ಕನ್ನಡ ಸಾಹಿತ್ಯಕ್ಕಾಗಿ – ಪುಸ್ತಕ ತಾಂಬೂಲ ಕನ್ನಡ ನಮ್ಮ ಮಾತೃ ಭಾಷೆ ನಮ್ಮೆಲ್ಲರ ಅಸ್ಮಿತೆ. ರಾಜ್ಯಾದ್ಯಂತ ಕನ್ನಡ ಭಾಷೆಯ ಹೆಸರಿನಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಅನೇಕ ಕೆಲಸಗಳು ನೆಡೆಯುತ್ತಲೇ ಇರುತ್ತವೆ ಅದು ಕೆಲವರಿಗೆ ಭಾಷಾಭಿಮಾನದ ಪ್ರೀತಿ ಹಾಗು ಕೆಲವರಿಗೆ ಹೊಟ್ಟೆ ಪಾಡು ಹೌದು. ನವೆಂಬರ್ ಮಾಸ ಬಂತೆಂದರೆ ಇಡೀ ತಿಂಗಳು ರಾಜ್ಯದಲ್ಲಿ ಒಂದಲ್ಲಾ ಒಂದು ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ. ರಾಜ್ಯೋತ್ಸವ ಸಮಾರಂಭಗಳು ಶಾಲಾ ಕಾಲೇಜು, ಸಾಹಿತ್ಯಲೋಕದವರು ಅಥವಾ ಸಿನಿಮಾ ರಂಗದವರೇ ಆಚರಿಸಬೇಕೆಂದಿಲ್ಲ! ಇಡೀ ದಿನ […]
“ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023” ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ “ಶ್ರೀಮಾನ್ ಲೇ. ನರಸಯ್ಯ” ಅವರ ಸ್ಮರಣಾರ್ಥ ಕೊಡಮಾಡುವ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. * 2023 ರ ಆಗಸ್ಟ್ 31 ರ ಒಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು, ಪ್ರತ್ಯೇಕ […]Read More
ತಗಾದೆ ಬೇಡ ಗಾದೆ ನೋಡ ಕೃತಿ : ತಗಾದೆ ಬೇಡ ಗಾದೆ ನೋಡಲೇಖಕಿ : ಶ್ರೀವಲ್ಲಿ ಮಂಜುನಾಥಬಿಡುಗಡೆ :ಸ್ಥಳ : ಮಾತಿನ ಮನೆ,ನಂ: 14, ಶ್ರೀ ಕುಟೀರ, 5ನೆ ತಿರುವು, 6ನೇ ಮುಖ್ಯ ರಸ್ತೆ,ಚಾಮರಾಜಪೇಟೆ, ಬೆಂಗಳೂರು – 560018 ಶ್ರೀಮತಿ ಶ್ರೀವಲ್ಲಿ ಮಂಜುನಾಥ ರವರು ಸದಭಿರುಚಿಯ ಬರಹಗಾರರು. ಅವರ ಅನೇಕ ಕವಿತೆಗಳು, ಕಥೆಗಳು, ಹಾಗು ವೈಚಾರಿಕ ಲೇಖನಗಳು ಈಗಾಗಲೇ ಪ್ರಮುಖ ಪತ್ರಿಕೆಗಳಾದ ತುಷಾರ, ತರಂಗ, ಮಯೂರ, ಮಂಗಳಾ, ಅಪರಂಜಿ, ಮಂಜುವಾಣಿ, ಓ ಮನಸೇ, ಸಂಕ್ರಮಣ ಮತ್ತಿತರ ಪತ್ರಿಕೆಗಳಲ್ಲಿ […]Read More
‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ ಬೆಂಗಳೂರಿನ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಕಸಾಪ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿಯನ್ನು ಲೋಕಾರ್ಪಣೆಗೊಳಿಸಿ, “ಕೃತಿಯ ಕೇಂದ್ರ ಪಾತ್ರಗಳ ಚಿತ್ತ ಮನೋ ಆಳಕ್ಕೆ ಇಳಿದು, ಬಗೆಯುತ್ತಾ ಎಳೆ ಎಳೆಯಾಗಿ ಆ ಮನೋ ವ್ಯಾಪಾರಗಳನ್ನು ಬಿಡಿಸಿ, ಅನಾವರಣಗೊಳಿಸುವ ಲೇಖಕಿಯ ನಿರೂಪಣಾ ಶೈಲಿ ಇಲ್ಲಿ ಮುಖ್ಯವಾಗಿದೆ. ಬೇರೆ ಬೇರೆ ರೀತಿಯಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಹಾಗೂ ಘಟನೆಗಳನ್ನು […]Read More
ಅಳಿವಿಲ್ಲದ ಕನ್ನಡ ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಕು,ಪ್ರೀತಿಸಿದರೆ ಸಾಕು,ಅದರ ಬಗ್ಗೆ ತಿಳಿಯುವ,ಕಲಿಯುವ,ಬೆಳೆಸುವ ಹಂಬಲ ತಾನಾಗಿಯೇ ಮೊಳಕೆಯೊಡೆಯುತ್ತದೆ.ಕನ್ನಡಕ್ಕೆ ಬೇಕಾಗಿರುವುದೂ ಅದೇ ಪ್ರೀತಿಸುವ ಜನತೆ.ಪರಭಾಷಾ ವ್ಯಾಮೋಹ ಇರಬಾರದೆಂದಲ್ಲ,ಪ್ರಥಮ ಆದ್ಯತೆ ಮಾತೃಭಾಷೆ ಆಗಬೇಕು. ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ,ಕಲಾವಿದ,ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು ,ಅದೇ ತಾಯ್ನುಡಿಯ,ನೆಲದ ಭಾಷೆಯ ಸೇವೆ ಅದು ನಮ್ಮದೇ ಮನೆಯಲ್ಲಿ,ಪರಿಸರದಲ್ಲಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಆರಂಭಗೊಂಡರೆ ಸಾಕು,ಕನ್ನಡ ಸೇವೆಗೆ ಕಂಕಣ ಕಟ್ಟಿ ನಿಂತಂತೆ. ಕನ್ನಡ ಭಾಷೆ,ಪ್ರಪಂಚದ ಪುರಾತನ ಭಾಷೆಗಳಲ್ಲಿ ಒಂದು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯಅತಿ ಹೆಚ್ಚು […]Read More
ಜನ ಮೆಚ್ಚಿದ ಸಾಹಿತ್ಯೋತ್ಸವ – 2023 ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವೆಂದೇ ಹೇಳಬಹುದಾದ ಸಮಾರಂಭವೊಂದು ಅವ್ವ ಪುಸ್ತಕಾಲಯ, ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮತ್ತು ಸಾಹಿತ್ಯಮೈತ್ರಿ ಸಹಯೋಗದಲ್ಲಿ ಜನವರಿ 29 ರ ಭಾನುವಾರದಂದು ಬೆಂಗಳೂರು ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಶ್ರೀಯುತ ಅನಂತ್ ಕುಣಿಗಲ್ ರವರ ಬಹುದಿನಗಳ ಕನಸಿನಂತೆ ಸಾಹಿತ್ಯೋತ್ಸವ 2023 ಬಹಳ ವಿಜೃಂಭಣೆಯಿಂದ ನೆರವೇರಿತು. 15 ಪುಸ್ತಕಗಳ ಬಿಡುಗಡೆ, ಕೃತಿ ಸಂವಾದ, ಭರತನಾಟ್ಯ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಒಳಗೊಂಡಿತ್ತು. ಶ್ರೀ ವಿದ್ವಾನ್ ಮಂಜುನಾಥ ಪುತ್ತೂರು ಅವರ […]Read More
ಸಾಹಿತ್ಯೋತ್ಸವ – 2023 ಅವ್ವ ಪುಸ್ತಕಾಲಯ, ಸಾಹಿತ್ಯಮೈತ್ರಿ ಹಾಗೂ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಬಳಗಗಳ ಆಯೋಜನೆಯಲ್ಲಿ “ಸಾಹಿತ್ಯೋತ್ಸವ 2023” ಕಾರ್ಯಕ್ರಮವನ್ನು ದಿ. 29.01.23 ರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ದಿನ ಪೂರ್ತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಾಹಿತ್ಯ ಜಾತ್ರೆ ಮಾಡುವ ಸಲುವಾಗಿ ಇಡೀ ದಿನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗಿನ ಕಾರ್ಯಕ್ರಮದಲ್ಲಿ ಹದಿನೈದು ಕೃತಿಗಳ ಲೋಕಾರ್ಪಣೆ, ಭರತನಾಟ್ಯ, ಪುಸ್ತಕ ಪರಿಚಯ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಖ್ಯಾತ ಕಾದಂಬರಿಕಾರರಾದ ಕೆ.ಎನ್ […]Read More
ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ! ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು `ನಗೆ-ಸುಗ್ಗಿ!’ ಎಂಬ ಹೆಸರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಇದೇ ಜನವರಿ 28ರ ಶನಿವಾರ ಸಂಜೆ 4-30ಕ್ಕೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಆರಂಭಗೊಳ್ಳಲಿದೆ. ಸತತ ಹತ್ತು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ […]Read More
ಮಲ್ಲಿಗೆ ಸುಮ ಘಮ ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೇ….. ಈ ಹಾಡು ಯಾರು ಕೇಳಿರಲ್ಲ. ಬಂಗಾರದ ಮನುಷ್ಯ ಚಲನಚಿತ್ರದ ಜನಪ್ರಿಯ ಗೀತೆ ಇದು. ಈ ಹಾಡು ಯಾಕೆ ಬಂತು ಅಂತ ಕೇಳಿದ್ರಾ… ಇಲ್ಲೊಂದು ಸ್ವಾರಸ್ಯಕರ ಕಥೆ ಇದೆ ನೋಡಿ. ಮೈಸೂರು ಮಲ್ಲಿಗೆ ವಿಶ್ವವಿಖ್ಯಾತಿಯನ್ನು ಗಳಿಸಿದೆ. ಮೈಸೂರಿನಿಂದ ಸುಮಾರು ನೂರ ನಲ್ವತ್ತು ಕಿಲೋಮೀಟರ್ಗಳ ದೂರದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡಾ ಈ ಮಲ್ಲಿಗೆ ಹೂವಿನ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ದಿನಬಳಕೆ ಮತ್ತು ಹಬ್ಬ ಹರಿದಿನಗಳಲ್ಲಿ ಮಲ್ಲಿಗೆ […]Read More
ಮತ್ತೆ ಸಂಕ್ರಾಂತಿ ಇರುವುದೆಲ್ಲವು ಹೋಗಿ ಮತ್ತೆ ಬೆತ್ತಲೆಯಾಗಿ|ಕುರುಡಾಗಿ ಕಿವುಡಾಗಿ ಮೂಕ ನೀನಾಗಿ||ಸರಿಯುತಿರೆ ಕತ್ತಲೊಳು ಬೆಳಕನ್ನು ಅರಸುತ್ತ|ಮರಳಿ ಬರುವುದೆ ಬದುಕು – ನವ್ಯಜೀವಿ|| ಬದುಕೆಂಬುದು ನಿರಂತರ…ನಾವು ನಮ್ಮ ನಂತರ ಮತ್ತೊಬ್ಬರು. ಕಾಲದೋಟದಲ್ಲಿ ಸಾಗುತ್ತ ಸಿಹಿಕಹಿಗಳ ಮಿಶ್ರಣವನ್ನು ಸವಿಯುತ್ತಾ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು. ಬಾಳಿನ ಎಲ್ಲಾ ನೋವು,ದುಃಖ ದುಮ್ಮಾನಗಳಿಂದ ಹೊರಬಂದು ಸಂತಸದಿಂದ ಮನಃ ಶಾಂತಿ ಹೊಂದಿರುವ ಜೀವನವನ್ನು ನಡೆಸುವಂತಾಗಿ…ನಾವು ದಿಟ್ಟ ಹೆಜ್ಜೆಯನ್ನು ಇಡುತ್ತ ಗುರು ಹಿರಿಯರು ಕಲಿಸಿದ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ನಡೆದು ಗುರಿ ಮುಟ್ಟಿ ಯಶಸ್ಸು ಸಾಧಿಸುವಂತಾಗಬೇಕು… ಬದುಕಿನ ಹಣತೆಯನ್ನು […]Read More