ಹಿಂದಿನ ಪ್ರಕಟಣೆಯಲ್ಲಿಗೋವಿಂದಯ್ಯ ಚಿಕ್ಕದರಲ್ಲಿ ಪಟ್ಟ ಬವಣೆ, ಚಿಕ್ಕ ಹೋಟೆಲ್ ಕಟ್ಟಿದ್ದು, ಹೆಂಡತಿ ಲಕ್ಷ್ಮಿಯ ಕಾಲ್ಗುಣ ಹಾಗು ಸಹಕಾರದಿಂದ ಅದು ದೊಡ್ಡ ಹೋಟೆಲ್ ಆದದ್ದು ಕಾಲಾನಂತರ ಅನಾರೋಗ್ಯದಿಂದ ಲಕ್ಷ್ಮಿಯ ಸಾವು. ಮುಂದೆ ಓದಿ… -ಎರಡು- “ಏನ್ ಮಾಡ್ಕಂಡ್ ಇದೀಯಪ್ಪ ನಿನ್ ವಟ್ಗೆ…” ಅಜ್ಜಿ ಕೇಳಿದ್ದರು. “ಒಂದ್ ಸಣ್ಣ ಓಟ್ಲ್ ಇಟ್ಗಂಡಿದೀನಿ ಅಜ್ಜಿ” ಗೋವಿಂದನ ಉತ್ತರ. “ಬೇಕಾದೋಟು ಬುಡು; ಅವ್ವ-ಅಪ್ಪ ಎಲ್ಲವ್ರೆ?” ಅಜ್ಜಿ. “ಇಬ್ರಾಳೂ ಇಲ್ಲ ಕಣಜ್ಜಿ, ಸತ್ತೋಗ್ ಬೋ ವರ್ಸಾತು” ಅಂದಿದ್ದ. ಇದು, ಮೊದಲ ಸಲ ಗೋವಿಂದ, ಲಕ್ಷ್ಮಿ […]Read More
ಜುಲೈ ೧ ರಾಷ್ಟ್ರೀಯ ವೈದ್ಯರ ದಿವಸ. ಕುಮಾರಿ ನಿಧಿ ನಿಶ್ಚಲ್ ರವರು ತಮ್ಮ ಬಾವುಕ ಮನಸ್ಸಿನಿಂದ ಕವಿತೆಯ ಮೂಲಕ ಧನ್ಯವಾದಗಳನ್ನು ತಿಳಿಸಿರುತ್ತಾರೆ. ನಿಸ್ವಾರ್ಥ ಜೀವ ಎಂದಾದರೂ ಈ ರೀತಿಯ ದಿನವೂ ಬರುತ್ತದೆಎಂದು ನೀವು ಯೋಚಿಸಿದ್ದೀರಾ ?ಇಲ್ಲ ಯಾರು ಯೋಚಿಸಲಿಲ್ಲ! ಹಿಪೊಕ್ರೇಟಿಸ್ ಯಾವುದೇ ದೈವಿಕನಾಗಿರಲಿಲ್ಲಅಥವಾ ಫ್ಲಾರೆನ್ಸ್ ನೈಟಿಂಗೇಲ್ ಕೂಡ ಅಲ್ಲ… ನಿಮಗೆ ತಿಳಿಸಿದ್ದು ಇಷ್ಟೆಜೀವನ ಪವಿತ್ರ – ಜೀವನ ಅಮೂಲ್ಯಅದನ್ನು ಸಂರಕ್ಷಿಸಿ, ಗೌರವಿಸಿ, ಆಚರಿಸಿಇಂದು ನೀವು ನಿಮ್ಮ ಕೈಯಲ್ಲಿ ಇಡಿದಿರುವುದುಇದನ್ನೇ… ಆದರೆ ಉಪದ್ರವವು ಎಲ್ಲೆಲ್ಲೂ ಇದೆಅದು ಇಲ್ಲಿದೆ ಅದು […]Read More
ತೃಪ್ತಿಅರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು,ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ,ಪ್ರಾಪ್ತಿಗೊಳುಪುದು ಜೀವನ್ಕುನ್ಮಾದ,ತಾಪಗಳ ಸುಪ್ತವಹುದೆಂತಿಚ್ಛೇ ???? ವಿವೇಕದ ಜೀವನ..ಸಾಕ್ಷಾತ್ಕಾರ,ಕಾಗೆ ನವಿಲಾಗದು,ನವಿಲು ಹಂಸವಾಗದು,ಜೀವನದ ಯಾನ ನಾವುಗಳಂದಂತಿಲ್ಲ,ನಮ್ಮ ಜೀವನದ ಭಿಕ್ಷೆ… ಸುಭಿಕ್ಷೆಯಾಗಲಿ,ಕ್ಷಣಿಕ ಸುಖಕ್ಕೆ ಮರುಳಾಗದೆ,ಮೇರು ದುಂದುಭಿಯಲ್ಲಿ ಇರಲಿ ಚಿತ್ತ. ಪರಾಧಿಯೊಳಗೆ ಇರಲಿ ಆಸೆ,ಸಂತೃಪ್ತ ಮನಸ್ಸು ಧನಾತ್ಮಕ ಇರಲಿ,ನಾವೇರಿದ ವಾಹನ ನಮ್ಮ ಹಿಡಿತದಲ್ಲಿರಲಿ,ಪುಟಿದೇಳುವ ಆಸೆಗಳಿಗೆ ಸಮಯೋಚಿತ ಜಾಣ್ಮೆಯ ಮಾರ್ಗದರ್ಶನವಿರಲಿ.ವಿವೇಕದ ಮುಷ್ಠಿ ಹಿಡಿದರಷ್ಠೆ ಶಾಂತಿ. ಮಾಧವ(ಅಪ್ಪಣ್ಣ)ಯದುನಾಥ ಜೋಶಿಬೆಂಗಳೂರು ಹಾಗು ಗಲಗಲಿ.Read More
ನಮ್ಮ ಮನೆಯ ಕೆಳ ಪಾರ್ಶ್ವದಲ್ಲಿ ನನ್ನ ಸ್ನೇಹಿತನ ಕುಟುಂಬ ವಾಸವಾಗಿತ್ತು. ಆತನ ತಂದೆಗೆ ಇವನು ಸೇರಿ ಒಟ್ಟು ಏಳು ಮಕ್ಕಳು. ತಂದೆ ತೀರಿಕೊಂಡ್ದಿದರು. ಆರು ಗಂಡು ಮಕ್ಕಳು ಕೊನೆಯವಳು ಹೆಣ್ಣು. ಮೊದಲನೆಯ ಇಬ್ಬರಿಗೆ ಮದುವೆಯಾಗಿತ್ತು. ಮೊದಲನೆಯವರಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳು. ವಯಸ್ಸಾದ ಅಜ್ಜ-ಅಜ್ಜಿ, ಸ್ನೇಹಿತನ ತಾಯಿ, ಆರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಇಬ್ಬರು ಸೊಸೆಯಂದಿರು,ಇಬ್ಬರು ಪುಟಾಣಿಗಳು ಒಟ್ಟು ಹದಿನಾಲ್ಕು ಮಂದಿಯ ಅವಿಭಕ್ತ ಕುಟುಂಬ. ನನ್ನ ಸ್ನೇಹಿತ ಬೆಳಿಗ್ಗೆ ಆರಕ್ಕೆ ಹಲ್ಲುಜ್ಜಿ ಮುಖ ತೊಳೆದು […]Read More
“ಕಣಿ ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ ನೀಲಿ ಹೊತ್ತಿಗೆ: ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ […]Read More
ಗರಿಕೆಯ ಚಿಗುರುನಿನ್ನ ಗೋರಿಯಮೇಲಿನಚೆಲುವ ಹೆಚ್ಚಿಸಿದೆನೋಡು ನಿನ್ನಷ್ಟಲ್ಲದಿದ್ದರೂ..ಗರಿಕೆಯಷ್ಟೇ ಚೆಲುವಿದೆ..!! ಪೂರ್ಣ ಬೆತ್ತಲಾಗಿ ಮಲಗಿರುವೆ ನೀನಲ್ಲಿನಿನ್ನ ಗೋರಿ ಮುಚ್ಚಲು ಒಂದೊಂದು ಗರಿಕೆಯೂ ಪೈಪೋಟಿಗೆನಿಂತಿವೆ ಇಲ್ಲಿ..!! ನಾ ನಿನ್ನ ಪ್ರೀತಿಸಿದೆನಾ ನಿನ್ನ ಪ್ರೇಮಿಯಾಗಿದ್ದಾಕ್ಕಾಗಿಈ ಗೋರಿ ನನಗಿಂತಹೆಚ್ಚಾಗೇ ಪ್ರೀತಿಸುತ್ತಿದೆಯಾ ನಿನ್ನ ಪ್ರೇಮಿಯಾಗಿ ಪಡೆದುದ್ದಾಕ್ಕಾಗಿ…??ನೀನಾಗಲೇ ಹೋಗಿರುವೆ ಬಂಧಿಸಲ್ಪಟ್ಟಬಂಧನದಿಂದನಾ ಇನ್ನೂ ಬಂದೀಖಾನೆಯಲ್ಲೇಬಂಧಿಯಾಗಿರುವೆಬರದಿರುವಪ್ರವಾಹವ ಮರೆತು…!! ಶಿವು ಅಣ್ಣಿಗೇರಿRead More
ಮೇಣದ ಬತ್ತಿ ಹಚ್ಚಿದ್ದಾನೆ ದೇವರುಉರಿಯುತ್ತಿದೆ ಮೆಲ್ಲಗೆಹೋರಾಡುತ್ತಾ ಗಾಳಿಯೊಂದಿಗೆ ಆರಿಹೋಗುವುದಿಲ್ಲ ಬೇಗನೆತನ್ನ ಶಕ್ತಿಯ ಮೇಲೆ ನಂಬಿಕೆಬೀಸುವ ಗಾಳಿ ಎಷ್ಟೇ ರಭಸವಾಗಿರಲಿಅಂಜುವುದಿಲ್ಲ ಬದುಕುವ ಛಲವದಕೆ ಸಂಘರ್ಷ ಸಹಜ.ಅಪೇಕ್ಷಿತವಿಲ್ಲ ಇಲ್ಲಿ ಏನೂಬಂದಿದ್ದು ಸ್ವೀಕರಿಸುವ ಇರಾದೆ.ಒಲಿದಂತೆ ನಡೆಯುವ ಖಯಾಲಿ..ಪ್ರಕೃತಿಯೂ ಸಹಕಾರಿ.. ನಂಬಿಕೆಯೇ ಜೀವ.ಮೇಣದ ಬತ್ತಿ ಉರಿದರೂಅದರ ಅಸ್ತಿತ್ವವೇ ಸಾಕ್ಷಿRead More
-ಒಂದು- ಗೋವಿಂದಯ್ಯ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಒಂದು ಅಂದಾಜಿನಲ್ಲಿ ನಲವತ್ತೈದು-ಐವತ್ತು ವರ್ಷಗಳೇ ಆಗಿರಬಹುದು. ಅದು ಯಾವ ಅಂದಾಜು ಅಂತ ಎಂದೂ ಅವರಿಗೇ ತಿಳಿದಿಲ್ಲ. ಆದರೂ, ಯಾರೇ ಆಕಸ್ಮಿಕವಾಗಿ ಕೇಳಿದರೂ, ಅವರು ಹೇಳೋದೇ ಹಾಗೆ. ಆಗ ಈ ಬೆಂಗಳೂರು ನೆಮ್ಮದಿಯ ಬದುಕಿನ ನಗರವಾಗಿತ್ತು…ಕೋಟಿಗಟ್ಟಲೆ ಬರೀ ಕೆಟ್ಟ ಜನಗಳೇ ಸತ್ತೂ ಸತ್ತು, ಇರುವೆ ಹರಿದಾಡಲೂ ಕೊಂಚ ತಾವಿಲ್ಲದ ಹಾಗೆ ಈಗ ನರಕ ಹೇಗೆ ಗಬ್ಬಾಗಿ ನಾರುತ್ತಾ ಇರಬಹುದೋ, ಅದೇ ಮಾದರಿಯಲ್ಲೇ ಇದೆ, ಈ ನಮ್ಮ ಹೆಮ್ಮೆಯ ನಗರ ಇಂದು! […]Read More
ಪಶ್ಚಿಮ ಹಾಗೂ ಘಟ್ಟಗಳ, ಒಟ್ಟಾರೆ ದಕ್ಕನ್ಪ್ರಸ್ಥ ಭೂಮಿಯ ರಮಣೀಯ ಸೌಂದರ್ಯದಲ್ಲಿ ಈ ಹಕ್ಕಿಯದ್ದು ವಿಶಿಷ್ಟಪಾಲಿದೆ. ಕನ್ನಡದಲ್ಲಿ ಕಾಕರಣೆ ಹಕ್ಕಿ ಎಂದು ಕರೆಯಲಾಗುವ ಇದಕ್ಕೆ ಸ್ಥಳೀಯವಾಗಿ ಕಕ್ಕರಣೆ ಹಕ್ಕಿ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಮಲಬಾರ್ ಟ್ರೋಗಾನ್ (Malabar Trogon Harpactes fasciatus)ಎಂದು ಕರೆಯುತ್ತಾರೆ. ಗಂಡು ಹಾಗೂ ಹೆಣ್ಣು ಎರಡೂ ವಿಶಿಷ್ಟವಾದ ಸೌಂದರ್ಯದಿಂದ ಕೂಡಿದೆ. ಗಂಡು ಪ್ರಧಾನವಾಗಿ ಕೆಂಪಾಗಿದ್ದು ಕಪ್ಪು ತಲೆ, ಕುತ್ತಿಗೆಯನ್ನು ಹೊಂದಿರುತ್ತದೆ, ಈ ಕಪ್ಪು ಎದೆಯ ಮೇಲ್ಭಾಗದವರೆಗೂ ವ್ಯಾಪಿಸಿರುತ್ತದೆ. ದೇಹದ ಕೆಳಭಾಗ ಕೆಂಪು! ಈ ಕೆಂಪು-ಕಪ್ಪನ್ನು ಬೇರ್ಪಡಿಸುವುದು […]Read More
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಜೂನ್ ಇಪ್ಪತ್ತೊಂದು [ June 21 ], ಯೋಗಾಭ್ಯಾಸದಿಂದ ಸದೃಢ ಆರೋಗ್ಯ ನಿಮ್ಮದೆ ಎಂದೆಂದೂ. ಅಪರಿಮಿತ ಸಂತೋಷ, ಆರೋಗ್ಯ ಪಡೆಯಲು ತಪ್ಪದೆ ಮಾಡಿ ಯೋಗ 🤸🏻♀️ಯೋಗದ ಮಹತ್ವ ಅರಿವಿದ್ದವರಿಗೆ ಜೀವನ ಬಲು ಸರಾಗ 🚀ಯೋಗವು ಯಾವುದೇ ದೈಹಿಕ, ಮಾನಸಿಕ ಸಮಸ್ಯೆಗಳು ಹತ್ತಿರ ಸುಳಿಯದಂತೆ ಜಡಿಯುವ ಬೀಗ 🔒ಯೋಗ ಕಷ್ಟವೂ ಅಲ್ಲ, ಕ್ಲಿಷ್ಟವೂ ಅಲ್ಲ, ಎಲ್ಲರ ಸಂತೋಷವಾಗಿರಿಸುವ ಆನಂದರಾಗ ಯೋಗ ನಿಜಾರ್ಥದಲ್ಲಿ ಶಿಕ್ಷಣವಲ್ಲ, ನಮ್ಮ ಸಂಸ್ಕೃತಿ 👏🏻ಯೋಗದಿಂದಲೆ ಸಾಧ್ಯ ನಿಜವಾದ ಪ್ರಗತಿ 🚉ಉತ್ತಮ, ಅತ್ಯುತ್ತಮವಾಗಿರುವುದು […]Read More