ಮಯೂರ ನೃತ್ಯ ನೋಡೋಣ ಬನ್ನಿ!

ನವಿಲುಗಳು ನವಿಲು ಎಂದು ಕೇಳಿದೊಡನೆ ಸಂತೋಷ ಪಡದವರು ಪ್ರಾಯಃ ಯಾರೂ ಇಲ್ಲ. ನವಿಲು ನಮ್ಮ ಸಾಹಿತ್ಯ, ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ಹಕ್ಕಿ, ಸುಬ್ರಹ್ಮಣ್ಯ ಸ್ವಾಮಿಯ ವಾಹನ, ಬೌದ್ಧ ಧರ್ಮದಲ್ಲಿಯೂ ಇದರ ಪ್ರಸ್ತಾಪವಿದೆ. ಹಾಗಾಗಿ ಇದಕ್ಕೆ ಆಧ್ಯಾತ್ಮದ ಸ್ಪರ್ಶವೂ ಇದೆ. ಮಯೂರ ಎಂಬುದು ಇದರ ಇನ್ನೊಂದು ಹೆಸರು. ನರ್ತಿಸುವ ನವಿಲು “ಗಂಡು”. ಹಾಗಾಗಿಯೇ ನೃತ್ಯ ನಿಪುಣೆಯರನ್ನು “ನಾಟ್ಯ ಮಯೂರಿ” ಎಂದು ಕರೆಯುವುದು. ಸೌಂದರ್ಯದ ಪ್ರತೀಕ ಈ ನಮ್ಮ ನವಿಲು. ನವಿಲು ನಮ್ಮ ರಾಷ್ಟ್ರಪಕ್ಷಿ.  ನಮ್ಮ ವಿನ್ಯಾಸಲೋಕದ ಅನಭಿಷಿಕ್ತ ದೊರೆಯೇ ನವಿಲು! […]Read More

ವೈವಿಧ್ಯಮಯ ರಂಗ ಪ್ರತಿಭೆ ಗಗನ್

ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟ ಹಾಗೂ ಕಂಠದಾನ ಕಲಾವಿದನಾಗಿ ಗುರುತಿಸಿಕೊಂಡವರು ಗಗನ್ ಆರ್ ಗೋಡ್ಗಲ್ ರಂಗಭೂಮಿಯ ಚಟುವಟಿಯಲ್ಲಿ ಏನೋ ಒಂದು ಸೆಳೆತವಿದೆ. ಅದು ಒಂಥರ ಗುರುತ್ವಾಕರ್ಷಣೆ. ಈ ರಂಗಭೂಮಿಯತ್ತ ಸಾಗಲು ಹಲವು ಮಾರ್ಗಗಳಿವೆ. ಆದರೆ ಹೊರ ಬರಲು ದಾರಿಯೇ ಇಲ್ಲ. ಅಲ್ಲೇ ಇದ್ದು ಬಿಡುತ್ತಾರೆ. ಅಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಕಷ್ಟಗಳು ಬಂದರೂ ಅವು ಕಷ್ಟವೆನಿಸದು. ಅಕ್ಕ-ಪಕ್ಕದ ದೂರದರ್ಶನ, ಸಿನಿಮಾಗಳತ್ತ ಹೆಜ್ಜೆ ಇಟ್ಟರೂ ಮೂಲ ಬೇರು ರಂಗಭೂಮಿಯಲ್ಲೇ ಇರುತ್ತೆ. ತುಮಕೂರು ಜಿಲ್ಲೆಯ ಮೂಲದ ರಂಗಕರ್ಮಿ ಗಗನ್ ಆರ್ […]Read More

ಚುಟುಕುಗಳು-ಗೀತಾ ಚಲಂ

ಗೀತಾಚಲಂ ಪ್ರಾಸಕ್ಕೆ ಹೆಚ್ಚು ಒತ್ತುಕೊಟ್ಟು ಬರೆಯುವ ಬರಹಗಾರ್ತಿ, ಹವ್ಯಾಸಕ್ಕಾಗಿ ಬರೆಯುತ್ತಿದ್ದರೂ ಹಲವು ಪ್ರಯೋಗಗಳನ್ನು ಮಾಡುತ್ತಾ ಅದರಲ್ಲೇ ಹೆಚ್ಚು ತೊಡಗಿಕೊಂಡಿರುತ್ತಾರೆ. ರಂಗೋಲಿ ರಂಗು ರಂಗಿನರಂಗವಲ್ಲಿಇತ್ತು ಮನೆಯಅಂಗಳದಲ್ಲಿಕಂಡೆ ನಾನುಬೆಳದಿಂಗಳಲ್ಲಿಮುದನೀಡಿತೆದೆಯಾಳದಲ್ಲಿಬರೆದವರಾರುಈ ಚಿತ್ರವಿಲ್ಲಿಎಂದಾಗ ಬಂದಳುಪುಷ್ಪವಲ್ಲಿ ಚಿಂತೆ – ಚಿತೆ ಅಂತೆ ಕಂತೆಗಳಸಂತೆಯೊಳಗೆಮಾರಲೊರಟೆನನ್ನದೊಂದು ಚಿಂತೆಕೊಳ್ಳುವವರಾದರೂಬರಬಹುದೆಂದುಸಂಜೆ ತನಕ ಕಾದುಕುಂತೆ ಆಗ ನಾ ಅರಿತೆನಾನು ಚಿತೆ ಏರುವವರೆಗೆನನ್ನಲ್ಲೇ ಇರುತ್ತೆ ಚಿಂತೆ ಪ್ರಕೃತಿಯ ಕೋಪ ಹಾರಾಡುವಂತ ಹಕ್ಕಿಗೆ ನೆಲೆಯಲ್ಲಿಹರಿಯುವಂತ ನದಿಗೆ ಕೊನೆಯೆಲ್ಲಿಬೀಸುವಂತಹ ಗಾಳಿಗೆ ತಡೆಯೆಲ್ಲಿಇರುವುದು ಒಂದು ನಿಯಮವಿಲ್ಲಿಅದು…ಅಳತೆಯನ್ನು ಮೀರಿದರಲ್ಲಿಪ್ರಕೃತಿಯ ಕೋಪವು ಕಾಣುವುದಲ್ಲಿ ಗೀತಾ ಚಲಂ ಚಿತ್ರಕೃಪೆ: ವಾಗ್ದೇವಿ ಹಾಗು […]Read More

ಮೃದಂಗ

ಈ ಭೂಮಿ ಒಂದು ಸುಂದರ ಕಳಸದಂತೆ..ಹೊತ್ತವರ ತಲೆಮೇಲು ಇರುತ್ತೆ. ನೆಡೆದವರ ಕಾಲ ಕೆಳಗೂ ಇರುತ್ತೆ.ಈ ಭೂಮಿ ಯಾರಿಗಾಗಿ ಹುಟ್ಟಿದೆ ಎಂದು ಗೊತ್ತಿಲ್ಲ?ಮನುಷ್ಯ ಮಾತ್ರ ನನಗಾಗಿಯೇ ಭೂಮಿ ಸೃಷ್ಟಿಯಾಗಿದೆ ಅನ್ನೊ ಭ್ರಮೆಯಲ್ಲಿ ಅಹಂಕಾರದಲ್ಲಿ ಬದುಕ್ತಾ ಇದ್ದಾನೆ… ಈ ಭೂಮಿಗೆ ಅದರದ್ದೆ ಆದ ನಿಯಮಗಳು, ಚಾಲನೆಗಳು, ಕರ್ತವ್ಯಗಳು ಇರುತ್ತವೆ. ಅದು ಅದರ ಕೆಲಸದ ಮಧ್ಯೆ ಮಾನವ ಕುಲದ ದರ್ಪ ದೌರ್ಜನ್ಯಗಳಿಗೆ ಒತ್ತು ಕೊಟ್ಟಂತೆ ಕಾಣುವುದಿಲ್ಲ.. ಹೀಗೇಕೋ ಸಣ್ಣದಾಗಿ ಗಮನಿಸಿದಂತಿದೆ.ಫಲಾನು ಫಲದ ಜೋತೆ ಕರ್ಮದ ಬೂದಿಯನ್ನ ನೀಡಿದಂತಿದೆ ಮಾನವನಿಗೆ..ನೀವು ಸಹ ನೋಡಿದ್ದಿರಿ […]Read More

ಏಜೆಂಟ್ ಆರೆಂಜ್ (Operation Ranch Hand)

ಇಡೀ ಇಪ್ಪತ್ತನೇ ಶತಮಾನವನ್ನು ಭೀಕರ ಯುದ್ಧಗಳ ಕಪ್ಪು ಚುಕ್ಕೆಗಳಿಂದ ಅದರ ಕರಾಳತೆಯನ್ನು ವಿವರಿಸಬಹುದು. ಮೊದಲೆರಡು ಮಹಾಯುದ್ಧಗಳು ಹಾಗೂ ಇಂಡೋ-ಚೀನಾ ಯುದ್ಧ, ಸಾಮ್ರಾಜ್ಯಶಾಯಿ ದೋರಣೆಯಿಂದಾದರೆ, ಇನ್ನು ಮಿಕ್ಕ ಯುದ್ಧಗಳಲ್ಲಿ ಮುಖ್ಯ ಪಾಲು ಕಮ್ಯುನಿಸ್ಟ್ ಪಂಥೀಯರಿಂದ ಅಥವಾ ಧರ್ಮಾಂಧರಿಂದ ಆದದ್ದು. ಇಸ್ರೇಲಿನ ಮೇಲೆ ಮುಗಿಬಿದ್ದ ಅರಬರ ಹಾಗೂ ನಮ್ಮ ಭಾರತವನ್ನು ಕೆಣಕಿದ ಪಾಕಿಸ್ತಾನದ ಉದ್ದೇಶವು ಧರ್ಮಾಂಧತೆಯಿಂದ ಕೂಡಿದ್ದಾದರೆ ಇನ್ನು ವಿಯೆಟ್ನಾಂ ನಲ್ಲಿ ಶುರುವಾದ ಯುದ್ಧವು ಕಮ್ಯುನಿಸ್ಟ್ ರಾಷ್ಟ್ರಗಳ ಅಕ್ರಮಣಾ ಮನೋಭಾವದಿಂದ ಆಗಿದ್ದು. ಫ್ರೆಂಚ್ ಚಕ್ರವರ್ತಿ ‘ನೆಪೋಲಿಯನ್’ ಕಾಲದಿಂದಲೂ ಇದ್ದ ವಿಯೆಟ್ನಾಂ […]Read More

ಪ್ರೀ-ವೆಡ್ಡಿಂಗ್ ಪೋಟೊಶೂಟ್

ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡಿಂಗ್ ನಲ್ಲಿ ಇರುವುದು ಈ ಪ್ರೀವೆಡ್ಡಿಂಗ್ ಫೋಟೋಶೂಟ್. ಗೆಳತಿ ಗೆಳೆಯರ ಮದುವೆ ನಿಶ್ಚಯವಾಯಿತು ಎಂದರೆ ಸಾಕು, ಅವರು ಕೇಳಲಿಚ್ಚಿಸುವುದು ಹುಡುಗನ ಬಗ್ಗೆಯೂ ಉದ್ಯೋಗದ ಬಗ್ಗೆಯೂ ಅಲ್ಲ, ಪ್ರಿವೆಡ್ಡಿಂಗ್ ಫೋಟೋಶೂಟ್ ಗೆ ಎಲ್ಲಿಗೆ ಹೋಗಬೇಕು ಅಂದುಕೊಂಡಿದ್ದೀರಾ ಅಂತ. ಇಂದಿನ ಯುವ ಪೀಳಿಗೆಯನ್ನು ಅತಿ ಉತ್ಸಾಹದಿಂದ ಆಳುತ್ತಿದೆ ಈ ಪದ್ಧತಿ ನಮ್ಮ ಸಂಪ್ರದಾಯವಲ್ಲವಾದರೂ ಸ್ವತಃ ತಾವೇ ಇದೊಂದು ಮದುವೆಯ ಅವಿಭಾಜ್ಯ ಸಂಪ್ರದಾಯವನ್ನಾಗಿಸಿಕೊಂಡಿದ್ದಾರೆ. ಈಗೊಂದು ಸಣ್ಣ ಕತೆ ಹೇಳ್ತೇನೆ! ಸರಿಸುಮಾರು ಒಂದು ದಶಕಗಳಿಂದ ಪ್ರೀತಿಸಿದ್ದ ಜೋಡಿ ಮದುವೆ […]Read More

ಸೂತ್ರಧಾರ ಮತ್ತು ಇತರ ಕಥೆಗಳು

ಲೇಖಕರು: ಶೈಲಜಾ ಸುರೇಶ್ ರಾವ್ ನಾಯಕ್ ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ ಬೆಲೆ: 110 (ಅಂಚೆ ವೆಚ್ಚ ಉಚಿತ) ಸದ್ಯದ ಕರೋನ ಸಂಕಷ್ಟಗಳ ಹಾಗು ಲಾಕ್ ಡೌನ್ ಸಮಯದಲ್ಲಿ ಶ್ರೀಮತಿ ಶೈಲಜಾ ಸುರೇಶ ನಾಯಕ್ ರವರ “ಸೂತ್ರಧಾರ ಮತ್ತು ಇತರೆ ಕಥೆಗಳು” ಪುಸ್ತಕವನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹೊರ ತಂದಿದೆ. ಇದು ಶ್ರೀಮತಿ ಶೈಲಜಾ ಸುರೇಶ ನಾಯಕ್ ರವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ಒಟ್ಟು ಹದಿಮೂರು ಕಥೆಗಳಿವೆ ಹಾಗು ಶ್ರೀಮತಿ ಶೈಲಜಾ ರ ಮಗಳಾದ ಅಶ್ವಿನಿ ಯವರು ಕೂಡ […]Read More

ಪ್ರಶ್ನೆ ?

ಕಣ್ಣು ಮುಚ್ಚಿದರೆ, ಕತ್ತಲು ಎನ್ನುವರುಬೀಳುವ ಕನಸುಗಳು ಸ್ಪಷ್ಟವಾಗಿ ಕಾಣಲುಬೆಳಕು ಒದಗಿಸಿದವರಾರು?ಆ ಪಾತ್ರಗಳ ಸೃಷ್ಟಿಸಿದವರಾರು? ಭೂ ಒಡಲಲ್ಲಿ ಅಂತರ್ಜಲ ಇಲ್ಲವೆನ್ನುವರುತೆಂಗಿನ ಒಡಲಲ್ಲಿ ಸಿಹಿ ನೀರ ಒದಗಿಸಿದವರಾರುಒಂದೇ ನೆಲ ಒಂದೇ ಜಲ, ಬಿತ್ತುವ ಬೀಜದೊಳುಸಿಹಿ ಕಾರವನಿತ್ತವನಾರು.? ನೆತ್ತರು ಬಗೆದು,ಕುಡಿದು ನಡೆದಾಡುವ ಅಗಾಧ ಯೌವನಿಗನಿನ್ನೆ ಕಣ್ಣಮುಂದಿದ್ದ, ಆ ಅಹಂನಿಂದ ಮೆರೆದಿದ್ದ.ಇಂದು ಕಣ್ಣ ಮುಂದಿಲ್ಲ. ಆ ರೂಪು ಆ ಯೌವನಕ್ಕೆ ಶವ ಎನ್ನುತಿಹರು. ಆ ಜೀವ ಕದ್ದೋಯ್ದವನಾರು.? ಇಂದು ಹುಟ್ಟಿ, ನಾಳೆ ಬೆಳೆದು,ಮತ್ತೊಂದಿನದ ಸಾವಿಗೆ ಹೊಣೆ ಯಾರು? ಪವನ ಕುಮಾರ ಕೆ ವಿ […]Read More

ನೀಲಕಂಠ (ಇಂಡಿಯನ್ ರೋಲರ್)

ನಮ್ಮಲ್ಲಿ ಮದುವೆಗಳಲ್ಲಿ ಮೊದಲು ಜೀರಿಗೆ ಬೆಲ್ಲ ಹಾಕಿದೋರ ಮಾತನ್ನು ವಧು/ವರ ಜೀವನ ಪರ್ಯಂತ ಕೇಳುವಂತಾಗುತ್ತದೆ ಎಂಬುದು ಒಂದು ಹಾಸ್ಯಪೂರ‍್ಣವಾದ ನಂಬಿಕೆ! ಆಮೇಲೆ ಗಂಡು ಹೆಣ್ಣಿಗೆ ಅಡ್ಡಬೀಳುವುದು ಇದ್ದೇ ಇದೆ ಎಂಬು ಮಾತೂ ಬಂದು ಹೋಗುತ್ತದೆ, ವಾಸ್ತವವೇನೇ ಇದ್ದರೂ! ಇರಲಿ, ಇವೆಲ್ಲವೂ ಹಾಸ್ಯಕ್ಕೆ ಹೇಳುವುದು. ಎಷ್ಟೇ ಅದರೂ ಗಂಡಿನ ಬಾಳು! ನಮ್ಮ ಬಹು ಸುಂದರ ಹಕ್ಕಿಗಳಲ್ಲಿ ಒಂದಾದ ನೀಲಕಂಠ ಹಕ್ಕಿ ಸಂಗಾತಿಯನ್ನು ಪಡೆಯಲೋಸುಗ ಹೆಣ್ಣಿನ ಮುಂದೆ ಲಾಗ ಹಾಕುತ್ತದೆ! ವಿಶಿಷ್ಟ ಬಗೆಯ ಹಾರುವ ಸರ್ಕಸ್ಸನ್ನು ಗಾಳಿಯಲ್ಲಿ ಹೆಣ್ಣಿನ ಮುಂದೆ […]Read More

ಗತ

ಕಾದಂಬರಿ – ಶ್ರೀಮತಿ ಆಶಾ ರಘು ಕೃತಿ ವಿಮರ್ಶೆ – ಕೆ ಏನ್ ಭಗವಾನ್ ’ಗತ’ ಎರಡು ಜನ್ಮಗಳ ಸಂಬಂಧ ಮಾಲೆ ನಾವು ವ್ಯಕ್ತಿಯೊಬ್ಬನ ಮಾತು, ನಡವಳಿಕೆಗಳನ್ನು ಗಮನಿಸಿ ’ನೀನು ಹಿಂದಿನ ಜನ್ಮದಲ್ಲಿ ಇಂಥ ಪ್ರಾಣಿಯಾಗಿ ಹುಟ್ಟಿದ್ದಿರಬೇಕು’ ಎಂದು ಕುಚೇಷ್ಟೆ ಮಾಡುವವರು. ’ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ’ ಎಂಬ ವೇದಾಂತವನ್ನು ನಂಬುವವರು. ಜಗತ್ತಿನ ಹೆಚ್ಚಿನ ಮತಧರ್ಮಾವಲಂಬಿಗಳಲ್ಲೂ ಇಂಥ ನಂಬಿಕೆಯುಂಟು. ಹಾಗಿಲ್ಲದೇ ಹೋಗಿದ್ದಲ್ಲಿ, ಪಾಪ ಪುಣ್ಯಗಳ ಪರಿಕಲ್ಪನೆ ಹುಟ್ಟದೆ ಮಾನವರು ಪಾಪಭೀತಿಯಿಲ್ಲದ ದಾನವರಾಗಿಬಿಡುತ್ತಿದ್ದರು. […]Read More