ಎನ್. ಶಿವರಾಮಯ್ಯ (17.02.1933 – 26.04.2016) ಕಾವ್ಯನಾಮ – ನೇನಂಶಿ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನೇಗಲಾಲ ಗ್ರಾಮದವರು. ತಂದೆ ಎನ್.ಆರ್. ನಂಜಪ್ಪ, ತಾಯಿ ವೆಂಕಟಲಕ್ಷಮ್ಮ.
ಕನ್ನಡ ಎಂ.ಎ., ಬಿ.ಎಡ್., ಕನ್ನಡ ಪಂಡಿತ್, ಹಿಂದೀ ವಿದ್ವಾನ್, ರಾ.ಭಾ. ಪ್ರವೀಣ್, ಸಂಸ್ಕೃತ ಕೋವಿದ, ಕನ್ನಡ ಉಪನ್ಯಾಸಕ ರಾಗಿದ್ದರು.
`ನೇನಂಶಿ’ಯವರು ಬಹುಶ್ರತರಾಗಿದ್ದರು. ಅವರೊಬ್ಬ ಲಿಂಗ್ವಿಸ್ಟ್. ಅವರು ಬಹುಭಾಷಾ ಪಂಡಿತರಾಗಿದ್ದರು. ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಬಂಗಾಳಿ ಭಾಷೆಗಳಲ್ಲಿ ಪರಿಣತಿ ಇತ್ತು. ಕನ್ನಡಕ್ಕೆ ಈ ಎಲ್ಲಾ ಭಾಷೆಗಳಿಂದ ಅನುವಾದಗಳನ್ನೂ ಮಾಡಿದ್ದಾರೆ.
1952 ರಿಂದ ಸಾಹಿತ್ಯ ರಚನೆ ಪ್ರಾರಂಭಿಸಿದ್ದು ಕಥೆ, ಕವನ ಹಾಗೂ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ‘ನೇನಂಶಿ’ ಕಾವ್ಯನಾಮದಿಂದ ಪ್ರಕಟವಾಗಿವೆ.
ಪ್ರಕಟಗೊಂಡ ಕೃತಿಗಳು:
ಪ್ರತ್ಯಗಾತ್ಮ ಚಿಂತನ (ಕಗ್ಗದ ದಾಟಿಯಲ್ಲಿ ಬರೆದ 350 ಚೌಪದಿಗಳ ಸಂಕಲನ ಸ್ವಾನುಭವದ ಚಿಂತನ), ‘ಏಕನಾದ ಮತ್ತು ಇತರ ಲಲಿತ ಪ್ರಬಂಧಗಳು’ ಸ್ವಾನುಭವದ ಲಲಿತ ಪ್ರಬಂಧಗಳ ಸಂಗ್ರಹ.
![](http://sahityamaithri.com/wp-content/uploads/2021/07/33-1.jpg)
ಶಿವಾನಂದ ಲಹರಿ – ಶ್ರೀ ಶಂಕರಾಚಾರ್ಯರ ಸಂಸ್ಕøತ ಶತಕದ ಪದ್ಯಾನುವಾದ, `ಅದೃಷ್ಟದ ಆಟ’ (ಬಂಗಾಳಿ ಕಾದಂಬರಿಯ ಕನ್ನಡಾನುವಾದ), ದಿ ಸೀಕ್ರೆಟ್ – ತೆಲುಗಿನಿಂದ ಕನ್ನಡಕ್ಕೆ ಅನುವಾದ, ಮಾಘ ಕವಿ (ತೆಲುಗಿನ ಕವಿಯ ಜೀವನಾಧಾರಿತ ಸಾಹಿತ್ಯ ಕನ್ನಡಾನುವಾದ), ವೇಮನ ಸುಭಾಷಿತ (ತೆಲುಗಿನಿಂದ ಕನ್ನಡಕ್ಕೆ ಪದ್ಯಾನುವಾದ), ಹಿಂದೀ ಸೂಕ್ತಿ ಸುಧಾ (ಕಬೀರ್, ತುಳಸೀದಾಸ್, ರಹೀಮ್, ವೃಂದ ಹಾಗೂ ಬಿಹಾರಿ ಮೊದಲಾದವರ ದೋಹಾಗಳ ಭಾವಾನುವಾದ).
ಅಚ್ಚಿಗೆ ಸಿದ್ಧವಾಗಿರುವ ಹಸ್ತಪ್ರತಿಗಳು:
ಹರಿಚಿತ್ತ ಮತ್ತು ಇತರ ಕಥೆಗಳು, ಪಂಚಮಹಾ ಕಾವ್ಯಗಳು (ತಮಿಳಿನಿಂದ ಕನ್ನಡಕ್ಕೆ ಅನುವಾದ), ಜೇನುಹೊಳೆ (ಕವನ ಸಂಕಲನ), ಮೂರು ನಕ್ಷತ್ರ ಮಾಲಿಕೆಗಳು, ಈಸೋಪನ ಕಥನ ಕವನಗಳು.
2005ರಲ್ಲಿ ತುಮಕೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ತಪಸ್ವಿ ಹಾಗೂ ಸಾಹಿತ್ಯ ಮಣಿರತ್ನ ಬಿರುದುಗಳು ಲಭಿಸಿವೆ.
![](http://sahityamaithri.com/wp-content/uploads/2021/07/22-1.jpg)
ನಾನು ನನ್ನದು ಎಂಬ ಅಹಮಿಕೆಯು ನನಗಿಲ್ಲ
ನಾನು ಬರೆದಿಹ ಕವಿತೆ ಎಂಬುದೂ ಇಲ್ಲ
ನಾನೊಬ್ಬ ಲಿಪಿಕಾರ; ಒಳಗೆ ಕಬ್ಬಿಗನಿಹನು
ನಾನು ಪರತಂತ್ರದವ- || ಪ್ರತ್ಯಗಾತ್ಮ ||
ನಾನು ಪಂಡಿತನಲ್ಲ; ಪಾಂಡಿತ್ಯವೆನಗಿಲ್ಲ,
ನಾನಂತು ಸುಜ್ಞಾನಿ ಅಲ್ಲವೇ ಅಲ್ಲ
ನಾನೊಬ್ಬ ನಾಡಾಡಿ ನಾಡು ನುಡಿಯಭಿಮಾನಿ
ನಾನೊಬ್ಬ ಕನ್ನಡಿಗ- || ಪ್ರತ್ಯಗಾತ್ಮ ||
ಬಾಳಿನಲಿ ಕಂಡುಂಡ ಅನುಭವದ ಸಾರವನು
ನಾಳೆ ಬಹಳ ಮಕ್ಕಳಿಗೆ ನೆರವಾಗಲೆಂದು
ಹಾಳೆಯಲಿ ಬರೆದಿಹೆನು ಚುಟುಕರೂಪದಿ ಅದನೆ
ಬೀಳುಗಳೆಯಲು ಬೇಡ- || ಪ್ರತ್ಯಗಾತ್ಮ ||
![](http://sahityamaithri.com/wp-content/uploads/2021/07/Gurudatt-New-1.jpg)
ತುಂಕೂರು ಸಂಕೇತ್
2 Comments
Shri Nenumshi was my paternal aunt’s and I had the privilege of hearing him on various occasions. There was a strong urge in him to share to the Society members whatever he had learnt and experienced during his life time. He had a special liking for me.
He was highly knowledgeable besides a oted poet he was a highly dedicated teacher. He has dedicated his entire life for pursuing knowledge and reduced it to writing for the benefit of existing ad forthcoming generations. His all the 3 sons have imbibed his art of writing and also have been continuing his legacy.
Thank you for sharing the information.we are proud of our Guru!
Sahasra pranamagalu.