ಬಾಲ್ಯದ ಆಟ

ಬಾಲ್ಯದ ಆಟ ಬಾಲ್ಯದಬಾಲು ಬ್ಯಾಟಿನಾಟಈಗಲೂ ಕಣ್ ಮುಂದೆಬಂದು ಹೋಗುತ್ತದೆಕಾಲವು ಮುಂದೆ ಹೋಗುತ್ತಿದ್ದರೂ ಸಮ ವಯಸ್ಸಿನಸ್ನೇಹಿತರು ಕೂಡಿಟ್ಟಕಾಸು ಸಮನಾಗಿ ಕೂಡಿಸಿ ತಂದ ಎಮ್ಮಾರೈ ಬಾಲುಬಡಿಗ ಕೆತ್ತಿಕೊಟ್ಟ ಬ್ಯಾಟುಅಟ್ಟದ ಮೇಲಿದ್ದಪಿಳಗುಂಟೆಯ ಬ್ಯಾಕೋಲಿನ ಆಕಾರದಮೂರು ಸ್ಟಂಪ್ಗಳು ಸಕತ್ತಿದ್ದವುವಿಕೆಟ್ ಕೀಪರ್ ನ ಮುಂದೆಬ್ಯಾಟ್ಸ್ಮನ್ ನ ಹಿಂದೆ ಪಿಚ್ ತಯಾರಿಸಲುಬಿತ್ತಿ ಬೆಳೆಯದ ಮಡೆ ಹೊಲಕ್ಕೆನಾಕು ಗೇಣಿನ ದಿಂಡಿನ ಕುಂಟಿ ಹಾಕಿಹರಗಿ ಹಸ ಮಾಡಿಹೊಸ ಗ್ರೌಂಡ್ ಹುಟ್ಟು ಹಾಕಿದ್ದೊಂದುಇತಿಹಾಸದಪುಟದಲ್ಲಿ ಬರೆದದ್ದು ನೆನಪಷ್ಟೇ ಈಗದು ಊರಹೊಸ ಮನೆಗಳು ಬೆಳೆದು ನಿಂತಬೆಲೆಯುಳ್ಳ ಸೈಟುಗಳ ಬಡಾವಣೆ ಸ್ಕ್ರಿಜ್ಗೆರೆ ಹಾಕಲುಪಾದಗಳ ಇಟ್ಟು […]Read More

ಜಗನ್ನಾಥನ ರಥಯಾತ್ರೆ

ಜಗನ್ನಾಥನ ರಥಯಾತ್ರೆ ಭಾರತದಲ್ಲಿ ಹಿಂದೂ ಧರ್ಮಾಚರಣೆಯಲ್ಲಿ ವರ್ಷಪೂರ್ತಿ ರಥೋತ್ಸವಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತದೆ. ಆದರೆ ಅಂಥಹ ರಥೋತ್ಸವಗಳಲ್ಲಿ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ ರಥೋತ್ಸವ ಎಂದರೆ ಒಡಿಸ್ಸಾದ ಪುರಿ ನಗರಿಯಲ್ಲಿ ನಡೆಯುವ ಜಗನ್ನಾಥನ ರಥಯಾತ್ರೆ. ಈ ಯಾತ್ರೆಯನ್ನು ನೋಡಲು ಲಕ್ಷೋಪಾದಿಯಲ್ಲಿ ದೇಶ ವಿದೇಶಗಳಿಂದ ಭಕ್ತರು ಪುರಿಗೆ ಆಗಮಿಸುತ್ತಾರೆ. ಇದೊಂದು ಧಾರ್ಮಿಕ ರಥಯಾತ್ರೆಯಾಗಿದ್ದು ಇದನ್ನು ಪುರಿಯ ಪ್ರಮುಖ ದೇವರಾದ ಜಗನ್ನಾಥ, ಆತನ ಸಹೋದರಿ ದೇವಿ ಸುಭದ್ರ ಹಾಗೂ ಸಹೋದರ ಬಲಭದ್ರ ದೇವರಿಗೆ ನಡೆಯುತ್ತದೆ. ಇದನ್ನು ದಶವತಾರ್ ಯಾತ್ರೆ, ನವದಿನ್ […]Read More

ದೇಹದ ಬೆಲೆ

ದೇಹದ ಬೆಲೆ ಸಂಗಮಪುರ ರಾಜ್ಯದ ನಿಜಗುಣ ರಾಜನ ಆಸ್ಥಾನದಲ್ಲಿ ಎಂದಿನಂತೆ ರಾಜನ ದರ್ಬಾರ್ ನಡೆಯುತ್ತಿತ್ತು. ಆಗ ಧೂಳಪ್ಪನೆಂಬ ಯುವ ಭಿಕ್ಷುಕನೊಬ್ಬ ರಾಜನ ಆಸ್ಥಾನಕ್ಕೆ ಬಂದು ‘ನಾನು ಒಬ್ಬ ಯಾರೂ ಇಲ್ಲದ ನಿರ್ಗತಿಕ, ಆ ಭಗವಂತ ನನಗೆ ಮನೆ, ಮಠ, ಹಣ ಮತ್ತು ವಿದ್ಯೆ ಏನನ್ನೂ ಕೊಟ್ಟಿಲ್ಲ, ಬದುಕೇ ನನಗೆ ಕಷ್ಟವಾಗಿದೆ. ಮಹಾರಾಜರಾದ ತಾವು ದಯಮಾಡಿ ನನ್ನ ಮೇಲೆ ಕರುಣೆಯನ್ನು ತೋರಬೇಕು’ ಎಂದು ವಿನಮ್ರವಾಗಿ ಭಿನ್ನವಿಸಿಕೊಂಡನು. ಆತನ ಮಾತನ್ನು ಕೇಳಿದ ಮಹಾರಾಜ ನಿಜಗುಣನು ಧೂಳಪ್ಪನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿ, […]Read More

ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ

ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ ಪುಸ್ತಕ : ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನಲೇಖಕರು : ಶ್ರೀ ಜೆ ಎನ್ ಜಗನ್ನಾಥ್ಪ್ರಕಟಣೆ :ಕದಂಬ ಪ್ರಕಾಶನ ಹಣಕಾಸು, ಬ್ಯಾಂಕಿಂಗ್ ಮತ್ತು ಹಣಕಾಸಿನ ನಿರ್ವಹಣೆ ಎನ್ನುವುದು ಬಹಳ ವಿಸ್ತಾರವಾದ ಕ್ಷೇತ್ರ. ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಾದ ವಿಚಾರವಲ್ಲ.ಅರ್ಥಿಕತೆ, ಬ್ಯಾಂಕಿಂಗ್, ವಾಣಿಜ್ಯ ವಿಚಾರಗಳನ್ನು ಕುರಿತಾಗಿ ಸಾಕಷ್ಟು ಪುಸ್ತಕಗಳು ಬಂದಿದ್ದರೂ Treasury Management ವಿಷಯ ಮಾತ್ರ ಅಷ್ಟಾಗಿ ಯಾರನ್ನೂ ತಲುಪಿಲ್ಲವೆಂದೇ ಹೇಳಬೇಕು. ಹಿರಿಯ ಸಾಹಿತಿ ದಿ.ಪ್ರೊ ಎಚ್ಚೆಸ್ಕೆ ಬ್ಯಾಂಕಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕೊಡುಗೆ ನೀಡಿದ್ದಾರೆ.ಕನ್ನಡ […]Read More

ನಿಸರ್ಗದಾಟ

ನಿಸರ್ಗದಾಟ ತಳಿರ ತೋರಣಗಟ್ಟಿ,ತಾನತಾನದಿ ಗಾನಗೈವಕಾಜಾಣಗಳ ತಾನುಮುದದಿ ಕರೆಯುತಿಹುದು! ನೇಸರನು ಕುಂಚವನುತಾ ಮೆಲ್ಲ ಬೀಸುತಲಿ,ಮುಂಬಿಸಿಲ ಹೊಂಬಣ್ಣಎಲ್ಲೆಲ್ಲೂ ಸವರಿಹನು! ಮುತ್ತನೆರಚಿ ನಲಿವಸಲಿಲದ ನೀರ್ಗೊರಳು,ಕಣ್ತಣಿಸಿ, ಕಿವಿಗಿಂಪಾಗಿಮನವನಪಹರಿಸಿಹುದು! ಕಂದರದೊಳಲೆಯುತಿಹಮಂದ ಮಾರುತ ತಾನು,ಪರಪುಟ್ಟನಿಂಚರವಪ್ರತಿಧ್ವನಿಸುತಿಹನು ! ಶ್ರೀವಲ್ಲಿ ಮಂಜುನಾಥಬೆಂಗಳೂರುRead More

ಬಾ ಗೆಳತಿ

ಬಾ ಗೆಳತಿ ಹೃದಯದ ಕವಾಟು ತೆರೆದಿದೆ ಗೆಳತಿನೀ ನಿಲ್ಲದೆ ಗಾಳಿ ಬೆಳಕಿಲ್ಲ ಮನೆಯಲ್ಲಿ ತಾಂಬೂಲ ಅಗೆಯುತ್ತಾಕಂಗಳಲಿ ಆಸೆಯನೊಸುರುತ್ತಾಕಾಯುತ್ತಿದೆ ಜೀವ, ನಿರೀಕ್ಷೆ ಹುಸಿಯಾಗದಿರಲಿ ಕೈಯೊಳಗಿನ ಪುಸ್ತಕಕಂಗಳ ಮೇಲಿನ ಕನ್ನಡಕಹುಡುಕುತ್ತಿದೆ ನಿನ್ನನ್ನೇ ಎಲ್ಲಾ ಪುಟಗಳ ತಿರುಗಿಸಿಬಾವ ಬರಿದಾಗದಿರಲಿ ಅದೆಷ್ಟು ಹಣತೆಗಳ ಬೆಳಗಬೇಕಿದೆ ಮನದಲ್ಲಿಆರದ ಬೆಳಕಾಗಿ ಒಮ್ಮೆ ಬಾ ಸಂತಸದಿಈ ಹೃದಯದ ಕವಾಟು ತೆರದಿದೆ ನಿನಗಾಗಿ ಪವನ ಕುಮಾರ ಕೆ. ವಿ.ಬಳ್ಳಾರಿಮೊಬೈಲ್ : 9663346949Read More

ಹುಣಸೇ ಚಿಗರು ಮತ್ತು ಇತರ ಕಥೆಗಳು

ಹುಣಸೇ ಚಿಗರು ಮತ್ತು ಇತರ ಕಥೆಗಳು ಲೇಖಕಿ : ದೀಪದ ಮಲ್ಲಿಮುದ್ರಣ : ಕಾವ್ಯಮನೆ ಪ್ರಕಾಶನಬೆಲೆ : 100/- ಲೇಖಕಿ ಪರಿಚಯ : ಕವಿ, ಹೋರಾಟಗಾರ್ತಿ, ಕಲಾವಿದೆ ದೀಪದ ಮಲ್ಲಿ (ದೀಪಾ.ಕೆ ) ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್ ತಾಯಿ, ಸುಲೋಚನಾ. ಇವರ ಮನೆಯ ಹಿರಿಯರು ಊರಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕಾರಣ ದೀಪಾ ಪೂಜೆ-ಪುನಸ್ಕಾರ ಮತ್ತು ಸಂಪ್ರದಾಯಸ್ಥ ವಾತಾವರಣದ ಮಧ್ಯೆಯೇ ಬೆಳೆದರು. ದೀಪಾ ಹುಟ್ಟಿದ್ದು […]Read More

ಗೆಳೆಯನಿರಬೇಕು

ಗೆಳೆಯನಿರಬೇಕು ಕಗ್ಗತ್ತಲ ಕಳೆದು ಬೆಳಕೆರೆವ ರವಿಯಂಥಕದ್ದಿಂಗಳ ಕಳೆವ ಬೆಳದಿಂಗಳ ಶಶಿಯಂಥಸುರಿಮಳೆಯ ಸಹಿಸುವ ಧರಣಿಯಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ನಾವೆ ದಾರಿ ತಪ್ಪದಿರಲೆಂಬ ದಿಕ್ಸೂಚಿಯಂಥದಾರಿ ತಪ್ಪಿದ ನಾವೆಗೆ ದೀಪಸ್ತಂಭದಂಥದಾರಿಯುದ್ದ ಜೊತೆ ಇರುವ ಕಾಲುಗಳಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ನೂರು ಮುಳ್ಳು ನಡುವ ಗುಲಾಬಿಯಂಥದುರ್ವಾಸನೆ ಕಳೆದೊಗೆವ ಧೂಪದಂಥಹೃದಯ ದೇಗುಲದ ದೇವತೆಯಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ಗುರಿ ನೀಡಿ ದಾರಿ ತೋರೋ ಗುರುವಿನಂಥಗದರಿ ಬೆದರಿಸಿ ಹೇಳುವ ತಂದೆಯಂಥಸುಡುಬಿಸಿಲಲಿ ತಂಪೆರೆವ ತಾಯಿಯಂಥಗೆಳೆಯನಿರಬೇಕು ಒಬ್ಬ ಮುತ್ತಿನಂಥ ಬಾಳ ಮರುಭೂಮಿಯ ಓಯಾಸಿಸ್ ನಂಥಕಂಬನಿ ಮಹಾಪೂರ ಸಹಿಸುವ ಸಾಗರದಂಥಮಮತೆಯಿಂದ ಸಂತೈಸುವ ಮಡದಿಯಂಥಗೆಳೆಯನಿರಬೇಕು […]Read More

ಅಂತರಗಂಗೆ

ಅಂತರಗಂಗೆ “ರತ್ನಾಕರ ನೋಡು, ಪಕ್ಕದ ಮನೆಗೆ ಬಾಡಿಗೆಗೆ ಬಂದವರಿಗೆ ರೀತಿ, ರಿವಾಜು, ಮಡಿ, ಮೈಲಿಗೆ ಒಂದೂ ಇಲ್ಲ, ಹೇಸಿಗೆ ಆಗುತ್ತದಪ್ಪ”.“ಅಮ್ಮ, ಅದು ಎಷ್ಟಾದರೂ ಪಕ್ಕದ ಮನೆ, ನಾವೇ ಸ್ವಲ್ಪ ಅಡ್ಜೆಸ್ಟ ಮಾಡ್ಕೊಬೇಕು. ನಿನ್ನಿಷ್ಟದಂತೆ ಆಮರನಾಥ್ ಯಾತ್ರೆಗೆ ಟಿಕೆಟ್ ಬುಕ್ ಮಾಡಿದ್ದೀನಿ” ರತ್ನಾಕರ, ಹೆಂಡತಿ ಸುಜಾತ ಮತ್ತು 74 ವರ್ಷದ ತಾಯಿ ವಿಶಾಲಮ್ಮ ಆಮರನಾಥ್ ಯಾತ್ರೆಗೆ ಹೊರಟರು, ಹೋಟೆಲಿನ ಊಟ ಮಾಡದ ವಿಶಾಲಮ್ಮನಿಗಾಗಿ ಚಪಾತಿ, ಶೇಂಗ ಚಟ್ನಿ ಕಟ್ಟಿಕೊಂಡರು. ಬೆಂಗಳೂರಿನಿಂದ ಕಾಶ್ಮೀರದ ಪೆಹಲ್ಗಾಂವರೆಗಿನ ಯಾತ್ರೆ ಯಾವ ತೊಂದರೆಯೂ ಇಲ್ಲದೆ […]Read More

ಜನನಿ

ಜನನಿ ನವಮಾಸ ಹೊತ್ತು ನೋವನುಂಡವಳುಈ ದೇಹಕ್ಕೆ ಮಾಂಸ ಮಜ್ಜೆ ನೀಡಿದವಳುತನಗಿಲ್ಲದಿರೂ ನನಗೆ ಕೊಟ್ಟ ನಿಸ್ವಾರ್ಥಿಯಿವಳು ರಾತ್ರಿ ಹಗಲೂ ನಿದ್ರೆಗೆಟ್ಟು ಬೆಳೆಸಿದವಳುಲಾಲಿಯ ಜೋಗುಳವ ಹಾಡಿದವಳುಬಗೆ ಬಗೆಯ ಕಥೆಗಳನು ತಿಳಿಸಿದವಳು ಅಕ್ಕರದ ಪ್ರೀತಿಯನು ನನ್ನಲ್ಲಿ ತುಂಬಿಹಳುಶಾಸ್ತ್ರ ಸಂಪ್ರದಾಯಗಳ ಕಲಿಸಿದವಳುಹಳೆಯ ತಲೆಮಾರಿಗೆ ಕೊಂಡಿಯಿವಳು ಪ್ರೀತಿಯ ಧಾರೆಯ ಮೊಗೆದು ಹರಿಸಿದವಳುನನ್ನೆಲ್ಲ ಬೇಕು ಬೇಡಗಳನು ಅರಿತವಳುಮನಬಿಚ್ಚಿ ಮಾತಾಡಲು ಜೊತೆಯಿರುವಳು ತಾಯಲ್ಲವೇ ನಿಜ ಪ್ರೀತಿ ಗೆಳೆಯಳುಅಮ್ಮ ಅಮ್ಮ ಅಮ್ಮ ನನ್ನಮ್ಮ ಸಿ. ಎನ್. ಮಹೇಶ್Read More