ಬಂಧನದ ಪರಿ ಶರಧಿಯ ಸೇರಲು ಹೊರಟಿದೆ ಹೊಳೆಯುಕಡಲ ತೆರೆಯೂ ಆರ್ಭಟವ ಮಾಡುತಿದೆ !ಸಡಗರದ ಸಮ್ಮಿಲನಕೆ ಹಾತೊರೆದು..ಸವಿಬಂಧನದ ಭಾವದಲಿ ಒಂದಾಗಿದೆ!! ಮಲ್ಲಿಗೆಯ ಮೊಗ್ಗರಳಿ ಪರಿಮಳವ ಬೀರುತಾದುಂಬಿಗಳ ಹಿಂಡನು ತನ್ನತ್ತ ಸೆಳೆದಿದೆ!ಧರೆಯ ಹಸಿರ ತೆನೆಯು ಆಗಸದತ್ತ ನೋಡಿ..ಬಂಧನದ ಈ ಪರಿಗೆ ತಾ ಮುಗುಳ್ನಕ್ಕಿದೆ!! ಗೂಡನು ತೊರೆದು ಬಾನಲಿ ಹಾರಾಡಿಹಹಕ್ಕಿಯು ಮುಸ್ಸಂಜೆಗೆ ಮನೆಯತ್ತ ಮರಳಿದೆ!ಬದುಕಿನ ಬಂಧನದಿ ಕ್ಷಣದ ಸಂತಸ ಮಿಗಿಲೆಂಬ..ಸತ್ಯವನರಿತು ಬಾಳ ಪಥವ ನಡೆಸಿದೆ!! ಆ ಬಾನು ಬುವಿಯು ಕ್ಷಿತಿಜದಲಿಒಲವಿನ ಸವಿ ಬಂಧನಕೆ ಬೆಸೆದಿದೆ!ದೈವಕೃಪೆಯಲಿ ಅರಳಿದ ಈ ಬಾಳಪುಟದಿ..ಹೊಸತೊಂದು ಭಾಷ್ಯವ ತಾ […]Read More
ಕೀರ್ತಿಶನಿ ನನಗೇನು ಹಂಬಲವೋ ದುರಾಸೆಯದುಎಲ್ಲರ ಗಮನ ಸೆಳೆಯುವ ಅಭಿಲಾಷೆಯುನಾ ಮಾಡಿದ ಕಾರ್ಯ ಇತರರಿಗೆ ತೋರಿಸಲುಹಿಡಿದಿಹುದು ಎನಗೆ ಕೀರ್ತಿಶನಿಯು ಜನ್ಮ ನೀಡಿದ ಮಾತೆಯು ಬಯಸದ ಬಯಕೆಅಕ್ಷರವನಿತ್ತ ಗುರು ಕಾಣದ ಅತ್ಯಾಸೆಯುಬದುಕು ಕೊಟ್ಟ ಭಾಷೆ ಬೇಡದ ಕಾಮನೆಯುನನಗೇಕೆ ಹಿಡಿಯಿತೋ ಕೀರ್ತಿಶನಿಯು ತ್ರಿಪದಿಗಳಲಿ ಜೀವನ ಬೋಧಿಸಿ ಸರ್ವಜ್ಞಭಾಮಿನಿಯಲಿ ಭಾರತ ಕೊಟ್ಟ ಕುಮಾರವ್ಯಾಸಅನಾಮಧೇಯನಾಗಿ ಬರೆದ ಮುದ್ದಣ ಕವಿಇವರಿಗಿಲ್ಲದ ಕೀರ್ತಿಶನಿಯು ನನಗೇತಕೋ ಎನ್ನ ಸಾಧನೆಗಳನು ಕಂಡು ಜನರುಗುರುತು ಹಿಡಿದು ಮೆಚ್ಚಿ ಹೊಗಳಲುಅದುವೇ ಕೀರ್ತಿಯ ಶ್ರೀರಕ್ಷೆಯುಬೇಡಿ ಬಯಸದಿರು ಕೀರ್ತಿಶನಿಯನು ಸಿ.ಎನ್. ಮಹೇಶ್Read More
ಮಹಾ ಕುಂಭ ಮೇಳ – ಆಧ್ಯಾತ್ಮ ಮತ್ತು ಪುಣ್ಯ ಸ್ನಾನ ಪ್ರಯಾಗರಾಜದಲ್ಲಿ ನಡೆದ ಮಹಾ ಕುಂಭ ಮೇಳವು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರಮುಖ ಅಂಗವಾಗಿ ಜಗತ್ತಿಗೆ ಪ್ರತಿನಿಧಿಸಿದೆ. ಇದು ವಿಶ್ವದಲ್ಲೇ ಆಯೋಜನೆಗೊಂಡ ಅತ್ಯಂತ ಮಹತ್ವಪೂರ್ಣ ಧಾರ್ಮಿಕ ಸಮಾರಂಭಗಳಲ್ಲಿ ಒಂದಾಗಿದೆ. ಮಹಾ ಕುಂಭವು ಆಯುಧಿ ಪುಣ್ಯ ಸ್ನಾನದ ಜೊತೆಗೆ ಆಧ್ಯಾತ್ಮಿಕ ಕ್ರಿಯೆಗಳ ಪರಿಪಾಲನೆಗೆ ಪ್ರಮುಖ ವೇದಿಕೆಯಾಗಿತ್ತು. ಮಹಾ ಕುಂಭ ಮೇಳದ ಮಹತ್ವ ಮಹಾ ಕುಂಭ ಮೇಳವು 144 ವರ್ಷಕ್ಕೊಮ್ಮೆ ನೆಡೆಯುವ ಪ್ರಮುಖ ಧಾರ್ಮಿಕ ಸಮಾರಂಭವಾದುದರಿಂದ ಇಲ್ಲಿನ […]Read More
ಈ ಹೃದಯ ಮಾರಾಟಕ್ಕಿದೆ ಈ ಹೃದಯ ಮಾರಾಟಕ್ಕಿದೆಬನ್ನಿ ಗ್ರಾಹಕರೇ ಬನ್ನಿಸೀಮಿತ ಅವಧಿಗೆ ಮಾತ್ರವೇ ಉಂಟುಮಾರಾಟದ ಕೊಡುಗೆಗಳು ಲಭ್ಯನಿಯಮಗಳು ಅನ್ವಯ. ಕೊಳ್ಳುವವನ ಅಧೀನಈ ಹೃದಯ ಸ್ವಾಧೀನಈ ದೇಹ ಪರಾಧೀನ!ಹೃದಯದ ನೋವುಗಳು ಅಗಣಿತಕೊಳ್ಳಲೇಬೇಕಿದೆ ಗ್ರಾಹಕ ಸಂಭ್ರಮದ ಜೊತೆ ಜೊತೆಗೆ ಹೃದಯದ ಭಾರಕೆ ಸೊರಗಿದೆಒಲವೆಂಬ ದೀಪದ ಬೆಳಕುಅದೆಷ್ಟು ದಿನ ಉರಿದೀತುಬಯಸುವಂತಿಲ್ಲ ನೀವು ನಿರಂತರಹಣತೆ ಹಚ್ಚುವವನು ಬರಲಾರನೇ?ನಿರೀಕ್ಷೆಗೆ ಕೊನೆಯೆಂದು ಹಳತು ಎನ್ನುವಂತಿಲ್ಲ,ಈ ಹೃದಯದ ಕವಾಟಿನಲಿಅದೆಷ್ಟೋ ಕನಸುಗಳು ಬೆಚ್ಚಗೆ ಮಲಗಿವೆ ಹಾಗೆಯೇ,ಎಚ್ಚರಗೊಳಿಸುವವನ ತಾಕತ್ತು ಯಾರು ಬಲ್ಲರು..ಕನಸುಗಳು ಮಾತ್ರ ಮಾರಾಟಕ್ಕಿಲ್ಲಬನ್ನಿ ಗ್ರಾಹಕರೇ ಬನ್ನಿ ಈ ಹೃದಯ […]Read More
ಚಿಟ್ಟೆಗಳು ಒಂದು ಪ್ರದೇಶ ಆರೋಗ್ಯಕರ ಪರಿಸರ ಹೊಂದಿದೆ ಎಂದು ಹೇಳಬೇಕಾದರೆ ಆ ಪ್ರದೇಶದಲ್ಲಿ ಹಲವು ಗುಣಲಕ್ಷಣಗಳು ಇರುತ್ತವೆ. ಆ ಲಕ್ಷಣಗಳು ಪ್ರಾಣಿ ಪಕ್ಷಿ ಹುಳಹುಪ್ಪಟೆ ಸೇರಿದಂತೆ ಹಲವಾರು ವಿದದ ವೃಕ್ಷಗಳು ಇತ್ಯಾದಿಗಳು ಇರಬಹುದು. ಚಿಟ್ಟೆ ಮತ್ತು ಜೇನ್ನೋಣಗಳು ನಮ್ಮ ಸುತ್ತಲಿನ ಆರೋಗ್ಯಕರ ಪರಿಸರವನ್ನ ಸೂಚಿಸುತ್ತವೆ.ಇವುಗಳ ಮುಖ್ಯ ಆಹಾರ ಹೂವುಗಳ ಮಕರಂದ. ಎಲ್ಲಿ ಹೂವುಗಳು ಇರುತ್ತವೆಯೋ ಅಲ್ಲಿ ಮಕರಂದ ಹೀರಲು ಚಿಟ್ಟೆ ಹಾಗೂ ಜೇನ್ನೊಣಗಳು ಧಾವಿಸುತ್ತವೆ. ಯಾವ ಪ್ರದೇಶದಲ್ಲಿ ಅಪಾರ ಪ್ರಮಾಣದ ವೈವಿಧ್ಯಮಯ ಹೂವುಗಳು ಇದಾವೆ ಎಂದರೆ ಅಲ್ಲಿ […]Read More
ತನಗಗಳು ತನಗ ಫಿಲಿಪೈನ್ಸ್ ದೇಶದ ಕಾವ್ಯ ಪ್ರಕಾರ, ಈ ಕಾವ್ಯ ಪ್ರಕಾರಕ್ಕೂ ಜಪಾನಿನ ಹೈಕು ವಿಗೂ ಕೆಲವು ಹೋಲಿಕೆಗಳಿವೆ. ಹೈಕು ಮೂರು ಸಾಲಿನ ಕವಿತೆ, ತನಗ ನಾಲ್ಕು ಸಾಲಿನ ಸಾಲುಗಳ ಕವಿತೆ. ಪ್ರತಿ ಸಾಲು ಏಳು ಪದಗಳಿಂದ ಕೂಡಿರುತ್ತದೆ. ಈ ಕಾವ್ಯ ಪರಂಪರೆ ಅಂತ್ಯಪ್ರಾಸವುಳ್ಳ ಕವಿತೆ, ವಿವಿಧ ವಿನ್ಯಾಸಗಳಿಗೆ ಆಸ್ಪದವಿದೆ ಇಲ್ಲಿ ಲಯ ಮತ್ತು ಸಿಲಬಲ್ ಮನಗಳು ಇರುವುದರಿಂದ ಕವಿಯ ಸಾಮರ್ಥ್ಯವನ್ನು ಓರಗೆ ಹಚ್ಚುತ್ತವೆ. ತನಗಗಳ ನಿನ್ನ ಅಂತರಂಗದಾನೋವಿಗೆ ಕಿವಿಯಾಗು,ಅದುವೆ ನಿನ್ನಾ ಬಾಳಮುನ್ನಡೆಯ ದಿಕ್ಸೂಚಿ!!**ಹಕ್ಕಿ ರೆಕ್ಕೆಗಳಂತೆಸುಖ ದುಃಖ […]Read More
ಕುಂಭ ಮೇಳದಲ್ಲಿ ಒಂದು ಸುತ್ತು “ಕುಂಭಮೇಳ” ಈ ಪದ ನಮ್ಮ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ಮನೆಮಾಡಿದೆ. ಹಾಗಾದರೆ ಏನಿದು ಕುಂಭಮೇಳ. ಒಂದಷ್ಟು ವಿಚಾರಗಳನ್ನು ಓದಿ ಕೇಳಿ ತಿಳಿಯುತ್ತಿದ್ದೇವಾದರೂ ಈ ಮೇಳದ ಕುರಿತು ಒಂದಷ್ಟು ಮಾಹಿತಿಗಳು ಸರಳವಾಗಿ ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಭರತ ವರ್ಷವೆಂಬ ನಮ್ಮ ಭಾರತ ದೇಶದ ನಾಲ್ಕು ಸ್ಥಳಗಳಲ್ಲಿ ಪ್ರಮುಖವಾಗಿ ಆಯೋಜಿಸುವ ಈ ಬೃಹತ್ತಾದ ಮೇಳದ ಬಗ್ಗೆ ಓದಿದ್ದೆವಾದರೂ, ಹಲವಾರು ಪ್ರಶ್ನೆಗಳು ಕಾಡುತ್ತಿದ್ದವು. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ […]Read More
ಪಯಣ ಅರಿವಿರದೆ ಸಾಗುತಿದ್ದ ಬದುಕಿಗೆದುರಾದಅನಿರೀಕ್ಷಿತ ತಿರುವು ನೀನು,ಆ ತಿರುವಲೇ ಮೈಮರೆತು ನಿಂತಅಭಿಸಾರಿಕೆ ನಾನು..! ದೀರ್ಘ ಮಾತುಗಳ ಮೇಳ ಬೇಕಿಲ್ಲಭಾವಗಳ ಸೌರಭ ಮನ ತಟ್ಟಿದೆಯಲ್ಲಮಾಂಗಲ್ಯಕ್ಕೆ ತಲೆಬಾಗಿಕಾಲುಂಗುರದ ಹೆಜ್ಜೆಗಳೊಟ್ಟಿಗೆಸಪ್ತಪದಿಗೆ ಜೊತೆಯಾಗಿ ಅರುಂಧತಿ ನಕ್ಷತ್ರವ ಕಾಣಲುನೋಟಗಳೆರಡು ಬೆರೆತುಬ್ರಹ್ಮಗಂಟಿನ ಮಹತ್ವವ ಅರಿತುಕಿರುಬೆರಳ ಹಿಡಿದು ಬಹುದೂರ ಸಾಗೋಣಉಸಿರ ಹರಿವಲಿ ಜಗವ ಮರೆಯೋಣ.. _ಪಲ್ಲವಿ ಚೆನ್ನಬಸಪ್ಪRead More
ಶ್ರುತಿ-ಸ್ವರದ “ಬೇಸೂರ್” ಕೆಲವು ಕೃತಿಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ನಮ್ಮ ಬುದ್ಧಿ ವಿವೇಚನೆಯನ್ನು ಸಾಣೆ ಹಿಡಿಯುವ ಚಿಂತನೆಗೆ ಹಚ್ಚುವ ಗುಣವನ್ನು ಹೊಂದಿರುತ್ತವೆ. ಇತ್ತೀಚೆಗೆ ನಾನು ಓದಿದ ಅಂತಹ ಒಂದು ಕೃತಿ, ‘ವೀರಲೋಕ ಪುಸ್ತಕ’ ಪ್ರಕಾಶನದಿಂದ ಪ್ರಕಟವಾಗಿರುವ ‘ಬೇಸೂರ್’ ಎಂಬ ಕಥಾಸಂಕಲನ. ‘ಬೇಸೂರ್’ ವಿದ್ಯಾ ಭರತನಹಳ್ಳಿ ಅವರ ಪ್ರಥಮ ಕಥಾಸಂಕಲನವಾಗಿದೆ. ‘ಬೇಸೂರ್’ 13 ಕಥೆಗಳ ಗುಚ್ಚ. ಎಲ್ಲಾ ಕಥೆಗಳು ಸ್ತ್ರೀ ದನಿಯನ್ನು ಪ್ರತಿನಿಧಿಸುತ್ತವೆ, ಪ್ರತಿಧ್ವನಿಸುತ್ತವೆ.. ಪ್ರತಿಯೊಂದು ಕತೆಯಲ್ಲೂ ಹೆಣ್ಣಿನ ತುಮುಲಗಳು, ಹೋರಾಟಗಳನ್ನು ಕಾಣುತ್ತೇವೆ. ಸ್ತ್ರೀಯು ತನ್ನ ಸ್ವಾತಂತ್ರ್ಯ, ಅಸೀಮತೆಯನ್ನು […]Read More
ಮಾನಸಿಕ ಖಿನ್ನತೆ ಹುಚ್ಚಲ್ಲ ಮಾನಸಿಕ ಖಿನ್ನತೆ ಎಂದರೆ ಹುಚ್ಚಲ್ಲ, ಮನುಷ್ಯನ ದುರ್ಬಲ ಮನಃಸ್ಥಿತಿ ಮತ್ತು ಚಟುವಟಿಕೆಗಳ ಬಗ್ಗೆ ಕಡಿಮೆ ಒಲವಿರುವ ಸ್ಥಿತಿಯನ್ನು ಮಾನಸಿಕ ಖಿನ್ನತೆ ಎನ್ನಲಾಗುತ್ತದೆ. ಖಿನ್ನತೆಯು ಒಬ್ಬ ವ್ಯಕ್ತಿಯ ಆಲೋಚನೆಗಳು, ನಡವಳಿಕೆ, ಪ್ರೇರಣೆ, ಭಾವನೆಗಳು ಮತ್ತು ಆತನ ಯೋಗಕ್ಷೇಮದ ಪ್ರಜ್ಞೆಯ ಮೇಲೆ ಪರಿಣಾಮ ಬೀರಬಹುದು. ಇದು ದುಃಖ, ಆಲೋಚನೆ ಮತ್ತು ಏಕಾಗ್ರತೆಯ ತೊಂದರೆ ಮತ್ತು ಹಸಿವು ಮತ್ತು ನಿದ್ರೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವನ್ನು ಮಾಡಬಹುದು. ಖಿನ್ನತೆಯು ಮನುಷ್ಯನನ್ನು ‘ಕೊಲ್ಲದೇ ಕೊಲ್ಲುವ ರೋಗ’ ಎಂದು ಹೇಳಬಹುದು. […]Read More