ಶಪಥಗೈದಳು ಕನ್ನಡತಿ

ಶಪಥಗೈದಳು ಕನ್ನಡತಿ ಒಂದಿಷ್ಟು ಗಮನವಿಟ್ಟುಕಲಿಯಬೇಕಿತ್ತು ಮಾತೃಭಾಷೆಯನುಒಂದಿಷ್ಟು ಅರಿಯಬೇಕಿತ್ತುಅದರ ಲಾಲಿತ್ಯವನು ಹ್ರಸ್ವ ದೀರ್ಘಗಳನಡುವಿನ ವ್ಯತ್ಯಾಸಸ್ವರ ವ್ಯಂಜನಗಳ ವಿನ್ಯಾಸಸ್ವಲ್ಪ ಸಂಧಿ ಸಮಾಸಕಲಿತಿದ್ದರೆ ಸಾಕಿತ್ತುಭಾಷೆಯ ಬಂಧ ಬಲಗೊಳ್ಳುತ್ತಿತ್ತು ಕುಮಾರವ್ಯಾಸನಲ್ಲದಿದ್ದರೂಕುವೆಂಪು ವನ್ನಾದರೂಅರ್ಥೈಸಿಕೊಳ್ಳಬಹುದಿತ್ತುಪೂಚಂತೆಯನ್ನಾದರೂ ಓದಬಹುದಿತ್ತುಭೈರಪ್ಪನನ್ನಾದರೂ ತಿಳಿಯಬಹುದಿತ್ತುಸಾಹಿತ್ಯದ ಸಾರವನ್ನು ಸವಿಯಬಹುದಿತ್ತು ಭಾಷೆಯ ಭರವಸೆಯೊಂದಿಗೆಸ್ನೇಹ ಸಂಬಂಧಗಳಸಿಹಿಯನ್ನಾದರೂ ಉಣ್ಣಬಹುದಿತ್ತುಎಲ್ಲರೊಡನೆ ಸೇರಿ ಬೆಳದಿಂಗಳ ರಾತ್ರಿಯಲಿಹೊಲದಲ್ಲಿ ಒಂದಷ್ಟು ಹರಟಬಹುದಿತ್ತುಜಾತ್ರೆ ಜಾಗರಗಳಲ್ಲಿ ಜೊತೆಯಾಗಬಹುದಿತ್ತು ಮನೆ ಮಂದಿಯಿಂದ ಹಿಡಿದುಅಕ್ಕಪಕ್ಕದ ಮನೆಯವರವರೆಗೂಎಲ್ಲರನೂ ‘ಆಂಟಿ – ಅಂಕಲ್ ಎಂದೇ ಕರೆಯದೆನಿಜ ಸಂಬಂಧಗಳಸರಿಯಾದ ಹೆಸರನ್ನಾದರೂ ಕಲಿಯಬಹುದಿತ್ತುಭಾವಗಳೊಡನೆ ಬಂಧಗಳ ಬೆಸೆಯಬಹುದಿತ್ತು ಒಂದಿಷ್ಟು ಗಮನವಿಟ್ಟುಕಲಿಯಬೇಕಿತ್ತು ಮಾತೃಭಾಷೆಯನುಕಿಂಚಿತ್ತಾದರೂ ಅರಿಯಬೇಕಿತ್ತುಅದರ ಲಾಲಿತ್ಯವನು ಕ್ಷಮಿಸು ಭುವನೇಶ್ವರಿಯೇತಾಯಿ […]Read More

ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ

ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ ನಮಗೆ ನಮ್ಮ ಮನಸ್ಸು ಮಿತ್ರನಾಗಬಹುದು ಶತ್ರುನೂ ಆಗಬಹುದು ಎನ್ನುವ ಪ್ರಸಿದ್ಧವಾದ ನುಡಿ ಇದೆ. ಅದು ಅಕ್ಷರಶಃ ಸತ್ಯ. ನಾವು ನಮ್ಮ ಮನಸ್ಸನ್ನ ಹೇಗೆ ಮಾಡಿಕೊಳ್ಳುತ್ತೇವೂ ಹಾಗೆ ಆಗುತ್ತದೆ. ಮನಸ್ಸನ್ನ ಎಲ್ಲಾ ಸಂದರ್ಭದಲ್ಲೂ ಸ್ಥಿತದಲ್ಲಿ ಇಟ್ಟುಕೊಳ್ಳುವುದು ಒಂದು ಸಾಧನೆಯೇ ಸರಿ. ತನ್ನ ಮನವನ್ನು ಗೆದ್ದರೆ ಜಗತ್ತನ್ನ ಗೆದ್ದ ಹಾಗೆ ಅಂತಾ ಹಿರಿಯರು ಸುಮ್ಮನೆ ಹೇಳಿಲ್ಲ. ಬದುಕು ಬೇವು ಬೆಲ್ಲದ ಮಿಶ್ರಣ ಒಂದೇ ಸಮಾನವಾಗಿ ಇರುವುದಿಲ್ಲ ಕಷ್ಟ ಸುಖ ಆಘಾತ ಉದ್ವೇಗ ಸೋಲು […]Read More

ಅಳಿವಿಲ್ಲದ ಕನ್ನಡ

ಅಳಿವಿಲ್ಲದ ಕನ್ನಡ ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಕು, ಪ್ರೀತಿಸಿದರೆ ಸಾಕು, ಅದರ ಬಗ್ಗೆ ತಿಳಿಯುವ, ಕಲಿಯುವ, ಬೆಳೆಸುವ ಹಂಬಲ ತಾನಾಗಿಯೇ ಮೊಳಕೆಯೊಡೆಯುತ್ತದೆ. ಕನ್ನಡಕ್ಕೆ ಬೇಕಾಗಿರುವುದೂ ಅದೇ ಪ್ರೀತಿಸುವ ಜನತೆ. ಪರಭಾಷಾ ವ್ಯಾಮೋಹ ಇರಬಾರದೆಂದಲ್ಲ, ಪ್ರಥಮ ಆದ್ಯತೆ ಮಾತೃಭಾಷೆ ಆಗಬೇಕು. ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ, ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು, ಅದೇ ತಾಯ್ನುಡಿಯ, ನೆಲದ ಭಾಷೆಯ ಸೇವೆ ಅದು ನಮ್ಮದೇ ಮನೆಯಲ್ಲಿ, ಪರಿಸರದಲ್ಲಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಆರಂಭಗೊಂಡರೆ ಸಾಕು, ಕನ್ನಡ ಸೇವೆಗೆ ಕಂಕಣ […]Read More

ಏನಾಗಲಿ ಮುಂದೆ ಸಾಗು ನೀ….

ಏನಾಗಲಿ ಮುಂದೆ ಸಾಗು ನೀ…. ಮನುಷ್ಯನ ಜೀವನ ಭಗವಂತನ ಅಧ್ಭುತ ಸೃಷ್ಟಿ. ಹುಟ್ಟು ಸಾವು ಎಂಬುದು ಈ ಸೃಷ್ಟಿಯ ನಿಯಮ. ಅವೆರಡರ ನಡುವಲ್ಲಿ ಅನುಭವಿಸುವುದೇ ಜೀವನ. ಜೀವನವೆಂಬುದು ಸುಖ ದುಖಃ ಸಿಹಿ ಕಹಿ ನೋವು ನಲಿವು ಗಳ ಮಿಶ್ರಣ ಆದರೆ ಇಂತಹ ಜೀವನವು ನಾವು ಏಣಿಸಿದಂತೆ ಇರುವುದಿಲ್ಲ, ಅಂದುಕೊಂಡತೇನೂ ಸಾಗುವುದಿಲ್ಲ. ಬದುಕು ಹೂವಿನ ಹಾಸಿಗೆನೂ ಅಲ್ಲ ಹಾಗಂತ ಮುಳ್ಳಿನ ಹಾಸಿಗೆನೂ ಅಲ್ಲ. ಎಲ್ಲಾರ ಬದುಕು ಒಂದೇ ರೀತಿ ಇರುವುದಿಲ್ಲ ಆದರೆ ಎಲ್ಲಾರ ಬದುಕಲ್ಲಿ ಒಂದಲ್ಲ ಒಂದು ರೀತಿಯಾದ […]Read More

ಸುರಕ್ಷಾ ಜಾಗೃತಿ – 6

ಸುರಕ್ಷಾ ಜಾಗೃತಿ – 6 ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಕತ್ತಲೆ ಎಂಬ ಗುಮ್ಮ ಸಣ್ಣ ಮಕ್ಕಳಾಗಿದ್ದಾಗ ಊಟ ಮಾಡದಿದ್ದರೆ ಅಮ್ಮ ಹೇಳುತ್ತಿದ್ದ ಗುಮ್ಮನ ಕಥೆ ನೆನಪಿಗೆ ಬಂದಿರಬಹುದಲ್ಲವೇ? ಹೌದು ಅಮ್ಮ ಯಾವಾಗಲೂ ಕತ್ತಲನ್ನು ತೋರಿಸಿ ಗುಮ್ಮ ಬರುತ್ತಾನೆ ಬೇಗ ಊಟ ಮಾಡು ಅಂತ ಹೇಳಿ ಊಟವನ್ನು ಮಾಡಿಸುತ್ತಿದ್ದಳು. ಇದು ನನಗೂ ಆಗ ಅಮ್ಮ ಯಾಕೆ ಈ ರೀತಿ ಹೇಳುತ್ತಿದ್ದಳು ಅಂತ ತಿಳಿಯಲಿಲ್ಲ ಆದರೆ ಕ್ರಮೇಣ ಬೆಳೆದಂತೆ ಈ ಸುರಕ್ಷತೆಯ ಬಗ್ಗೆ ಹೆಚ್ಚಿನ ಚಿಂತನೆಯನ್ನು ಮಾಡುತ್ತಾ […]Read More

ಬತ್ತದ ಸ್ಪೂರ್ತಿಯ ಚಿಲುಮೆ – ಅರುಂಧತಿ ನಾಗ್

ಬತ್ತದ ಸ್ಪೂರ್ತಿಯ ಚಿಲುಮೆ – ಅರುಂಧತಿ ನಾಗ್ ಅರುಂಧತಿ ನಾಗ್ ಇವರ ಜೀವನ ಅನೇಕ ಹೆಣ್ಣುಮಕ್ಕಳಿಗೆ ಸ್ಪೂರ್ತಿ. ಅರುಂಧತಿ ನಾಗ್ ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿಯರ ಪೈಕಿ ಒಬ್ಬರು. ಕನ್ನಡ ಚಿತ್ರರಂಗದ ದ್ರುವತಾರೆ ಶಂಕರನಾಗ್ ಅವರ ಧರ್ಮ ಪತ್ನಿ. 1990ರಲ್ಲಿನ ನೆಡೆದ ಕಾರು ಅಪಘಾತದಲ್ಲಿ ಅರುಂಧತಿನಾಗ್ ಅವರು ತನ್ನ ಪತಿ ಶಂಕರನಾಗ್ ಅವರನ್ನು ಕಳೆದುಕೊಂಡರು ಮತ್ತು ಅದೇ ಕಾರಿನಲ್ಲಿದ್ದ ಅರುಂದತಿಯವರು ಪವಾಡ ಸದೃಶ್ಯವಾಗಿ ತಾವು ಬದುಕುಳಿದರು. ಕನ್ನಡ ಚಿತ್ರರಂಗದಲ್ಲಿ […]Read More

ಬದುಕು ಬದಲಿಸುವ ಮಾಯೆ..

ಬದುಕು ಬದಲಿಸುವ ಮಾಯೆ.. ಒಂದು ಮಹಾ ಮೋಸ, ಯಾರೋ ಮಾಡಿದ ವಂಚನೆ, ಇಟ್ಟ ನಂಬಿಕೆ ಕಳಚಿ ಬಿದ್ದಾಗ ಕಾಣುವ ಮುಖವಾಡಗಳು, ಕೈ ಹಿಡಿದು ಜೊತೆ ನಡೆದು ಬರಬೇಕಾದವರು ಮದ್ಯದಲ್ಲೇ ಎದ್ದು ತಿರುಗಿಯೂ ನೋಡದೆ ಹೋದದ್ದು, ಎಷ್ಟೋ ಕನಸುಗಳ ಹೆಣೆದು ನಿರ್ನಿದ್ರೆಯ ರಾತ್ರಿಗಳಾಗಿ ಕಳೆದು ಹೋದಂತವು ಇನ್ನೇನು ಈಡೇರುವ ಹೊತ್ತಲ್ಲಿ ಬುಡಮೇಲಾಗಿ ಚಿತ್ತದ ದಿಕ್ಕನ್ನೇ ಕೆಡಿಸುವುದು, ‘ಅಯ್ಯೋ ಎಷ್ಟೆಲ್ಲ ಆಸೆಯಿಂದ ಕಟ್ಟಿದ ಸೌಧ ಕಣ್ಣೆದುರೇ ಧ್ವಂಸವಾಗಿ ಹೋಯ್ತಲ್ಲ’ ಎನ್ನಿಸುವ ಪರಿಸ್ಥಿತಿಗಳು. ಹೀಗೆ ವಿಭಿನ್ನ ಸನ್ನಿವೇಶಗಳು ನಮ್ಮ ನಿಮ್ಮ ನಡುವಿನ […]Read More

ವೀರಲೋಕ ಪುಸ್ತಕ ಸಂತೆ

ವೀರಲೋಕ ಪುಸ್ತಕ ಸಂತೆ ‘ಒಬ್ಬ ಒಳ್ಳೆಯ ಓದುಗ ಮಾತ್ರ ಒಳ್ಳೆಯ ಬರಹಗಾರ’ ಆಗಲು ಸಾಧ್ಯ. ಹೇಗೆ ಒಬ್ಬ ಶಿಕ್ಷಕ, ಹಾಗೂ ಒಂದು ಪುಸ್ತಕ, ಮಗುವಿನ ಜೀವನದಲ್ಲಿ ಪ್ರಮುಖ ಪಾತ್ರವೋ ಹಾಗೆಯೇ ಪ್ರತಿಯೊಬ್ಬರಿಗೂ ಜೀವನದಲ್ಲಿ ಮಾರ್ಗದರ್ಶನದ ಅಗತ್ಯವಿದೆ. ಅದು ಒಳ್ಳೆಯ ಪುಸ್ತಕ ಓದುವುದರಿಂದ ಮಾತ್ರ ಸಾಧ್ಯ. ಇಂದಿನ ಜನತೆ ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಇಷ್ಟೇ, ಕೈಯಲ್ಲೇ ಸದಾ ಕಾಲ ರಾರಾಜಿಸುವ ಮೊಬೈಲ್, ಅದರಲ್ಲಿ ಇಡೀ ಪ್ರಪಂಚವನ್ನೇ ಕಾಣುವ ನಾವು ಯಾವುದೇ ಪುಸ್ತಕ ಓದುವುದು ಅಥವಾ […]Read More

ಕದ್ರಿ ಕಂಬಳ

ಕದ್ರಿ ಕಂಬಳ ಕದ್ರಿ ಕಂಬಳ ಅಥವಾ ಕದ್ರಿ ‘ಮಂಜುನಾಥ ದೇವರ ಕಂಬಳ’ ಎಂದರೆ ಇತಿಹಾಸ ಪ್ರಸಿದ್ಧವಾದುದು. ಕದ್ರಿಕಂಬಳವನ್ನು ‘ ಅರಸು ಕಂಬಳ’ ಎಂದರೆ ಮುನ್ನೂರು ವರುಷಗಳ ಹಿಂದೆ ಮಂಗಳೂರಿನ ಕುಲಶೇಖರದ ಆಳುಪ ರಾಜರು ಪೋಷಿಸಿದ ಕಾರಣ ಈ ಹೆಸರು ಬಂದಿತೆಂದೂ ಹೇಳಲಾಗುತ್ತದೆ‌. ‌‌ ಕಂಬಳ ನಾನು ಇಂದು ನನ್ನ ಹೆಸರಿನ ಜೊತೆಗೆ ಸೇರಿರುವ ಕದ್ರಿಕಂಬಳ ದ ಬಗ್ಗೆ ಅಂದರೆ ಕರಾವಳಿಯ ಜಾನಪದದ ಹೆಮ್ಮೆಯ ಕ್ರೀಡೆಯೆಂದು ಹೇಳಬಹುದಾದ ‘ ಕಂಬಳ’ ದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲು ಇಚ್ಚಿಸುತ್ತೇನೆ. […]Read More

ಕನ್ನಡತೆ…

ಕನ್ನಡತೆ… ಏರಿಸೋಣ ಬಾವುಟಹಾರಿಸೋಣ ಪಟಪಟಕನ್ನಡತೆಯ ಮೆರೆವ ನಾವುದೇಶ ದೇಶದಾಚೆಗೆ|| ನಡೆ ಕನ್ನಡ ನುಡಿ ಕನ್ನಡನಮ್ಮ ಇರವು ಕನ್ನಡನಮ್ಮ ಉಸಿರು ಕನ್ನಡನಮ್ಮ ಹೆಸರು ಕನ್ನಡ|| ಜಾತಿ,ಮತದ ಬೇಧವಿರದನುಡಿಯು ಅದುವೇ ಕನ್ನಡ….ನಡೆನುಡಿಯ ಐಕ್ಯತೆಯಭಾಷೆ ಅದುವೆ ಕನ್ನಡ…|| ಬನ್ನಿರಣ್ಣ ಬನ್ನಿರಿತೋರಣವ ಕಟ್ಟುವಾಕನ್ನಡದ ತೇರನೆಳೆದುನುಡಿ ಮಾಲೆಯ ಹಾಕುವಾ|| ಬನ್ನಿರಣ್ಣ ಬನ್ನಿರಿನುಡಿ ಸೇವೆಯ ಮಾಡುವಾನಾಡು ನುಡಿ ಭಾಷೆಯನ್ನುನಾವು ಕೂಡಿ ಬೆಳೆಸುವಾ|| ಮನೆಮನೆಯಲಿಮನಮನದಲಿಕನ್ನಡವ ಬಳಸುವಾಕನ್ನಡದ ಕಂಪ ಹರಡಿಕನ್ನಡತೆಯ ಮೆರೆಯುವಾ|| ಸುನೀಲ್ ಹಳೆಯೂರುRead More