ಗೀತಾಚಲಂ ಪ್ರಾಸಕ್ಕೆ ಹೆಚ್ಚು ಒತ್ತುಕೊಟ್ಟು ಬರೆಯುವ ಬರಹಗಾರ್ತಿ, ಹವ್ಯಾಸಕ್ಕಾಗಿ ಬರೆಯುತ್ತಿದ್ದರೂ ಹಲವು ಪ್ರಯೋಗಗಳನ್ನು ಮಾಡುತ್ತಾ ಅದರಲ್ಲೇ ಹೆಚ್ಚು ತೊಡಗಿಕೊಂಡಿರುತ್ತಾರೆ.
ರಂಗೋಲಿ
![](http://sahityamaithri.com/wp-content/uploads/2021/06/Rangoli.jpg)
ರಂಗು ರಂಗಿನ
ರಂಗವಲ್ಲಿ
ಇತ್ತು ಮನೆಯ
ಅಂಗಳದಲ್ಲಿ
ಕಂಡೆ ನಾನು
ಬೆಳದಿಂಗಳಲ್ಲಿ
ಮುದ
ನೀಡಿತೆದೆಯಾಳದಲ್ಲಿ
ಬರೆದವರಾರು
ಈ ಚಿತ್ರವಿಲ್ಲಿ
ಎಂದಾಗ ಬಂದಳು
ಪುಷ್ಪವಲ್ಲಿ
ಚಿಂತೆ – ಚಿತೆ
![](http://sahityamaithri.com/wp-content/uploads/2021/06/chinte.jpg)
ಅಂತೆ ಕಂತೆಗಳ
ಸಂತೆಯೊಳಗೆ
ಮಾರಲೊರಟೆ
ನನ್ನದೊಂದು ಚಿಂತೆ
ಕೊಳ್ಳುವವರಾದರೂ
ಬರಬಹುದೆಂದು
ಸಂಜೆ ತನಕ ಕಾದು
ಕುಂತೆ ಆಗ ನಾ ಅರಿತೆ
ನಾನು ಚಿತೆ ಏರುವವರೆಗೆ
ನನ್ನಲ್ಲೇ ಇರುತ್ತೆ ಚಿಂತೆ
ಪ್ರಕೃತಿಯ ಕೋಪ
![](http://sahityamaithri.com/wp-content/uploads/2021/06/prakruti.png)
ಹಾರಾಡುವಂತ ಹಕ್ಕಿಗೆ ನೆಲೆಯಲ್ಲಿ
ಹರಿಯುವಂತ ನದಿಗೆ ಕೊನೆಯೆಲ್ಲಿ
ಬೀಸುವಂತಹ ಗಾಳಿಗೆ ತಡೆಯೆಲ್ಲಿ
ಇರುವುದು ಒಂದು ನಿಯಮವಿಲ್ಲಿ
ಅದು…ಅಳತೆಯನ್ನು ಮೀರಿದರಲ್ಲಿ
ಪ್ರಕೃತಿಯ ಕೋಪವು ಕಾಣುವುದಲ್ಲಿ
![](http://sahityamaithri.com/wp-content/uploads/2021/06/Geetachalam.jpg)
ಗೀತಾ ಚಲಂ
ಚಿತ್ರಕೃಪೆ: ವಾಗ್ದೇವಿ ಹಾಗು ಗೂಗಲ್