ಯಕೃತ್ತು (ಲಿವರ್ ) ಎಂಬ ಸಂಸ್ಕರಣ ಅಂಗ
ಇತ್ತೀಚಿಗೆ ಲಿವರ್ ಖಾಯಿಲೆಗಳು ಹೆಚ್ಚಾಗುತ್ತಿವೆ
ಇದು ಅತಿ ಅಪಾಯಕಾರಿ ಹಾಗೂ ದುಬಾರಿ ಖಾಯಿಲೆ
ಆದ್ದರಿಂದ ಇವತ್ತು ಅದರ ಆರೋಗ್ಯದ ಬಗ್ಗೆ ತಿಳಿದುಕೊಳ್ಳೋಣ.
ಯಕೃತ್ತು ಒಂದು ಜೀವಧಾರಕ ಅಂಗ.

ಚಯಾಪಚಯ ಎಂದರೆ ಜೀವಿಯಲ್ಲಿ ಆರೋಗ್ಯ ಸ್ಥಿತಿಯ ಜೈವಿಕ ಕ್ರಿಯೆಯಾಗಿ ನಿರಂತರ ಜರಗುವ ಸಮಸ್ತ ರಾಸಾಯನಿಕ ಕ್ರಿಯೆಗಳು ಮತ್ತು ಶಕ್ತಿಯ ಬಿಡುಗಡೆ ಈ ಕಾರ್ಯದಲ್ಲಿ ಯಕೃತ್ತು ಪ್ರಮುಖ ಪಾತ್ರ ನಿರ್ವಹಿಸುತ್ತದೆ.
- ದೇಹದಲ್ಲಿ ಗ್ಲೈಕೋಜನ್ ಸಂಗ್ರಹಣೆ,
- ಕೆಂಪು ರಕ್ತಕಣಗಳ ವಿಭಜನೆ,
- ಪ್ಲಾಸ್ಮ ಪ್ರೋಟೀನ್ ಸಂಶ್ಲೇಷಣೆ,
- ಹಾರ್ಮೋನ್ ಉತ್ಪಾದನೆ ಮತ್ತು
- ವಿಷದ ಅಂಶವನ್ನು ತೆಗೆದುಹಾಕುವುದು
- ಜೀರ್ಣಕ್ರಿಯೆಗೆ ಬೇಕಾಗುವ ಜೀವರಾಸಾಯನಿಕ ವಸ್ತುಗಳನ್ನು ಉತ್ಪತ್ತಿ ಮಾಡುತ್ತದೆ
- ಜೀರ್ಣಕ್ರಿಯೆಯಲ್ಲಿ ನೆರವಾಗುವ ಒಂದು ಕ್ಷಾರೀಯ ಸಂಯುಕ್ತವಾದ ಪಿತ್ತರಸವನ್ನು ಇದು ಉತ್ಪತ್ತಿ ಮಾಡುತ್ತದೆ
- ಯಕೃತ್ತು ಅಮೋನಿಯವನ್ನು ಯೂರಿಯ ಆಗಿ ಪರಿವರ್ತಿಸುತ್ತದೆ. ಇದು ಮಾನವನ ಬದುಕುಳಿಯುವಿಕೆಗೆ ತುಂಬಾ ಅಗತ್ಯವಾದದ್ದು. ಏಕೆಂದರೆ ಅಮೋನಿಯಾ ಒಂದು ವಿಷೀಯ ಪದಾರ್ಥ. ಅದು ರಕ್ತದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾದರೆ ಮನುಷ್ಯನಲ್ಲಿ ಬುದ್ಧಿಭ್ರಮಣೆಗೆ ಹೋಲಿಕೆ ಮಾಡಬಹುದಾದ ಮಾನಸಿಕ ಸ್ಥಿತ್ಯಂತರಗಳು ಕಂಡುಬರುತ್ತವೆ. ಆದರೆ ಯೂರಿಯಾ ವಿಷೀಯ ಸಂಯುಕ್ತವಲ್ಲ.
- ಇನ್ಸುಲಿನ್ ಮತ್ತು ಇತರ ಹಾರ್ಮೋನುಗಳ ವಿಭಜನೆ
- ಯಕೃತ್ತು ಹೀಮೋಗ್ಲೋಬಿನ್ ಅನ್ನು ವಿಭಜಿಸಿ ಚಯಾಪಚಯಜಗಳನ್ನು ಉತ್ಪತ್ತಿಮಾಡುತ್ತದೆ
• ಆಲ್ಬುಮಿನ್ ಅನ್ನು ಯಕೃತ್ತು ಉತ್ಪತ್ತಿ ಮಾಡುತ್ತದೆ
• ಪ್ರತಿರಕ್ಷಾ ಪರಿಣಾಮಗಳಿಗೆ ಯಕೃತ್ತು ಜಬಾಬ್ದಾರನಾಗಿರುತ್ತದೆ.
ಯಕೃತ್ತು 11/2 kg ತೂಕ ಇದ್ದು, ಸಮವಾಗಿಲ್ಲದ 4 ಭಾಗಗಳನ್ನು ಒಳಗೊಂಡಿದೆ. ಇದು ಜಠರದ ಬಲ ಭಾಗದಲ್ಲಿರುವ ಕೆಂಪು / ಕಂದು ಬಣ್ಣದ ದೊಡ್ಡದಾದ, ತ್ರಿಕೋನಾಕೃತಿಯ ಮೃದುವಾದ ಅಂಗ.
ದೇಹದಲ್ಲಿನ ಹೆಚ್ಚುಕಡಿಮೆ ಎಲ್ಲಾ ಅಂಗಗಳಿಗೆ ಯಕೃತ್ತು ಆಸರೆಯನ್ನು ನೀಡುತ್ತದೆ ಹಾಗೂ ಬದುಕಿಗೆ ಜೀವಧಾರಕವಾಗಿದೆ.
ಪ್ರಸ್ತುತ, ಯಕೃತ್ತಿನ ಎಲ್ಲಾ ಕಾರ್ಯಗಳನ್ನು ಸರಿಸಮಾನವಾಗಿ ನಿರ್ವಹಿಸುವ ಸಾಮರ್ಥ್ಯವಿರುವ ಯಾವುದೇ ಕೃತಕ ಅಂಗ ಅಥವಾ ಸಾಧನಗಳಿಲ್ಲ
ಯಕೃತ್ತಿನ ಖಾಯಿಲೆಗಳು

ಹೆಪಟೈಟಿಸ್ A,B,C,E,
ಮದ್ಯಪಾನದಿಂದಾಗುವ ಹಾನಿ,
ಕೊಬ್ಬು ತುಂಬಿದ ಯಕೃತ್ತು,
ಯಕೃತ್ತಿನ ತೀವ್ರರೋಗ (ಸಿರೋಸಿಸ್),
ಕ್ಯಾನ್ಸರ್,
ಔಷಧಗಳಿಂದುಂಟಾಗುವ ಹಾನಿ (ಮುಖ್ಯವಾಗಿ ಅಸೆಟಾಮಿನೊಫೆನ್, ಕ್ಯಾನ್ಸರ್ ಔಷಧಗಳು).
ಆದರೂ, ಯಕೃತ್ತು ಬೇಗನೆ ಪುನರುಜ್ಜೀವಗೊಳ್ಳುವ
ಸಾಮರ್ಥ್ಯವನ್ನು ಹೊಂದಿದೆ ಹಾಗೂ ಅತಿ ಹೆಚ್ಚಿನ ಕಾದಿರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಖಾಯಿಲೆಯ ಲಕ್ಷಣಗಳು
ತೀವ್ರವಾದ ಆಯಾಸ
ವಿವರ್ಣಗೊಂಡ ಮಲ
ಗಾಡವರ್ಣದ ಮೂತ್ರ
ಕಣ್ಣು ಚರ್ಮ ಹಳದಿಯಾಗುವಿಕೆ
ಕಾಲು ಊದುವಿಕೆ
ರಕ್ತಸ್ರಾವ
ಹೊಟ್ಟೆ ನೋವು,
ಪದೇ ಪದೇ ಜ್ವರ,
ಏಕಾಗ್ರತೆಯ ಕೊರತೆ,
ಭೇದಿ,
ಬಾಯಿ ದುರ್ವಾಸನೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗ ನಿರ್ಣಯ
ರಕ್ತ ಪರೀಕ್ಷೆ
ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್
ಅಂಗಾಂಶ ಪರೀಕ್ಷೆ
ಯಕೃತ್ತಿನ ಕ್ರಿಯೆಪರೀಕ್ಷೆಗಳನ್ನು ನಡೆಸುವುದರಿಂದ
ಯಕೃತ್ತಿನ ರೋಗಗಳನ್ನು ಪತ್ತೆಮಾಡಬಹುದು.
ಈಗ ಬಹು ಸಾಮಾನ್ಯ ಖಾಯಿಲೆಯಾದ ಕೊಬ್ಬಿನ ಯಕೃತ್ತನ್ನು ಸರಿಪಡಿಸಲು ಬೀಜಗಳು, ಅರಿಶಿನ, ಕೊಬ್ಬಿನ ಮೀನು, ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು, ಹಸಿರು ಚಹಾ, ಕೋಸುಗಡ್ಡೆ ಮತ್ತು ಆಲಿವ್ ಎಣ್ಣೆಯು ಸಹಾಯ ಮಾಡುತ್ತದೆ.
ಯಕೃತಿಗೆ ಸಹಕಾರಿ ಆಹಾರಗಳು

ಕಾಫಿ, ಚಹಾ, ಹಣ್ಣುಗಳು, ದ್ರಾಕ್ಷಿಗಳು, ಆಲಿವ್ ಎಣ್ಣೆ, ಕೊಬ್ಬಿನ ಮೀನು, ಬೀಜಗಳು, ಓಟ್ಸ್, ಅರಿಶಿನ, ಬೆಳ್ಳುಳ್ಳಿ, ಧಾನ್ಯಗಳು, ಬೀಟ್ರೂಟ್, ಮೊಟ್ಟೆ ಎಲೆಗಳ ಗ್ರೀನ್ಸ್, ತಾಜಾ ತರಕಾರಿಗಳು ಮತ್ತು ಸಿಟ್ರಾಸ್ ಹಣ್ಣುಗಳು, ಆವಕಾಡೊಗಳು ಮತ್ತು ದ್ವಿದಳ ಧಾನ್ಯಗಳು. ಇದರ ಜೊತೆ ಸಮತೋಲನ ಆಹಾರ,
ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು,
ಮದ್ಯಪಾನ ಮಾಡದಿರುವುದು ಕೂಡ ಒಳ್ಳೆಯದು.
ದೂರವಿಡಬೇಕಾದ ಆಹಾರ
ಹುರಿದ ಆಹಾರಗಳು, ಆಲ್ಕೋಹಾಲ್, ಸಕ್ಕರೆ, ಹೆಚ್ಚು ಉಪ್ಪು, ಕೆಂಪು ಮಾಂಸ, ಹೆಚ್ಚು ಸಂಸ್ಕರಿಸಿದ ಆಹಾರಗಳು, ಪಿಷ್ಟಯುಕ್ತ ಆಹಾರ ಮತ್ತು ಬೇಯಿಸಿದ ವಸ್ತುಗಳು.
ಒಂದು ಅದ್ಭುತ ಹಾಗೂ ಆಶ್ಚರ್ಯಕರವಾದ ವಿಷಯವೇನೆಂದರೆ ಕಳೆದುಕೊಂಡ ಅಂಗಾಂಶವನ್ನು ಸ್ವಾಭಾವಿಕವಾಗಿ ಪುನರುತ್ಪಾದನೆ ಮಾಡಿಕೊಳ್ಳಲು ಸಾಮರ್ಥ್ಯವಿರುವ, ಮಾನವನಲ್ಲಿರುವ ಏಕೈಕ ಒಳಾಂಗವೆಂದರೆ ಅದು ಯಕೃತ್ತು ಮಾತ್ರ;
ಯಕೃತ್ ಒಂದರ 25%ನಷ್ಟು ಚಿಕ್ಕ ಭಾಗವೂ ಒಂದು ಸಂಪೂರ್ಣ ಯಕೃತ್ತಾಗಿ ಮತ್ತೆ ರೂಪುಗೊಳ್ಳಬಲ್ಲದು, ಇದಕ್ಕೆ ಕಾರಣ ಯಕೃತ್ತಿನ ಜೀವಕೋಶಗಳು ಜಡವಾದ ಸ್ಥಿತಿಯಿಂದ ಮತ್ತೆ ಉತ್ಪತ್ತಿ ಚಕ್ರದಲ್ಲಿ ಸೇರಿಕೊಂಡು ವಿಭಜನೆಗೊಂಡು ಸಕ್ರಿಯವಾಗುತ್ತದೆ.
ಪೂರ್ವಾವಸ್ಥೆಗೆ ತರಲಾಗದ ಯಕೃತ್ತು ವಿಫಲತೆಗೆ ಯಕೃತ್ತು ಕಸಿಮಾಡುವಿಕೆಯೊಂದೇ ಮಾರ್ಗ. ತೀವ್ರವಾದ ಹೆಪಟೈಟಿಸ್ C, ಕುಡಿತದ ಚಟ, ಆಟೊಇಮ್ಯೂನ್ ಹೆಪಟೈಟಿಸ್ನಂಥ ಸಿರೋಸಿಸ್ಗೆ ಕಾರಣವಾಗುವ ದೀರ್ಘಕಾಲದ ಯಕೃತ್ತು ಕಾಯಿಲೆಗಳಿಗೆ ಕಸಿ ಒಂದು ಪರಿಹಾರ
ಯಕೃತ್ತು ಅಂಗವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

ಡಾ. ರುಕ್ಮಿಣಿ ವ್ಯಾಸರಾಜ