ಕಲಾ ಪ್ರದರ್ಶನ – ಸಂಸ್ಕಾರ ಭಾರತೀ ವತಿಯಿಂದ…. ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ 75 ರ ಶೀರ್ಷಿಕೆಯಡಿಯಲ್ಲಿ ಕಲಾ ಪ್ರದರ್ಶನವನ್ನುಸಂಸ್ಕಾರ ಭಾರತೀ ಕರ್ನಾಟಕ, ದಕ್ಷಿಣ ಪ್ರಾಂತ ದೃಶ್ಯಕಲಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕಲಾ ಪ್ರದರ್ಶನದಲ್ಲಿ ಕರ್ನಾಟಕದ ಖ್ಯಾತ 75ಕ್ಕೂ ಹೆಚ್ಚು ಕಲಾವಿದರು ಐತಿಹಾಸಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ಕ್ಷೇತ್ರ ಒಳಗೊಂಡಂತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶನಗೊಳಿಸಲಿದ್ದಾರೆ. ದಿನಾಂಕ 12.06.2026, ಶುಕ್ರವಾರ ಬೆಳಗ್ಗೆ 10:30ಕ್ಕೆ ಖ್ಯಾತ ಕಲಾವಿದರಾದ ಶ್ರೀ ಎಸ್ ಜಿ ವಾಸುದೇವ್ ಕಲಾಪ್ರದರ್ಶನ ಉದ್ಘಾಟಿಸಲಿದ್ದು, ಸಂಸ್ಕಾರ ಭಾರತೀ ಕರ್ನಾಟಕ […]Read More
ಅಮ್ಮ – ಅಜರಾಮರ…. ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ಅರಸ ಶ್ರೀ ಕೃಷ್ಣದೇವರಾಯ ಕೇವಲ ಒಬ್ಬ ಶೂರ ಯೋಧ ಅಥವಾ ದಕ್ಷ ಆಡಳಿತಗಾರ ಮಾತ್ರವಲ್ಲ, ಆತ ಒಬ್ಬ ಪರಮ ಮಾತೃಭಕ್ತ ಕೂಡ ಹೌದು. ಇತಿಹಾಸದ ಪುಟಗಳಲ್ಲಿ ರಾಜರು ತಮ್ಮ ವೈಭವಕ್ಕಾಗಿ ಅರಮನೆಗಳನ್ನು ಅಥವಾ […]Read More
ಬಿ ಎಸ್ ದೇಸಾಯಿ – ಬಹುಮುಖ ಪ್ರತಿಭೆಯ ಕಲಾವಿದ ನಮ್ಮ ನಾಡಿನ ಹಿರಿಯ ಕಲಾವಿದರು ಹಾಗೂ ಛಾಯಾಚಿತ್ರಗಾರರು ಆದ ಬಿ ಎಸ್ ದೇಸಾಯಿ ರವರಿಗೆ ಇತ್ತೀಚಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರ ಹುಡುಕಿಕೊಂಡು ಬಂದಿದೆ. ಸರಳ ಸಜ್ಜನ ಮೃದು ಭಾಷಿ ಬಿ.ಎಸ್.ದೇಸಾಯಿ ಯವರು ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಸಮಕಾಲೀನ ದೃಶ್ಯ ಕಲಾವಿದ. ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ಇವರು ಚಿತ್ರಕಲೆಯ ಮೂಲಕ ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡಿದ್ದಾರೆ. ಇವರ ಕಲಾ ಪಯಣವು ಪ್ರಕೃತಿಯ […]Read More
ಬದಲಾಗು ನೀ ಬೆಳಕಾಗು ನೀ – ಪುಸ್ತಕ ಬಿಡುಗಡೆ ಕೊಪ್ಪಳದ ಶ್ರೀ ಗವಿಮಠದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ನಾಲ್ಕನೇ ಕೃತಿ “ಬದಲಾಗು ನೀ ಬೆಳಕಾಗು ನೀ” ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಬಿಡುಗಡೆಯಾಯಿತು. ಪರಮ […]Read More
ಅಂಗವಿಕಲತೆ ಶಾಪವಲ್ಲ ಅದೊಂದು ಅವಕಾಶ – ಜೆಸ್ಸಿಕಾ ಕಾಕ್ಸ್ ಅಂಗವೈಕಲ್ಯ ಒಂದು ರೀತಿಯಲ್ಲಿ ವ್ಯಕ್ತಿಯ ಕೊರತೆಯಲ್ಲ ಎನ್ನಬಹುದು, ಬದಲಿಗೆ ಸಾಧನೆಯ ಹಸಿವು ಇರುವರಿಗೆ ಅದೊಂದು ಅವಕಾಶವೇ ಸರಿ. ವಿಕಲಚೇತನರೂ ಇಂದು ಮಹತ್ತರವಾದ ಸಾಧನೆಯನ್ನು ಮಾಡಿ ಪ್ರಾಪಂಚಿಕ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಅವರ ಪೈಕಿ ನಿಕ್ ವುಜಿಸಿಕ್, ಜೆಸ್ಸಿಕಾ ಕಾಕ್ಸ್, ಮಾನಸಿ ಜೋಶಿ, ಆಸ್ಕರ್ ಪಿಸ್ಟೋರಿಯಸ್ ಮೊದಲಾದವರು ಪ್ರಮುಖರು. ಜೆಸ್ಸಿಕಾ ಕಾಕ್ಸ್ ಗರ್ಭಾವಸ್ಥೆಯಲ್ಲಿ ಕಂಡುಬರುವ ಅನುವಂಶಿಕ ರೋಗದ ಕಾರಣದಿಂದ ಹುಟ್ಟುವಾಗಲೇ ತೋಳುಗಳಿಲ್ಲದೆ ಹುಟ್ಟಿದಳು. ನನಗೇಕೆ ಎಲ್ಲಾ […]Read More
ಮಾರ್ಕೋಲು – ವಿಧಿಯಾಟದ ಕಾದಂಬರಿ ಪುಸ್ತಕ – ಮಾರ್ಕೋಲುಲೇಖಕರು – ಆಶಾ ರಘುಪ್ರಕಟಣೆ : ಉಪಾಸನ ಬುಕ್ಸ್ ಮಾರ್ಕೋಲು’ ಆಶಾ ರಘು ಅವರು ರಚಿಸಿದ ಒಂದು ಜಾನಪದ ಆಧಾರಿತ ಕಾದಂಬರಿ. ಅವರೇ ತಿಳಿಸಿರುವಂತೆ. ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ಗೆ ಸಮಾನವಾದ ಕಥಾವಸ್ತುವನ್ನು ಹೊಂದಿರುವ ಈ ಕಥೆಯ ನಡು ನಡುವೆ ಲೇಖಕರು ‘ಸಂತಾಲಿ’, ‘ಮರಾಠಿ’, ತಮಿಳು ಕನ್ನಡ ಮೊದಲಾದ ಭಾಷೆಯ ಜನಪದ ಕಥೆ- ಉಪಕಥೆಗಳನ್ನೂ ಬಳಸಿದ್ದಾರೆ. ಇದು ಕಾದಂಬರಿಗೆ ವಿಶೇಷ ಮೆರಗು ನೀಡುವಂತಿದೆ. ಬಾಲ್ಯದಲ್ಲಿ ಲೇಖಕಿಗೆ ಸಂಪಿಗೆ ಲಕ್ಷ್ಮಮ್ಮನವರು ಹೇಳುತ್ತಿದ್ದ […]Read More
ಅನಿಮಿತ್ತ ಬಂಧು… ನಿಮ್ಮ ಇದುವರೆಗಿನ ಜೀವನದಲ್ಲಿ ಯಾರಿಗೊ ಒಬ್ಬರಿಗಾದರು ನೀವು ಅನಿಮಿತ್ತ ಬಂಧುವಾಗಿದ್ದೀರಾ ?! ಆಗಿದ್ದರೆ ಕಂಗ್ರಾಟ್ಸ್, ನಿಮ್ಮೊಳಗಿನ ಪರಮಾತ್ಮ ಜಾಗೃತವಾಗಿದ್ದಾನೆಂದರ್ಥ. ಒಂದಷ್ಟು ಬೇಕು-ಬೇಡ, ಇರುವ-ಇಲ್ಲದಿರುವಿಕೆಯ ಹುಡುಕಾಟ, ಗೊಂದಲ, ಕೆಲವೊಮ್ಮೆ ಕಾಡುವ ಅಸ್ತಿತ್ವ… ಈ ಎಲ್ಲದರೊಳಗೆ ಅರ್ಧ ಆಯುಷ್ಯ ಜರುಗಿ ಹೋಗಿರುತ್ತದೆ. ನಡುನಡುವೆ ಅನೇಕರು ಬದುಕಿನೊಳಗೆ ಬಂದು ಹೋಗಿರುತ್ತಾರೆ. ನಾವೂ ಅನೇಕರ ಬದುಕಿನೊಳಗೆ ನಡೆದು ಹೋಗಿರುತ್ತೇವೆ. ಬಂದು ಹೋದವರಲ್ಲಿ ನೆನಪಲ್ಲಿ ಉಳಿದುಹೋದವರೆಷ್ಟೊ ? ಮತ್ತು ನೆಪದಲ್ಲಿ ಎದ್ದು ಹೋದವರೆಷ್ಟೊ ?! ಲೆಕ್ಕಾಚಾರಕ್ಕೆ ಕೂತರೆ ಅಗಣಿತ ತಾರೆಗಳು. ಯಾರಿದ್ದರೂ, […]Read More
ಮೊಬೈಲ್ ಅಥವಾ ಪುಸ್ತಕನಾ….. ಮೊಬೈಲ್ ಅಥವಾ ಪುಸ್ತಕನಾ….. ಮೊಬೈಲ್ ಇದ್ದರೆ ಟೈಮ್ ಪಾಸ್, ಕೈಯಲ್ಲಿ ಪುಸ್ತಕವಿದ್ದರೆ ಗುರಿ! ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಒಂದು ಮಾಯಾಲೋಕ. ಬೆರಳ ತುದಿಯಲ್ಲಿ ಇಡೀ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಈ ಸೌಲಭ್ಯದ ಹಿಂದೆ ಒಂದು ದೊಡ್ಡ ಅಪಾಯವೂ ಅಡಗಿದೆ. ಅದೇ ಸಮಯದ ವ್ಯರ್ಥ. ಮೊಬೈಲ್ ನೀಡುವ ಮನರಂಜನೆ ತಾತ್ಕಾಲಿಕ. ಅದು ನಮಗೆ ಮಜಾ ನೀಡಬಹುದು, ಆದರೆ ಜ್ಞಾನವನ್ನಲ್ಲ. ಮೊಬೈಲ್ ಬೇಡ ಅನ್ನುತ್ತಿಲ್ಲ ಆದರೆ ಅದು ನಮ್ಮನ್ನು ಆಳಬಾರದು, ಅಷ್ಟರ […]Read More
ಬದುಕೆಂಬ ಅಚ್ಚರಿ “ಬದುಕು” ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು. ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನು ಪಡೆಯಲಾರೆವು. ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ, ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ. ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ […]Read More
ಮಂಥರೆಯರಿದ್ದಾರೆ ಎಚ್ಚರಿಕೆ!!! ಮಂಥರೆ ನಿರ್ಗತಿಕಳು, ಕೈಕೇಯಿಯ ವಿವಾಹ ಕಾಲದಲ್ಲಿ ದಾಸಿಯಾಗಿ ಅವಳ ಜೊತೆಯಲ್ಲಿಯೇ ಬಳುವಳಿಯಾಗಿ ಬಂದವಳು. ಕುಳ್ಳಾಗಿಯೂ, ಅಷ್ಟಾವಕ್ರಳಾಗಿಯೂ ಇದ್ದ ಅವಳಿಗೆ ಅರಮನೆಯ ಆಶ್ರಯ ದೊರೆತದ್ದು ಅವಳ ವಿಕಾರ ರೂಪದಿಂದಲೇ. ದಶರಥನು ತನ್ನ ಹಿರಿಯ ಮಗ ರಾಮನಿಗೆ ಪಟ್ಟಾಭಿಷೇಕ ಮಾಡಲು ಯೋಚಿಸುತ್ತಿದ್ದಾನೆ ಎಂದು ಕೇಳಿದಾಗ ಅವಳು ಕೋಪಗೊಂಡು ಕೈಕೇಯಿಗೆ ಸುದ್ದಿಯನ್ನು ಹೇಳುತ್ತಾಳೆ. ಕೈಕೇಯಿ ಸಂತೋಷಪಡುತ್ತಾಳೆ ಮತ್ತು ಮಂಥರೆಗೆ ಮುತ್ತಿನ ಹಾರವನ್ನು ಕೊಡುತ್ತಾಳೆ. ಅದನ್ನು ಸ್ವೀಕರಿಸದ ಮಂಥರೆಯು ನಿನ್ನ ಮಗನನ್ನು ನಿನ್ನ ತವರಿಗೆ ಕಳುಹಿಸಿ, ಅವನಿಲ್ಲದೇ ಇರುವಾಗ ಇಲ್ಲಿ […]Read More