ಬೆಲೆ ಕಟ್ಟಲಾಗದ ಬಳಪ ಹಿಡಿದ ಭಗವಂತ

school children

ಬೆಲೆ ಕಟ್ಟಲಾಗದ ಬಳಪ ಹಿಡಿದ ಭಗವಂತ

ಅಕ್ಷರ ಕಲಿಸಿ ಬದುಕು ತೋರಿಸಿದವರು
ಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರು
ಪರ ಊರಿನಿಂದ ಬಂದು ಬೋಧಿಸಿದವರು
ಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು

ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ
ಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆ
ಪೂಜಿಸಿ ಬಳಪ ಹಿಡಿದ ಭಗವಂತನಿಗೆ
ಪ್ರೀತಿ ಮಮತೆಯ ಎರಡನೇ ತಾಯಿಗೆ

ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರು
ಏನು ಇಲ್ಲದ ಮೆದುಳಿಗೆ ಜ್ಞಾನ ತುಂಬಿದರು
ನನ್ನಂತೆ ನನ್ನ ಶಿಷ್ಯ ಬೆಳೆಯಬೇಕು ಎಂದರು
ಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು

ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು
ಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ ಪಟ್ಟವರು
ಆರಕ್ಕೇಳದೆ ಮೂರಕ್ಕಿಳಿಯದೆ ಬದುಕು ಸಾಗಿಸಿದವರು
ಜೀವನಪೂರ್ತಿ ಸರಳ ಜೀವನ ನಡೆಸಿದವರು

ಗುರುದೇವ ನಿನ್ನ ನಂಬಿದರೆ ಮೋಸವಿಲ್ಲವಯ್ಯ
ಕಣ್ಣಿಗೆ ಕಾಣುವ ದೇವರು ನೀನಯ್ಯ
ಅಕ್ಷರ ಕ್ರಾಂತಿಗೆ ರೂವಾರಿ ನೀವಯ್ಯ
ನೀವಿಲ್ಲದೆ ಜಗವು ಶೂನ್ಯ ನಂಬಯ್ಯ

ಗುರುಪೂರ್ಣಿಮೆಯ ವಿಶೇಷ

ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು
ಹೆಚ್ ಪಿ ಎಸ್ ಹಿರೇಮಳಗಾವಿ
ಬಾಗಲಕೋಟ
9845568484

Related post