ಯಾನ ಸಂಸ್ಕೃತಿ

ಲೇಖಕರು: ಶಾಂತ ನಾಗರಾಜ್
ಮುದ್ರಣ : ಸಾಹಿತ್ಯ ಲೋಕ ಪಬ್ಲಿಕೇಷನ್ಸ್
ಬೆಲೆ : 200/-

ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಎಂದಿನಂತೆ ಈ ಬಾರಿ ಹಿರಿಯ ಲೇಖಕರಾದ ಶಾಂತ ನಾಗರಾಜ್ ರವರ “ಯಾನ ಸಂಸ್ಕೃತಿ” ಪ್ರವಾಸ ಕಥನ ಪುಸ್ತಕವನ್ನು ಹೊರತಂದಿದೆ.

ಲೇಖಕಿ ಶಾಂತಾ ನಾಗರಾಜ್ ಅವರ ’ಯಾನಸಂಸ್ಕೃತಿ’ ಕೃತಿಯು ಪ್ರವಾಸ ಕಥನವಾಗಿದೆ. ಈ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಣಗೊಂಡಿದೆ. ‘ಯಾನ ಸಂಸ್ಕೃತಿ’ ಭೌತಿಕ ವಿವರಗಳೊಂದಿಗೆ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಕಾಣುತ್ತದೆ. ವಿಮರ್ಶಾಪರವಾದ ಒಲವಿದ್ರೂ ಅನ್ಯ ದೇಶೀಯರನ್ನು ಮನುಷ್ಯರನ್ನಾಗಿಯೇ ಕಾಣುವ ನಿಲುವು ಇಲ್ಲಿದೆ, ಅಂತೆಯೇ , ಇದು ಬರಿಯ ಪ್ರವಾಸ ಕಥನವಲ್ಲ, ಸಂಸ್ಕೃತಿಯ ಸಹಾನುಭೂತಿಯ ಅಧ್ಯಯನವಾಗಿದೆ. ಈ ಪುಸ್ತಕಕ್ಕೆ ರುಚಿಯೂ, ಸುಲಲಿತವಾಗಿ ಓದಿಕೊಂಡು ಹೋಗುವ ಗುಣವೂ ಮತ್ತು ಎಲ್ಲೋ ಆಳದಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಸುಪ್ತಶಕ್ತಿಯೂ ಲಭಿಸಿವೆ. ಅರಿವನ್ನು ವಿಸ್ತರಿಸುವ , ಗಹನವಾದ ವಿಷಯವಿದ್ದೂ, ರುಚಿ ಹಿಡಿಸುವ, ವಿಶ್ಲೇ಼ಷಣೆ ನಡೆಸಿಯೂ, ರಸಸ್ಪಂದಿಯಾಗುವ ಮೌಲಿಕತೆ ಈ ಕಥಾನಕಕ್ಕೆ ಇದೆ.

ಪುಸ್ತಕದ ಬಗ್ಗೆ ಎಂ ಸಿ ಪ್ರಕಾಶ್ ರವರ ಅಭಿಪ್ರಾಯ “Travel, in the younger sort, is a part of education; in the elder, a part of experience“, ಎಂದು ಫ್ರಾನ್ಸಿಸ್ ಬೇಕಾನ್ ಹೇಳಿದ ಹಾಗೆ ಈ ಪ್ರವಾಸ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಗೊಂಡಿದೆ. ಏಕೆಂದರೆ ಇದರ ಲೇಖಕಿ ಶ್ರೀಮತಿ ಶಾಂತಾ ನಾಗರಾಜ್ ಅವರ ಮನಸ್ಸು ಸಂವೇದನಾ ಶೀಲವಾದದ್ದು; ಸಾಹಿತ್ಯ – ಕಲೆಗಳ ಸತತಾಭ್ಯಾಸದಿಂದ ಸೂಕ್ಷ್ಮ ಗೊಂಡದ್ದು. ಅನುಭವದ ಆಳಕ್ಕಿಳಿಯುವ ಶಕ್ತಿ ಇದ್ದಂತೆಯೇ ಸುತ್ತಲಿನ ಪ್ರಪಂಚವನ್ನು, ಅದರ ಆಗು ಹೋಗುಗಳನ್ನು ಕುತೂಹಲ, ಔತ್ಸುಕ್ಯಭರಿತ ಬೆರಗುಗಣ್ಣುಗಳಿಂದ ನೋಡುವ ಮಗುವಿನ ಮುಗ್ಧತೆಯೂ ಅವರಲ್ಲಿ ಇದೆ. ಹಾಗಾಗಿಯೇ ಸಿಂಗಪುರವನ್ನು, ಅಲ್ಲಿಯ ಜನರನ್ನು ಅಲ್ಲಿಯ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಗ್ರಹಿಸುವ ಸಂದರ್ಭದಲ್ಲಿಯೇ ಅವುಗಳನ್ನು ಕುರಿತಾದ ಸೂಜಿಗವೂ ಮಿಳಿತವಾಗಿರುತ್ತದೆ. ಇಂತಹ ಮುಗ್ಧತೆ-ಸೂಕ್ಷ್ಮತೆಗಳ ಸಮಪಾಕವೇ ನಿಮ್ಮ ಕೈಯಲ್ಲಿರುವ ‘ಯಾನ ಸಂಸ್ಕೃತಿ’, ಭೌತಿಕ ವಿವರಗಳೊಂದಿಗೇ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಸಿದ್ಧಿಸಿದೆ. ವಿಮರ್ಶಾಪರವಾದ ಒಲವಿದ್ದೂ ಅನ್ಯ ದೇಶೀಯರನ್ನು ಮನುಷ್ಯರನ್ನಾಗಿಯೇ ಕಾಣುವ ನಿಲುವು ಇಲ್ಲಿದೆ. ಅಂತೆಯೇ ಇದು ಬರಿಯ ಪ್ರವಾಸ ಕಥನವಲ್ಲ, ಸಂಸ್ಕೃತಿಯ ಸಹಾನುಭೂತಿ ಪರವಾದ ಅಧ್ಯಯನ.

ಈ ಕೃತಿಯ ಶೈಲಿಯೂ ಪ್ರವಾಸಸಾಹಿತ್ಯದ ಉದ್ದೇಶಕ್ಕೇ ಸೂಕ್ತವಾದದ್ದು. ದೀರ್ಘಕಾಲದ ಲೇಖನಾಭ್ಯಾಸದಿಂದ ಹದಗೊಂಡ ಅತಿ ಭಾರವೂ, ಹಗುರವೂ ಅಲ್ಲದ ಸುವರ್ಣಮಾಧ್ಯಮ ಶೈಲಿ. ಆದುದರಿಂದ ಈ ಪುಸ್ತಕಕ್ಕೆ ರುಚಿಯೂ, ಸುಲಲಿತವಾಗಿ ಓದಿಕೊಂಡು ಹೋಗುವ ಗುಣವೂ ಮತ್ತು ಎಲ್ಲೋ ಆಳದಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಸುಪ್ತಶಕ್ತಿಯೂ ಲಭಿಸಿವೆ. ಇದರಿಂದ ಹಗುರವಾಗಿದ್ದೂ ಅರಿವನ್ನು ಎತ್ತರಿಸುವ, ಗಹನವಾದ ವಿಷಯವಿದ್ದೂ ರುಚಿ ಹಿಡಿಸುವ, ವಿಶ್ಲೇಷಣೆ ನಡೆಸಿಯೂ ರಸಸ್ಯಂದಿಯಾಗುವ ಮೌಲಿಕತೆ ಈ ಕಥಾನಕಕ್ಕೆ ಇದೆ. ನಮಗೆ ಇಂತಹ ಆರೋಗ್ಯಪೂರ್ಣ ಬರಹ- ಅಧ್ಯಯನಗಳ ಅಗತ್ಯ ತುಂಬ ಇದೆ.

ಖ್ಯಾತ ಲೇಖಕಿ “ನೇಮಿಚಂದ್ರ” ರವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ನೇಮಿಚಂದ್ರರು “ಸಿಂಗಪುರದ ಅಂತರಂಗದ ಚಿತ್ರಗಳನ್ನು ನೀಡುವ ಅಪರೂಪದ ಕೃತಿ “ಯಾನ ಸಂಸ್ಕೃತಿ” ಇದು ಪರದೇಶದ ಬರಿಯ ಪ್ರವಾಸದ ಕತೆಯಲ್ಲ, ಒಂದು ದೇಶದ ಸಂಸ್ಕೃತಿಯ ಅಧ್ಯಯನ, ಅವಲೋಕನ ಮತ್ತು ಕಥನ. ಈ ಕೃತಿ ಸಿಂಗಪುರದ ಒಳನೋಟ ಹೊರನೋಟ ಎರಡನ್ನು ವಿವರವಾಗಿ ಪರಿಚಯಿಸುತ್ತದೆ ಹಾಗು ಮುನ್ನುಡಿ ಬರೆಯುವ ನೆಪದಲ್ಲಿ ಕೃತಿಯನ್ನು ಓದುವ ಖುಷಿಯನ್ನು ಅನುಭವಿಸಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಹಿತ್ಯಾಸಕ್ತರು ಪುಸ್ತಕ ಕೊಳ್ಳಲು “ರಘುವೀರ್” ರವರನ್ನು 9945939436 ಮೊಬೈಲ್ ಮೂಲಕ ಸಂಪರ್ಕಿಸಿದರೆ ಪುಸ್ತಕವನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತಾರೆ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *