ಗುರುಸ್ಮರಣೆ ಬಾಲ ಭಾಸ್ಕರನಹೊಳೆವ ಹೊಂಗಿರಣಗುರು ಚರಣಕ್ಕೆರಗಲಿ! ಮಂದ ಮಾರುತದಇಂಪು ಗಾಯನವುಗುರು ಗೀತೆ ಭಜಿಸಲಿ! ಇಳೆಗಿಳಿವ ಮಳೆಯತುಂತುರೆಲ್ಲವೂ ತಾಗುರುವಿಗಭಿಷೇಕ ಮಾಡಲಿ! ಧರಣಿ ಅರಳಿಸುವಘಮದ ಸುಮವೆಲ್ಲವೂಗುರುವಿನ ಮುಡಿಯೇರಲಿ! ಅನು ದಿನ ಅನು ಕ್ಷಣನನ್ನ ಮನದ ತುಂಬೆಲ್ಲಾಗುರುನಾಮ ಅನುರಣಿಸಲಿ!! ಶ್ರೀವಲ್ಲಿ ಮಂಜುನಾಥRead More
ನಮ್ಮಮ್ಮ ಕಾವೇರಿ ಕಾವೇರಿ !! ಅಂದರೆ ಅವಳು ಬರೀ ನೀರಿನ ಹನಿಯಲ್ಲ ಸಿಹಿಯಾದ ಜೇನು. ಕನ್ನಡಿಗರ ಹೆಮ್ಮೆಯ ಮನೆ ಮಗಳು. ಇನ್ನೂ ಕೆಲ ಕವಿಗಳು ಅವಳಿಗೆ ಪೂಜ್ಯ ಸ್ಥಾನ ಕೊಟ್ಟು ತೀರ್ಥವೆಂದೆನ್ನುತ್ತಾರೆ. ಅವಳ ವರ್ಣನೆ ಮಾಡದ ಕವಿಗಳಿಲ್ಲ. ಅವಳಿಗೂ ಕವಿಗಳಿಗೂ ಅಗಾಧ ಅನುಬಂಧವಾದರೂ, ಅವಳ ಅಂದ ವರ್ಣನೆಗೂ ಮೀರಿದ್ದು. ಅವಳಿಂದಲೇ ಭೂತಾಯಿ ಮಡಿಲು ಹಚ್ಚ ಹಸಿರು, ಈ ಇಳೆಗೆ ಬೆಳೆ, ಕಳೆ ಎಲ್ಲವೂ. ನಿತ್ಯವೂ ನೋಡುಗರಿಗೆ ನೂತನ, ಚೇತನ ಮನೋಹರವಾಗಿದ್ದಾಳೆ ಈ ಕಾವೇರಿ. ವಿಷ್ಣುವರ್ಧನ್ ಅಭಿನಯದ ‘ಜೀವನದಿ’ […]Read More
ಬೆಲೆ ಕಟ್ಟಲಾಗದ ಬಳಪ ಹಿಡಿದ ಭಗವಂತ ಅಕ್ಷರ ಕಲಿಸಿ ಬದುಕು ತೋರಿಸಿದವರುಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರುಪರ ಊರಿನಿಂದ ಬಂದು ಬೋಧಿಸಿದವರುಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆಪೂಜಿಸಿ ಬಳಪ ಹಿಡಿದ ಭಗವಂತನಿಗೆಪ್ರೀತಿ ಮಮತೆಯ ಎರಡನೇ ತಾಯಿಗೆ ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರುಏನು ಇಲ್ಲದ ಮೆದುಳಿಗೆ ಜ್ಞಾನ ತುಂಬಿದರುನನ್ನಂತೆ ನನ್ನ ಶಿಷ್ಯ ಬೆಳೆಯಬೇಕು ಎಂದರುಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರುಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ […]Read More
ಆರ್ಕಿಡ್ ಮಿಡತೆ ಹೆಣ್ಣನ್ನ ಹೂವಿಗೆ ಹೋಲಿಸಿ ಸಂಪಿಗೆಯ ನಾಸಿಕದವಳೇ ,ಮಲ್ಲಿಗೆಯ ಮೈಯವಳೇ ,ಹೂವಂತ ಮನಸ್ಸಿನವಳೇ ಅಂತೆಲ್ಲಾ ಅಗಾಧ ರಸಿಕತೆಯಿಂದ ಬರೆಯವ ಪೇಸ್ಬುಕ್ ಕವಿಗಳ ಕವನಗಳನ್ನ ಓದುವಾಗ , ಒಂದೊಂದ್ಸಲಾ ನನಗೂ ಆ ತರ ಬರೆಯಲಿಕ್ಕೆ ಬರುವುದಿಲ್ಲವಲ್ಲ ಅಂತ ಮತ್ಸರವಾಗುತ್ತೆ. ನಾನೂ ಒಂದಿನ ನಿಮ್ಮನೆಲ್ಲಾ ಮೀರಿಸೋವಂತ ಒಂದು ಕವನದ ಗ್ರಂಥವನ್ನೇ ಬರೆದುಬಿಡ್ತೇನೆ .ಹ್ಞಾಂ ಇರಲಿ… ಅಂದಂಗೆ ಭಾರತೀಯ ಉಪಖಂಡಕ್ಕೆ ಹೊಂದಿಕೊಂಡಿರುವ ಆಗ್ನೇಯ ಏಷ್ಯಾದ ಬರ್ಮಾ, ಬ್ರೂನಿ, ಕಾಂಬೋಡಿಯಾ, ಇಂಡೋನೇಶಿಯಾ, ಲಾವೋಸ್,ಮಲೇಷಿಯಾ, ಫಿಲಿಪೀನ್ಸ್, ಸಿಂಗಾಪುರ್, ವಿಯೆಟ್ನಾಂ ದೇಶಗಳ ನಿತ್ಯಹರಿದ್ವರ್ಣದ ಮಳೆಕಾಡುಗಳಲ್ಲಿ […]Read More
ಬೇಡಿ ಕಳಚಿದಾಗ ವರ್ಷಗಳ ಪ್ರೀತಿಯ ಬೇರುಆಳವಾಗಿ ಅಂತರಾಳದಿ ನೆಲೆಸಿದೆ!ಅಗಲಿಕೆಯ ನೋವನು ಕ್ಷಣಿಕವೂ..ಭರಿಸಲಾರದ ಮನವಿದು ಕಲಕಿದೆ!! ಹೆತ್ತ ಕರುಳದು ಸದಾ ಜೊತೆಯಿರಲುಬಯಸಿ ತಪಿಸಿ ನೋವನುಂಡಿದೆ!ನೆನಪುಗಳ ನಾವೆಯಲಿ ಮನ ತೇಲುತಿರಲು..ಅಗಲುವ ಸಂಕಟ ಹೃದಯವ ಹಿಂಡಿದೆ!! ಕಾಲಚಕ್ರವಿದು ಗರಗರನೆ ತಿರುಗಿಯಾರನೂ ಕಾಯದೇ ಉರುಳುತಲಿದೆ!ಪ್ರೀತಿಯ ಹಕ್ಕಿಯು ರೆಕ್ಕೆಬಲಿತು..ಬಾನಂಗಳದಿ ಹಾರಲು ಅಣಿಯಾಗಿದೆ!! ಮನವು ಭರವಸೆಗಳಲಿ ಬೆರೆತು ಅರಿತುಬಾಳ ಉಯ್ಯಾಲೆಯು ತೃಪ್ತಿಯಲಿ ಜೀಕುತಿದೆ!ತನ್ನದೇ ನೆಲೆಯಲಿ ಅಸ್ತಿತ್ವ ಹುಡುಕಲು..ತವಕಿಸುವ ಪಕ್ಷಿ ತನ್ನ ಗುರಿ ತಲುಪಿದೆ!! ಸುಮನಾ ರಮಾನಂದRead More
ಜಾತ್ರೆಯ ಮೂರು ಗೊಂಬೆಗಳು ಒಂದು ಊರಿನ ಜಾತ್ರೆಯು ವಿಜೃಂಭಣೆಯಿಂದ ನಡೆದಿತ್ತು. ಜಾತ್ರೆಯಲ್ಲಿ ಇಡೀ ಊರಿಗೆ ಊರೇ ಸೇರಿತ್ತು. ವೈವಿಧ್ಯಮಯ ಅಂಗಡಿಗಳು, ಹೋಟೆಲ್ಗಳ ಹಬ್ಬವೇ ಅಲ್ಲಿತ್ತು. ಜಾತ್ರೆಗೆ ಒಬ್ಬ ಒಬ್ಬ ರೈತ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದ. ಜಾತ್ರೆಯಲ್ಲಿ ಮಗಳಿಗೆ ತಿಂಡಿ ತಿನಿಸು, ಬಟ್ಟೆಬರೆ, ಪುಸ್ತಕಗಳನ್ನು ಕೊಡಿಸಿ ಮನೆಗೆ ಹೊರಡುತ್ತಾನೆ. ಹೀಗೆ ಮನೆಗೆ ಹೋಗುತ್ತಿರಬೇಕಾದರೆ ಅಲ್ಲಿನ ಗೊಂಬೆಗಳ ಮಳಿಗೆಯ ಮುಂಭಾಗಕ್ಕೆ ಮಗಳೊಂದಿಗೆ ಬರುತ್ತಾನೆ. ಗೊಂಬೆಯ ಅಂಗಡಿಯಲ್ಲಿದ್ದ ಸುಂದರವಾದ ಗೊಂಬೆಗಳನ್ನು ನೋಡಿ ರೈತನ ಮಗಳು ತನಗೆ ಗೊಂಬೆ ಬೇಕು ಎಂದು […]Read More
ಕವಿ ಶ್ರೀ ಮುತ್ತು ವಡ್ಡರ ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ… ವಿಶ್ವ ಬಂಜಾರ ಕಲಾ ಸಾಹಿತ್ಯ ಸಂಘ (ರಿ ) ಅಮೀನಗಡ ಹಾಗೂ ಬರಹವೇ ಶಕ್ತಿ ವೇದಿಕೆಯ ವತಿಯಿಂದ ಹುನಗುಂದ ತಾಲೂಕಿನ ಐಹೊಳೆಯಲ್ಲಿ ದಿನಾಂಕ 07-07-2024 ರವಿವಾರ ದಂದು ನಡೆಯುತ್ತಿರುವ ಪ್ರಥಮ ಚಾಲುಕ್ಯ ಸಾಹಿತ್ಯ ಸಮ್ಮೇಳನ ಹಾಗೂ ಬಹು ಭಾಷಾ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಚವಾಣ್ ರವರು ಪತ್ರಿಕಾಗೋಷ್ಠಿಗೆ ತಿಳಿಸಿದ್ದಾರೆ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ […]Read More
ಸಹಜಾತ ಅಕ್ಕನ ಕಂಡರೆ ಅದೆಷ್ಟು ಪ್ರೀತಿ ಇವಗೆಅವಳ ಸೆರಗ ಹಿಡಿದು ಸುತ್ತಾಡುವಗೆಭೂ ತಾಯಿಯ ತಮ್ಮ ಚಂದಿರಗೆ ನೀಲಾಕಾಶದ ಒಡೆಯನುಪಡುವಣದಿ ಮೂಡಿದವನುಇವನೇ ಬಾಲ ಚಂದಿರನು ದಿನ ದಿನವೂ ಅರಳಿ ನಗುವವನುಪಕ್ಷಕ್ಕೊಮ್ಮೆ ಬೆಳಗುವವನುಪೌರ್ಣಮಿಯ ಚಂದಿರನು ಇವನ ಕಂಡ ಸಮುದ್ರರಾಜಭರತದ ಅಲೆಗಳಲಿ ಜಿಗಿದಾಡಿದಇಳಿತ ಸಪ್ಪಳದಿ ತೊನೆದಾಡಿದ ವಸುಂಧರೆಯ ಪ್ರಿಯ ಸಹೋದರಪ್ರೀತಿಯ ಚಂದಿರ ನೀನೆಷ್ಟು ಸುಂದರ… ಸಿ.ಎನ್. ಮಹೇಶ್Read More
ಸೋಜಿಗದ ಬದುಕು ಊರ ದಾರಿಯಲ್ಲಿ ನಡೆವನೆನಪ ಹಾದಿಯಲ್ಲಿ ಪಡೆವಸುಖವದೆಷ್ಟು ಸೋಜಿಗ!! ಹರಿದ ಚಡ್ಡಿ, ಸುರಿವ ಮೂಗುಬಗಲಿಗೊಂದು ಪಾಟಿ ಚೀಲರಸ್ತೆ, ಓಣಿ ತೋಟ, ಗದ್ದೆಯಲ್ಲಿ ನಡೆದಕಾಲ್ಗಳೆಷ್ಟು ಸೋಜಿಗ!! ನಿಂಬೆಹುಳಿಯ ಪೆಪ್ಪರಮಿಂಟುಕಡ್ಲೆಪುರಿ ಚಾಕಲೇಟುಮೂಲೆಯಂಗಡಿಯ ಶೆಟ್ಟಿಸಂತೆಯಲ್ಲಿ ಸಿಕ್ಕ ಸುಖವದೆಷ್ಟು ಸೋಜಿಗ!! ಬಾಯಿಪಾಠ ಹೇಳಿಸುತ್ತಲೆಕ್ಕ, ಮಗ್ಗಿ ಮಾಡಿಸುತ್ತಕಾಗುಣಿತವ ಹೇಳಿಕೊಟ್ಟಅಮ್ಮನೆಂತ ಸೋಜಿಗ!! ನನಗೆ ಗುರಿಯ ಹಾಕಿಕೊಟ್ಟುನಡೆವ ದಾರಿ ತೋರಿಕೊಟ್ಟಗುರುವು ಅದೆಂತಾ ಸೋಜಿಗ!! ಒಮ್ಮೆ ಹೆಮ್ಮೆಯಿಂದ ಬೀಗಿಅಹಮಿಕೆಯಲ್ಲಿ ಸಾಗಿಎಡವಿಬಿದ್ದ ಗಳಿಗೆಯಲ್ಲಿಅಹಂಕಾರವೆಲ್ಲ ಬಾಗಿ ಅಲ್ಲಿ ಬಿದ್ದು, ಇಲ್ಲಿ ಎದ್ದುಎಲ್ಲಿ ಎಲ್ಲೋ ಅಲೆದಾಡುವಮತ್ತೆ ಮಣ್ಣ ಸೇರುವಬದುಕದೆಷ್ಟು ಸೋಜಿಗ!! ಸುನೀಲ್ […]Read More
ಬಂಡಿ ಹೀಗೆ ಹೋಗುತ್ತಿತ್ತುಅಪ್ಪ ಕೊಳ್ಳು ಕಟ್ಟಿದ ಬಂಡಿ ಮನೆಯಲ್ಲಿಯೇ ಹುಟ್ಟಿದಅಳಿಯ ಮಾವಕೆಂದ,ಮಾಸ ಹೋರಿಮೂರನೇ ತಲೆಮಾರಿಗೆ ಸಾಕ್ಷಿಯಾಗಿಸಂತಸದಲ್ಲಿದ್ದವು ಅಪ್ಪ ಒಡೆಯರ ಕಾಲದಲಿಲ್ಲದಿದ್ದರುಒಡೆಯರಂತಿದ್ದುಒಕ್ಕಲುತನದಲ್ಲಿ ಜೋಡೆತ್ತಿನ ಬಂಡಿಯೇಅಪ್ಪನ ಅಂಬಾರಿ ಅಂಬಾರಿ ಹೊರುವಕರ್ಣ ಅರ್ಜುನನಂತಿದ್ದ ಹೋರಿಗಳುದಸರಾ ಆನೆಯನ್ನು ಮೀರಿಸುತ್ತಿದ್ದವುಗಳೇ ಹೊಡೆದು ದಣಿದುಹೊಲದ ಓಣಿಯಲ್ಲಿಗಿಲ್ ಗಿಲ್ ಸದ್ದು ಮಾಡಿಓಡೋಡಿ ಬರುತ್ತಿದ್ದರೆಊರಿಗೆ ಊರೇ ನೋಡುವಂತಿದ್ದವು ನಗ ಕೂರಿಗೆ ಕುಂಟಿಕುಡ ಕಳೆಬಾರ ಪಿಳಗುಂಟಿಎಡೆ ಕುಂಟಿಎಳಶೆಡ್ಡಿ,ಶೆಡ್ಡಿ ಬಟ್ಟಲುಮಿನಿ ಹಗ್ಗ ಬ್ಯಾಕೋಲುಮಡಿಕಿ ನೇಗಿಲು ಕಳೆ ಚತಿಗಿತಾಳುಎಲ್ಲವೂ ಅಪ್ಪನ ಅಂಬಾರಿಯಪ್ರಯಾಣಿಕರುಒಮ್ಮೊಮ್ಮೆ ಮನೆಮಂದಿ,ಹಾದಿಯಲ್ಲಿ ಕೈ ತೋರಿದವರು ಕಾರಹುಣ್ಣಿವೆಗೆಅಪ್ಪ ಎತ್ತು ಮೈತೊಳೆದುಕೋಡಿಗೆ ಬಣ್ಣ ಹಚ್ಚಿಅಂಬಾರಿಗೂ […]Read More