ಜಾಗ್ರತೆ
ನುಚ್ಚು ನೂರಾಗಿ
ಒಡೆದ ಮುಕುರದಲಿ
ಪ್ರತಿಬಿಂಬ ಹುಡುಕಲು
ಕಾಣ್ವುದೇ ಪೂರ್ಣಬಿಂಬ!
ಕೊಳ್ಳೆ ಹಾಕಿದ ಮನದ
ಮುಂಬಾಗಿಲಿಗೆ
ಬೀಗವಿಕ್ಕುವುದರಿಂದ
ಅಲ್ಲಿಹುದೇ ಮನಶಾಂತಿ!
ಸಜಲ ನಯನದೊಳ್
ಇಣುಕಿಕ್ಕಲು, ಇಹುದೇ
ಕಾಂತಿಯುತ ನಗೆಯ
ಬೆಳದಿಂಗಳದರಲಿ !
ಅಂಕೆ , ಶಂಕೆ, ಅಂಜಿಕೆ,
ಅಪನಂಬಿಕೆ ಎಂದೂ
ಸುಳಿಯದಿರುವಂದದಿ
ಕಾಪಿಡೋಣ ಮನವ !!
![](https://sahityamaithri.com/wp-content/uploads/2023/12/Sri-valli-150x150.jpg)
ಶ್ರೀವಲ್ಲಿ ಮಂಜುನಾಥ