ನವದುರ್ಗೆಯರ ನವರಾತ್ರಿ ವೈಭವ ಒಂದೊಮ್ಮೆ, ಮಹಿಷಾಸುರ ಎನ್ನುವ ಅಸುರ ದೇವತೆಗಳನ್ನೆಲ್ಲಾ ಪೀಡಿಸುತ್ತಿದ್ದು, ಆ ದೇವತೆಗಳೆಲ್ಲಾ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಬೇಡಿದರು. ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನೆಲ್ಲಾ ಪಾರ್ವತಿಗೆ ಧಾರೆಯೆರೆದು, ದೇವಿಯು ಹತ್ತು ಕೈಗಳನ್ನು ಹೊಂದಿ ದುರ್ಗೆಯ ಅವತಾರವೆತ್ತಿದಳು. ಶಿವನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು, ವಾಯುವು ಬಾಣಗಳನ್ನು, ಪರ್ವತರಾಜನು ವಾಹನವಾದ ಸಿಂಹವನ್ನು ದುರ್ಗೆಗೆ ನೀಡಿದರು. ಈ ಎಲ್ಲಾ ಆಯುಧ ಹಾಗೂ ವಾಹನಗಳಿಂದ ಸನ್ನದ್ಧಳಾದ ದುರ್ಗೆಯು ಮಹಿಷಾಸುರನ ಸೈನ್ಯದ ಮೇಲೆ ಆಕ್ರಮಣ […]
ವಚನ ಸಾಹಿತ್ಯ ಮತ್ತು ಆರೋಗ್ಯ ವಿವಿಧತೆಯಲ್ಲಿ ಏಕತೆ ಭಾರತದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು. ಇಲ್ಲಿ ಹಲವು ಭಾಷೆ, ಧರ್ಮ, ಸಂಸ್ಕೃತಿಗಳು ಚಾಲ್ತಿಯಲ್ಲಿವೆ. ಇವೆಲ್ಲವುಗಳಿಂದಾಗಿ ಭಾರತ ಇಂದು ಜಗತ್ತಿನಲ್ಲಿ ಒಂದು ವೈಶಿಷ್ಟ್ಯಪೂರ್ಣ ದೇಶ ಎನಿಸಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು. ಇದು ಭಾರತದ ದ್ವಿತೀಯ ಪ್ರಾಚೀನತಮ ಭಾಷೆಯಾಗಿದ್ದು ಇದಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ಲಭಿಸಿದೆ. ಇದಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಸ್ಪಷ್ಟವಾದ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಂಪೂರ್ಣ ಭಾರತದಲ್ಲಿಯೇ ಅತಿ ಹೆಚ್ಚು ಸಮೃದ್ಧವಾಗಿದ್ದು ಕನ್ನಡ ಸಾಹಿತ್ಯಕ್ಕೆ […]Read More
ತಿಲಕರ ಏಕತಾ ಗಣೇಶ ನೀಲವ್ಯೋಮ ವಿಶಾಲ ಪಥದಲಿಶ್ರಾವಣ ನೀರದ ನೀಲ ರಥದಲಿಗೌರಿಗಣೇಶರು ಬರುವರದೊ!ಭಾದ್ರಪದಾದಿಯ ಶಾದ್ವಲ ವೇದಿಯಶ್ಯಾಮಲ ಪೃಥಿವಿಯ ಕೋಮಲ ವಕ್ಷಕೆಶ್ರೀ ಕೈಲಾಸವ ತರುವರದೊ!ಕುವೆಂಪು ವರುಷ ವರುಷದಂತೆ ಮತ್ತೊಮ್ಮೆ ಗಣೇಶ ಹಬ್ಬ ಬಂದಿದೆ. ಮನೆ ಮನೆ, ಬೀದಿ ಬೀದಿಗಳು ಹಬ್ಬದ ಆಚರಣೆಗೆ ತಯಾರಾಗಿ ನಿಂತಿದೆ. ಎಂದಿನಂತೆ ಸರಕಾರದವರು, ಪ್ರಕೃತಿ ಪರಿಸರ ಸಂಘಗಳು, ಎಕೋ ಫ್ರೆಂಡ್ಲಿ ಗಣೇಶನನ್ನೇ ಎಲ್ಲರು ಕೂರಿಸಬೇಕೆಂದು ಪ್ರತಿ ವರುಷದಂತೆ ಸಾರಿ ಆಗಿದೆ. ಬೀದಿಯ ಹುಡುಗರು ಹೋದ ವರುಷದ ದೂಳು ಕೆಡವಿದ ಬ್ಯಾನರ್ ಇಸ್ತ್ರಿ ಮಾಡಿ ಹಾಕಬೇಕಾ […]Read More
ಪಾವನಾ ಬೈಲೂರು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆಯು ಸುಪ್ತವಾಗಿ ಅಡಗಿರುತ್ತದೆ. ಕೆಲವರು ಅವುಗಳನ್ನು ಬಾಹ್ಯ ಜಗತ್ತಿಗೆ ತೋರ್ಪಡಿಸಿದರೆ ಇನ್ನೊಂದಷ್ಟು ಮಂದಿ ಬಾಹ್ಯ ಜಗತ್ತಿಗೆ ತಮ್ಮ ಕಲೆಯನ್ನು ಪರಿಚಯಿಸುತ್ತಾರೆ. ಕಲೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ಒಲಿಯುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಮತ್ತು ಬದ್ಧತೆ ಅತೀ ಮುಖ್ಯ. ಕೆಲವೇ ಕೆಲವರಿಗೆ ಕೆಲವೊಂದು ಕಲೆಗಳು ಒಲಿಯುತ್ತವೆ. ಅವುಗಳ ಪೈಕಿ ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ ಪ್ರಮುಖವಾದವುಗಳು. ಚಿತ್ರಕಲೆಗೆ ಇಂದು ಹೆಚ್ಚಿನ ಅವಕಾಶಗಳಿದ್ದು, ಅವುಗಳ ಪೈಕಿ ತೈಲ ವರ್ಣ ಚಿತ್ರ, ಪ್ರಕೃತಿ […]Read More
2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್ಗಢದ ‘ಕಾರ್ಟೂನ್ ವಾಚ್’ ಮಾಸಪತ್ರಿಕೆಯ ಸಹಯೋಗದಲ್ಲಿ ಈ ‘ವ್ಯಂಗ್ಯಚಿತ್ರ ಉತ್ಸವ-2022’ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು ‘ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. […]Read More
ಸಿರಿಕಲಾಪುರಸ್ಕಾರ ಮತ್ತು ಸಿರಿಕಲಾಪೋಷಕ ಪುರಸ್ಕಾರ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮೆ, ಕರ್ನಾಟಕ ಬ್ಯಾಂಕ್ ಹಾಗೂ ಕಲಾಭಿಮಾನಿಗಳ ಸಹಕಾರದೊಂದಿಗೆ 2021 ಡಿಸೆಂಬರ್ ತಿಂಗಳ 4 ಮತ್ತು 5 ಬೆಂಗಳೂರಿನಲ್ಲಿ 2 ದಿನಗಳ ಯಕ್ಷೋತ್ಸವ ಕಾರ್ಯಕ್ರಮವನ್ನು ಸಿರಿಕಲಾ ಕನ್ನಡ ಸಂಸ್ಕೃತಿ ಹಮ್ಮಿಕೊಂಡಿದೆ. ಹವ್ಯಾಸಿ ಮಹಿಳಾ ಕಲಾವಿದರ ಒತ್ತಾಸೆಯ ಮೇರೆಗೆ ಯಕ್ಷಗಾನ ಯೋಗಕ್ಷೇಮ ಅಭಿಯಾನದ ರೂವಾರಿ ದಿವಂಗತ ವಿ ಆರ್ ಹೆಗಡೆ (ಹೆಗಡೆಮನೆ) ಯವರ ಪರಿಕಲ್ಪನೆಯಲ್ಲಿ 2010 […]Read More
ತುಮಕೂರು ಜಿಲ್ಲೆ ಲಲಿತ ಕಲೆಗಳ ತವರೂರು ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ನಮ್ಮ ಕಲಾ ಸಾಧಕರಿಗೆ ಸಲ್ಲುತ್ತದೆ. ಸಾಂಪ್ರದಾಯಿಕ ರೂಪದಲ್ಲಿದ್ದ ಚಿತ್ರಕಲೆಯನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಿಸಿ ಕಲಾ ಶಿಕ್ಷಣ ನೀಡಿ ಸಾವಿರಾರುಕಲಾವಿದರು, ಶಿಕ್ಷಕರನ್ನು ನಿರ್ಮಿಸಿದ ಕೀರ್ತಿ ಇಂದು ಕಲಾಗುರು “ಕಿಶೋರ್ ಕುಮಾರ್” ರವರಿಗೆ ಸಲ್ಲುತ್ತದೆ. ಮೂಲತಃ ಗುಲಬರ್ಗಾ ಜಿಲ್ಲೆ ಷಹಪುರದ ಬಾವೈಕ್ಯ ಗ್ರಾಮದ “ಸೂರಯ್ಯ ಹಿರೇಮಠ ಹಾಗು ಸುಶೀಲಮ್ಮ” ನವರ ಮಗನಾಗಿ ಹುಟ್ಟಿದ “ಕಿಶೋರ್ ಕುಮಾರ್” ಗುಲಬರ್ಗಾದ ‘ಐಡಿಯಲ್ ಸ್ಕೂಲ್ ಆಪ್ ಆರ್ಟ್ನ’ […]Read More
ಇಡೀ ಜಗತ್ತಿನಲ್ಲೇ ನಮ್ಮ ಭಾರತ ದೇಶವು ಸಂಸ್ಕೃತಿಗೆ ಹೆಸರುವಾಸಿಯಾದದ್ದು. ನಮ್ಮ ಭಾರತದಲ್ಲಿ ಆಚರಿಸುವಸ್ಟು ಹಬ್ಬಗಳು ಇನ್ನೆಲ್ಲೂ ಆಚರಿಸಲ್ಪಡುವುದಿಲ್ಲ. ತಲೆಮಾರುಗಳಿಂದ ಸಂಪ್ರದಾಯಗಳು ನಮ್ಮ ಹಬ್ಬಗಳನ್ನು ಮೆರಗು ತರಿಸುತ್ತ ಬಂದಿವೆ. ಹಬ್ಬಗಳು ಎಂದರೆ ಎಲ್ಲೆಡೆ ಸಂಭ್ರಮ, ತೋರಣ, ಹೊಸ ಉಡುಗೆಗಳು, ಪೂಜೆ, ಜಾತ್ರೆ, ಅಬ್ಬಾ ಆಚರಣೆಗೆ ಮಿತಿಯೇ ಇಲ್ಲ. ನಮ್ಮ ಸಂಸ್ಕೃತಿಯ ನಾಡಿನ ಎಲ್ಲೆಡೆ ಆಚರಿಸುವ ದಸರಾ ಹಬ್ಬಗಳಲ್ಲಿ ಇನ್ನಷ್ಟು ವಿಜೃಂಬಿಸುವುದು. ನಮ್ಮ ಕರ್ನಾಟಕದಲ್ಲಿ ಆಚರಿಸುವ ದಸರಾ ಹಬ್ಬದ ಆಚರಣೆ ಎಲರಿಗೂ ತಿಳಿದುದ್ದೆ. ದೇಶದ ಪ್ರಮುಖ ನಗರಗಳಲ್ಲಿನ ದಸರಾ ಆಚರಣೆಯ […]Read More
ಧಾರವಾಡದಲ್ಲಿ ದೀಪಾವಳಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಇಲ್ಲಿನ ವಿಶೇಷತೆ ಎಂದರೆ ಚಿತ್ರರಚನಾ ಆಚರಣೆ. ಈ ಚಿತ್ರಸಂಪ್ರದಾಯವು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿನ ಜನಸಮುದಾಯವು ಸಗಣಿಯಲ್ಲಿ ಬೊಂಬೆಗಳ ಹಾಗೆ ವಿನ್ಯಾಸ ಮಾಡಿ ಪಾಂಡವರ ಆಕಾರಗಳನ್ನು ಮನೆಯ ಅಂಗಳದಲ್ಲಿ ಸ್ಥಾಪಿಸುತ್ತಾರೆ. “ಪಾಂಡವರು ನರಕ ಚತುರ್ಥಿಯಂದು ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ಅವರು ನಮ್ಮ ಮನೆಗೂ ಬರುತ್ತಾರೆ” ಎಂಬ ನಂಬಿಕೆ ಇವರದು. ಅವರು ಸಿಧ್ಧಪಡಿಸಿದ ಐದು ಪಾಂಡವರು ಮತ್ತು ದ್ರೌಪದಿಯ ಗೊಂಬೆಗಳನ್ನು […]Read More
ಗಂಜೀಫಾ ಚಿತ್ರಕಲೆಯು ಸಂಪ್ರದಾಯಿಕ ಚಿತ್ರಕಲಾ ಪ್ರಪಂಚದ ಒಂದು ವಿಶಿಷ್ಟವಾದ ಕಲಾ ಕೊಡುಗೆ. ‘ಗಂಜೀಫಾ ಕಲೆಯು ಮೊಘಲರ ಕಾಲದಲ್ಲಿ ಇರಾನ್ ದೇಶದಿಂದ ನಮ್ಮ ಭಾರತಕ್ಕೆ ಬಂದ ಕಲೆ. ಹಾಗೆ ಬಂದ ಪರ್ಷಿಯನ್ನರ ಈ ಕಲೆ ಈಗ ಭಾರತೀಯ ಕಲೆಯೇ ಆಗಿಬಿಟ್ಟಿದೆ. ಮೈಸೂರು ಶೈಲಿಯ ಗಂಜೀಫಾ ಕಲೆ, ಆಟಗಳ ಶ್ರೇಯಸ್ಸು, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಸೇರಬೇಕು. ಮುಮ್ಮಡಿಯವರನ್ನು ಒಳಗೊಂಡಂತೆ ಮೈಸೂರಿನ ಅರಸು ಮನೆತನದವರು ಸಾಹಿತ್ಯ, ಚಿತ್ರಕಲೆ, ನೃತ್ಯ, ಕ್ರೀಡೆ ಎಲ್ಲವನ್ನೂ ಸೇರಿದಂತೆ ಅನೇಕ ಕಲಾಪ್ರಕಾರಗಳ ಉನ್ನತಿಗೆ ಕಾರಣರಾಗಿದ್ದಾರೆ. ಆಗ ಇದನ್ನು […]Read More