ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಒಲವೆಂಬ ಹಣತೆಯ ಮೆರುಗು
ಬದುಕೆಂಬ ಮನೆಯಂಗಳದಿ
ಬೆಳಗಲಿ ಒಲವಿನ ಹಣತೆ!
ಆಡುವ ಪ್ರತಿಮಾತುನಂತರಾಳದಿ..
ಎಣಿಸದಿರಲು ಕುಂದುಕೊರತೆ!!
ದಿನದಿನವೂ ಶುಭ್ರ ದಿಗಂತದಿ
ಬೆಳಗುವಂತೆ ದಿನಪನ ಹಣತೆ!
ಮನಗಳಿರಲು ಸವಿಭಾವದಿ…
ಕಾಣುವುದು ಬಾಳಲಿ ಧನ್ಯತೆ!!
ಸಂಕಟಗಳ ಅಂಧಕಾರ ನೀಗಿಸಲು
ಬೆಳಗುತಿರಲಿ ಸಂತಸದ ಹಣತೆ!
ಇರಲು ಈ ಭಾವ ಪ್ರತಿಮನದಲು…
ಬದುಕಲಿರದು ಜಡತೆಯ ನಡತೆ!!
ಬದುಕಿನ ಸಾಗರದಿ ತೇಲಾಡುತಿರಲಿ
ನಗುವೆಂಬ ದೋಣಿಯ ಹಣತೆ!
ಕಾಡುವ ನೋವಿನಲೆಗಳಲದು ಓಲಾಡದೆ…
ನೆಮ್ಮದಿಯ ದಡ ಮುಟ್ಟಲು ಸಾರ್ಥಕತೆ!!

ಸುಮನಾ ರಮಾನಂದ