ಬೆಳಕಿನತ್ತ ಬದುಕು

ಬೆಳಕಿನತ್ತ ಬದುಕು ನೇಸರನ ಸವಿಬೆಳಕ ಬಿಂಬದಲಿತರುಣಿ ತಾ ಹೊರಟಿಹಳು ಬದುಕಿನತ್ತ!ಸಾಗಿಹಳು ಕಾನನದ ಕಡುದಾರಿಯಲಿ..ದೃಷ್ಟಿ ಮಾತ್ರ ಕರದಲಿಹ ಕಂದೀಲಿನತ್ತ!! ನೆನೆಯುತಾ ಗತಜೀವನದಾನಂದವಮೂಡಿದೆ ಅವಳ ಮನದಲಿ ಸಂತಸ!ಕಷ್ಟಗಳ ಮೆಟ್ಟಿ ನಡೆಯುತಾ ಬಂದಂತೆ..ಹೃದಯದಿ ನೇಯ್ದಿಹಳು ಹೊಸ ಕನಸ!! ಕತ್ತಲದಾರಿಯಲೂ ಆ ಪುಟ್ಟಕಂದೀಲು ತಾ ಬೆಳಕಸೂಸಿ ನಕ್ಕಂತೆ!ಬೇಗುದಿಯ ಕಾರ್ಮೋಡವದು ಸರಿದು…ಅವಳ ಬಾಳಲಿ ಮತ್ತೆ ಸಂತಸದ ಕಂತೆ!! ಬೆಳಕದು ಮೂಡುವ ದಿಗಂತದಿಪಸರಿಸಿಹ ನಿಶೆಗೆ ಕಂದೀಲಿನ ಆಸರೆ!ಅವಳ ಬದುಕು ಮತ್ತೊಮ್ಮೆ ನಕ್ಕಿತು ಸರಿಸಿ..ಮನದಾಳದಿ ಕವಿದ ಸಂಕಟದ ತೆರೆ!! ಸುಮನಾ ರಮಾನಂದRead More

ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ

ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ ‘ಆರೋಗ್ಯ ಎಂದರೆ ಮನುಷ್ಯನ ದೇಹದ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯೇ’ ಆಗಿದೆ. ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಅವರ ಸಾಮಾಜಿಕ ಸ್ಥಿತಿ. ಈ ಮೂರೂ ಸುಸ್ಥಿಯಲ್ಲಿ ಇದ್ದರೆ ಮನುಷ್ಯನು ಆರೋಗ್ಯವಾಗಿ ಇರುತ್ತಾನೆ. ಮನುಷ್ಯ ಆರೋಗ್ಯವಾಗಿ ಇರಲು ಉತ್ತಮ ಆಹಾರ ಶುದ್ಧವಾದ ಗಾಳಿ ಮತ್ತು ಶುದ್ಧವಾದ ನೀರು ಸೇವನೆ ಮಾಡಬೇಕು. ಒಂದು ಜೀವಿಯ ದೇಹ ಮತ್ತು ಮನಸ್ಸು ಸಂಪೂರ್ಣ ಸಮತೋಲನದಲ್ಲಿ […]Read More

ಅಮರಗೋಳದ ಬನಶಂಕರಿ ದೇವಾಲಯ

ಅಮರಗೋಳದ ಬನಶಂಕರಿ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ನಡುವೆ ಇರುವ ನವನಗರದ ಸಮೀಪ ಅಮರಗೋಳ ಎಂಬ ಊರೊಂದಿದೆ. ಅಲ್ಲಿ ಪುರಾತನ ಕಾಲದ ದೇವಾಲಯವಿದ್ದು, ಅದು ಬನಶಂಕರಿಗೆ ಸಂಬಂಧಿಸಿದ ಪುರಾತನ ದೇವಾಲಯವಾಗಿದೆ. ಈ ದೇವಾಲಯದ ಸಮೀಪವೇ ಜಕ್ಕಣಾಚಾರ್ಯರು ನಿರ್ಮಿಸಿದ ಶಂಕರಲಿಂಗನ ದೇವಸ್ಥಾನವಿದೆ. ಈ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಈ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಮೆಟ್ಟಿಲು-ವಜ್ರ ಮತ್ತು ಚಚ್ಚೌಕ ಯೋಜನೆ ಇರುವ ನಾಗರ ಶೈಲಿಯನ್ನು ಹೊಂದಿವೆ. ಇಲ್ಲಿ ದೊರೆತಿರುವ ಶಾಸನದಲ್ಲಿ ಅಮರಗೋಳ ಊರನ್ನು ‘ಆಂಬರಗೋಳ’ ಎಂದು ಕರೆದಿರುವ ಬಗ್ಗೆ […]Read More

ಕಾಡುವ ದಿನಗಳು

ಕಾಡುವ ದಿನಗಳು ಹುಲ್ಲು ಛಾಪೆಯ ಮೇಲೆ ಮೈಚಾಚಿಆಗಸವ ದಿಟ್ಟಿಸಿ ಚಂದ್ರನ ಕರೆಯುತ್ತಾನಕ್ಷತ್ರಗಳ ಜೊತೆ ಮಾತಾಡಿಅದೆಷ್ಟು ವರುಷಗಳಾಯಿತು ಹಸಿದೊಡಲು ಕಾಡುವಾಗ ಹಾದುಹೋದ ವಿಮಾನದ ಹಾರಾಟಅದೆಷ್ಟು ಹಿತವೆನಿಸಿತ್ತಾಗ..ಕತ್ತಲಲಿ ಕಾದ ಆಗಂತುಕನಆಗಮನಕ್ಕಾಗಿ ಕಾಯುವ ಘಳಿಗೆಗಳುಇನ್ನಿಲ್ಲವಾಗಿ ಅದೆಷ್ಟು ವರುಷಗಳಾಯಿತು. ಮೈ ಕೈ ತಾಗಿಸುತ್ತಾ ಪರಚುತ್ತಾಕಿಚಾಯಿಸಿ ರಾತ್ರಿಯೆಲ್ಲಾ ಹರಟುತ್ತಾಅಣ್ಣ ತಮ್ಮಂದಿರು ಹಾವಳಿಮಾಡಿಬೈಸಿಕೊಂಡು ಗಪ್ ಛುಪ್ ಆಗಿಮುಸಿ ಮುಸಿ ನಕ್ಕು ನಲಿದಾಡಿಅದೆಷ್ಟು ವರುಷಗಳಾಯಿತು ಮನೆಯಂಗಳದ ಸೆಗಣಿಯ ಘಮಲುತುಳಸಿಕಟ್ಟೆಯ ದೀಪದ ಸೊಬಗುಪುಟ್ಟ ತಂಗಿಯ ಅಕ್ಕನಅಂಗಳದ ರಂಗವಲ್ಲಿಯ ಕಂಡುಅದೆಷ್ಟು ವರುಷಗಳಾಯಿತು ಹೊ.. ಬಡತನವೇ ಸೊಗಸುಅದೆಂತಹ ಸಂಭಂದಗಳುದಿನವೂ ಸಂಭ್ರಮದ ದಿನಗಳವು..ಇಂದಿಗೂ […]Read More

ಪ್ರೇಮ ಕಾವ್ಯ

ಪ್ರೇಮ ಕಾವ್ಯ ನಿನಗಾಗಿ ಬರೆದ ಎರಡಕ್ಷರದ ಕಾವ್ಯ ಮಹಾಕಾವ್ಯವಾಗಿದೆ ಪ್ರಿಯೆಭಗ್ನ ಪ್ರೇಮಿಗಳಿಗೆ ಅದೊಂದೇ ಪ್ರೇಮ ಮಾರ್ಗವಾಯಿತು ಪ್ರಿಯೆ ಗುಲಾಬಿ ತೋಟದಲ್ಲಿ ನಿಂತ ಮೇಣದ ಪ್ರತಿಮೆಯೊಂದುನಮ್ಮಂತೆ ದುಃಖದಿಂದ ಅಪ್ಪಿಕೊಂಡಂತೆ ಅಚ್ಚೊತ್ತಿರುವೆ ಪ್ರಿಯೆ ಹತ್ತಾರು ಅಧ್ಯಾಯ ನೂರಾರು ನೆನಪುಗಳನ್ನು ತುಂಬಿಕೊಂಡುಪ್ರೇಮ ಕಾವ್ಯದ ವಿರಹ ಗೀತೆಗಳ ಧ್ವನಿ ಕೇಳಿಸುತ್ತಿದ್ದವು ಪ್ರಿಯೆ ದಟ್ಟ ಕಾಡಿನಲ್ಲಿ ಒಬ್ಬಂಟಿಯಾಗಿ ಅಲೆಯುತ್ತಿರುವ ಅಂಗನೆಯನೋವುಗಳ ಪ್ರೇಮಿಗಳ ನೆರಳನ್ನಾಗಿ ಬಿಂಬಿಸಿ ಬರೆದಿರುವೆ ಪ್ರಿಯೆ ಲೋಕವೆಂಬುದು ಪ್ರೇಮಿಗಳಿಗೆ ವಿಷ ಅನ್ನದ ತುತ್ತಿಡುವಕಾಮ ಪಿಶಾಚಿಗಳ ದೊಡ್ಡ ಬ್ರಹ್ಮಾಂಡ ಬಲಿಯಾಗಬೇಡ ಪ್ರಿಯೆ ಶ್ರೀ ಹನಮಂತ […]Read More

ಭಾರತದ ಮೊಲಗಳು

ಭಾರತದ ಮೊಲಗಳು ನಮ್ಮ ಕಾಡುಗಳಲ್ಲಿ ಕಂಡುಬರುವ ಮೊಲಗಳಿಗೆ ನಾವು ಸಾಮಾನ್ಯವಾಗಿ Rabbits ಎನ್ನುತ್ತೇವೆ, ಆದರೆ ನಿಜ ಸಂಗತಿ ಎಂದರೆ Rabbits ಗಳು ನಮ್ಮ ದೇಶದಲ್ಲಿ ಇಲ್ಲ!!! ನಮ್ಮಲ್ಲಿ ಕಂಡುಬರುವ ಮೊಲಗಳೆಂದರೆ ಹೇರ್ (Hare) ಬ್ಲಾಕ್ ನಾಪ್ಪೆಡ್ ಹೇರ್ ಇದು ನಮ್ಮ ರಾಜ್ಯದಲ್ಲಿ ಕಂಡು ಬರುವ ಮೊಲ. HARE’S ಹಾಗು RABBITS ಗಳು Leporidae ಕುಟುಂಬಕ್ಕೆ ಸೇರಿವೆ. ಇವೆರಡೂ ವಿಪುಲ ಸಂತಾನಿಗಳು. ಹಾಗಾದರೆ HARE’S ಹಾಗು Rabbits ನಡುವಿನ ವ್ಯತ್ಯಾಸಗಳೇನು? ಮೇಲ್ನೋಟಕ್ಕೆ ಇವೆರಡರ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು […]Read More

ಮನದ ಕನಸುಗಳು

ಮನದ ಕನಸುಗಳು ತಂಪು ಸೂರ್ಯನಕೆಂಪು ಕಿರಣದಲಿತೇಯ್ದ ಸಂಜೆಯಂತೆ ; ಏರೇರಿ ಅಬ್ಬರಿಸಿಬಂದು ಹಿಂತಿರುಗುವಅಲೆಯುಬ್ಬರದಂತೆ; ಭಾವನೆಗಳಿಗಂಜಿಒಳಗೊಳಗೇ ಹುದುಗಿಕುದಿವ ಲಾವದಂತೆ; ಕಣ್ರೆಪ್ಪೆಯಲ್ಲಡಗಿಕಣ್ತೆರೆದೊಡನೆ ಕಾಡುವಕಾಮನಬಿಲ್ಲಿನಂತೆ; ಆಳ ಕಣಿವೆಯಲಿಹೊದ್ದು ಮಲಗಿರುವಮೌನದಾ ಧ್ಯಾನದಂತೆ; ಗುಡಿಯ ದೇವನೆದುರುತಣ್ಣನೆ ಉರಿಯುತಿಹನಂದಾ ದೀಪದಂತೆ ; ಕಾರಿರುಳಿನಲಿ ಕಣ್ಬಿಟ್ಟು,ತಟ್ಟನೆ ನಗುವ ಮುದ್ದುಹಸುಗೂಸಿನಂತೆ ; ನೆಲದಾಳದಲ್ಲವಿತು,ಮಳೆಹನಿಗೆ ಮೊಳೆತುಚಿಗುರುವ ಬೀಜದಂತೆ!! ಶ್ರೀವಲ್ಲಿ ಮಂಜುನಾಥRead More

ಸುರಕ್ಷಾ ಜಾಗೃತಿ – 2

ಸುರಕ್ಷಾ ಜಾಗೃತಿ – 2(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಕಳೆದ ಸಂಚಿಕೆಯಿಂದ….ಮುಂದೆ ಮನುಷ್ಯನ ವಿಕಾಸ ಕಾಲಕ್ರಮೇಣ ಬದಲಾವಣೆ ಆಗುತ್ತಿದ್ದಂತೆಯೇ ಹಲವಾರು ಮಾರ್ಪಾಡುಗಳಾದವು, ಆ ಎಲ್ಲಾ ಬದಲಾವಣೆಗಳಿಗೆ ಮೈಯೊಡ್ಡಿ ಮನುಜ ವಿಕಾಸಗೊಳ್ಳುತ್ತ ಈ ಹಂತವನ್ನು ತಲುಪಿದ. ಈ ಹಂತದಲ್ಲಿ ಚಾರ್ಲ್ಸ್ ಡಾರ್ವಿನ್ ರವರ ವಿಕಾಸ ವಾದದ ಮೇಲೆ ಕೊಂಚ ಬೆಳಕನ್ನು ಹಾಯಿಸೋಣ. ಈತ ತನ್ನ ವಿಕಾಸವಾದದ ಸಿದ್ಧಾಂತದಲ್ಲಿ “Survival for Existence” ಅಂತ ಪ್ರತಿಪಾದಿಸಿದ್ದಾನೆ ಮತ್ತು “Stronger will live and weaker will die” ಅಂತ […]Read More

ಪ್ರೀತಿಯ ತೇಜಸ್ವಿ

ಪ್ರೀತಿಯ ತೇಜಸ್ವಿ ಸೆಪ್ಟೆಂಬರ್ 8 ನಮ್ಮೆಲ್ಲರ ಪ್ರೀತಿಯ ‘ಪೂಚಂತೇ’ ಅಂದರೆ ನಮ್ಮ ‘ಪೂರ್ಣ ಚಂದ್ರ ತೇಜಸ್ವಿ’ ಅವರ ಜನ್ಮದಿನ. ಅವರ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಹೆಸರು ನಿತ್ಯ ಸ್ಮರಣೆ. ಇನ್ನು ಅವರ ಬರಹಗಳು ನಿತ್ಯ ನೂತನ. ಪ್ರತಿಯೊಬ್ಬರಿಗೂ ಅರ್ಥವಾಗುವ ಆಡು ಭಾಷೆಯಲ್ಲಿ ಅನೇಕ ವೈವಿಧ್ಯಮಯ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟವರು, ಪರಿಸರದ ಪರಿಚಯ ಮಾಡಿಕೊಟ್ಟವರು, ಪ್ರಕೃತಿಯ ಒಳಹೊಕ್ಕು ಅದರ ಭಾವನೆಗಳಿಗೆ ಸ್ಪಂದಿಸಿ, ಅಷ್ಟೊಂದು ಪ್ರೀತಿಸಿದವರು ಬಹುಶಃ ಇನ್ನೊಬ್ಬರು ಇರಲಾರರು. ಬದುಕಿದ್ದಾಗ ಅವರು ಎಂದೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲವಂತೆ ಆದರೆ ಅವರಿಲ್ಲದ […]Read More

ಸುರಕ್ಷಾ ಜಾಗೃತಿ

ಸುರಕ್ಷಾ ಜಾಗೃತಿ(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ರಕ್ಷಣೆ ಎನ್ನುವ ಪದವನ್ನು ಹೇಳುವಾಗಲೇ ಏನೋ ಒಂದು ತೃಪ್ತಿ, ಅಭಯ ಪ್ರಾಪ್ತಿ ಆದಂತಹ ಭಾವ ನಮ್ಮೊಳಗೆ ಮೂಡುತ್ತದೆ ಅಲ್ವಾ..? ಹಾಗಾದರೆ ಈ ರಕ್ಷಣೆ ನಮಗೆ ಹೇಗೆ ತಿಳಿಯಿತು? ರಕ್ಷಣೆ ಎನ್ನುವುದು ದೈವದತ್ತವಾಗಿ ಬಂದಿರುವಂತದ್ದೇ? ಇಂತಹ ಹಲವಾರು ಪ್ರಶ್ನೆಗಳು ಉದ್ಬವವಾಗುವುದು ಸಹಜ ಅಲ್ವೇ?… ಭೂಮಿಯ ಉಗಮವಾದಾಗ ಎಲ್ಲಾ ಜಲಚರ, ಕ್ರಿಮಿಕೀಟಗಳು, ಸರೀಸೃಪಗಳು, ಉಭಯವಾಸಿಗಳು ನಂತರ ಪ್ರಾಣಿಸಂಕುಲಗಳು, ಪಕ್ಷಿಪ್ರಭೇದಗಳು ಪ್ರಕೃತಿಯಲ್ಲಿ ಜೀವನವನ್ನು ಕ್ರಮೇಣ ಆರಂಭಿಸಿದವು. ನಂತರ ಕಾಲಕ್ರಮೇಣ ಮಾನವನ ಜನ್ಮ ಉಂಟಾಯಿತು. […]Read More