ಮುದ್ದು ಮಗಳೇ – ತಾಯಿಯೊಬ್ಬಳ ಆತ್ಮಕಥೆ
ಲೇಖಕಿ: ಲತಾ ಶ್ರೀನಿವಾಸ್
ಪ್ರಕಾಶನ: ಕಾಜಾಣ
ಬೆಲೆ: 200/-
ಲೇಖಕಿ ಶ್ರೀಮತಿ ಲತಾ ಶ್ರೀನಿವಾಸ್ ತುಮುಕೂರಿನವರು, ಕನ್ನಡ ಸ್ನಾತಕೋತ್ತರ ಪದವೀಧರೆ, ನಿವೃತ್ತ ಐ ಎ ಸ್ ಅಧಿಕಾರಿ ಶ್ರೀ ಕೆ. ಆರ್. ಶ್ರೀನಿವಾಸ್ ರವರ ಧರ್ಮಪತ್ನಿ. ಇವರು ಬರೆದ ಕೆಲವು ಸಣ್ಣ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲೇಖಿಕಾ ಸಾಹಿತ್ಯ ವೇದಿಕೆ ನಡೆಸಿದ ಕಥಾ ಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ದೊರೆತಿದೆ.
![](https://sahityamaithri.com/wp-content/uploads/2022/09/muddu-magale-mattomme-hutti-baa-autobiography-kannada-2021-original-imag7hp3uz7rqvn5.webp)
ಮುದ್ದಿನ ಮಗಳ ಅಕಾಲ ಮರಣದಿಂದ ತತ್ತರಿಸಿದ ಮಹಾತಾಯಿ ಶ್ರೀಮತಿ ಲತಾ ಶ್ರೀನಿವಾಸ್. ತಮ್ಮ ಮಗಳ ಅಗಲುವಿಕೆಯ ತಡೆಯಲಾರದ ನೋವಿನೊಟ್ಟಿಗೆ ಮುದ್ದು ಮಗಳೇ ಆತ್ಮಕಥೆಯನ್ನು ಹೊರತಂದಿದ್ದಾರೆ. ಈ ಕೃತಿಯಲ್ಲಿ ತಮ್ಮ ಮಗಳ ಜನನದ ಸವಿನೆನಪಿನಿಂದ ಮರಣದ ನೋವಿನವರೆಗೂ ಬರಹ ರೂಪದಲ್ಲಿ ಹಂಚಿಕೊಂಡಿದ್ದಾರೆ.
ಈ ಕೃತಿಗೆ ಖ್ಯಾತ ಕಥೆಗಾರ್ತಿ ಯವರ ಬೆನ್ನುಡಿ ಹಾಗು ಬೇಲೂರು ರಘುನಂದನ್ ಮತ್ತು ಎಚ್. ಎಸ್. ಶಿವಪ್ರಕಾಶ್ ರವರ ಮುನ್ನುಡಿ ಇದೆ. ಕಾಜಾಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದ್ದಾರೆ. ಪ್ರತಿಯೊಬ್ಬ ಪೋಷಕರು ಓದಲೇಬೇಕಾದ ಕೃತಿ. ಈ ಪುಸ್ತಕವನ್ನು ಹೊಂದುವ ಆಸಕ್ತಿಯಿರುವವರು ಸತೀಶ್ ರವರನ್ನು 91 – 7411170180 ನಂಬರಿಗೆ ಕರೆ ಮಾಡಿದರೆ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಾರೆ.
ಸಾಹಿತ್ಯಮೈತ್ರಿ ತಂಡ