ಚುಟುಕುಗಳು – ನಾಗರಾಜು.ಹ

ವಿಜ್ಞಾನ ಲೋಕ

ನಮ್ಮ ದೇಶ ಧಾರ್ಮಿಕಕೆ ಹೆಸರು
ಅಂತೆಯೇ ವೈಜ್ಞಾನಿಕಕೂ ಹೆಸರು|
ಕರೆಯಬಹುದು ವಿಜ್ಞಾನ ಲೋಕ
ಸದಾ ಅನ್ವೇಷಣೆ ಮಾಡುತಿಹರು||

ಆಪತ್ಧರ್ಮ

ಸಾಲ ಕೇಳುವಾಗ ಮಿತ್ರರು
ತಮ್ಮ ಕಷ್ಟಗಳ ತೋಡಿಕೊಳ್ಳುವರು|
ನಂಬಿಕೆಯಿಂದ ಇವರು
ಆಪತ್ಧರ್ಮವೆಂದು ಕೊಡುವರು||

ಚಿಂತೆ

ಸಾಲ ಕೊಟ್ಟವ ಕಾಲ ಕಳೆದಂತೆ
ಉಂಟಾಗುವುದು ಹಣದ ಚಿಂತೆ|
ಆತ ಜ್ಞಾಪಿಸುವ ಮರಳಿಸುವಂತೆ
ಆತಂಕ ಅವ ಕೊಡದಿದ್ದರೇನಂತೇ||

ಯತ್ನ

ಪಡೆದ ಸಾಲವ ತೀರಿಸಲಿಕ್ಕಾಗಿ
ಹೋಗುವ ಕೆಲಸಕ್ಕೆ ದುಡಿಮೆಗಾಗಿ|
ಮಾಡುವ ಕೆಲಸ ಹೆಚ್ಚುವರಿಯಾಗಿ
ಕೊನೆಗೂ ತೀರಿಸುವ ಸ್ನೇಹಕ್ಕಾಗೀ||

ನಾಗರಾಜು.ಹ
ಇಸ್ರೋ ಬಡಾವಣೆ,
ಬೆಂಗಳೂರು

Related post

2 Comments

  • “ಸಾಹಿತ್ಯ ಮೈತ್ರಿ” ಮಾರ್ಗದ ಮೂಲಕ ನನ್ನ ಕವನಗಳು, ಹನಿಗವನಗಳು, ಚುಟುಕುಗಳು, ರುಬಾಯಿಗಳು, ಟoಕಾಗಳು ಮತ್ತು ಹಾಯ್ಕುಗಳನ್ನು ಪ್ರಸಾರ ಮಾಡುತ್ತಿರುವ ಮಿತ್ರ ಶ್ರೀ ಚಂದ್ರುರವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು!! ನಿಮ್ಮ ಈ ಕಾರ್ಯವನ್ನು ನನ್ನ ಕವಿಮಿತ್ರರೂ ಉಪಯೋಗಿಸಿಕೊಳ್ಳಲು ಮನವರಿಕೆ ಮಾಡಿ ಕೊಡುತ್ತೇನೆ. ತಮ್ಮ ಈ ಮಾರ್ಗ ಯಶಸ್ವಿಯಾಗಲೆಂದು ಆಶಿಸುತ್ತೇನೆ. ಧನ್ಯವಾದಗಳು, ನಮಸ್ತೇ ಮಿತ್ರರೇ!!!
    — ನಾಗರಾಜು. ಹ., ಇಸ್ರೋ ಬಡಾವಣೆ, ಬೆಂಗಳೂರು- ೫೬೦೧೧೧

  • ವಂದನೆಗಳು ಸರ್

Leave a Reply

Your email address will not be published. Required fields are marked *