ಚುಟುಕುಗಳು-ಗೀತಾ ಚಲಂ

ಗೀತಾಚಲಂ ಪ್ರಾಸಕ್ಕೆ ಹೆಚ್ಚು ಒತ್ತುಕೊಟ್ಟು ಬರೆಯುವ ಬರಹಗಾರ್ತಿ, ಹವ್ಯಾಸಕ್ಕಾಗಿ ಬರೆಯುತ್ತಿದ್ದರೂ ಹಲವು ಪ್ರಯೋಗಗಳನ್ನು ಮಾಡುತ್ತಾ ಅದರಲ್ಲೇ ಹೆಚ್ಚು ತೊಡಗಿಕೊಂಡಿರುತ್ತಾರೆ.

ರಂಗೋಲಿ

ರಂಗು ರಂಗಿನ
ರಂಗವಲ್ಲಿ
ಇತ್ತು ಮನೆಯ
ಅಂಗಳದಲ್ಲಿ
ಕಂಡೆ ನಾನು
ಬೆಳದಿಂಗಳಲ್ಲಿ
ಮುದ
ನೀಡಿತೆದೆಯಾಳದಲ್ಲಿ
ಬರೆದವರಾರು
ಈ ಚಿತ್ರವಿಲ್ಲಿ
ಎಂದಾಗ ಬಂದಳು
ಪುಷ್ಪವಲ್ಲಿ

ಚಿಂತೆ – ಚಿತೆ

ಅಂತೆ ಕಂತೆಗಳ
ಸಂತೆಯೊಳಗೆ
ಮಾರಲೊರಟೆ
ನನ್ನದೊಂದು ಚಿಂತೆ
ಕೊಳ್ಳುವವರಾದರೂ
ಬರಬಹುದೆಂದು
ಸಂಜೆ ತನಕ ಕಾದು
ಕುಂತೆ ಆಗ ನಾ ಅರಿತೆ
ನಾನು ಚಿತೆ ಏರುವವರೆಗೆ
ನನ್ನಲ್ಲೇ ಇರುತ್ತೆ ಚಿಂತೆ

ಪ್ರಕೃತಿಯ ಕೋಪ

ಹಾರಾಡುವಂತ ಹಕ್ಕಿಗೆ ನೆಲೆಯಲ್ಲಿ
ಹರಿಯುವಂತ ನದಿಗೆ ಕೊನೆಯೆಲ್ಲಿ
ಬೀಸುವಂತಹ ಗಾಳಿಗೆ ತಡೆಯೆಲ್ಲಿ
ಇರುವುದು ಒಂದು ನಿಯಮವಿಲ್ಲಿ
ಅದು…ಅಳತೆಯನ್ನು ಮೀರಿದರಲ್ಲಿ
ಪ್ರಕೃತಿಯ ಕೋಪವು ಕಾಣುವುದಲ್ಲಿ

ಗೀತಾ ಚಲಂ

ಚಿತ್ರಕೃಪೆ: ವಾಗ್ದೇವಿ ಹಾಗು ಗೂಗಲ್

Related post

1 Comment

  • ಒಗಟಿನ ಒಳಜ್ಯೋತಿಗೆ,
    ಉತ್ತರವೇ ಸೌಂದರ್ಯ.

    ನಿಮ್ಮ ಕವನದಲ್ಲಿ
    ಪ್ರಾಸದ ಸೌಂದರ್ಯವು,
    ಕವನಕ್ಕೆ ಸುಗಂಧ,

    ಚಿಂತನೆಗಳ ಗೆರೆಗಳ ನಡುವೆ,
    ನಮ್ಮ ಒಗಟಿನ ಪ್ರೆಶ್ನೆಗಳಿಗೆ ನುಡಿಗುಡಿಗೆ,
    ನೀವು ಉತ್ತರದ ಹೆಜ್ಜೆಹಾಕಿದಿರಿ
    ಅದಕ್ಕಾಗಿ ಚೆಲ್ಲುವೆ
    ಕೃತಜ್ಞತೆಯ, ಹೂವಂತೆ!
    ( ಸಾಲಿನಲ್ಲಿ ತಪ್ಪು ಕಂಡರೆ ಕ್ಷಮಿಸಿ ಬರಹಗಾತಿ : ಗೀತಾ ಚಲಂ)
    – ದರ್ಶನ್ ಘನಾತೆ.

Leave a Reply

Your email address will not be published. Required fields are marked *