ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಮೌನ ಕಲಹ
ಮನೆಯೊಳಗೆ
ಸದ್ದು ಗದ್ದಲಗಳಿಲ್ಲ,
ಮನದಿ ಮುಗಿಯದ
ಶಂಕೆ, ಕೋಲಾಹಲ.
ಕದ ತಟ್ಟಿದರೆ
ಮರುತ್ತರವಿಲ್ಲ,
ಬೀಗ ಬಿಗಿದ ಮನೆ
ಎಲ್ಲರ ಮನವೀಗ.
ಕತ್ತಿಯಂಚಿನ,
ಬಂದೂಕದ ಸದ್ದಿನ
ಯುದ್ಧವೊಂದನ್ನೇ
ಯುದ್ದವೆನ್ನಲಾಗದು.
ದುಃಖ ಹೆಪ್ಪುಗಟ್ಟಿ
ಸದ್ದಿಲ್ಲದೆಯೂ
ನಡೆಯುತ್ತಲಿದೆ
ಎಲ್ಲೆಡೆ ಮೌನಕಲಹ !

ಶ್ರೀವಲ್ಲಿ ಮಂಜುನಾಥ