ಬೆನಕ
ನಮ್ಮ ಬೆನಕನು ಬರುವನು
ಕರೆದೊಯ್ಯಲೆನ್ನ ತಾಯನು
ಭಾದ್ರಪದದಲಿ ಬರುವನು
ನಮಗಮಿತ ಸಂತಸವೀವನು!
ಮುತ್ತುರತ್ನವ ಬೇಡನಿವನು
ಹುಲ್ಲು ಗರಿಕೆಗೆ ಒಲಿವನು
ಗೌರಿದೇವಿಯ ಕಂದನಿವನು
ಮೋದಕ ಪ್ರಿಯನಿವನು !
ನಕ್ಕ ಚಂದ್ರಗೆ ಶಾಪವಿತ್ತನು
ಪರಿಹಾರವ ತಾ ಕೊಟ್ಟನು
ಭಕ್ತರ ಪೊರೆಯೆ ಬರುವನು
ಮನಕಾನಂದವ ತರುವನು!
![](https://sahityamaithri.com/wp-content/uploads/2023/09/Sri-valli.jpg)
ಶ್ರೀವಲ್ಲಿ ಮಂಜುನಾಥ