ಕಿರು- ಕವಿತೆಗಳು

ಜಾಡಮಾಲಿ ಮುರಿದು ಮೂಲೆಗುಂಪಾದನನ್ನ ಕಳೆದಿರುಳ ಕನಸುಗಳಕಸಗುಡಿಸಿ ಹಾಕಲುಉದ್ದುದ್ದ ಕಿರಣಗಳಪೊರಕೆ ಹಿಡಿದುಮೊದಲ ದಿಸೆಯಲ್ಲಿಕಾಣಿಸಿಕೊಳ್ಳುತ್ತಾನೆಬೆಳಿಗ್ಗೆಯ ಜಾಡಮಾಲಿಸೂರ್ಯ ಮಾಯಾ ಹೆಂಡ ಕುಡಿದಮಂಗನ ಮಂಗತ್ವಹೆಚ್ಚಾಗುತ್ತದೆಆದರೆ ಹೆಣ್ಣು ಕಂಡಮನುಷ್ಯನ ಮನುಷ್ಯತ್ವಮಾಯವಾಗುವುದೇಕೆ ? ಡಿ ಎನ್ ಸುರೇಶ್ ಹವ್ಯಾಸಿ ಪತ್ರಕರ್ತರುRead More

ಪುಟ್ಟಣ್ಣ ಕಣಗಾಲ್ – ತಿಳಿಯದ ಮಾಹಿತಿಗಳು – 2

1968 ರಲ್ಲಿ ಮೈಸೂರು ಮೈತ್ರಿ ಫಿಲಂಸ್ ಲಾಂಛನದಲ್ಲಿ ಡಾ. ಡಿ. ಬಿ. ಬಸವೇಗೌಡರು ಪುಟ್ಟಣ್ಣನವರ ನಿರ್ದೇಶನದಲ್ಲಿ “ಸಾವಿರ ಮೆಟ್ಟಲು” ಚಿತ್ರದ ತಯಾರಿಕೆ ಪ್ರಾರಂಭಿಸಿದರು. ಕಲ್ಯಾಣ್ಕುಮಾರ್, ಅಶ್ವಥ್, ಪಂಡರೀಭಾಯಿ, ಜಯಂತಿ ಹಾಗು ವಜ್ರಮುನಿ,ಸುಂದರ ಕೃಷ್ಣ ಅರಸ್‌ (ಇಬ್ಬರದೂ ಮೊದಲ ಪರಿಚಯ) ಮುಂತಾದವರೊಂದಿಗೆ ಚಾಮುಂಡಿ ಬೆಟ್ಟದ ಪರಿಸರದಲ್ಲಿ ಚಿತ್ರೀಕರಣ ನೆಡೆಯುತಿದ್ದು, ಕ್ರಮೇಣ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಉಂಟಾಗಿ ಗಂಭೀರ ಪರಿಸ್ಥಿತಿಯಿಂದ ಸ್ಥಗಿತವಾಯಿತು. ಆ ವೇಳೆಗಾಗಲೇ ಪುಟ್ಟಣ್ಣನವರು ಖ್ಯಾತರೆನಿಸಿ ಸಮಯವೇ ಸಿಗದಷ್ಟು ಬ್ಯುಸಿಯಾಗಿದ್ದರು. ಹಾಗಾಗಿ ಚಿತ್ರ ಮುಂದೆ ಹೋಗದೆ ನಿಂತೇ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-2

-ಎರಡು – ಏಡನ್ ತಲುಪಿದೆವು! ಲಕೋಟೆಯಿಂದ ಏರ್ ಟಿಕೆಟ್ ತೆರೆದು ತೋರಿಸಿದ್ದೇ ತಡ ನನ್ನ ತಾಯಿಯ ಕಣ್ಣುಗಳು ನೀರು ತುಂಬಿಕೊಂಡವು. ‘ದೊಡ್ಡವನೂ ಕಷ್ಟ ಸುಖಕ್ಕೆ ಇಲ್ಲದಷ್ಟು ದೂರ ಹೋದ; ಈಗ ನೀನೂ ಕೂಡ’ ಎಂಬ ದುಃಖ ಅವರಿಗೆ. ಮೇಲಾಗಿ ನಾನು ಕಿರಿಯ ಮಗ. ದಿನಕಳೆದಂತೆ ಅವರೊಡನೆ ಮಾತಿನ ಮಧ್ಯೆ, ನಮ್ಮ ಪ್ರಯಾಣದ ಬಗ್ಗೆಯೂ ಒಂದಿಷ್ಟಿಷ್ಟೇ ಹೇಳುತ್ತ ಧೈರ್ಯ ತುಂಬಿದೆ; ಅಥವಾ ಹಾಗೆ ನಾನೇ ಸಮಾಧಾನ ತಂದುಕೊಂಡೆ. ಎಷ್ಟೇ ಆದರೂ ತಾಯಿ; ಅವರು ನನಗೋಸ್ಕರ, ಮುಖದ ಮೇಲೆ ಗೆಲುವನ್ನು […]Read More

ಜೀವನದ ಅಮೂಲ್ಯ ರತ್ನಗಳು

ನಮ್ಮ ಜೀವನದಲ್ಲಿ ನಂಬಿಕೆ‌, ಪ್ರೀತಿ ಇವೆರಡು ರತ್ನಗಳು ದೈವದತ್ತವಾಗಿ ನಮಗೆ ಭಾವನೆಗಳ ಮೂಲಕ ಬಂದಂತಹ ಒಂದು ಕೊಡುಗೆಯಾಗಿದೆ. ಜೀವನದಲ್ಲಿ ಇವುಗಳಿಗೆ ಇದರದೇ ಆದ ಒಂದು ಪಾವಿತ್ರ್ಯ ಮೌಲ್ಯವಿದೆ. ನಮ್ಮ‌ ಜೀವನದಲ್ಲಿ‌ ಎಲ್ಲ ವಸ್ತುಗಳನ್ನು ದುಡ್ಡು ಕೊಟ್ಟು ಪಡೆಯಬಹುದು. ಆದರೆ, ನಂಬಿಕೆ, ಪ್ರೀತಿ ಮನುಷ್ಯನ ಭಾವನೆಯಿಂದ ಮೂಡುವಂತಹ ಪ್ರಕ್ರಿಯೆ. ಪ್ರತೀ ಮಾನವ ಜೀವನದಲ್ಲಿ ಇವುಗಳು ಇಲ್ಲದೇ ಬಾಳಲು ಸಾದ್ಯವಿಲ್ಲ. ಜೀವನದ ತಳಹದಿಗೆ ಇವುಗಳು ಆದಾರಸ್ತಂಭಗಳಾಗಿವೆ. ಇದರಲ್ಲಿ‌ ಒಂದನ್ನು ಕಳೆದುಕೊಂಡರು ನಮ್ಮ ಜೀವನ‌ದ ಲಯ ಕಳೆದುಕೊಂಡಂತೆ. ಆದರೆ, ಇಂದು ಎಲ್ಲೋ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-1

ಡಾ. ಅರಕಲಗೂಡು ನೀಲಕಂಠ ಮೂರ್ತಿ ಯವರು ವೃತ್ತಿಯಿಂದ ವೈದ್ಯರು ಹಾಗು ಹವ್ಯಾಸಿ ಸಾಹಿತಿಗಳು. ಹಲವಾರು ವರ್ಷಗಳ ಹಿಂದೆ ಅವರು ಕೆಲಸದ ನಿಮಿತ್ತ ಸೊಮಾಲಿಯಾದಲ್ಲಿ (ಆಫ್ರಿಕಾ) ನೆಲೆಸಿದ್ದಾಗ ಅಲ್ಲಿನ ತಮ್ಮ ಅನುಭವಗಳನ್ನು ಪತ್ರಿಕೆಗೆ ಲೇಖನ ರೂಪದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ… (ಆಫ್ರಿಕಾಕ್ಕೆ ಪ್ರಪ್ರಥಮವಾಗಿ ‘ಕಗ್ಗತ್ತಲೆಯ ಖಂಡ’ ಎಂಬ ಅಡ್ಡಹೆಸರು ಕೊಟ್ಟದ್ದು, ವೇಲ್ಸ್ (ಯು.ಕೆ. ಯ ಒಂದು ಪ್ರಾಂತ್ಯ) ಭಾಗದ ಪತ್ರಕರ್ತ ಮತ್ತು ಅನ್ವೇಷಕ, ಹೆನ್ರಿ ಮಾರ್ಟನ್ ಸ್ಟ್ಯಾನ್ಲೆ) -ಒಂದು- ಲಕೋಟೆಯೊಂದು ಬಂತು! ನಾನಾಗ ಬೆಂಗಳೂರಿನ ಪ್ರಸನ್ನ ಟಾಕೀಸ್ ಸನಿಹ […]Read More

ಪರಾಭವ ಭಾವನಾ – 11 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ನಾಯಕ್ ತನ್ನ ಮಾದಕ ವಸ್ತುಗಳ ಸಾಗಾಣಿಕೆಯನ್ನು ನೊರ್ಕೋಟಿಕ್ ವಿಭಾಗದವರು ಪತ್ತೆ ಹಚ್ಚಿ ಸೀಜ್ ಮಾಡಿದ್ದರಿಂದ ಯೋಚನೆ ಹತ್ತಿ ಕ್ರೂರಿ ಆಲ್ಬೆರ್ತೋ ಗಾರ್ಸಿಯಾ ಗೆ ಏನು ಹೇಳುವುದೆಂದು ತಿಳಿಯದಾಯಿತು. ಅಷ್ಟರಲ್ಲಿ ವಿಗ್ರಹ ಕಳ್ಳ ಸಾಗಣೆದಾರ ಫಿಲಿಪ್ ಸ್ಟೋನ್ಬ್ರಿಡ್ಜ್ ಗೆ ಕರೆ ಮಾಡಿ ಅಪ್ರಮೇಯನ ಬಳಿ ಇರುವ ಮೂರು ವಿಗ್ರಹಗಳ ಬಗ್ಗೆ ಹಾಗು ಅದು ಉತ್ತರ ಭಾರತದ ಕಡೆಗೆ ಸಾಗುತ್ತಿರುವ ವಿಷಯವನ್ನು ಹೇಳಿ ಅದನ್ನು ಲಪಟಾಯಿಸಿ ಕಳಿಸುತ್ತೇನೆಂದು ಹೇಳುತ್ತಾನೆ. ಮುಂದೆ… -ಹನ್ನೊಂದು- ಬೆಳಗ್ಗೆ ಐದೂವರೆಗೇ ಹೊಟೇಲ್‌ ಚೆಕ್‌ ಔಟ್‌ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 10

ಪರಿತಪಿಸುವರು ಕೆಲರು ಹಲ್ಲು ಮಸೆವರು ಕೆಲರುಪರಿಪರಿಯುಪಾಯಗಳ ಚಿಂತಿಪರು ಕೆಲರುಸೆರೆಯವಧಿ ಮುಗಿದಂದು ಸೇಡು ತೀರಿಸಿಕೊಳುವಸೆರೆಯಾಳುಗಳು ಎನಿತೊ! || ಪ್ರತ್ಯಗಾತ್ಮ || ಉಂಡುಂಡು ತೇಗಿದರೆ ದಿಂಡುರುಳಿ ಮಲಗಿದರೆಉಂಡಾಡಿಯಂತಿರಲು ಬಂದ ಫಲವೇನು?ಭಂಡತನದಿಂ ಬಾಳ ನೂಕಿದರೆ ಬಂತೇನು?ದಂಡಿಸೆಲೊ ಕಾಯವನು- || ಪ್ರತ್ಯಗಾತ್ಮ || ಸಂಜೆ ಮುಂಜಾನೆಯೊಳು ನಿದ್ರಿಸುವ ಮನೆಗಳಲಿಗಂಜಿಗುಂ ಗತಿಯಿಲ್ಲದಾಗುವುದು ಸಹಜ,ಕಂಜದಳ ನೇತ್ರೆಯಾ ಲಕುಮಿ ನೆಲೆಸಳು ಅಲ್ಲಿಅಂಜಿ ಬಾಳಲೊ ನೀನು- || ಪ್ರತ್ಯಗಾತ್ಮ || ಅನ್ನದಗುಳಿನ ಮೇಲೆ ತಿನ್ನುವರ ಹೆಸರಿಹುದುಭಿನ್ನ ಭಾವನೆ ಬಿಟ್ಟು ಬಂದವಗೆ ಉಣಿಸು,ನಿನ್ನ ಭಾಗದ ತಿನಿಸು ಬೇರೊಬ್ಬನುಣ್ಣುವುದುನಿನ್ನ ನೆನಪಿಗೆ ಬರದೆ?- […]Read More

ಮಿಥಿಲೆಯ ಸೀತೆಯರು

ಸೀತೆ ಕಾಯುತ್ತಾಳೆಅಶೋಕ ವನದಲ್ಲಿಬಂದರು ಬರಬಹುದುರಾಮಇಂದಲ್ಲ ನಾಳೆಸಾಗರವ ದಾಟಿಲಂಕೇಶನನ್ನು ನಿವಾರಿಸಿಕರೆದೊಯ್ಯಲುಬಹುದುಬೆಂಕಿಗೆ ಬಿದ್ದರುಎದ್ದು ಬರಲು ಬಹುದು ಸೀತೆಯರು ಕಾಯುತ್ತಾರೆಮಿಥಿಲೆಯಲ್ಲಿಆದರೆರಾಮರು ಬರುವುದಿಲ್ಲಸಂಪ್ರದಾಯಗಳ ದಾಟಿಶಿವಧನುವ ಮುರಿದುಹೂ ಮಾಲೆಗೆಗೋಣು ಚಾಚುವುದಿಲ್ಲಹಾಗೊಮ್ಮೆ ಬಂದರುಶಿವಧನುವನೆತ್ತಿಎದೆ ಏರಿಸುವುದುಬಲು ಕಷ್ಟ ಧನುಸ್ಸು ಮುರಿದರೂಬೆಂಕಿಗೆ ಬಿದ್ದುಎದ್ದು ಬರುವುದಸಾದ್ಯಹಾಗಾಗಿಮಿಥಿಲೆಯ ಸೀತೆಯರಿಗೆಮಾಂಗಲ್ಯ ಯೋಗಬಂಗಾರದ ಜಿಂಕೆಯ ಹಾಗೆಮರೀಚಿಕೆ ಡಿ. ಎನ್. ಸುರೇಶ್ಹವ್ಯಾಸಿ ಪತ್ರಕರ್ತರುRead More

ಸೌಗಂಧಿ ಪುದೀನ – ಮೆಂಥಾ ಆರ್ವೆನ್ಸಿಸ್

ಪುದೀನ ಸಸ್ಯವು ಸಹಜವಾಗಿ ಎಲ್ಲೆಲ್ಲೂ ನೋಡಲ್ಪಡುವ ಗಿಡಮೂಲಿಕೆ. ಬರಿಯ ನೀರಿನಲ್ಲಿಯೂ ಸಹ ಬೆಳೆಯುವ ಸಾಮರ್ಥ್ಯ ಉಳ್ಳಂತಹ ಸಸ್ಯ. ದೀರ್ಘ ಕಾಲಿಕ ಮೂಲಿಕೆಯಾಗಿರುವ ಪುದೀನ ಸಸ್ಯವು ಅತ್ಯಂತ ಪರಿಮಳಯುಕ್ತ. ಮೆಂಥಾ ಆರ್ವೆನ್ಸಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಪುದೀನ ಸಸ್ಯವು ಲ್ಯಾಮಿನೇಸಿ ಕುಟುಂಬಕ್ಕೆ ಸೇರಿದ್ದು, ಸಮಶೀತೋಷ್ಣ ಪ್ರದೇಶಗಳಾದ ಏಷ್ಯಾ, ಸೈಬೀರಿಯಾ, ಉತ್ತರ ಅಮೇರಿಕಾ, ಯುರೋಪ್ ಖಂಡ ಹಾಗು ದೇಶಗಳಲ್ಲಿ ಕಂಡು ಬರುತ್ತದೆ. ಗಾಢ ಹಸುರಿನ ಬಣ್ಣದ ಎಲೆಯುಳ್ಳ ಈ ಗಿಡಮೂಲಿಕೆಯಲ್ಲಿ ಎಳೆಯ ನೇರಳೆ ಬಣ್ಣದ ಹೂಗಳು ಕಂಗೊಳಿಸುತ್ತವೆ. ಸಣ್ಣದೊಂದು ಸಸಿಯ […]Read More

ಸರಳ ಸಜ್ಜನಿಕೆಯ ಶಾಂತಿದೂತ “ಲಾಲ್ ಬಹದ್ಧೂರ್ ಶಾಸ್ತ್ರೀ”

ಭಾರತ ದೇಶ ತನ್ನದೇ ಆದ ಸಾಂಸ್ಕೃತಿಕ ಹಿರಿಮೆ ಗರಿಮೆಗಳಿಂದ ವಿಶ್ವಮನ್ನಣೆ ಪಡೆದಿದೆ. ಭಾರತಾಂಬೆಯ ಮಡಿಲಲ್ಲಿ ಜನಿಸಿದ ಅನೇಕ ಸತ್ಪುರುಷರ ಆದರ್ಶದ ಬದುಕು ನಮಗೆ ದಾರಿದೀಪ. ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿಯವರಷ್ಟೇ ಎತ್ತರಕ್ಕೆ ನಿಲ್ಲಬಲ್ಲ ವ್ಯಕ್ತಿತ್ವ ಇವರದ್ದು. ಅವರ ಜನ್ಮ ಜಯಂತಿಯನ್ನು ಗಾಂಧೀಜಿಯವರ ಜಯಂತಿಯ ಜೊತೆಗೆ ಆಚರಿಸುತ್ತೇವೆ. ಅವರೇ “ಲಾಲ್ ಬಹದ್ಧೂರ್ ಶಾಸ್ತ್ರೀ”. ಒಬ್ಬ ವ್ಯಕ್ತಿ ಸತ್ತಾಗ ನಾವು ಅವರ ಬಳಿ ಒಡವೆ, ವಸ್ತ್ರ, ಆಸ್ತಿಪಾಸ್ತಿಗಳ ವಿವರಕ್ಕಾಗಿ ಹುಡುಕಾಡುತ್ತೇವೆ. ಆದರೆ ಭಾರತದ ಪ್ರಧಾನಿಯೊಬ್ಬರು ಸತ್ತಾಗ ಅವರ ಬಳಿ ಹುಡುಕಿದಾಗ ಜೇಬಿನಲ್ಲಿ […]Read More