ಇಡೀ ಜಗತ್ತಿನಲ್ಲೇ ನಮ್ಮ ಭಾರತ ದೇಶವು ಸಂಸ್ಕೃತಿಗೆ ಹೆಸರುವಾಸಿಯಾದದ್ದು. ನಮ್ಮ ಭಾರತದಲ್ಲಿ ಆಚರಿಸುವಸ್ಟು ಹಬ್ಬಗಳು ಇನ್ನೆಲ್ಲೂ ಆಚರಿಸಲ್ಪಡುವುದಿಲ್ಲ. ತಲೆಮಾರುಗಳಿಂದ ಸಂಪ್ರದಾಯಗಳು ನಮ್ಮ ಹಬ್ಬಗಳನ್ನು ಮೆರಗು ತರಿಸುತ್ತ ಬಂದಿವೆ. ಹಬ್ಬಗಳು ಎಂದರೆ ಎಲ್ಲೆಡೆ ಸಂಭ್ರಮ, ತೋರಣ, ಹೊಸ ಉಡುಗೆಗಳು, ಪೂಜೆ, ಜಾತ್ರೆ, ಅಬ್ಬಾ ಆಚರಣೆಗೆ ಮಿತಿಯೇ ಇಲ್ಲ. ನಮ್ಮ ಸಂಸ್ಕೃತಿಯ ನಾಡಿನ ಎಲ್ಲೆಡೆ ಆಚರಿಸುವ ದಸರಾ ಹಬ್ಬಗಳಲ್ಲಿ ಇನ್ನಷ್ಟು ವಿಜೃಂಬಿಸುವುದು. ನಮ್ಮ ಕರ್ನಾಟಕದಲ್ಲಿ ಆಚರಿಸುವ ದಸರಾ ಹಬ್ಬದ ಆಚರಣೆ ಎಲರಿಗೂ ತಿಳಿದುದ್ದೆ. ದೇಶದ ಪ್ರಮುಖ ನಗರಗಳಲ್ಲಿನ ದಸರಾ ಆಚರಣೆಯ […]
ಧಾರವಾಡದಲ್ಲಿ ದೀಪಾವಳಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಇಲ್ಲಿನ ವಿಶೇಷತೆ ಎಂದರೆ ಚಿತ್ರರಚನಾ ಆಚರಣೆ. ಈ ಚಿತ್ರಸಂಪ್ರದಾಯವು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿನ ಜನಸಮುದಾಯವು ಸಗಣಿಯಲ್ಲಿ ಬೊಂಬೆಗಳ ಹಾಗೆ ವಿನ್ಯಾಸ ಮಾಡಿ ಪಾಂಡವರ ಆಕಾರಗಳನ್ನು ಮನೆಯ ಅಂಗಳದಲ್ಲಿ ಸ್ಥಾಪಿಸುತ್ತಾರೆ. “ಪಾಂಡವರು ನರಕ ಚತುರ್ಥಿಯಂದು ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ಅವರು ನಮ್ಮ ಮನೆಗೂ ಬರುತ್ತಾರೆ” ಎಂಬ ನಂಬಿಕೆ ಇವರದು. ಅವರು ಸಿಧ್ಧಪಡಿಸಿದ ಐದು ಪಾಂಡವರು ಮತ್ತು ದ್ರೌಪದಿಯ ಗೊಂಬೆಗಳನ್ನು […]Read More
ಗಂಜೀಫಾ ಚಿತ್ರಕಲೆಯು ಸಂಪ್ರದಾಯಿಕ ಚಿತ್ರಕಲಾ ಪ್ರಪಂಚದ ಒಂದು ವಿಶಿಷ್ಟವಾದ ಕಲಾ ಕೊಡುಗೆ. ‘ಗಂಜೀಫಾ ಕಲೆಯು ಮೊಘಲರ ಕಾಲದಲ್ಲಿ ಇರಾನ್ ದೇಶದಿಂದ ನಮ್ಮ ಭಾರತಕ್ಕೆ ಬಂದ ಕಲೆ. ಹಾಗೆ ಬಂದ ಪರ್ಷಿಯನ್ನರ ಈ ಕಲೆ ಈಗ ಭಾರತೀಯ ಕಲೆಯೇ ಆಗಿಬಿಟ್ಟಿದೆ. ಮೈಸೂರು ಶೈಲಿಯ ಗಂಜೀಫಾ ಕಲೆ, ಆಟಗಳ ಶ್ರೇಯಸ್ಸು, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಸೇರಬೇಕು. ಮುಮ್ಮಡಿಯವರನ್ನು ಒಳಗೊಂಡಂತೆ ಮೈಸೂರಿನ ಅರಸು ಮನೆತನದವರು ಸಾಹಿತ್ಯ, ಚಿತ್ರಕಲೆ, ನೃತ್ಯ, ಕ್ರೀಡೆ ಎಲ್ಲವನ್ನೂ ಸೇರಿದಂತೆ ಅನೇಕ ಕಲಾಪ್ರಕಾರಗಳ ಉನ್ನತಿಗೆ ಕಾರಣರಾಗಿದ್ದಾರೆ. ಆಗ ಇದನ್ನು […]Read More
“ಕುಂಡೆ ಹಬ್ಬ ಹಾಗು ಬೋಡುನಮ್ಮೆ” ಇವು ಕೊಡಗು ಮತ್ತು ಗೊಡಗಿನ ಸುತ್ತಮುತ್ತಲ ಪರಿಸರದಲ್ಲಿ ನಡೆಯುವ ಸ್ಥಳೀಯ ಪಾರಂಪರಿಕ ಹಬ್ಬವಾಗಿದೆ. ಮೂಲತಃ ಕೇರಳದಿಂದ ಈ ಹಬ್ಬ ಬಂದಿದೆ ಎಂದು ನಂಬುವ ಈ ಮಂದಿಯು ತಮ್ಮ ಸಮುದಾಯಗಳನ್ನು ಈ ಕಾಡಿನಲ್ಲಿ ಇರುವ ಭದ್ರಕಾಳಿ ಮಾತೆಯೇ ಕರೆದುಕೊಂಡು ಬಂದಿದ್ದಾಳೆ ಎಂದು ನಂಬುತ್ತಾರೆ. ಕುಂಡೆ ಹಬ್ಬ ಹಾಗು ಬಹುವೇಷಿಗಳು: ನಾವು ಆಚರಿಸಲ್ಪಡುವ ಯಾವ ಹಬ್ಬವನ್ನೂ ಹೋಲದೆ ವಿಭಿನ್ನ ಹಾಗೂ ವಿಶಿಷ್ಟವಾಗಿರುವ ಈ ಹಬ್ಬವನ್ನು ಕೆಲವರು “ಕುಂಡೇ ಹಬ್ಬ” ಎಂದು ಕರೆಯುತ್ತಾರೆ. ಈ ಹಬ್ಬದ […]Read More
ಚಿಂತನ – ಮಂಥನ ಬ್ರಿಟೀಷರು ಭಾರತ ಬಿಟ್ಟು ಹೋಗಿದ್ದೇ ಸ್ವತಂತ್ರವ? ನಾವೆಲ್ಲರು ಧೈರ್ಯವಾಗಿ ರಸ್ತೆಗಳಲ್ಲಿ ಯಾವುದರ ಭಯವೂ ಇಲ್ಲದೆ ಓಡಾಡುವುದೇ ಸ್ವತಂತ್ರವೇ? ಅಥವಾ ರಾಜರ ಆಡಳಿತದಿಂದ ರಾಜಕಾರಣಿಗಳ ಆಡಳಿತಕ್ಕೆ ದೇಶ ಒಗ್ಗಿಕೊಂಡದ್ದೇ ಸ್ವತಂತ್ರವೆ? ಬಹಳ ಸುಲಭದ ಈ ಪ್ರಶ್ನೆಗೆ ನಿಖರ ಉತ್ತರವೇನಾದರೂ ಸಿಕ್ಕರೆ ಅಂದು ನಾವು ನಿಜಕ್ಕೂ ಸ್ವತಂತ್ರರೆಂದುಕೊಳ್ಳಬಹುದು. ಏಳು ದಶಕಗಳ ಹಿಂದೆ ನಡೆದ ಘಟನೆಗಳೇ ನಮಗೆ ಗೂತ್ತಿಲ್ಲ. ಕೆಲವರಿಗೆ ಗೊತ್ತಿದ್ದರು ನೆನಪಿಲ್ಲ. ಇನ್ನು ಸ್ವಾತಂತ್ರ್ಯದ ಬಗ್ಗೆ ಮಾತನಾಡು ಎಂದರೆ, ವಾಟ್ಸಪ್ ಸ್ಟೇಟಸ್ ಹಾಕುವುದು, ಸ್ಟೋರಿ ಅಪ್ಲೋಡ್ […]Read More
ಅ-ಜಾಂತ ಎಂದರೆ ತಿಳಿಯದ್ದು ಎಂದು ಅರ್ಥ. ಹಾಗಾಗಿ ಅಜಂತ ನಾಮಧೇಯವಾಗಿದೆ. ಇದು ಹುಲಿಗಳೇ ವಾಸಿಸುವ ದಟ್ಟ ಅರಣ್ಯದಲ್ಲಿದ್ದು ವಾಘೋರ ಎಂಬ ನದಿಯ ದಡದಲ್ಲಿ ಇದೆ. ನದಿಯು ಕುದುರೆಯ ಲಾಳದ ಆಕಾರದಲ್ಲಿ ಬಾಗಿ ಮುಂದಕ್ಕೆ ಹರಿಯುತ್ತದೆ. ವ್ಯಾಘ್ರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಎಲ್ಲ ಹುಲಿಗಳೂ ನೀರು ಕುಡಿಯಲು ಇಲ್ಲಿಗೇ ಬರುವುದರಿಂದ ಈ ನದಿಗೆ ವಾಘೋರ ಎಂಬ ಹಸರು ಬಂದಿದೆ, ಈ ಪರಿಸರದ ಕಲ್ಲುಗಳು ಬಹಳ ಕಠಿಣವಾಗಿರುವುದರಿಂದ ಶಿಲಾನ್ಯಾಸಕ್ಕೆ ಸೂಕ್ತವಾದುದು ಮತ್ತು ಬೇಸಿಗೆಯನ್ನು ಬಿಟ್ಟು ಉಳಿದ ಎಲ್ಲ ಕಾಲಮಾನಗಳೂ ಬಹಳ […]Read More
ಕರ್ನಾಟಕದಲ್ಲಿ ನಾಗಮಂಡಲವು ಸಾಂಸ್ಕೃತಿಕ, ಜಾನಪದೀಯ, ಚಿತ್ರಕಲಾತ್ಮಕ, ಆಚರಣ ಸಿದ್ಧಾಂತಗಳ ದೃಷ್ಠಿಕೋನದಲ್ಲಿ ಬಹಳ ಮುಖ್ಯವಾದ ಆಧ್ಯನಶೀಲ ಅಂಶವಾಗಿದೆ. ರಾಜಸ್ಥಾನದ ನಿಮಾಡ್ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಂಡಣ ಎಂಬ ರಂಗೋಲಿ ಬಿಡಿಸುವ ಪದ್ದತಿ ಇದೆ. ವಿಶೇಷವೆಂದರೆ ನಾವು ಕರ್ನಾಟಕದ ಕರಾವಳಿಯಲ್ಲಿ ಬಳಸುವ ಮಂಡಲ ಮತ್ತು ರಾಜಾಸ್ಥಾನದಲ್ಲಿ ಬಳಸುವ ಮಂಡಣ ಎಂಬ ಪದವು ಅಧ್ಯಯನದ ದೃಷ್ಠಿಯಲ್ಲಿ ಬಹಳ ಪ್ರಮುಖ ಎನಿಸುತ್ತದೆ. ಪದೋಚ್ಛಾರಣೆಯು ಒಂದೇ ರೀತಿಯಾಗಿದ್ದರೂ ಆ ಚಿತ್ತಾರಗಳು ಬಿತ್ತರಿಸಿಕೊಳ್ಳುವ ಗುರಿ ಮಾತ್ರ ಬೇರೆಯಾಗಿರುತ್ತದೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳಲ್ಲಿ […]Read More
“ಜಿಗಿ ಜಿಗಿ ಬೊಂಬೆಯಾಟ” ಇದು ನಾಟಕಕಾರರಾದ ‘ಎ ಎಸ್ ಮೂರ್ತಿ’ ರವರು ಕಿರುತೆರೆಯಲ್ಲಿ ತಂದ ಪ್ರಸಿದ್ಧ ಧಾರಾವಾಹಿಯ ಹೆಸರು. ಈ ಬೊಂಬೆಯಾಟವು ತೊಗಲು ಬೊಂಬೆಯಾಟ ನಮ್ಮ ಜನಪದಕಲೆಯಾಗಿದ್ದು ಇದರ ಬಗ್ಗೆ ತಿಳಿಯೋಣ. ತೊಗಲು ಬೊಂಬೆಯಾಟವು ಚಿತ್ರಕಲೆ, ಹಾಡು, ನೃತ್ಯ ಮತ್ತು ಬೆಳಕಿನ ಅಂಶಗಳನ್ನು ಮೇಳೈಸಿಕೊಂಡು ಮುನ್ನಡೆಯುವ ಪ್ರದರ್ಶನ ಚಿತ್ರಕಲೆ. ವಿಜ್ಞಾನ, ಪುರಾಣ, ಇತಿಹಾಸ, ಕಾವ್ಯಗಳು ಮತ್ತು ಬದುಕಿನ ತೊಳಲಾಟವನ್ನು ಮೇಳೈಸಿಕೊಂಡ ವಿಶಿಷ್ಠವಾದ ಜನಪದ ಪ್ರಯೋಗ ಕಲೆ. ಈ ಕಲೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಕಲೆ […]Read More
ಜನಪದ ಚಿತ್ರಗಳು ಸಾಮಾನ್ಯವಾಗಿ ಕಾಲದಿಂದ ಕಾಲಕ್ಕೆ ತಮ್ಮ ಅಭಿವ್ಯಕ್ತಿಗಳ ಅಸ್ತಿತ್ವವನ್ನು ಬದಲಿಸಿಕೊಳ್ಳುತ್ತಾ ಬರುತ್ತಿವೆ. ಈ ಬದಲಾವಣೆಯನ್ನು ಪರಿವರ್ತನೆ ಅಥವಾ ರೂಪಾಂತರ ಎಂಬ ಹೆಸರಿನಲ್ಲಿ ವಿದ್ವಾಂಸರು ಗುರುತಿಸುತ್ತಾ ಬಂದಿದ್ದಾರೆ. ಅಂದರೆ ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಹಲವು ವಿಧಿವಿಧಾನಗಳ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಇದು ಸಾಗಿದೆ. ಜನಪದ ಚಿತ್ರಗಳ ಸಾಮಾನ್ಯ ಸ್ವರೂಪವನ್ನು ಜನಪದ ಭಿತ್ತಿಚಿತ್ರಗಳ ಮೂಲ ಹಾಗೂ ಅವುಗಳ ನೇಪಥ್ಯ, ಚಾರಿತ್ರಿಕ, ಭೌಗೋಳಿಕ, ನೈಸರ್ಗಿಕ ಹಿನ್ನೆಲೆಯಲ್ಲಿ ಕನ್ನಡ ಜನಪದ ಚಿತ್ರಕಲೆಯ ಪ್ರಯೋಗ ವಿಧಾನ, ವಿಕಾಸ, ಗ್ರೀಕ್, […]Read More
“ಕಣಿ ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ ನೀಲಿ ಹೊತ್ತಿಗೆ: ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ […]Read More