ಪ್ರತ್ಯಗಾತ್ಮ ಚಿಂತನ (ನೇನಂಶಿ)

ಶ್ರೀ ಗೌರಿ -ಮುಖಕಮಲ-ದಿನಕರನೆ ಗಣಪತಿಯೆ
ಶ್ರೀ ಗಜಾನನ ಆಖು ವಾಹನನೆ ಶರಣು|
ಶ್ರೀ ಗುರುಕೃಪಾದೃಷ್ಟಿ ಎನ್ನ ಮೇಲಿರುವಂತೆ |
ಆಗುಮಾಡಿಸೊ ಬೆನಕ ಶರಣು ಶರಣು- || ಪ್ರತ್ಯಗಾತ್ಮ ||

ಅಮ್ಮ ಶಾರದೆ ವರದೆ ಶೃಂಗಗಿರಿ ಪುರವಾಸಿ
ಬೊಮ್ಮನರಸಿಯೆ ಸಕಲ ವಿಬುಧ-ಜನ-ವಂದ್ಯೆ
ನಮ್ಮ ಗುರುಕಾರ್ಯಕ್ಕೆ ಅಭಯ ಹಸ್ತವ ನೀಡು
ದಮ್ಮಯ್ಯ ಶರಣೆಂದೆ ಶ್ರೀ ಪಾದಕೆ- || ಪ್ರತ್ಯಗಾತ್ಮ||

ಪೊಡವಿಯೊಳಗಾವುದಿದೆ ನಿನಗಸಾಧ್ಯವು ಹನುಮ
ಹಿಡಿದ ಕೆಲಸವ ಬಿಡದೆ ಸಾಧಿಸುವೆ ನೀನು
ದೃಢ ಭಕ್ತ ಶ್ರೀರಾಮದೂತ ಕರುಣಾಸಿಂಧು
ಬಿಡದೆನ್ನ ಕಾರ್ಯವನು ಪೂರ್ಣಗೊಳಿಸು- || ಪ್ರತ್ಯಗಾತ್ಮ||

ಅಂಜನಾ ಗರ್ಭದಲಿ ಜನಿಸಿದ ಮಹಾಮಹಿಮ
ಸುಗ್ರೀವ ಸಚಿವರಲಿ ಉತ್ತಮೋತ್ತಮನೆ
ರಾಮಪ್ರಿಯ ನಿನಗಿದೊ ತಲೆಬಾಗಿ ವಂದಿಸುವೆ
ಹನುಮಂತ ಸಲಹೆನ್ನ ನೀನು ಸತತ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ

Related post

Leave a Reply

Your email address will not be published. Required fields are marked *