ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಜಾಗ್ರತೆ
ನುಚ್ಚು ನೂರಾಗಿ
ಒಡೆದ ಮುಕುರದಲಿ
ಪ್ರತಿಬಿಂಬ ಹುಡುಕಲು
ಕಾಣ್ವುದೇ ಪೂರ್ಣಬಿಂಬ!
ಕೊಳ್ಳೆ ಹಾಕಿದ ಮನದ
ಮುಂಬಾಗಿಲಿಗೆ
ಬೀಗವಿಕ್ಕುವುದರಿಂದ
ಅಲ್ಲಿಹುದೇ ಮನಶಾಂತಿ!
ಸಜಲ ನಯನದೊಳ್
ಇಣುಕಿಕ್ಕಲು, ಇಹುದೇ
ಕಾಂತಿಯುತ ನಗೆಯ
ಬೆಳದಿಂಗಳದರಲಿ !
ಅಂಕೆ , ಶಂಕೆ, ಅಂಜಿಕೆ,
ಅಪನಂಬಿಕೆ ಎಂದೂ
ಸುಳಿಯದಿರುವಂದದಿ
ಕಾಪಿಡೋಣ ಮನವ !!

ಶ್ರೀವಲ್ಲಿ ಮಂಜುನಾಥ