ಮತ್ತೆ ಸಂಕ್ರಾಂತಿ
ಇರುವುದೆಲ್ಲವು ಹೋಗಿ ಮತ್ತೆ ಬೆತ್ತಲೆಯಾಗಿ|
ಕುರುಡಾಗಿ ಕಿವುಡಾಗಿ ಮೂಕ ನೀನಾಗಿ||
ಸರಿಯುತಿರೆ ಕತ್ತಲೊಳು ಬೆಳಕನ್ನು ಅರಸುತ್ತ|
ಮರಳಿ ಬರುವುದೆ ಬದುಕು – ನವ್ಯಜೀವಿ||
ಬದುಕೆಂಬುದು ನಿರಂತರ…ನಾವು ನಮ್ಮ ನಂತರ ಮತ್ತೊಬ್ಬರು.
ಕಾಲದೋಟದಲ್ಲಿ ಸಾಗುತ್ತ ಸಿಹಿಕಹಿಗಳ ಮಿಶ್ರಣವನ್ನು ಸವಿಯುತ್ತಾ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು.
![](https://sahityamaithri.com/wp-content/uploads/2023/01/sankranthi-new-1.jpg)
ಬಾಳಿನ ಎಲ್ಲಾ ನೋವು,ದುಃಖ ದುಮ್ಮಾನಗಳಿಂದ ಹೊರಬಂದು ಸಂತಸದಿಂದ ಮನಃ ಶಾಂತಿ ಹೊಂದಿರುವ ಜೀವನವನ್ನು ನಡೆಸುವಂತಾಗಿ…
ನಾವು ದಿಟ್ಟ ಹೆಜ್ಜೆಯನ್ನು ಇಡುತ್ತ ಗುರು ಹಿರಿಯರು ಕಲಿಸಿದ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ನಡೆದು ಗುರಿ ಮುಟ್ಟಿ ಯಶಸ್ಸು ಸಾಧಿಸುವಂತಾಗಬೇಕು…
ಬದುಕಿನ ಹಣತೆಯನ್ನು ನಾವು ಹಚ್ಚಬೇಕು,ಆದರೆ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದು ಇರಬಾರದು.
ನಾವು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನಮಗಿರಬಾರದು.
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿರಬಾರದು,
ಇರುವಷ್ಟು ಹೊತ್ತು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬೆಳಕು ಬೀರುವ ಪ್ರಯತ್ನ ಮಾಡಬೇಕು.
ಬದುಕು ರಸಹೀನವಲ್ಲ..,ಕತ್ತಲು ಸರಿಯುತ್ತಲೇ ಬೆಳಕು ಆವರಿಸುತ್ತದೆ ಈ ನಿತ್ಯಸತ್ಯವನ್ನು ಅರಿಯಬೇಕು,ಅರಿತಾಗಲೇ ಅದು ಬದುಕಿನ ನಿತ್ಯ ಸಂಕ್ರಾಂತಿ …
![](https://sahityamaithri.com/wp-content/uploads/2023/01/Sunil-Haleyur-4.jpg)
ಸುನೀಲ್ ಹಳೆಯೂರು