ಈಸ ಬೇಕು, ಇದ್ದು ಜೈಸ ಬೇಕು ಜೀವನ ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲ. ಕೆಲವರು ಬಹಳಷ್ಟು ದುಃಖ, ನಷ್ಟಗಳನ್ನು, ನೋವುಗಳನ್ನೂ ಜೀವನದಲ್ಲಿ ಕಂಡಿರುತ್ತಾರೆ. ಎಷ್ಟೋ ವೇಳೆ, ಸಾಕಪ್ಪಾ ಈ ಜೀವನ ಎಂದು ಹತಾಶರಾಗಿ ಸಾಯಬೇಕು ಎಂದುಕೊಂಡಾಗ ಈ ಮಾತುಗಳು ಜನ ಸಾಮಾನ್ಯರಿಗೆ ಅಮೃತವಾಣಿಯಂತೆ ಚೈತನ್ಯ ನೀಡಿದೆ. ತಮಗೆದುರಾಗುವ ಪ್ರತಿಯೊಂದು ಆಪತ್ತನ್ನೂ ಒಂದು ಅವಕಾಶವೆಂದು ಭಾವಿಸಿ, ಅದನ್ನು ಉಪಯೋಗಿಸಿಕೊಂಡು ಸಂತಸದಿಂದ ಬಾಳುವಂತೆ ನಮ್ಮ ಹಿರಿಯರು ಹೇಳಿದ್ದಾರೆ, ಅವರು ಅದರಂತೆಯೇ ನಡೆದಿದ್ದಾರೆ. *ಮಾನವ ಜನ್ಮ ದೊಡ್ಡದು* ಎಂಬ ದಾಸವಾಣಿಯಂತೆ ಆ ದೇವರು […]
ಸಮಯ ನಿರ್ವಹಣಾ ತಂತ್ರ ಸಾಮಾನ್ಯವಾಗಿ ನಾವೆಲ್ಲರೂ ಹಣ ಅಥವಾ ವಿದ್ಯೆಯನ್ನು ಬದುಕಿನ ಅತ್ಯಂತ ದೊಡ್ಡ ಸಂಪತ್ತೆಂದು ಹೇಳುತ್ತೇವೆ. ಇದು ನಿಜವೂ ಹೌದು ಆದರೆ ಇವೆರಡರ ಜೊತೆ ಜೊತೆಗೆ ಬದುಕಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾದುದ್ದು ಎನ್ನುವುದನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ. ಸಮಯವನ್ನು ಯಾರು ಅತ್ಯಂತ ಪರಿಪೂರ್ಣವಾಗಿ ಬಳಸಿಕೊಳ್ಳುತ್ತಾ ಸಾಗುತ್ತಾರೋ ಅವರು ನಿರಂತರವಾಗಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗುತ್ತಾರೆ. ಕೆಲವರು ದಿನವಿಡೀ ಸಮಯವನ್ನು ವ್ಯರ್ಥವಾಗಿ ಕಳೆಯುವುದರಲ್ಲೇ ವ್ಯಸ್ತರಾಗಿರುತ್ತಾರೆ. ಈ ಕ್ಷಣವನ್ನು ನಂತರ ಉಪಯೋಗಿಸಿಕೊಳ್ಳೋಣ ಎಂದು ಸಮಯವನ್ನು ಜೋಪಾನ […]Read More
ಆ ಒಂದು ಕ್ಷಣ…… ಜೀವನ ಪಯಣದಲ್ಲಿ ನಮ್ಮದು ಯಾವಾಗಲೂ ಗೆಲುವಿಗಾಗಿ ತುಡಿಯುವ ಮನಸ್ಸು!!!.ಗೆಲುವಿಗಾಗಿ ಕಾಯುತ್ತಾ ಕುಳಿತು ಬಹುತೇಕ ಸಂದರ್ಭಗಳಲ್ಲಿ ನಿರಾಶರಾಗುವುದೂ ಇದೆ. ಹಣ, ಹೆಸರು, ಕೀರ್ತಿ, ಸಾಮಾಜಿಕ ಸ್ಥಾನಮಾನ ಇವೆಲ್ಲವೂ ನಮ್ಮ ಗೆಲುವಿನ ಮೇಲೆ ಹೆಚ್ಚಿನಂಶ ಅವಲಂಬಿತವಾಗಿದೆ ಎನ್ನುವುದು ಸುಳ್ಳಲ್ಲ. ಈ ಎಲ್ಲವನ್ನೂ ತಂದು ಕೊಡುವ ಆ ಗಳಿಗೆ ಇದೆಯಲ್ಲ!!! ಅದು ನಮ್ಮ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆ ನಿಮಿಷ, ಆ ಕ್ಷಣದ ನಿರ್ಧಾರ ನಮ್ಮನ್ನು ಎತ್ತರಕ್ಕೂ ಕೊಂಡೊಯ್ಯುತ್ತದೆ…ಎಚ್ಚರ ತಪ್ಪಿದರೆ ಪಾತಾಳಕ್ಕೂ ನೂಕುತ್ತದೆ.. . ಒಬ್ಬ […]Read More
ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು ಪ್ರಸ್ತುತ ಸಾಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಯುವಪೀಳಿಗೆಯು ಯಾಂತ್ರಿಕ ಬದುಕಿಗೆ ಜೋತುಬಿದ್ದಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಯುವಪೀಳಿಗೆಯು ಪಠ್ಯದ ಹುಳುವಾಗುವ ಬದಲು ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಿ ಸಮಾಜದೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಬೇಕು. ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಸಮಾನವಾಗಿ ಬೆರೆಯಬೇಕೆಂದರೆ ಕೆಲವೊಂದು ನಿಯಮಗಳತ್ತ ಗಮನಹರಿಸುವುದು ಉತ್ತಮ. ಅವುಗಳೆಂದರೆ,ಯಾರಿಗಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬಾರದು. ಕರೆ ಮಾಡಿರುವ ವ್ಯಕ್ತಿಯು […]Read More
ಕರೋನದ ಒಂದು, ಎರಡು, ಮೂರು ಅಲೆಗಳ ಆರ್ಭಟ ಮುಗಿದಿದ್ದು ಎಲ್ಲರಿಗು ಸಿಕ್ಕಿದ್ದ “ವರ್ಕ್ ಫ್ರಮ್ ಹೋಂ” ಅವಕಾಶ ಮುಗಿದು, ಈಗ ಹೆಚ್ಚು ಕಡಿಮೆ ಎಲ್ಲಾ ಕಂಪನಿಗಳು ತಮ್ಮ ಕೆಲಸಗಾರರನ್ನು ಮರಳಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿರುವ ಸಂದರ್ಭದಲ್ಲಿ ಎಲ್ಲರು ಪುನಃ ಅದೇ ಟ್ರಾಫಿಕ್ ಜಾಮ್ ಒತ್ತಡದಿಂದ ಆಫೀಸಿಗೆ ಹೋಗಿ ಅಲ್ಲಿಯ ಒತ್ತಡವನ್ನು ಸಹ ನಿಭಾಯಿಸಬೇಕಾಗಿದೆ. ಮತ್ತದೇ ಯಾಂತ್ರಿಕ ಜೀವನದಲ್ಲಿ ಸಂಜೆಯಾಗುತ್ತಿದ್ದಂತೆ ಆಫೀಸ್ ನಿಂದ ಮನೆಗೆ ಬರುವ ವೇಳೆಗೆ ಕೇಳುವ ಒಂದೇ ಮಾತು ತುಂಬಾ ಕೆಲಸದ ಒತ್ತಡ […]Read More