ತಾಳ್ಮೆಯ ಭಾವದಲೆಯಲಿ..
ಉರಿ ಕೋಪದ ತಾಪದಿ
ಬಾಳಲಿ ತಾ ಸಾಧಿಸುವುದೇನಿದೆ!
ತಾಳ್ಮೆಯ ಮೆಲು ಭಾವದಿ..
ಮನವ ಗೆದ್ದು ಬಾಳಲಾಗದೇ!!
ಕೋಪದ ದಳ್ಳುರಿಗೆ ಮನವ
ಕೊಡಲು ದಕ್ಕುವ ಭಾವವು ಶೂನ್ಯ!
ತುಸುತಾಳ್ಮೆಯಲಿ ವ್ಯವಹರಿಸಿರೆ..
ದೊರೆವ ಸಂತಸವು ಎಂದಿಗೂ ಮಾನ್ಯ!!
ಸಿಟ್ಟಿನ ಉರಿ ಜೋಳಿಗೆ ಬಗಲಲಿರೆ
ಸುಡುವುದು ಬದುಕು ನಿತ್ಯ!
ತಾಳ್ಮೆಯ ಪನ್ನೀರಲಿ ಮಿಂದರೆ…
ಬಾಳಲಿ ಸಿಗುವ ನೆಮ್ಮದಿಯು ಸತ್ಯ!!
ಕಡುಕೋಪದಿ ಬದುಕು ಸವೆಯಲು
ಮುಳ್ಳಿನ ಹಾದಿಯಲಿ ನಡೆದಂತೆ!
ಸಹನೆಯ ಮಂತ್ರವ ನಿತ್ಯ ಜಪಿಸಿರೆ..
ದಾರಿಯಲಿ ಹೂ ಹಾಸಿದಂತೆ!!
![](https://sahityamaithri.com/wp-content/uploads/2023/01/Sumana-Ramananda.jpg)
ಸುಮನಾ ರಮಾನಂದ