು ತಪ್ಪದೇ ಮೀನನ್ನು ಹೊರತರುವ ಮಿಂಚುಳ್ಳಿಯ ಬೇಟೆಯ ವಿಧಾನದಿಂದಾಗಿ […]Read More

ಕಾಲೇಜಿನ ಕಾಟ

ಕಾಲೇಜಿನ ಕಾಟ ಪರಪರ ಪರಪರ ಪರದಾಟ,,ಪ್ರೀತಿ ಪ್ರೇಮದ ಹುಡುಗಾಟ.ಅಲೆಅಲೆ ಅಲೆಅಲೆ ಅಲೆದಾಟಬದುಕಿಗೆ ಬೆಳಕಿನ ಹುಡುಕಾಟ.ಕಾಲೇಜಿನ ವಯಸ್ಸು ಗಾಳಿಪಟಎಡವಿದರೆ ಬದುಕೆ,,, ಧೂಳಿಪಟ.!!೧!! ಸರಸರ ಸರಸರ ಸರಸಗಳುಗುಸುಗುಸು ಪಿಸುಪಿಸು ಮಾತುಗಳುತರಲೆಗು ಮೀರಿದ ಹರಟೆಗಳುಬಿದಿ ಹಲೆಯುವ ಜರಟೆಗಳುಗುರುಗಳ ಮಾತೆ ಸತ್ಯಗಳುಕೇಳದ ಬದುಕಲಿ ಮುಳ್ಳುಗಳು.!!೨!! ಚಿಣಿಮಿಣಿ ಅನ್ನುವ ಬಟ್ಟೆಯಲಿಅಳುಕುತ ಬಳುಕತ ರಸ್ತೆಯಲಿತಂದೆ ತಾಯಿಯ ಕನಸಿನಲಿನಿಮ್ಮಯ ಬದುಕಿದೆ ಬೆವರಿನಲಿಕಲಿಯದೆ ಇದ್ದರೆ ಬದುಕಿನಲಿನರಕವೆ ಇರುವುದು ಬಾಳಿನಲಿ.!!೩!! ದೇಹದ ಮೋಹದ ಸೆಳೆತವಿದೆಸೆಳೆತಕೆ ಸಿಕ್ಕರೆ ನಾಶವಿದೆಅವನಿಗು ಅವಳಿಗು ಬದುಕು ಇದೆಬದುಕುವ ದಾರಿಯು ಉದ್ದವಿದೆ.ಕಲಿಕೆಯ ವಿಷಯವು ಆಳವಿದೆಕಲಿತರೆ ಬದುಕಲಿ ಬೆಳಕು […]Read More

ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು…

ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು… ಪುಸ್ತಕ : ಗೋಧೂಳಿ ಗಂಧಕವಿ : ಪ್ರೊ. ಸಿದ್ದು ಸಾವಳಸಂಗ ತಾಜ್ಪುರಪ್ರಕಾಶಕರು : ಕಾವ್ಯ ಭಾರತೀ ಪ್ರಕಾಶನ ಕವಿತೆಯ ಎದೆಯ ಕದವ ತೆರೆಯೆ ಎಷ್ಟೊಂದು ಕವಿತೆಗಳುಮನದ ತುಮುಲವ ಹಾಡಲುಒಂದಾದರೂ ಕವಿತೆಗೆಸಾಧ್ಯವಾಗಿದೆಯೇ ಬೆಳಕ ಹಚ್ಚಲು ಹೀಗೆ ಕವಿ ಕೇಳುವ ಪ್ರಶ್ನೆಗೆ ಎಷ್ಟೋ ಸಾವಿರ ವರ್ಷಗಳ ಇತಿಹಾಸವಿದೆ. ಉತ್ತರ ಬಹುಶಃ ಯಾವ ಕವಿಗೂ ಸಿಕ್ಕಿಲ್ಲ ಆದರೆ ಕವಿ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಯಾರು ಕೇಳಲಿ, ಬಿಡಲಿ ನನ್ನ ಕಾರ್ಯವನ್ನು ನಾನು ಮಾಡುತ್ತೇನೆ ಎಂದು […]Read More