ರೂಪಕದ ಸೊಗಸಿಂಗೆ ಕವಿ ಕುಮಾರವ್ಯಾಸಉತ್ಪ್ರೇಕ್ಷೆ ಷಡಕ್ಷರದೇವನಿಗೆ ಸಿದ್ಧಿಹಂಪ ಕವಿಯೂಳು ಕಾಣು ಅರ್ಥಾಂತರನ್ಯಾಸಉಪಮೆ ಲಕ್ಮೀಶನೊಳು- || ಪ್ರತ್ಯಗಾತ್ಮ || ಜುಟ್ಟು ಹಿಡಿದೆಳದಾಡಿ ತಂದೆ ಅಣ್ಣನ ಬಡಿಯೆಪುಟ್ಟ ಮಗು ಹೆದರುವುದು ಕಿಟ್ಟೆಂದು ಚೀರಿಗಟ್ಟಿತನವವಕಿಲ್ಲ ರೌದ್ರತೆಗೆ ಹೆದರುವುವುಪುಟ್ಟ ಮಕ್ಕಳೆ ಹಾಗೆ- || ಪ್ರತ್ಯಗಾತ್ಮ || ನೂರು ಜನ ಮೌರ್ಯರಲಿ ಚಂದ್ರಗುಪ್ತನು ಉಳಿದಕ್ರೂರ ದಾಯಾದಿಗಳ ಕೋಟಲೆಗೆ ಸಿಲುಕಿಹಾರುವನ ದಯೆಯಿಂದ ರಾಜ್ಯ ಕೋಶವ ಪಡೆದಯಾರ ನೆರವಿಗೆ ಯಾರೊ !- || ಪ್ರತ್ಯಗಾತ್ಮ || ನೂರು ಕೌರವರೊಳಗೆ ಅದಟ ದುರ್ಯೋಧನನುನೂರು ಗಾಂಧಾರರೊಳು ಶಕುನಿ ಅತಿ ಚತುರನೂರು […]Read More
ಹಿಂದಿನ ಸಂಚಿಕೆಯಿಂದ… ಸಾಮ್ರಾಜ್ಯ ವ್ಯಾಪಿಯಾದ ಈ ವಿಶೃಂಖಲತೆಯ ನಡುವೆ ರಾಜ್ಯಭಾರ ಚೆನ್ನಾಗಿ ನಡೆಯುತ್ತಿತ್ತೆಂದು ಹೇಳಲಾಗುವುದಿಲ್ಲ. ಭೂಕಂಪದಿಂದ ಮನೆಯೇ ಬಿದ್ದು ಹೋಗುತ್ತಿರುವಾಗ, ಆ ಮನೆಯ ಒಂದು ಮೂಲೆಯಲ್ಲಿ ಸಣ್ಣದಾಗಿ ಉರಿಯುತ್ತಿರುವ ಬೆಂಕಿಯನ್ನು ಯಾರೂ ಗಮನಿಸುವುದಿಲ್ಲ. ಹಾಗೆಯೇ ದೇಶದ ಯಾವುದೋ ಮೂಲೆಯಲ್ಲಿರುವ ಒಂದು ಸಣ್ಣ ‘ವಿಟಂಕ’ ರಾಜ್ಯದ ಕಥೆಯನ್ನು ಪಾಟಲಿಪುತ್ರದ ಎಲ್ಲರೂ ಮರತೇ ಬಿಟ್ಟರು. ಇಪ್ಪತ್ತೈದು ವರ್ಷಗಳ ನಡುವೆ ಯಾರೂ ಅದನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ರಾಜ್ಯದ ಹಿಂದಿನ ಗ್ರಂಥಪಾಲ ಮರಣಾನಂತರ ಅವನ ಜಾಗಕ್ಕೆ ಹೊಸಬನ ನೇಮಕವಾಯಿತು. ಹೊಸಬನಾದ ಕಾರಣ […]Read More
ಪ್ರಸ್ತುತ ರಂಗಭೂಮಿಯಲ್ಲಿ ಚಾಲನೆಯಲ್ಲಿರುವ ಕತೆಗಾರ, ನಾಟಕ ರಚನೆಕಾರ, ನಟ ಹಾಗೂ ನಿರ್ದೇಶಕ ಎಸ್ ಎನ್ ಸೇತೂರಾಂ ಅವರು ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಇವರ ನಾಟಕಗಳ ಓಘವೇ ಬೇರೆ ರೀತಿಯದು. ಇವರ ನಾಟಕಗಳಿಗೆ ಇವರದ್ದೇ ಆದ ಪ್ರೇಕ್ಷಕ ವರ್ಗವಿದೆ. ಸೇತೂರಾಂ ಅವರ ನಾಟಕಗಳಲ್ಲಿ ಮಾತಿರುತ್ತೆ, ಮಾತಿನ ಚಾಟಿಯಷ್ಟೇ ಪ್ರಾಧಾನ್ಯತೆಯಿರುವ ಮೌನವಿರುತ್ತೆ! ಆಗ ಮೌನವೇ ಹೆಚ್ಚು ವಿಷಯಗಳನ್ನು ಸ್ಪುರಿಸುತ್ತೆ. ಎಲ್ಲಾ ದೃಶ್ಯದಲ್ಲಿನ ಡೈಲಾಗ್ಗಳು ನಾಟಕದಿಂದ ಹೊರ ಬಂದ ನಂತರವೂ ಮನದ ಮೂಲೆಯಲ್ಲೇ ಕೂತು ರಿಂಗಣಿಸುತ್ತಲೇ ಇರುತ್ತೆ. ಯಾವುದೇ ರಂಗಸಜ್ಜಿಕೆಯ […]Read More
ಅದೊಂದು ಮಲೆನಾಡಿನ ಸಣ್ಣ ಊರು. ಊರಿನ ಪಕ್ಕವೇ ಒಂದು ನದಿ ಹರಿಯುತ್ತಿತು. ಉತ್ತಿ ಬಿತ್ತಿ ಅಲ್ಲಿಯ ಜನ ಬಂಗಾರದಂಥಹ ಬೆಳೆ ತೆಗೆಯಬಹುದಿತ್ತು. ಆದರೆ ಬರುಬರುತ್ತಾ ಆ ಊರಿನ ಜನರೆಲ್ಲರೂ ಸೋಮಾರಿಗಳಾಗತೊಡಗಿದ್ದರು. ಎಷ್ಟರ ಮಟ್ಟಿಗೆ ಸೋಮಾರಿಗಳಾಗಿದ್ದರೆಂದರೆ ಬರೀ ಕುಳಿತು ಹರಟೆ ಹೊಡೆಯುವುದು, ಇಲ್ಲಾ ಮಲಗುವುದು, ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಸರಿಯಾಗಿ ನೀರು ಹಾಯಿಸದೆ ಹೊಲಗಳೆಲ್ಲಾ ಒಣಗತೊಡಗಿದ್ದವು. ಊರನ್ನು ಸ್ವಚ್ಛ ಮಾಡದೆ ಇದ್ದುದ್ದರಿಂದ ಅಲ್ಲಲ್ಲಿ ಕಸದ ರಾಶಿ ಬಿದ್ದು ಸಾಂಕ್ರಾಮಿಕ ರೋಗಗಳು ನಿಧಾನವಾಗಿ ಹರಡತೊಡಗಿದ್ದವು. ಹಂದಿಗಳ ಹಾವಳಿ ಜಾಸ್ತಿಯಾಗಿತ್ತು. […]Read More
–ನೆಪ್ಚೂನ್– ನೆಪ್ಚೂನ್ ಸೌರಮಂಡಲದ ಎಂಟನೇ ಮತ್ತು ಸೂರ್ಯನಿಂದ ಅತೀ ಹೆಚ್ಚು ದೂರವಿರುವ ಗ್ರಹ. ಇದು ವ್ಯಾಸದಲ್ಲಿ 4 ನೆಯ ಮತ್ತು ದ್ರವ್ಯರಾಶಿಯಲ್ಲಿ 7 ನೇ ಅತೀ ದೊಡ್ಡ ಗ್ರಹವಾಗಿದೆ. ಈ ಗ್ರಹಕ್ಕೆ ರೋಮನ್ನರ ಸಾಗರ ದೇವತೆಯ ಹೆಸರನ್ನು ಇಡಲಾಗಿದೆ. ಸೆಪ್ಟೆಂಬರ್ 23 1846 ರಂದು ಕಂಡು ಹಿಡಿಯಲಾದ ನೆಪ್ಚೂನ್ ನೇರ ವೀಕ್ಷಣೆಯಲ್ಲದೆ ಗಣಿತದ ಲೆಕ್ಕಾಚಾರಗಳಿಂದ ಕಂಡು ಹಿಡಿಯಲಾದ ಮೊದಲ ಗ್ರಹ. ಯುರೇನಸ್ ಕಕ್ಷೆಯಲ್ಲಿನ ಸೂಕ್ಷ್ಮ ಬದಲಾವಣೆಗಳಿಂದ ಖಗೋಳ ಶಾಸ್ತ್ರಜ್ಞರು ನೆಪ್ಚೂನ್ ನ ಅಸ್ತಿತ್ವವನ್ನು ತರ್ಕಿಸಿದರು. ಆಗಸ್ಟ್ 25, […]Read More
ಕಳೆದುಹೋದ ಬಾಲ್ಯವನ್ನು ನೆನೆಸಿಕೊಂಡರೆ ಮತ್ತೆ ಮರುಕಳಿಸಬಾರದೇ ಎಂಬ ಆಸೆ ಎಲ್ಲರಲ್ಲೂ ಉಂಟಾಗುವುದು ಸಹಜ ಅಲ್ಲವೇ ? ಇಲ್ಲಿ ನಾನು ಹೇಳ ಹೊರಟಿರುವುದು ನನ್ನಮ್ಮನ ಬಾಲ್ಯ… ದೊಡ್ಡದಾದ ತುಂಬು ಕುಟುಂಬದಲ್ಲಿ ಬೆಳೆದ ನನ್ನ ತಾಯಿಯ ವಿದ್ಯಾಭ್ಯಾಸ ನೆಡೆದಿದ್ದು ನಮ್ಮ ಹಳ್ಳಿಯಲ್ಲೇ. ಅವಳು ತನ್ನ ಬಾಲ್ಯವನ್ನು ನೆನಿಸಿಕೊಳ್ಳುವಾಗ ಬಹಳಷ್ಟು ಬಾರಿ ತಾನು ಮಾಡಿದ ನಾಟಕದ ಬಗ್ಗೆ ಹೇಳುತ್ತಿರುತ್ತಾಳೆ. ಹಳ್ಳಿಗಳಲ್ಲಿ ನಾಟಕವೆಂದರೆ ಜನರು ತಮ್ಮ ಪರಿವಾರದವರೊಡನೆ ಗಾಡಿಗಳಲ್ಲಿ ಉತ್ಸಹಾದಿಂದ ಬರುತ್ತಿದ್ದ ಕಾಲ. ಒಂದು ನಾಟಕದಲ್ಲಿ ನನ್ನಮ್ಮ ಕೃಷ್ಣನ ಪಾತ್ರದಾರಿ ಹಾಗು ಅವಳ […]Read More
ಕಿಸ್ಮಾಯೋ ಪ್ರಯಾಣ – 2 ಮಾನವನ ದೈನಂದಿನ ಬದುಕೊಂದು ನಿರಂತರ ಅನಿಶ್ಚಿತತೆಯ ನಿಕ್ಷೇಪ! ಹೌದಲ್ಲವೇ? ನಾವು ಏನೆಲ್ಲ ಎಷ್ಟೆಲ್ಲ ಯೋಚಿಸಿ, ತಿಂಗಳಿಗೂ ಮಿಕ್ಕಿದ ಯೋಜನೆ ರೂಪಿಸಿಕೊಂಡು ಖುಷಿಯಿಂದ ಸ್ನೇಹಿತನ ಮನೆಯತ್ತ ಹೊರಟಿದ್ದು; ಆದರೆ ಆದದ್ದು ಏನು ಮತ್ತು ಎಂಥದ್ದು! ಕಿಸ್ಮಾಯೋ ಎಂಬ ಅಂದಿನ ಆ ಕೊಂಪೆ, ಒಂದು ಅರ್ಥದಲ್ಲಿ ಭಗವಂತನೇ ತೊರೆದ (ಗಾಡ್ ಫರ್ಸೇಕನ್) ಊರು. ವಾಸ್ತವದಲ್ಲಿ ವೈದ್ಯಕೀಯ ತುರ್ತು ಸ್ಥಿತಿಯ ರೋಗಿಗಳಿಗೆ, ಅಂದಿನ ಇಡೀ ಆ ದೇಶವೇ ಉತ್ತಮವಾಗಿರಲಿಲ್ಲ ಎಂದರದು ಉತ್ಪ್ರೇಕ್ಷೆಯಾಗಿರಲಿಲ್ಲ. ಹಾಗಂತ ಇನ್ನೆಲ್ಲಿಗೆ ಹೋಗುವುದು? […]Read More
ವಿಳಾಸ ಪರ್ವತದಲ್ಲಿಹುಟ್ಟಿರಭಸದಿಂದಕಡಲೆಡೆಗೆನುಗ್ಗುವ ನದಿಎಂದೂಯಾರನ್ನೂಕಡಲವಿಳಾಸ ಕೇಳಿಲ್ಲ!! ಪಯಣ ನನಗು ಆಕಾಶದೆತ್ತರಕ್ಕೆಹಾರುವ ಹಂಬಲಜೋಡಿ ರೆಕ್ಕೆಗಳಿಲ್ಲವಲ್ಲಎಂಬ ತಳಮಳ!ಒಗ್ಗಟ್ಟಿನಲ್ಲಿ ಬಲವಿದೆಎಂಬ ಸೂತ್ರಧಾರಣಅದೆಲ್ಲಿ ಸಾಗಿರಬಹುದುಈ ಹಕ್ಕಿಗಳ ಪಯಣ!! ದಕ್ಕಿದೆ ಭೂ ತಾಯಿಯೇ ನಿನಗಿದೋದೀರ್ಘ ದಂಡ ನಮನನಿನ್ನ ಮಡಿಲಮಗುವಾಗಿ ಜನ್ಮ ಸಿಕ್ಕಿದೆ!ಸಕಲ ಸೌಭಾಗ್ಯವೂನನಗಿಲ್ಲಿ ದಕ್ಕಿದೆಸ್ವಾರ್ಥಕ್ಕಾಗಿ ನಿನ್ನದೋಚುವವರ ಕಂಡುನನ್ನ ರಕ್ತ ಉಕ್ಕಿದೆ! ನಿಧಾನ ಗತಿ ಜೀವನವೆಂಬರೇಸಲ್ಲಿ ಮಾತ್ರವೇಗವಾಗಿಓಡುವವನುಸೋಲುತ್ತಾನೆ!ನಿಧಾನಗತಿಅನುಸರಿಸಿದವನುಬೀಗುತ್ತಾನೆ!! ಡಾII ಪರಮೇಶ್ವರಪ್ಪ ಕುದರಿಚಿತ್ರದುರ್ಗRead More
ದಂಶಕಗಳ ಲೋಕ ದಂಶಕಗಳು, ಯುಗ್ಮದಂತಿಗಳು, Rodents, Gnawing animals ಎಂದೆಲ್ಲಾ ಕರೆವ ಈ ಗಣದ ಪ್ರಾಣಿಗಳು ಸಸ್ತನಿಗಳಲ್ಲೇ ದೊಡ್ಡ ಸಂಖ್ಯೆಯ ಗುಂಪನ್ನು ಹೊಂದಿವೆ. ಈ ಗಣದಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಬಲ್ಲ ಬೀವರ್ (Beaver) ಗಳಿಂದ ಹಿಡಿದು ಮನೆಯಲ್ಲಿರುವ ವಸ್ತುಗಳನ್ನು ಕಡಿದು ಅಪಾರ ಹಾನಿ ಮಾಡಬಲ್ಲ ಇಲಿ ಹೆಗ್ಗಣಗಳು ಸೇರಿವೆ. ಈ ದಂಶಕಗಳ ದೇಹರಚನೆಯೇ ಒಂದು ರೀತಿಯ ವಿಶೇಷ, ಈ ಗುಂಪಿನ ಜೀವಿಗಳಿಗೆ ಮೇಲ್ದವಡೆ ಮತ್ತು ಕೆಳ ದವಡೆಗಳಲ್ಲಿ ಉಳಿಯಂತಿರುವ ಜೋಡಿ ಬಾಚಿ ಹಲ್ಲುಗಳಿದ್ದು ಈ ಹಲ್ಲುಗಳ […]Read More
ಪರಿಚ್ಛೇದ-3 –ಮಗಧದ ದೂತ– ಮಹಾಕವಿ ಕಾಳಿದಾಸನು ‘ರಘುವಿನ ದಿಗ್ವಿಜಯ’ದ ನೆಪದಲ್ಲಿ ಅಮಿತ ವಿಕ್ರಮ ಮಗಧೇಶ್ವರನ ವಿಜಯಗಾಥೆಯನ್ನು ವರ್ಣಿಸಿರುವನಲ್ಲವೆ? ಅದು ಸಮುದ್ರಗುಪ್ತನನ್ನು ಕುರಿತದ್ದು. ಒಂದು ದೃಷ್ಟಿಯಲ್ಲಿ ಸಮುದ್ರಗುಪ್ತನುಅಲೆಗ್ಜಾಂಡರನಿಗಿಂತಲೂ ಅತಿಶಯನಾದವನೆನ್ನಬಹುದು. ಅಲೆಗ್ಜಾಂಡರನ ಸಾಮ್ರಾಜ್ಯವು ಅವನ ಮರಣಾನಂತರವೇ ಛಿನ್ನಭಿನ್ನವಾಗಿ ಒಡೆದು ಹೋಯಿತು. ಆದರೆ ಸಮುದ್ರಗುಪ್ತನು ತನ್ನ ಸಮುದ್ರಮೇಖಲಾವಲಯಿತವಾದ ವಿಶಾಲಸಾಮ್ರಾಜ್ಯವನ್ನು ತನ್ನ ನಂತರ ಮೂರು ತಲೆಮಾರುಗಳವರೆಗೂ ನಿರುಪದ್ರವದಿಂದ ಅನುಭವಿಸುವಷ್ಟು ಸುಭದ್ರಗೊಳಿಸಿದ್ದನು. ಆದ್ದರಿಂದಲೇ ನೂರು ವರ್ಷಕ್ಕೆ ಮುಂಚೆ ಆ ಬಂಧನ ಸಡಿಲವಾಗಲಿಲ್ಲ. ಗುಪ್ತಸಾಮ್ರಾಜ್ಯದ ಸುಭದ್ರವಾದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡುದು – ಸಮುದ್ರಗುಪ್ತನ ಮೊಮ್ಮಗನಾದ ಕುಮಾರಗುಪ್ತನ […]Read More