ಸದಾಶಯ

ಸದಾಶಯ

ಯಾರ ಶಾಪ ತಟ್ಟಿತೋ,
ಅದಾರ ಕಣ್ಣು ತಾಗಿತೋ.
ನಂದನದಂತಿದ್ದ ಮನೆಯೇಕೆ
ಭೂತ ಬಂಗಲೆಯಾಯಿತೋ ?

ರಾಮನನ್ನನುಸರಿಸುವ
ಅನುಜರಂತಿದ್ದವರಿಂದು,
ತಾವೇ ರಾವಣರಂತೆ
ಬಾಳಲೇಕಾದರೋ ?

ಜೇನುಗೂಡಿನಂತಿದ್ದ
ಆ ಮನೆಯೊಗ್ಗಟ್ಟಿಗೆ,
ದ್ವೇಷವೆಂಬ ಕಲ್ಲನ್ನು
ಅದಾರೊಗೆದರೋ ?

ಕೇರುವ ಮೊರದಂತೆ
ದೋಷವ ಬಿಟ್ಟು ಗುಣ
ಗ್ರಹಿಸುತ್ತಿದ್ದವರು, ಜರಡಿಯಂತೆ
ದೋಷ ಸಂಗ್ರಹಕರೇಕಾದರೋ ?

ಇರುವ ಸುಖವನು ತೊರೆದು,
ಮರೀಚಿಕೆಯನ್ನರಸುತ್ತಾ,
ಅವರವರಲ್ಲೇ ಹೊಡೆದಾಡಿ
ಪರಸ್ಪರ ಶತೃಗಳೇಕಾದರೋ ?

ವೈರತ್ವ ಕರಗಿ, ಮನದ ಕೊಳ
ತಿಳಿಯಾಗಿ, ಮನೆ-ಮನ-
ಗಳೊಂದಾಗಿ, ಹಿಂದಿರುಗಲಾ
ಮನೆಯ ಸಿರಿ ವೈಭವ !!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *