ಪರಾಭವ ಭಾವನಾ – 21 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಅಪ್ರಮೇಯನ ಪ್ರವಚನದಿಂದ ಕಳ್ಳ ಶಿಷ್ಯನಿಗೆ ಮನಸಿನ್ನಲ್ಲಿ ದ್ವಂದ ಏರ್ಪಟ್ಟು ಏನಾದರೂ ಸರಿ ನಾಯಕ್ ಕಡೆಯವರಿಂದ ಅಪ್ಪು ಸ್ವಾಮಿಯನ್ನು ಉಳಿಸಬೇಕೆಂದು ತೀರ್ಮಾನಿಸಿದ. ಮತ್ತೊಬ್ಬ ಶಿಷ್ಯನಿಗೆ ಸಹ ಜ್ಞಾನೋದಯವಾಗಿ ಇನ್ನು ಮುಂದೆ ಅವರ ಹತ್ತಿರ ಇರುವ ವಿಗ್ರಹವನ್ನು ಕದಿಯಲು ಯೋಚಿಸುವುದಿಲ್ಲವೆಂದು ತೀರ್ಮಾನಿಸಿದ. ಆದರೆ ನಾಯಕ್ ಗೆ ಈ ಯೋಜನೆಯಿಂದ ವಾಪಸಾಗಲು ಆಗುವುದಿಲ್ಲ ಯಾಕೆಂದರೆ ವಾಪಸ್ಸಾದರೆ ತಮ್ಮ ತಲೆಗಳು ಉಳಿಯುವುದಿಲ್ಲವೆಂದು ಗೊತ್ತು. ಮುಂದೆ… –ಇಪ್ಪತ್ತೊಂದು– “ದೆಹಲಿ ಇನ್ನು ನಾಲ್ಕು ಕಿಮೀ” ಎಂದ ಡ್ರೈವರ್‌ ಶ್ಯಾಮ್‌, “ಸ್ವಾಮೀ, ನೀವು ಎಲ್ಲಿಗೆ ಹೋಗಬೇಕು” […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೧

–-೧೧– ಒಗಾದನ್ ಯುದ್ಧ! – 2 ಆಗಾಗ ಹಾರ್ಗೀಸಾ ನಗರದ ಆಕಾಶದ ಮೇಲೆ ಜರುಗುತ್ತಿದ್ದ ವಾಯುದಳ ವಿಮಾನಗಳ ಗಸ್ತು ಹಾರಾಟ, ದಿನ ಕಳೆಯುತ್ತಾ ಪ್ರತಿ ದಿನವೂ ನಡೆಯುವ ಪ್ರಕ್ರಿಯೆಯಾಗಿ ಪರಿಣಮಿಸಿತ್ತು. ಆದ್ದರಿಂದ ಆರಂಭದ ದಿನಗಳ ಭಯ ಎಲ್ಲರ ಮನಸ್ಸಿನಿಂದಲೂ ಮಾಯವಾಗಿತ್ತು. ಆದರೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭ ಆಗಿದೆಯೋ ಅಥವ ಇಲ್ಲವೋ ಎಂಬ ಪ್ರಶ್ನೆಗೆ ಯಾರಲ್ಲೂ ನಿಖರ ಉತ್ತರ ಇರಲಿಲ್ಲ. ಎಷ್ಟೇ ಆಗಲಿ ಆಳ್ವಿಕೆ ಇದ್ದದ್ದು ಸರ್ವಾಧಿಕಾರಿಯ ಕೈಲಲ್ಲವೇ? ಎಲ್ಲ ಗುಟ್ಟು ಗುಟ್ಟು! ಇನ್ನೇನು ನಮ್ಮ ಪ್ರಯಾಣದ […]Read More

ಉತ್ತರದ ಕಬ್ಬಕ್ಕಿ – Bank Myna

ಉತ್ತರಭಾರತದಲ್ಲಿ ಮಾತ್ರವೇ ಕಂಡುಬರುವ ಅಲ್ಲಿನ ಸಾಮಾನ್ಯ ಹಕ್ಕಿಗಳಲ್ಲೊಂದಾದ ಉತ್ತರದ ಕಬ್ಬಕ್ಕಿ ಈ ಈ ವಾರದ ಪಕ್ಷಿ. ಇದು ರೈಲು ನಿಲ್ದಾಣಗಳಂತಹ ಜನಭರಿತ ಸ್ಥಳಗಳಲ್ಲಿಯೂ ಯಾವ ಭಿಡೆಯಿಲ್ಲದೆ ಓಡಾಡುತ್ತದೆ. ಇಂಗ್ಲಿಷಿನ ಬ್ಯಾಂಕ್‍ ಮೈನಾ ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು Acridotheres ginginianus ಎಂದು. ನಮ್ಮಲ್ಲಿನ ಗೊರವಂಕಗಳಂತೆಯೇ ಇದ್ದರೂ ಬಣ್ಣ ಕಂದಿಗೆ ಬದಲಾಗಿ ನೀಲಿಮಿಶ್ರಿತ ಬೂದು ಹಾಗೂ ಕಣ್ಣಿನ ಸುತ್ತಲಿನ ಹಳದಿಯ ಬದಲಿಗೆ ಕಡುಕೆಂಗಂದು ಬಣ್ಣದ್ದು. ಉತ್ತರ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿಯೂ ಇದು ಕಂಡುಬರುತ್ತದೆ. ಇದು ಉತ್ತರದ್ದು […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 4

ಪಯಣ ಒಬ್ಬನೇ ನನ್ನಗುರಿಯತ್ತ ಸಾಗುತಿದ್ದೆದಾರಿಯಲ್ಲಿ ಜನಎದುರು ಬರುತಿದ್ದರುಹಾಗೆಯೇನೋವು ನಲಿವುಗಳೂಕೂಡ ಜೊತೆಗೇಸಾಗುತಿದ್ದವು!! ಬಾಳಿನ ಅರ್ಥ ಇಷ್ಟ ಪಟ್ಟವರುಸಿಗದಿದ್ದರೆಸಿಕ್ಕವರನ್ನೇ ಇಷ್ಟಪಟ್ಟುಖುಷಿ ಖುಷಿಯಾಗಿಬದುಕುವುದೇನಿಜವಾದಬಾಳಿನ ಅರ್ಥ ನವ್ಯ ಕೊನೆ ಎಲ್ಲಿದೆಸಾಗುವ ದಾರಿಗೆಸಾಗಿದಷ್ಟು ದಾರಿ ಇದೆಮಾಗಿದಷ್ಟು ಜೀವನ ಇದೆ!ಸಾಗಿ ಮಾಗಿದಷ್ಟೂಬದುಕು ಭವ್ಯನವ್ಯ ಎನಿಸುತ್ತದೆ!! ಮನೆ ಪ್ರೀತಿಯ ಮನೆನಿನ್ನ ಮಡಿಲೆಂದರೆ ನನಗಿಷ್ಟನಿನ್ನನ್ನು ನಿರ್ಮಿಸುವಾಗಪಟ್ಟೆ ಅದೆಷ್ಟೋ ಕಷ್ಟಚಳಿ ಮಳೆ ಬಿಸಿಲುಎದುರಿಸಿ ನೀನಾದೆಗಟ್ಟಿಮುಟ್ಟುನೊಂದು ಬಂದಾಗನೀಡುವೆ ತಣ್ಣನೆಯ ಆಶ್ರಯ ಡಾII ಪರಮೇಶ್ವರಪ್ಪ ಕುದರಿRead More

ರಸ್ತೆಯ ಹೂ

ಬದುಕು ತುಂಬಾ ದೊಡ್ಡದುಶ್ಯಾನೇ ಟಾಪು ಬೇರೆಸೂರಿದೆಯಲ್ಲ ಬದುಕಿಗೆ!ಅಂತ ಯಾರೋ ಅಂದರೆಬಾ ಗುರು ಸ್ವಲ್ಪ ಇಡಿದುಕೋಈ ನನ್ನ ಏಕಾಂತವನ್ನುಅದರೊಳಗಿನ ಕನಸುಗಳನ್ನು… ಈ ಕನಸುಗಳೋರಸ್ತೆಯಲ್ಲಿ ಬಿದ್ದ ಹೂವಂತೆಮುಡಿಯಬೇಕೋ?ದೇವರ ಮುಡಿಗೆ ಅರ್ಪಿಸಬೇಕೋ?ಬೇಡ ಅಂತಾದು ಹೋದರೆತುಳಿದಷ್ಟೇ ಕೆಟ್ಟದ್ದುಏನ್ಮಾಡ್ಲಿ… ಕು ಶಿ ಚಂದ್ರಶೇಖರ್Read More

ಗೆಳೆಯನ ಮೌನ

ನೀನು ಆಡಬಹುದಾದಒಳ್ಳೆಯದೊಂದು ಮಾತಿಗಾಗಿಅದರಿಂದ ಮೂಡುವಮನದ ಬೆಳಕಿಗಾಗಿಕತ್ತಲಲಿ ನಿಂತಿರುವ ನಾನುಕಿವಿಯಗಲಿಸಿ ಆಲಿಸಲುಹಾತೊರೆಯುತಿರುವೆನೀನಾದರೋಮೌನದ ಹುತ್ತದೊಳಗೆನಿನ್ನ ನೀನು ಬಂಧಿಸಿಕೊಂಡಿರುವೆ ನಿನ್ನ ಮೆಚ್ಚುಗೆಯಒಂದು ಕುಡಿನೋಟಕ್ಕಾಗಿನಾನು ಕಣ್ಕಣ್ಣು ಬಿಟ್ಟುಕೊಂಡುನಿದ್ದೆ ಕಳೆದುಕೊಂಡುಕನಸುಗಳನ್ನು ಬದಿಗಿಟ್ಟುಕಾಯುತಿರುವೆನೀನಾದರೋಕನಸೆಂಬ ಕುದುರೆಯನೇರಿಮುಗಿಲಿನೆಡೆಗೆ ದೃಷ್ಟಿ ನೆಟ್ಟುನನ್ನನ್ನು ಇಲ್ಲಿ ಕಡೆಗಣಿಸಿರುವೆ ನಿನ್ನ ಒಂದುಆಪ್ಯಾಯ ಅಪ್ಪುಗೆಗಾಗಿಬೆಚ್ಚಗಿನ ಭಾವಕ್ಕಾಗಿಬೀಸುವ ಗಾಳಿಗೂಬೆದರದೇ ಬೆಂಡಾಗದೆಕಾಯುತ್ತಾ ನಿಂತಿರುವೆ ನಾನಿಲ್ಲಿನೀನಾದರೋಕೈಗಳ ಹಿಂದಕ್ಕೆ ಕಟ್ಟಿಹೃದಯದ ಬಾಗಿಲು ಮುಚ್ಚಿಅರಿಯದ ಯಾವುದೋಶೂನ್ಯದೊಳಗೆ ನಡೆಯುತ್ತಿರುವೆ ಸೌಜನ್ಯ ದತ್ತರಾಜRead More

ಬದುಕಿನ ಪಯಣ ಮುಗಿಸಿದ ನಟ ಶಿವರಾಂ

ಕನ್ನಡ ಚಿತ್ರರಂಗದ ಇನ್ನೊಂದು ಹಿರಿಯ ಜೀವ ದೈವ ಪಾದ ಸೇರಿದೆ. ನಮ್ಮೆಲ್ಲರ ನೆಚ್ಚಿನ ಹಿರಿಯ ನಟ ಶಿವರಾಂ ಇನ್ನಿಲ್ಲ. 84 ವರ್ಷ ವಯಸ್ಸಾಗಿದ್ದ ನಟ ಶಿವರಾಂ ರವರಿಗೆ ಎರಡು ದಿನಗಳ ಹಿಂದೆ ಅಪಘಾತವೊಂದರಲ್ಲಿ ತಲೆಗೆ ಪೆಟ್ಟಾಗಿ ಪ್ರಶಾಂತ್ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗು ಇಳಿ ವಯಸ್ಸಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲು ಆಗದಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಇಂದು ಡಿಸೆಂಬರ್ 4 ರಂದು ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಎಂಬ […]Read More

ಸೌರವ್ಯೂಹ – 3 – ಬುಧ ಗ್ರಹ

ಸೂರ್ಯನ ಕುಟುಂಬ ನಾಲ್ಕು ಭೂಸದೃಶ ಅಥವಾ ಸೌರವ್ಯೂಹದ ಒಳಬಾಗದಲ್ಲಿರುವ ಗ್ರಹಗಳು ದಟ್ಟವಾದ ಕಲ್ಲಿನ ಸಂಯೋಜನೆಗಳನ್ನು ಹೊಂದಿವೆ. ಕೆಲವಕ್ಕೆ ಯಾವುದೇ ಚಂದ್ರನಿಲ್ಲ ಅಥವಾ ಯಾವುದೇ ಉಂಗುರದ ವ್ಯವಸ್ಥೆಗಳನ್ನು ಹೊಂದಿಲ್ಲ. ಅವು ಹೆಚ್ಚಾಗಿ ಗಟ್ಟಿತನ ರೂಪಿಸುವ ಕಬ್ಬಿಣ್ಣ ಮತ್ತು ನಿಕ್ಕಲ್ ಗಳನ್ನೂ ತಮ್ಮ ಕಾಯ ಕೇಂದ್ರದಲ್ಲಿ ಹೊಂದಿವೆ. ಅವು ಸುಸ್ಥಿರ ಲೋಹಗಳಾದ ಸಿಲಿಕೇಟ್ ಮತ್ತು ಖನಿಜಗಳ ಗಟ್ಟಿ ಮೇಲ್ಕವಚದಿಂದ ರಚಿತವಾಗಿವೆ. ನಾಲ್ಕು ವ್ಯೂಹದ ಒಳಭಾಗದಲ್ಲಿರುವ ಶುಕ್ರ, ಭೂಮಿ ಮತ್ತು ಮಂಗಳ ಗ್ರಹಗಳು ಹವಾಮಾನ ಸೃಷ್ಟಿಸಲು ಸಾಕಷ್ಟು ಗಣನೀಯ ವಾಯುಮಂಡಲವನ್ನು ಹೊಂದಿವೆ. […]Read More

ಅಂತರಾಷ್ಟ್ರೀಯ ಚೀತಾ ದಿನ – ಡಿಸೆಂಬರ್ 4

ಚೀತಾ ಅಥವಾ ಸೀವಂಗಿ ಬೆಕ್ಕಿನ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸಸ್ತನಿ, ಇದರ ಹೋಲಿಕೆ ಸಾಧಾರಣವಾಗಿ ಚಿರತೆಯದ್ದು, ಮೈ ಮೇಲೆ ಚಿಕ್ಕ ಕಲೆಗಳಿವೆ, ಇವು ಬೊಟ್ಟು ಇಟ್ಟಂತೆ ಕಪ್ಪಾಗಿವೆ, ಉದ್ದ ಕಾಲು,ಎತ್ತರ ಸೊಂಟ ತೆಳು ಶರೀರ ವೇಗದ ಓಟಕ್ಕೆ ಹೇಳಿ ಮಾಡಿಸಿದಂತಿವೆ. ಇದು ಜಗತ್ತಿನಲ್ಲೇ ಅತೀ ವೇಗದ ಪ್ರಾಣಿ ತಾಸಿಗೆ 100 ಕಿ,ಮೀ ವೇಗದಲ್ಲಿ ಓಡಬಲ್ಲದು. ಚೀತಾ ನ ಕಣ್ಣುಗಳ ಒಳ ಭಾಗದ ಅಂಚಿನಿಂದ ಬಾಯಿಯವರೆಗೆ ಎದ್ದು ಕಾಣುವ ಎರಡುಗೆರೆಗಳಿಂದಾಗಿ ನೋಡಲು ಸ್ವಲ್ಪ ಅಳು ಮುಖದ ಪ್ರಾಣಿಯಂತೆ ಕಾಣುತ್ತದೆ, […]Read More

ಪರಾಭವ ಭಾವನಾ – 20 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ನಾಯಕ್ ಅಪ್ರಮೇಯನ ಹಿಂದೆ ಇಂಟರ್ಪೋಲ್ ಏಜೆಂಟ್ ಸ್ಯಾಮ್ ರಕ್ಷಣೆಗಿರುವುದು ತನ್ನ ನೆಟ್ವರ್ಕ್ ನಿಂದ ತಿಳಿಯುತ್ತದೆ. ಇತ್ತ ಸ್ಯಾಮ್ ಗೆ ವಿಗ್ರಹದ ಹಿಂದೆ ಬಿದ್ದಿರುವವರ್ಯಾರು ಎಂದು ತಿಳಿಯುತ್ತದೆ. ಅಪ್ರಮೇಯನನ್ನು ಕೊಂದಾದರೂ ಆ ರಾಮ, ಕೃಷ್ಣ ಮತ್ತು ನರಸಿಂಹ ವಿಗ್ರಹಗಳನ್ನು ಕೊಂಡೊಯ್ಯಲು ವೇಗವಾಗಿ ಆ ಊರಿಗೆ ಬಂದಿದ್ದರು ನಾಯಕ್‌ನ ಶಿಷ್ಯೆ ನೀಲಂ ಮತ್ತು ಇಂಗ್ಲೆಂಡಿನಿಂದ ಬಂದ ಶಾರ್ಪ್‌ ಶೂಟರ್‌ ಫಿಲಿಪ್‌ ಸ್ಟೋನ್‌ಬ್ರಿಡ್ಜ್.‌ ಮುಂದೆ… –ಇಪ್ಪತ್ತು– ತನ್ನ ಮೇಲೆ ಇಂತಹ ದಾಳಿ ನಡೆಯಬಹುದೆಂಬ ಪರಿವೆ ಇಲ್ಲದೇ ಅಪ್ರಮೇಯ ತನ್ನ ಪ್ರವಚನವನ್ನು […]Read More