ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ ಬಗೆ ಬಗೆಯ ಪ್ರಾಣಿ ಪಕ್ಷಿಗಳಲ್ಲಿ ವಿಧವಿಧವಾದ ಬೇಟೆಯ ಕ್ರಮಗಳಿವೆ, ಮಿಂಚುಳ್ಳಿ ಹಕ್ಕಿಯ ಬೇಟೆಯ ವಿಧಾನ ಬಹಳ ಆಕರ್ಷಕ. ನದಿ ತೊರೆಗಳ ಮೇಲೆ ಚಾಚಿದ ಮರಗಳ ಕೊಂಬೆಗಳಲ್ಲಿ ಅಥವಾ ನೀರಿನ ಹೆಬ್ಬಂಡೆಗಳ ಮೇಲೆ ತಪಸ್ಸಿಗೆ ಕೂತ ಮುನಿಗಳಂತೆ ಏಕಾಗ್ರತೆಯಿಂದ ಕಾದು ಕುಳಿತು, ದಿಡೀರನೆ ನೀರಿಗೆ ಚಂಗನೆ ನೆಗೆದು ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಬರುತ್ತವೆ. ಮೀನನ್ನು ಬೇಟೆಯಾಡುವ ಪಕ್ಷಿಗಳಲ್ಲೇ ಅತ್ಯಂತ ನಿಖರವಾಗಿ ನೀರಿನ ಆಳಕ್ಕೆ ಜಿಗಿದು ತಪ್ಪದೇ ಮೀನನ್ನು ಹೊರತರುವ ಮಿಂಚುಳ್ಳಿಯ ಬೇಟೆಯ ವಿಧಾನದಿಂದಾಗಿ […]Read More
ಕಾಲೇಜಿನ ಕಾಟ ಪರಪರ ಪರಪರ ಪರದಾಟ,,ಪ್ರೀತಿ ಪ್ರೇಮದ ಹುಡುಗಾಟ.ಅಲೆಅಲೆ ಅಲೆಅಲೆ ಅಲೆದಾಟಬದುಕಿಗೆ ಬೆಳಕಿನ ಹುಡುಕಾಟ.ಕಾಲೇಜಿನ ವಯಸ್ಸು ಗಾಳಿಪಟಎಡವಿದರೆ ಬದುಕೆ,,, ಧೂಳಿಪಟ.!!೧!! ಸರಸರ ಸರಸರ ಸರಸಗಳುಗುಸುಗುಸು ಪಿಸುಪಿಸು ಮಾತುಗಳುತರಲೆಗು ಮೀರಿದ ಹರಟೆಗಳುಬಿದಿ ಹಲೆಯುವ ಜರಟೆಗಳುಗುರುಗಳ ಮಾತೆ ಸತ್ಯಗಳುಕೇಳದ ಬದುಕಲಿ ಮುಳ್ಳುಗಳು.!!೨!! ಚಿಣಿಮಿಣಿ ಅನ್ನುವ ಬಟ್ಟೆಯಲಿಅಳುಕುತ ಬಳುಕತ ರಸ್ತೆಯಲಿತಂದೆ ತಾಯಿಯ ಕನಸಿನಲಿನಿಮ್ಮಯ ಬದುಕಿದೆ ಬೆವರಿನಲಿಕಲಿಯದೆ ಇದ್ದರೆ ಬದುಕಿನಲಿನರಕವೆ ಇರುವುದು ಬಾಳಿನಲಿ.!!೩!! ದೇಹದ ಮೋಹದ ಸೆಳೆತವಿದೆಸೆಳೆತಕೆ ಸಿಕ್ಕರೆ ನಾಶವಿದೆಅವನಿಗು ಅವಳಿಗು ಬದುಕು ಇದೆಬದುಕುವ ದಾರಿಯು ಉದ್ದವಿದೆ.ಕಲಿಕೆಯ ವಿಷಯವು ಆಳವಿದೆಕಲಿತರೆ ಬದುಕಲಿ ಬೆಳಕು […]Read More
ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು… ಪುಸ್ತಕ : ಗೋಧೂಳಿ ಗಂಧಕವಿ : ಪ್ರೊ. ಸಿದ್ದು ಸಾವಳಸಂಗ ತಾಜ್ಪುರಪ್ರಕಾಶಕರು : ಕಾವ್ಯ ಭಾರತೀ ಪ್ರಕಾಶನ ಕವಿತೆಯ ಎದೆಯ ಕದವ ತೆರೆಯೆ ಎಷ್ಟೊಂದು ಕವಿತೆಗಳುಮನದ ತುಮುಲವ ಹಾಡಲುಒಂದಾದರೂ ಕವಿತೆಗೆಸಾಧ್ಯವಾಗಿದೆಯೇ ಬೆಳಕ ಹಚ್ಚಲು ಹೀಗೆ ಕವಿ ಕೇಳುವ ಪ್ರಶ್ನೆಗೆ ಎಷ್ಟೋ ಸಾವಿರ ವರ್ಷಗಳ ಇತಿಹಾಸವಿದೆ. ಉತ್ತರ ಬಹುಶಃ ಯಾವ ಕವಿಗೂ ಸಿಕ್ಕಿಲ್ಲ ಆದರೆ ಕವಿ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಯಾರು ಕೇಳಲಿ, ಬಿಡಲಿ ನನ್ನ ಕಾರ್ಯವನ್ನು ನಾನು ಮಾಡುತ್ತೇನೆ ಎಂದು […]Read More
ಕತ್ತಲೆ ಇರುಳಿನಲಿ ರಜನಿಯು ಕಾಣದಿರೆಮನದಲಿ ಆಸೆಯು ಬತ್ತುತಲಿಆವರಿಸುವುದು ಜಗದಲಿ ಕತ್ತಲೆ ಬಾನಿನ ಅಂಚಿನಲಿ ನೀ ಕಾಣದಿರಲುಆಸೆಯ ಹೊಂಗಿರಣ ಹೊರಬರದಿರಲುಆವರಿಸುವುದು ಜಗದಲಿ ಕತ್ತಲೆ ನೇತ್ರಗಳಲಿ ಕಾಂತಿಯುಕ್ಕಿದರೂಮನದ ಅಂಗಳದಿ ಬೆಳಕಿದ್ದರೂದೇಹದೊಳಗೆ ಮೂಡಿದ ಕತ್ತಲೆ ಒಮ್ಮೊಮ್ಮೆ ಇಷ್ಟವಾಗುವ ಕತ್ತಲೆಹಾಗೆಯೇ ಬೇಸರ ಮೂಡಿಸುವ ಕತ್ತಲೆದಿನದ ನಾಗಾಲೋಟದಿ ಅನಿವಾರ್ಯ ಕತ್ತಲೆ ಸದ್ವಿಚಾರಗಳ ಬೆಳಕು ಮೊಳೆತುದುರ್ಬುದ್ಧಿಗಳ ಕತ್ತಲೆ ಕಳೆದುಬದುಕ ಬಂಡಿ ಸುಖದಿ ಸಾಗಲಿ ಕಷ್ಟದ ಜೀವನಕೆ ಬೆಳಕಾಗಿಅತಿಯಾಸೆಗೆ ನೀ ಕಪ್ಪಾಗಿಸಮಭಾವದಿ ಬೆಳಗು ನೀ ಕತ್ತಲೆ ಸಿ.ಎನ್. ಮಹೇಶ್Read More
ಹಳೇ ಪಾದಗಳ ಹೊಸ ಹೆಜ್ಜೆಗಳು… ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಡಿ. ವಿ. ಗುಂಡಪ್ಪ ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು ಊಹಿಸಿದ್ದೇ ಸತ್ಯ ಎಂದು ಕೆಲವೊಮ್ಮೆ ಮೂರ್ಖರಂತೆ ವರ್ತಿಸುತ್ತಿರುತ್ತೇವೆ. ನಮ್ಮ ನೋವುಗಳಿಗೆ ಮತ್ಯಾರನ್ನೋ ಹೊಣೆ ಮಾಡಿರುತ್ತೇವೆ. ಯಾವುದೋ, ಯಾರದೋ ವೈಯಕ್ತಿಕ ವಿಷಯಗಳು ನಮ್ಮ ಟೇಬಲ್ ನ ಬಿಸಿ ಬಿಸಿ ಚರ್ಚೆಗಳಾಗಿರುತ್ತವೆ. ಅಂತರಂಗದ ಶಾಂತಿ […]Read More
ಭಾರತೀಯತೆಯ ಅಂತಃಸತ್ವ.. “ಭಾರತ” ವಿವಿಧತೆಯಲ್ಲಿ ಏಕತೆಯುಳ್ಳ ಅಗಣಿತ ಸುಂದರತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅದ್ಭುತವಾದ ದೇಶ. ‘ಭ’ ಎಂದರೆ ಬೆಳಕು. ಬೆಳಕನ್ನು ಅರಸುತ್ತಾ, ಬೆಳಕಲ್ಲೇ ತಾ ಸೇರಿ ತಾನೇ ಬೆಳಕಾಗುವವ ಭಾರತೀಯ. ಬೆಳಕು ಜ್ಞಾನದ ಸಂಕೇತ. ಇಲ್ಲಿನ ಮಣ್ಣಿನ ಪ್ರತೀ ಕಣ ಕಣದಲ್ಲೂ ಶ್ರೇಷ್ಠ ಭಾವಗಳ ಸಮ್ಮಿಳಿತವಿದೆ. ಒಂದೆಡೆ, ಇಡೀ ವಿಶ್ವಕ್ಕೆ ನಮ್ಮ ದೇಶದ ಸಂಸ್ಕೃತಿಯನ್ನು ಸಾರಿ ತಿಳಿಸಿದ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ‘ ಜಗತ್ತಿನ ಯಾವುದೇ ಮೂಲೆಯಲ್ಲಿ ಒಳಿತು ಎನ್ನುವಂತಹ ವಿಚಾರಧಾರೆ ಸಿಕ್ಕರೆ, ನಿಸ್ಸಂದೇಹವಾಗಿ ಅದು ಭಾರತದಿಂದ […]Read More
ಮೈಸೂರು ಪಾಕ್ – ದಕ್ಷಿಣ ಭಾರತದ ಜಗತ್ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಎಂಬುದು ಕರ್ನಾಟಕದ ಮೈಸೂರು ನಗರದ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ಸಮೃದ್ಧವಾದ, ಬಾಯಿಯಲ್ಲಿ ಕರಗುವ ರಚನೆ ಮತ್ತು ಅವನತಿ ಹೊಂದುತ್ತಿರುವ ರುಚಿಗೆ ಹೆಸರುವಾಸಿಯಾದ ಈ ಮಿಠಾಯಿಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಿಹಿ ಉತ್ಸಾಹಿಗಳ ನಡುವೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಮೂಲ ಹೆಸರು ಹೇಗೆ ಬಂತು ಮೈಸೂರು ಪಾಕಿನ ಮೂಲವು 19ನೇ ಶತಮಾನದಲ್ಲಿ ಮೈಸೂರು ಅರಮನೆಯ ಅಡಿಗೆಮನೆಯಲ್ಲಿ ಹುಟ್ಟಿಕೊಂಡಿತು. ದಂತಕಥೆಯ ಪ್ರಕಾರ, ಈ ಖಾದ್ಯವನ್ನು ಅಂದಿನ ಮೈಸೂರು […]Read More
ಮಾದಕ ವಸ್ತು ಬೇಡ – ಈ ಜೀವ ದೈವಿದತ್ತ ‘ಕಷ್ಟಪಟ್ಟು ಬೆವರನ್ನು ಕೊಡುವ ಬದಲು ಒಂದು ಹನಿ ರಕ್ತ ಕೊಡಲು ಸಿದ್ಧರಿರುವ ಯುವಕರ ಒಂದು ಗುಂಪನ್ನು ನನಗೆ ಕೊಡಿರಿ, ಇಡೀ ಜಗತ್ತನ್ನೇ ಗೆಲ್ಲುತ್ತೇನೆ’ ಎಂದು ಹೇಳಿದ ಸಿಡಿಲ ಮರಿ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಸತ್ವವಿದೆ. ಆದರೆ ಇಂದಿನ ಯುವ ಪೀಳಿಗೆಯು ಹನಿ ರಕ್ತವನ್ನು ಕೊಡುವುದು ಇರಲಿ, ಹನಿ ಬೆವರನ್ನೂ ಕೊಡಲು ಒದ್ದಾಡುತ್ತಾ ಇರುವುದನ್ನು ಎಲ್ಲೆಡೆ ನಾವು ಕಾಣಬಹುದು. ಬದಲಿಗೆ ಹನಿ ಮಾದಕ ವಸ್ತುಗಳ ದಾಸರಾಗಿ ಜೀವನವನ್ನೇ ಅದರ […]Read More
ಮನವ ಗೆದ್ದ ಪರಿ ಮನಸನು ಅಪಹರಿಸಿ ಚಣದೊಳುನೀ ಬೇಸರಿಸಿ ಹೋಗಿದ್ದಾದರೂ ಎತ್ತ!ಕನಸನು ಚೂರಾಗಿಸಿ ಕಣಕಣದಲಿ..ಮತ್ತೆಂದು ಬರುವೆ ನೀ ಮನದತ್ತ!! ಹಿತಮಿತ ಮಾತಿನಲಿ ತಲೆದೂಗಿಸಿಕತ್ತಲ ಇರುಳಲಿ ಮರೆಯಾಗಿ ಹೋದೆ!ನಿನ್ನ ಸವಿಗನಸುಗಳ ಮಾಲೆ ಧರಿಸಿ..ಆ ರಾಧೆಯಂತೆ ನಾ ದಿನವೂ ಕಾದೆ!! ಕಳೆದ ಜನುಮದ ಮೈತ್ರಿಯ ಬೆಸೆವಆತ್ಮಬಂಧುವೇ ನೀನಾದೆ ನನಗೆ!ಪನ್ನೀರ ಹನಿಯಂತೆ ಒಲವ ಹರಿಸುವ..ಆ ಗುಳಿಕೆನ್ನೆಯ ನೋಟದಲೇ ಬೆಸುಗೆ!! ಪದಗಳನು ಮುತ್ತಂತೆ ಅಣಿಯಾಗಿಸಿಕವಿತೆ ಬರೆಯಲು ಆಗದು ನನಗೆ!ಜನುಮಗಳ ಪ್ರೀತಿಯ ಬಂಧಿಸಿ..ನುಡಿತೋರಣವಾಗಿಸಿ ಅರ್ಪಿಸಲೇ ನಿನಗೆ!! ಸುಮನಾ ರಮಾನಂದRead More
ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ ಕನ್ನಡ ಬರೀ ಒಂದು ಭಾಷೆಯಲ್ಲ. ಅದೊಂದು ಸಂಸ್ಕಾರ ಮತ್ತು ಸಂಸ್ಕೃತಿ. ಎಷ್ಟೇ ಸಂಖ್ಯೆಯಲ್ಲಿ ಬೇರೆ ಬೇರೆ ಭಾಷೆಗಳಿದ್ದರೂ, ಅಪ್ಪಟ ಕನ್ನಡಿಗರಿಗೆ ಕನ್ನಡವನ್ನ ದಿನ ನಿತ್ಯ ಬಳಸುವವರಿಗೆ ದಿನವೂ ಹಬ್ಬವೇ. ಇದೀಗ ಎಲ್ಲೆಡೆ ಕನ್ನಡ ಹಬ್ಬದ್ದೇ ಮಾತು. ಅಖಿಲ ಭಾರತ 87 ನೇ ಕನ್ನಡ ಸಮ್ಮೇಳನವು ನಮ್ಮೆಲ್ಲರ ಹೆಮ್ಮೆಯ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20, 21,ಹಾಗೂ 22 ರಂದು ನೆಡೆಯುತ್ತಿದೆ. ಮಂಡ್ಯದ ಪ್ರಮುಖ ಬೀದಿಯಲ್ಲಿ ಕೆಂಪೇಗೌಡರ ಪ್ರತಿಮೆ ದೀಪಾಲಂಕಾರಗಳಿಂದ […]Read More