ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ. (Common Iora Aegithina tiphia)ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ ನಾಲ್ಕು ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ […]Read More
ಜನಪದ ಚಿತ್ರಗಳು ಸಾಮಾನ್ಯವಾಗಿ ಕಾಲದಿಂದ ಕಾಲಕ್ಕೆ ತಮ್ಮ ಅಭಿವ್ಯಕ್ತಿಗಳ ಅಸ್ತಿತ್ವವನ್ನು ಬದಲಿಸಿಕೊಳ್ಳುತ್ತಾ ಬರುತ್ತಿವೆ. ಈ ಬದಲಾವಣೆಯನ್ನು ಪರಿವರ್ತನೆ ಅಥವಾ ರೂಪಾಂತರ ಎಂಬ ಹೆಸರಿನಲ್ಲಿ ವಿದ್ವಾಂಸರು ಗುರುತಿಸುತ್ತಾ ಬಂದಿದ್ದಾರೆ. ಅಂದರೆ ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಹಲವು ವಿಧಿವಿಧಾನಗಳ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಇದು ಸಾಗಿದೆ. ಜನಪದ ಚಿತ್ರಗಳ ಸಾಮಾನ್ಯ ಸ್ವರೂಪವನ್ನು ಜನಪದ ಭಿತ್ತಿಚಿತ್ರಗಳ ಮೂಲ ಹಾಗೂ ಅವುಗಳ ನೇಪಥ್ಯ, ಚಾರಿತ್ರಿಕ, ಭೌಗೋಳಿಕ, ನೈಸರ್ಗಿಕ ಹಿನ್ನೆಲೆಯಲ್ಲಿ ಕನ್ನಡ ಜನಪದ ಚಿತ್ರಕಲೆಯ ಪ್ರಯೋಗ ವಿಧಾನ, ವಿಕಾಸ, ಗ್ರೀಕ್, […]Read More
ಕೋವಿಡ್ ಎರಡನೇ ಅಲೆಯಿಂದಾಗಿ ಚಿತ್ರೀಕರಣ ನಿಲ್ಲಿಸಿದ್ದ ಬಿಗ್ ಬಾಸ್ 8 ನೇ ಸೀಸನ್ ಮತ್ತೆ ಶುರುವಾದ ಹಿನ್ನಲೆಯಲ್ಲಿ ಎರಡು ವಾರದ ಹಿಂದೆ ಅಳುತ್ತಾ ಮನೆಗೆ ತೆರೆಳಿದ್ದ ಎಲ್ಲಾ ಸ್ಪರ್ದಿಗಳು ನಗುನಗುತ್ತಾ ಬಿಗ್ ಬಾಸ್ ಮನೆಗೆ ಹಿಂತಿರುಗಿದ್ದಾಯಿತು. ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲೇ ಈ ರೀತಿ ಸ್ಪರ್ಧೆ ನಿಂತು ಹೋಗಿ ಮತ್ತೆ ಶುರುವಾಗಿರುವುದು ಇದೇ ಮೊದಲು. ಈ ಆವೃತ್ತಿಯ ಸ್ಪರ್ದಿಗಳಿಗೆ ಕಾಲಾವಕಾಶ ದೊರೆತು ತಮ್ಮಲೇ ವಿಶ್ಲೇಷಣೆ ಮಾಡಿಕೊಂಡು ಸಿಗುವ ಸಲಹೆಗಳನ್ನು ಉಪಯೋಗಿಸಿಕೊಂಡು ಇನ್ನು ಚೆನ್ನಾಗಿ ಆಡಬಹುದಾಗಿದೆ.ಸ್ಪರ್ಧೆಯ ವೇಳೆಯಲ್ಲಿದ್ದ ದುಗುಡ […]Read More
ಹಾರುತಿವೆ ಪ್ಲಾಸ್ಟಿಕ್ ಕವರುಗಳುಬಣ್ಣ ಬಣ್ಣದ ಕವರುಗಳುಗಲ್ಲಿ ಗಲ್ಲಿಯಲಿ… ಮನೆ ಮನೆಗಳ ಟೆರಸ್ಸಲಿಗಾಳಿಗೆ, ಧೂಮ ಧಾಳಿಗೆ ಗಿರ ಗಿರ ತಿರುಗುತಿವೆಎಲ್ಲೂ… ಎಲ್ಲೆಲ್ಲೂ!!! ಮಮ್ಮೀ, ಸೀ ಹಿಯರ್…ಫ್ಲಯಿಂಗ್… ಟರ್ನಿಂಗ್… ಮೂವಿಂಗ್..ಹಿಯರ್ ಅಂಡ್ ದೇರ್..ದೀಸ್ ಪ್ಲಾಸ್ಟಿಕ್ ಕವರ್ಸ್!“ಓ ಕಲರ್ ಫುಲ್! ಹೌವ್ ನೈಸ್ ಇಟ್ ಈಸ್?”ಅಂದೀತು ಮುಂಬರುವ ನಿಮ್ಮ ಕಂದಮ್ಮಗಳು…!!! ತುಂಕೂರು ಸಂಕೇತ್Read More
ಹಿಂದಿನ ಪ್ರಕಟಣೆಯಲ್ಲಿಗೋವಿಂದಯ್ಯ ಚಿಕ್ಕದರಲ್ಲಿ ಪಟ್ಟ ಬವಣೆ, ಚಿಕ್ಕ ಹೋಟೆಲ್ ಕಟ್ಟಿದ್ದು, ಹೆಂಡತಿ ಲಕ್ಷ್ಮಿಯ ಕಾಲ್ಗುಣ ಹಾಗು ಸಹಕಾರದಿಂದ ಅದು ದೊಡ್ಡ ಹೋಟೆಲ್ ಆದದ್ದು ಕಾಲಾನಂತರ ಅನಾರೋಗ್ಯದಿಂದ ಲಕ್ಷ್ಮಿಯ ಸಾವು. ಮುಂದೆ ಓದಿ… -ಎರಡು- “ಏನ್ ಮಾಡ್ಕಂಡ್ ಇದೀಯಪ್ಪ ನಿನ್ ವಟ್ಗೆ…” ಅಜ್ಜಿ ಕೇಳಿದ್ದರು. “ಒಂದ್ ಸಣ್ಣ ಓಟ್ಲ್ ಇಟ್ಗಂಡಿದೀನಿ ಅಜ್ಜಿ” ಗೋವಿಂದನ ಉತ್ತರ. “ಬೇಕಾದೋಟು ಬುಡು; ಅವ್ವ-ಅಪ್ಪ ಎಲ್ಲವ್ರೆ?” ಅಜ್ಜಿ. “ಇಬ್ರಾಳೂ ಇಲ್ಲ ಕಣಜ್ಜಿ, ಸತ್ತೋಗ್ ಬೋ ವರ್ಸಾತು” ಅಂದಿದ್ದ. ಇದು, ಮೊದಲ ಸಲ ಗೋವಿಂದ, ಲಕ್ಷ್ಮಿ […]Read More
ಜುಲೈ ೧ ರಾಷ್ಟ್ರೀಯ ವೈದ್ಯರ ದಿವಸ. ಕುಮಾರಿ ನಿಧಿ ನಿಶ್ಚಲ್ ರವರು ತಮ್ಮ ಬಾವುಕ ಮನಸ್ಸಿನಿಂದ ಕವಿತೆಯ ಮೂಲಕ ಧನ್ಯವಾದಗಳನ್ನು ತಿಳಿಸಿರುತ್ತಾರೆ. ನಿಸ್ವಾರ್ಥ ಜೀವ ಎಂದಾದರೂ ಈ ರೀತಿಯ ದಿನವೂ ಬರುತ್ತದೆಎಂದು ನೀವು ಯೋಚಿಸಿದ್ದೀರಾ ?ಇಲ್ಲ ಯಾರು ಯೋಚಿಸಲಿಲ್ಲ! ಹಿಪೊಕ್ರೇಟಿಸ್ ಯಾವುದೇ ದೈವಿಕನಾಗಿರಲಿಲ್ಲಅಥವಾ ಫ್ಲಾರೆನ್ಸ್ ನೈಟಿಂಗೇಲ್ ಕೂಡ ಅಲ್ಲ… ನಿಮಗೆ ತಿಳಿಸಿದ್ದು ಇಷ್ಟೆಜೀವನ ಪವಿತ್ರ – ಜೀವನ ಅಮೂಲ್ಯಅದನ್ನು ಸಂರಕ್ಷಿಸಿ, ಗೌರವಿಸಿ, ಆಚರಿಸಿಇಂದು ನೀವು ನಿಮ್ಮ ಕೈಯಲ್ಲಿ ಇಡಿದಿರುವುದುಇದನ್ನೇ… ಆದರೆ ಉಪದ್ರವವು ಎಲ್ಲೆಲ್ಲೂ ಇದೆಅದು ಇಲ್ಲಿದೆ ಅದು […]Read More
ತೃಪ್ತಿಅರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು,ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ,ಪ್ರಾಪ್ತಿಗೊಳುಪುದು ಜೀವನ್ಕುನ್ಮಾದ,ತಾಪಗಳ ಸುಪ್ತವಹುದೆಂತಿಚ್ಛೇ ???? ವಿವೇಕದ ಜೀವನ..ಸಾಕ್ಷಾತ್ಕಾರ,ಕಾಗೆ ನವಿಲಾಗದು,ನವಿಲು ಹಂಸವಾಗದು,ಜೀವನದ ಯಾನ ನಾವುಗಳಂದಂತಿಲ್ಲ,ನಮ್ಮ ಜೀವನದ ಭಿಕ್ಷೆ… ಸುಭಿಕ್ಷೆಯಾಗಲಿ,ಕ್ಷಣಿಕ ಸುಖಕ್ಕೆ ಮರುಳಾಗದೆ,ಮೇರು ದುಂದುಭಿಯಲ್ಲಿ ಇರಲಿ ಚಿತ್ತ. ಪರಾಧಿಯೊಳಗೆ ಇರಲಿ ಆಸೆ,ಸಂತೃಪ್ತ ಮನಸ್ಸು ಧನಾತ್ಮಕ ಇರಲಿ,ನಾವೇರಿದ ವಾಹನ ನಮ್ಮ ಹಿಡಿತದಲ್ಲಿರಲಿ,ಪುಟಿದೇಳುವ ಆಸೆಗಳಿಗೆ ಸಮಯೋಚಿತ ಜಾಣ್ಮೆಯ ಮಾರ್ಗದರ್ಶನವಿರಲಿ.ವಿವೇಕದ ಮುಷ್ಠಿ ಹಿಡಿದರಷ್ಠೆ ಶಾಂತಿ. ಮಾಧವ(ಅಪ್ಪಣ್ಣ)ಯದುನಾಥ ಜೋಶಿಬೆಂಗಳೂರು ಹಾಗು ಗಲಗಲಿ.Read More
ನಮ್ಮ ಮನೆಯ ಕೆಳ ಪಾರ್ಶ್ವದಲ್ಲಿ ನನ್ನ ಸ್ನೇಹಿತನ ಕುಟುಂಬ ವಾಸವಾಗಿತ್ತು. ಆತನ ತಂದೆಗೆ ಇವನು ಸೇರಿ ಒಟ್ಟು ಏಳು ಮಕ್ಕಳು. ತಂದೆ ತೀರಿಕೊಂಡ್ದಿದರು. ಆರು ಗಂಡು ಮಕ್ಕಳು ಕೊನೆಯವಳು ಹೆಣ್ಣು. ಮೊದಲನೆಯ ಇಬ್ಬರಿಗೆ ಮದುವೆಯಾಗಿತ್ತು. ಮೊದಲನೆಯವರಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳು. ವಯಸ್ಸಾದ ಅಜ್ಜ-ಅಜ್ಜಿ, ಸ್ನೇಹಿತನ ತಾಯಿ, ಆರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಇಬ್ಬರು ಸೊಸೆಯಂದಿರು,ಇಬ್ಬರು ಪುಟಾಣಿಗಳು ಒಟ್ಟು ಹದಿನಾಲ್ಕು ಮಂದಿಯ ಅವಿಭಕ್ತ ಕುಟುಂಬ. ನನ್ನ ಸ್ನೇಹಿತ ಬೆಳಿಗ್ಗೆ ಆರಕ್ಕೆ ಹಲ್ಲುಜ್ಜಿ ಮುಖ ತೊಳೆದು […]Read More
“ಕಣಿ ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ ನೀಲಿ ಹೊತ್ತಿಗೆ: ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ […]Read More
ಗರಿಕೆಯ ಚಿಗುರುನಿನ್ನ ಗೋರಿಯಮೇಲಿನಚೆಲುವ ಹೆಚ್ಚಿಸಿದೆನೋಡು ನಿನ್ನಷ್ಟಲ್ಲದಿದ್ದರೂ..ಗರಿಕೆಯಷ್ಟೇ ಚೆಲುವಿದೆ..!! ಪೂರ್ಣ ಬೆತ್ತಲಾಗಿ ಮಲಗಿರುವೆ ನೀನಲ್ಲಿನಿನ್ನ ಗೋರಿ ಮುಚ್ಚಲು ಒಂದೊಂದು ಗರಿಕೆಯೂ ಪೈಪೋಟಿಗೆನಿಂತಿವೆ ಇಲ್ಲಿ..!! ನಾ ನಿನ್ನ ಪ್ರೀತಿಸಿದೆನಾ ನಿನ್ನ ಪ್ರೇಮಿಯಾಗಿದ್ದಾಕ್ಕಾಗಿಈ ಗೋರಿ ನನಗಿಂತಹೆಚ್ಚಾಗೇ ಪ್ರೀತಿಸುತ್ತಿದೆಯಾ ನಿನ್ನ ಪ್ರೇಮಿಯಾಗಿ ಪಡೆದುದ್ದಾಕ್ಕಾಗಿ…??ನೀನಾಗಲೇ ಹೋಗಿರುವೆ ಬಂಧಿಸಲ್ಪಟ್ಟಬಂಧನದಿಂದನಾ ಇನ್ನೂ ಬಂದೀಖಾನೆಯಲ್ಲೇಬಂಧಿಯಾಗಿರುವೆಬರದಿರುವಪ್ರವಾಹವ ಮರೆತು…!! ಶಿವು ಅಣ್ಣಿಗೇರಿRead More