ಗೆಳೆಯನಿರಬೇಕು

ಗೆಳೆಯನಿರಬೇಕು

ಕಗ್ಗತ್ತಲ ಕಳೆದು ಬೆಳಕೆರೆವ ರವಿಯಂಥ
ಕದ್ದಿಂಗಳ ಕಳೆವ ಬೆಳದಿಂಗಳ ಶಶಿಯಂಥ
ಸುರಿಮಳೆಯ ಸಹಿಸುವ ಧರಣಿಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ

ನಾವೆ ದಾರಿ ತಪ್ಪದಿರಲೆಂಬ ದಿಕ್ಸೂಚಿಯಂಥ
ದಾರಿ ತಪ್ಪಿದ ನಾವೆಗೆ ದೀಪಸ್ತಂಭದಂಥ
ದಾರಿಯುದ್ದ ಜೊತೆ ಇರುವ ಕಾಲುಗಳಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ

ನೂರು ಮುಳ್ಳು ನಡುವ ಗುಲಾಬಿಯಂಥ
ದುರ್ವಾಸನೆ ಕಳೆದೊಗೆವ ಧೂಪದಂಥ
ಹೃದಯ ದೇಗುಲದ ದೇವತೆಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ

ಗುರಿ ನೀಡಿ ದಾರಿ ತೋರೋ ಗುರುವಿನಂಥ
ಗದರಿ ಬೆದರಿಸಿ ಹೇಳುವ ತಂದೆಯಂಥ
ಸುಡುಬಿಸಿಲಲಿ ತಂಪೆರೆವ ತಾಯಿಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ

ಬಾಳ ಮರುಭೂಮಿಯ ಓಯಾಸಿಸ್ ನಂಥ
ಕಂಬನಿ ಮಹಾಪೂರ ಸಹಿಸುವ ಸಾಗರದಂಥ
ಮಮತೆಯಿಂದ ಸಂತೈಸುವ ಮಡದಿಯಂಥ
ಗೆಳೆಯನಿರಬೇಕು ಒಬ್ಬ ಮುತ್ತಿನಂಥ

ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ, ಮಹಾರಾಷ್ಟ್ರ
ಮೊಬೈಲ್ : 9175547259

Related post