ಹಗುರಾಗು ಮನವೆ
ಕಣ್ಣ ಕಂಬನಿಯಿಂದು
ಕಥೆಯ ಹೇಳುತಲಿಹುದು,
ಗಲಿಬಿಲಿಯ ನಗೆಯು
ತಾನದರಲ್ಲಿ ಸೇರಿಹುದು,
ನಿನ್ನ ಇನಿದನಿಯಿಂದು
ಗಧ್ಗದಿತವಾಗುತಿದೆ,
ನಿನ್ನ ಮನಸಿನಲಾವ
ನೋವು ಮೀಟುತಿದೆ;
ನಿನ್ನ ನೋವನು ಕೇಳೆ
ನನ್ನ ಕಿವಿ ಕಾಯುತಿದೆ,
ನಿನ್ನ ಮನದಳಲೇನು
ನನ್ನ ಕಿವಿಯಲ್ಲುಸುರು,
ನಿನ್ನ ಸವಿ ಮನಕಿಂದು
ನೆಮ್ಮದಿಯ ತರಲೆಂದು,
ನನ್ನ ಮನ ಕಾತರದಿ
ಕಾದು ಕುಳಿತಿಹುದು!
![](http://sahityamaithri.com/wp-content/uploads/2023/06/Sri-valli-1.jpg)
ಶ್ರೀವಲ್ಲಿ ಮಂಜುನಾಥ