ಕನಸಿನ ಕನ್ನಡಿ ಹೀಗೆ ಕನಸು ಬೀಳುವುದಕ್ಕೂ ಪುಣ್ಯ ಮಾಡಿರಬೇಕು,ವರ್ಷವಿಡೀ ಗದರುವ ಮಾಲೀಕಹರುಷದಿ ನಗುತ ಸಂಬಳದ ಜೊತೆಗೆಬೋನಸ್ ಒಂದನ್ನು ಅಡ್ವಾನ್ಸ್ ನೀಡಿದಂತೆ! ತಿಂಗಳ ಸಂಬಳವು ಮನೆಯ ದಿನಸಿಗೆ ಸಾಲಿ,ಖರ್ಚು-ವೆಚ್ಚಗಳನ್ನೆಲ್ಲ ತೂಗಿಸಿ ಹಿಡಿದುಕೈಯಲ್ಲಿ ಒಂದಷ್ಟು ಹಣವೂ ಉಳಿದಂತೆ! ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,ಬೈಕು-ಕಾರುಗಳನ್ನು ಖರೀದಿಸುವಾಗಇ.ಎಮ್.ಐ ಬದಲಿಗೆ ಇಡೀ ಗಂಟನ್ನೇ ಕೊಟ್ಟಂತೆ!ಚಿಕ್ಕದೊಂದು ಸೈಟಿನ ಕನಸು ಕಂಡ ಮಧ್ಯವಯಸ್ಕನೊಬ್ಬಮಹಡಿಯ ಮನೆಯನ್ನೇ ಖರೀದಿಸಿ ಸಂಭ್ರಮಿಸಿದಂತೆ! ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,ಶಾಶ್ವತ ಕಾಯಿಲೆಯೊಂದು ಹೇಳ ಹೆಸರಿಲ್ಲದೆ ಕರಗಿ ಹೋದಂತೆದೇಹದ ಊನವೊಂದು ಯಾರಿಗೂ ಕಾಣದಂತೆ […]Read More
ನಾಗರಪಂಚಮಿ ಜಗತ್ತಿನಾದ್ಯಂತ ನಾಗರಾಧನೆ ತನ್ನದೇ ಆದ ವೈವಿಧ್ಯ ವೈಶಿಷ್ಟ್ಯತೆಗಳನ್ನು ಶತಮಾನಗಳಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿದೆ. ಪ್ರಕೃತಿಯ ಅವಿಭಾಜ್ಯ ಅಂಗವಾದ ಸರ್ಪವನ್ನು ಆರಾಧ್ಯ ದೈವವೆಂದು ಮಾನವ ಸ್ವೀಕರಿಸಿದ್ದರಿಂದ ಇಂದಿನವರೆಗೆ ನಡೆದು ಬಂದಿದೆ. ನಾಗದೇವರು ಪಿತೃದೇವತೆಗಳ ಪ್ರತಿರೂಪ. ಪ್ರಕೃತಿಯ ಶಕ್ತಿಗಳಲ್ಲಿ ದೈವತ್ವವನ್ನು ಕಾಣುವ ಮಾನವ ಹಾವುಗಳನ್ನು ಆರಾಧಿಸುತ್ತಾನೆ. ನಮ್ಮ ಪ್ರಾಚೀನ ಋಷಿ ಮುನಿಗಳು ಪ್ರತಿಯೊಂದು ತಿಥಿಯೂ ಮಾಸ, ವರ್ಷವನ್ನು ಆಧರಿಸಿರುವಂತೆ ಮಾಡಿದ್ದರು. ಇದರಲ್ಲಿ ಪಂಚಮಿ ತಿಥಿಯೂ ಒಂದು. ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗ ದೇವತೆಗಳನ್ನು ಆರಾಧಿಸಲಾಗುತ್ತದೆ. ನಾಗನು ಮೋಹ […]Read More
ಸಿಕೆಪಿಯಲ್ಲಿ ವೈವಿಧ್ಯಮಯ ಏಕವ್ಯಕ್ತಿ ಭೂದೃಶ್ಯ ಕಲಾ ಪ್ರದರ್ಶನ ರಾಯಚೂರು ಜಿಲ್ಲೆಯ ಸಿಂಧನೂರಿನ ಬಹುಮುಖ ಪ್ರತಿಭೆಯ ಕಲಾವಿದ ಮೊಹಮ್ಮದ್ ಉಸ್ಮಾನ್ ಅಲಿ ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ವನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದರು. ಈ ಪ್ರದರ್ಶನ ಆಗಸ್ಟ್ 10 ರಂದು ಆರಂಭವಾಗಿದ್ದು 12 ರವರೆಗೆ ನಡೆಯಲಿದೆ. ತಮ್ಮ 36 ಭೂದೃಶ್ಯದ ವರ್ಣಚಿತ್ರಗಳನ್ನು ‘ವರ್ಣ ವಿಲಾಸ’ ಶೀರ್ಷಿಕೆಯಲ್ಲಿ ಏರ್ಪಡಿಸಿದ್ದರು. ಪ್ರದರ್ಶನವನ್ನು ಉದ್ಘಾಟಿಸಿದ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ವಜೀದ್ ಸಜೀದ್, […]Read More
ಜ್ಯೋತಿರ್ಭೀಮೇಶ್ವರ ವ್ರತ ಮತ್ತು ಆಚರಣೆ… ಭಾರತೀಯ ಹಿಂದೂ ಧರ್ಮದಲ್ಲಿ ಅನೇಕ ವಿಶಿಷ್ಟ ಆಚರಣೆಗಳು ಮತ್ತು ಅವುಗಳ ಹಿಂದೆ ಹಲವು ಅರ್ಥಗಳು ಒಳಗೊಂಡಿರುತ್ತವೆ. ಇಲ್ಲಿನ ಪ್ರತೀ ಹಬ್ಬಗಳು ಮತ್ತೆ ವ್ರತಗಳು ವಿಶೇಷ. ಅದರಂತೆ ಆಷಾಢ ಮಾಸದ ಅಂತ್ಯದ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯ, ಜ್ಯೋತಿರ್ಭೀಮೇಶ್ವರ ವ್ರತ, ಸ್ತಂಭ ಗೌರಿ ಪೂಜೆ ಅಥವಾ ಪತಿ ಸಂಜೀವಿನಿ ವ್ರತ ಎಂದು ವಿವಿಧ ಹೆಸರುಗಳಲ್ಲಿ ಕರ್ನಾಟಕದಲ್ಲಿ ಆಚರಿಸುತ್ತಾರೆ. ಈ ವ್ರತವನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. 2026 ರಲ್ಲಿ […]Read More
ಗಾನ ಕೋಗಿಲೆಗೆ ನಮನ ಕೋಗಿಲೆ ಹಾಡಿದೆ ಕೇಳಿದೆಯಾ?(ಹಿರಿಯ ಗಾಯಕಿ ಎಸ್. ಜಾನಕಿಅವರಿಗೆ ನುಡಿ ನಮನ) ‘ಗಗನವು ಎಲ್ಲೋ, ಭೂಮಿಯು ಎಲ್ಲೋ’ಹೊತ್ತ ಹರಕೆಯ ಫಲದ ‘ಜೀವ ಹೂವಾಗಿದೆ’‘ನನ್ನಾಸೆಯ ಹೂವೆ, ಬೆಳದಿಂಗಳಾ ಚೆಲುವೆ’‘ಹೂವಿಂದ ಹೂವಿಗೆ ಹಾರುವ ದುಂಬಿ’ ‘ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ’‘ಮೂಡಲ ಮನೆಯ ಮುತ್ತಿನ ನೀರಿನ’ ಧಾರೆ‘ಚೆಲುವೆಯೇ ನಿಮ್ಮ ನೋಡಲು’ ಬಯಸೆ‘ಬಂದೆಯಾ ಬಾಳಿನ ಬೆಳಕಾಗಿ’ ‘ಆಲಾರೆ’ ‘ನಗುವ ನಯನ’ದ ‘ಚಿನ್ನದ ಮಲ್ಲಿಗೆ ಹೂವೆ’ಹದಿನೇಳು ಭಾಷೆಗಳ ಸುಂದರ ‘ಬೆಸುಗೆ ಬೆಸುಗೆ’‘ನೀವು ಮೀಟಿದ ನೆನಪೆಲ್ಲವೂ’ ‘ಒಮ್ಮೆ ನಿಮ್ಮನ್ನು’ಕರೆಯೆ, ‘ಕೋಗಿಲೆ […]Read More
ಮನಸಿನ ಸವಿಭಾವ ಮನಸಿನ ಲಹರಿಗೆ ತಾನೆಂದೂಸಿಗದೆನ್ನುವ ಭಾವ ಹೃದಯಕೆ!ಸಿಕ್ಕರೂ ತನಗೇನೂ ನಷ್ಟವಿರದೆನ್ನುವ..ನಿರಾಳತೆಯ ಭಾವ ಅಂತರಾಳಕೆ!! ಮನಸಲಿ ನಡೆವ ತುಮುಲಗಳಬೇರ್ಪಡಿಸುವ ಭಾವ ಚಿಂತನೆಗೆ!ಆ ಚಿಂತನೆಯಲೇ ಸಂತಸವನು..ಅರಸುವ ಭಾವ ನಿತ್ಯವೂ ಚಿತ್ತಕೆ!! ಮನದ ಸಾಗರದಿ ಏಳುವಚಿಂತೆಯಲೆಗಳ ಉಬ್ಬರ ಮುಗಿಲೆತ್ತರಕೆ!ದೇವರ ಲೀಲೆಯ ನಿತ್ಯ ಪ್ರಶ್ನಿಸುವವ..ಕಾಯಬಾರದೇ ಅವನ ಉತ್ತರಕೆ!! ಮನಸೆಂಬ ಬನದಲಿ ಸ್ನೇಹದಂಕುರಚಿಗುರಲು ಬದುಕಲಿ ಸಡಗರ!ಅದು ಕೊಡುವ ಪ್ರತಿಫಲದ..ಸಿಹಿಯ ಸವಿಯಲು ಬಾಳು ಮಧುರ!! ಸುಮನಾ ರಮಾನಂದಕೊಯಮತೂರ್Read More
ರಾಷ್ಟ್ರಕವಿ ಕುವೆಂಪು ಒಂದು ಕಿರು ನೋಟ – ಪುಸ್ತಕ ಪರಿಚಯ ಲೇಖಕಿ ಮಾನಸ ರವರು ಆರು ಕಾದಂಬರಿಗಳನ್ನು, ಐದು ಕವನ ಸಂಕಲಗಳನ್ನು, ಒಂದು ಸಂಶೋಧನಾ ಕೃತಿಯನ್ನು, ನಾಲ್ಕು ಜೀವನ ಚರಿತ್ರಗಳನ್ನು, ಮಕ್ಕಳಿಗಾಗಿ ಮೂರು ಪುಸ್ತಕಗಳನ್ನು ಬರೆದಿದ್ದಲ್ಲದೆ 14 ಕೃತಿಗಳನ್ನು ಸಂಪಾದಿಸಿದ್ದಾರೆ, ಅಷ್ಟೇ ಅಲ್ಲದೆ ಇನ್ನಿತರ ಎಂಟು ಕೃತಿಗಳನ್ನು ಅವರು ಬರೆದಿದ್ದಾರೆ ಹಾಗೆ ಇತರರೊಡನೆ ಸೇರಿ ಇವರು ಸಂಪಾದಿಸಿರುವ ಐದು ಕೃತಿಗಳು ಪ್ರಕಟಣೆ ಕಂಡಿವೆ. ಲೇಖಕಿ ಸ್ವತಃ ಹೇಳಿರುವಂತೆ ಈ ಪುಸ್ತಕವು ಕುವೆಂಪು ಅವರನ್ನು ಆಳವಾಗಿ ಅಧ್ಯಯನ ಮಾಡಿ […]Read More
ದಖ್ಮಾ – ಪಾರ್ಸಿಗಳ ಶವಸಂಸ್ಕಾರದ ವಿಭಿನ್ನ ಪದ್ಧತಿ ಭಾರತವನ್ನು ಸರ್ವಧರ್ಮ ಸಹಿಷ್ಣುತೆಯ ದೇಶ ಎನ್ನುತ್ತಾರೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಷ್ಚಿಯನ್, ಜೈನ ಮತ್ತು ಪಾರ್ಸಿ ಇತ್ಯಾದಿ ಧರ್ಮೀಯರು ವಾಸಿಸುತ್ತಿದ್ದಾರೆ. ಪಾರ್ಸಿ ಎಂದರೆ ಭಾರತದಲ್ಲಿ ವಾಸಿಸುವ ಜೊರಾಸ್ಟ್ರಿಯನ್ ಧರ್ಮದ ಅನುಯಾಯಿಗಳ ಒಂದು ಸಮುದಾಯ. ಇವರು ಮೂಲತಃ ಇರಾನ್ ದೇಶದವರಾಗಿದ್ದು, ಅಲ್ಲಿನ ಅನುಚಿತ ರಾಜಕೀಯ ವಿದ್ಯಾಮಾನಗಳಿಂದ ಹಾಗು ದಬ್ಬಾಳಿಕೆಗಳಿಂದ ಬೇಸತ್ತು ಭಾರತಕ್ಕೆ ವಲಸೆ ಬಂದು ಮುಂಬೈ ಮತ್ತು ಗುಜರಾತ್ ರಾಜ್ಯಗಳಲ್ಲಿ ನೆಲೆನಿಂತರು. ಇವರನ್ನು ಪರ್ಷಿಯನ್ನರು ಅಥವಾ ಪಾರ್ಸಿಗಳು ಎಂದು ಕರೆಯುತ್ತಾರೆ. […]Read More
ಚಿತ್ರಕಲಾಪ್ರದರ್ಶನ – ಸಂಸ್ಕಾರ ಭಾರತೀ ಕರ್ನಾಟಕ ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ75 – ಸಂಸ್ಕಾರ ಭಾರತೀ ಕರ್ನಾಟಕ (ನೋಂ) ದಕ್ಷಿಣ ಪ್ರಾಂತ ದೃಶ್ಯ ಕಲಾ ವಿಭಾಗವು ಮೇಲ್ಕಂಡ ಶೀರ್ಷಿಕೆಯಲ್ಲಿ ಆಯೋಜಿಸಿದ್ದಚಿತ್ರಕಲಾಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಶುಕ್ರವಾರ ಬೆಳಿಗ್ಗೆ ಖ್ಯಾತ ಕಲಾವಿದರಾದ ಶ್ರೀ ಚಂದ್ರನಾಥ ಆಚಾರ್ಯ ಅವರಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಬಸವನಗುಡಿಯಲ್ಲಿ ಉದ್ಘಾಟನೆಗೊಂಡಿತು. ದೃಶ್ಯ ಕಲಾ ವಿಭಾಗದ ಪ್ರಾಂತ ಕಲಾ ಸಂಯೋಜಕರಾದ ಹಾಗೂ ಉತ್ಕೃಷ್ಟ ಕಲಾವಿದರೂ ಆದ ಶ್ರೀ ಗಣಪತಿ ಹೆಗಡೆ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ […]Read More
ಕಲಾ ಪ್ರದರ್ಶನ – ಸಂಸ್ಕಾರ ಭಾರತೀ ವತಿಯಿಂದ…. ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ 75 ರ ಶೀರ್ಷಿಕೆಯಡಿಯಲ್ಲಿ ಕಲಾ ಪ್ರದರ್ಶನವನ್ನುಸಂಸ್ಕಾರ ಭಾರತೀ ಕರ್ನಾಟಕ, ದಕ್ಷಿಣ ಪ್ರಾಂತ ದೃಶ್ಯಕಲಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕಲಾ ಪ್ರದರ್ಶನದಲ್ಲಿ ಕರ್ನಾಟಕದ ಖ್ಯಾತ 75ಕ್ಕೂ ಹೆಚ್ಚು ಕಲಾವಿದರು ಐತಿಹಾಸಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ಕ್ಷೇತ್ರ ಒಳಗೊಂಡಂತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶನಗೊಳಿಸಲಿದ್ದಾರೆ. ದಿನಾಂಕ 12.06.2026, ಶುಕ್ರವಾರ ಬೆಳಗ್ಗೆ 10:30ಕ್ಕೆ ಖ್ಯಾತ ಕಲಾವಿದರಾದ ಶ್ರೀ ಎಸ್ ಜಿ ವಾಸುದೇವ್ ಕಲಾಪ್ರದರ್ಶನ ಉದ್ಘಾಟಿಸಲಿದ್ದು, ಸಂಸ್ಕಾರ ಭಾರತೀ ಕರ್ನಾಟಕ […]Read More