ಎಸ್ ಎಲ್ ಭೈರಪ್ಪನವರ ಸೃಷ್ಟಿಶೀಲತೆಯಲ್ಲಿ ಲಕ್ಷ್ಮಣ, ಊರ್ಮಿಳೆ ಹಾಗು ತಾರೆ – ಆಶಾ

ಡಾ.ಎಸ್.ಎಲ್.ಭೈರಪ್ಪನವರ ಉತ್ತರಕಾಂಡದ ಸಂವಾದದಲ್ಲಿ ಮಂಡಿಸಿದ ಪ್ರಬಂಧ ನಮ್ಮ ಭಾರತೀಯ ಪುರಾಣ ಪರಂಪರೆಯಲ್ಲಿ ರಾಮನದು ಆದರ್ಶಪಾತ್ರ. ಅವನೇ ರಾಮಾಯಣದ ನಾಯಕ. ಅವನ ಆಜ್ಞಾಧಾರಕ ಹಾಗೂ ಪ್ರತಿ ಹೆಜ್ಜೆಗಳನ್ನು ಅನುಸರಿಸಿ ನಡೆಯುವವನು ಲಕ್ಷ್ಮಣ. ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ’ಉತ್ತರಕಾಂಡ’ ದಲ್ಲಿ ರಾಮ ಕಥಾ ನಾಯಕನೂ ಹೌದು, ಆದರ್ಶಪ್ರಾಯನೂ ಹೌದು. ಆದರೆ ಅವನಷ್ಟೇ ಉದಾತ್ತ ಪಾತ್ರವಾಗಿ, ಸ್ವತಂತ್ರ ಆಲೋಚನೆ, ನಿರ್ಧಾರಗಳನ್ನ ಮಾಡಬಲ್ಲವನಾಗಿ, ಕೆಲವೊಮ್ಮೆ ರಾಮನನ್ನು ಪ್ರತಿರೋಧಿಸುವವನಾಗಿಯೂ ಕಾಣಿಸುಕೊಳ್ಳುವ ಪ್ರಬಲ ಪಾತ್ರವಾಗಿ ಲಕ್ಷ್ಮಣ ಚಿತ್ರಿತಗೊಂಡಿದ್ದಾನೆ! ರಾಮ ಭಾವುಕತೆಯಲ್ಲಿ ಮೈಮರೆತು ತೇಲಿಹೋಗುತ್ತಿದ್ದರೆ, ಲಕ್ಷ್ಮಣ ಮೈಕೈಯಿಗೆ ಮಣ್ಣುಮೆತ್ತಿಕೊಂಡು […]Read More

ಸ್ವಾತಂತ್ರ್ಯ ಸಮರ ಕರುನಾಡು ಅಮರ

ಸ್ವರಾಜ್ಯ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಆಂಗ್ಲರ ಗುಲಾಮಗಿರಿಗೆ ತಲೆಬಾಗದ ನಮ್ಮ ನಾಡಿನ ಜನರ ನರನಾಡಿಗಳಲ್ಲಿ ಮಿಡಿಯುವ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ಮಹತ್ತರ ಆಶಯಗಳನ್ನು ತುಂಬಿಕೊಂಡಿರುವ ಕರ್ನಾಟಕ ವೀರ ವನಿತೆಯರ, ವೀರಯೋಧರ ಮತ್ತು ಮಹತ್ತರ ಘಟನಾವಳಿಗಳನ್ನು ಸರಳವಾಗಿ ಹಾಗು ಸಮರ್ಪಕವಾಗಿ ತಿಳಿಯಪಡಿಸುವ ಹೊಸ ನಾಟಕ “ಸ್ವಾತಂತ್ರ್ಯ ಸಮರ ಕರುನಾಡು ಅಮರ“. ಕನ್ನಡ ನಾಡಿನ ರಾಣಿ ಅಬ್ಬಕ್ಕನಿಂದ ಮೊದಲುಗೊಂಡು ಕಿತ್ತೂರು ರಾಣಿ ಚೆನ್ನಮ್ಮ, ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹಾಗೆಯೇ, ಸಂಗೊಳ್ಳಿ […]Read More

ಕನ್ನಡ ಶಾಯಿರಿಗಳು – ಒಂದು ಅವಲೋಕನ

ಕನ್ನಡ ಸಾರಸ್ವತ ಲೋಕವು  ಕಥೆ, ಕಾದಂಬರಿ,ನಾಟಕ,ಮಹಾಕಾವ್ಯ,ಕವನ, ಸಣ್ಣ ಕಥೆ, ಹನಿಗವನ ಇನ್ನೂ ಹಲವಾರು ಪ್ರಕಾರಗಳಿಂದ ಶ್ರೀಮಂತವಾಗಿದೆ.ಈ ಶ್ರೀಮಂತ ಪರಂಪರೆಗೆ ಇತ್ತಿಚಿನ ಸೇರ್ಪಡೆ ಎಂದರೆ ಕನ್ನಡ ಶಾಯಿರಿಗಳು. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿಯನ್ನು ಶಾಯಿರಿ ಎನ್ನಬಹುದು.ಇದನ್ನು ಓದಿಯೇ ಸವಿಯಬೇಕು! ಶಾಯಿರಿ  ಎಂಬ ಪದವು ಅರೇಬಿಕ್  ಭಾಷೆಯ “ ಶೇರ್” ಎಂಬ  ಪದದ ರೂಪಾಂತರವಾಗಿದೆ.ಶೇರ್  ಪದದ ಅರ್ಥ ಎರಡು ಸಾಲಿನ ಪದ್ಯ ಎಂದಾಗುತ್ತದೆ.  ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ ದುಃಖವಾದಾಗ ಮನಸ್ಸಿನ ಭಾವನೆಗಳನ್ನು ಹೊರ ಹಾಕುವ […]Read More

ಚಿತ್ ಶಾಂತಿ

ಅರಿಯದಿರಲಿ ಬಾಳಿನ ನೋವುತನಷ್ಟಕ್ಕೆ ತಾನುರಿಯಲಿ ಸೊಡರುತನ್ಮಯತೆ ಜ್ವಾಲೆ, ಹಚ್ಚಿರುವರು ಯಾರು?ನಿಲುಕದಿರಲಿ ಕೊನೆಯ ಉಸಿರು ದಾರಿ ಕಾಣುವ ಬಯಕೆ ಯಾಕೆ?ಉರಿದುರಿದು ನೀಡಲಿ ಚಿತ್ ಶಾಂತಿಜ್ಯೋತಿಯೇ ವಿಸ್ಮಯ, ಆನಂದ ಬೆಳಕೇ!ನಿನ್ನೊಳಗಿನ ಲೀನ ನನ್ನೊಳಗಿನ ಕಾಂತಿ ಭರತ್ ಎಚ್ ಜಿRead More

ಪ್ರತ್ಯಗಾತ್ಮ ಚಿಂತನ (ನೇನಂಶಿ)

ಮೂಡಿ ಬಹ ದಿನಮಣಿಯ ಬ್ರಹ್ಮ ರೂಪನು ಕಾಣನಡುನೆತ್ತಿ ಮೇಲಿರುವ ಸೂರ್ಯ ಶಿವ ತಾನು,ಪಡುವಣದ ಕಡೆಗಿಳಿವ ಸೂರ್ಯ ಸಾಕ್ಷಾತ್ ವಿಷ್ಣುನೋಡಿವನೆ ತ್ರೈಮೂರ್ತಿ- || ಪ್ರತ್ಯಗಾತ್ಮ || ವಿಶ್ವದೇವನ ವರ್ಣಮಾಲೆಯನು ಕಂಡಾಗಹ್ರಸ್ವನಾನಾಗುವೆನು ದೀರ್ಘ ಚಿಂತನದೆ|ವಿಶ್ವ ಪ್ರಕೃತಿಯ ಭಾವ ಎಂದೆಂದು ಅವ್ಯಯವುವಿಶ್ವಾತ್ಮನಿಗೆ ಶರಣು – || ಪ್ರತ್ಯಗಾತ್ಮ || ಋಷಿಯಲ್ಲದವರಾರೂ ಕವಿಯಾಗಲಾರರೈಋಷಿಯ ಅಂಶವು ಬೇಕು ಕಾವ್ಯಕರ್ಮಕ್ಕೆಋಷಿಯ ತಪಸ್ ಸಾಧನೆಯು, ಸಿದ್ಧಿ ಮೇಣ್ ದರ್ಶನವುರಸಋಷಿಗಿದತಿಮುಖ್ಯ- || ಪ್ರತ್ಯಗಾತ್ಮ || ಯಾವಾಗ ಬರುವಳೋ ಯಾವಾಗ ಹೋಗುವಳೋಭಾವದೇವಿಯು ತಾನು ನಾ ಹೇಳಲಾರೆ,ಆವ ಸಮಯದಿ ಎನ್ನ ಕೈಯಿಂದ […]Read More

ಪರಾಭವ ಭಾವನಾ – 4 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ ಅಪ್ಪುವಿನ ಅನುಮಾನ ನಿಂತಿಲ್ಲ. ಯಾರು ಗುರುಗಳನ್ನು ಕೊಂದವರು ? ಜೋಶಿ ಮಠದಲ್ಲಿನ ಅನುಭವಗಳನ್ನು ಚಿಂತಿಸುತ್ತಾ ಮದುರೈ ಗೆ ಬಂದ ಅಪ್ಪು ಸುಂದರ ಚತುರ್ಬುಜ ನಾರಾಯಣ ವಿಗ್ರಹವನ್ನು ಕಂಡ ಮುಂದೆ ? —ನಾಲ್ಕು‌— ಅಳಗರ್‌ ಕೋವಿಲ್‌ (ಸುಂದರನ ದೇವಸ್ಥಾನ)ದ ವಿನ್ಯಾಸ ನೋಡಿ ಬೆರಗಾಗಿದ್ದ ಅಪ್ರಮೇಯ. ಬಲು ಚೆನ್ನಾದ ಗುಡಿಯದು. ಗುಡಿಯ ಹಿಂದೆ ಹಸಿರು ಬೆಟ್ಟ. ವೃಕ್ಷಸಮೂಹ ಗುಡಿಯ ಸುತ್ತಲೂ ಇತ್ತು. ಆರು ಕಂಬಗಳ ಪುಟ್ಟ ಮಂಟಪ ಪ್ರವೇಶಿಸಿದೊಡನೆ ಸುಮಾರು ಹದಿನೈದು ಕಂಬಗಳ ದೊಡ್ಡ ಪ್ರಾಂಗಣ. ಅದನ್ನು […]Read More

ಸ್ವತಂತ್ರ ಅಂದ್ರೆ ಏನು??

ಚಿಂತನ – ಮಂಥನ ಬ್ರಿಟೀಷರು ಭಾರತ ಬಿಟ್ಟು ಹೋಗಿದ್ದೇ ಸ್ವತಂತ್ರವ? ನಾವೆಲ್ಲರು ಧೈರ್ಯವಾಗಿ ರಸ್ತೆಗಳಲ್ಲಿ ಯಾವುದರ ಭಯವೂ ಇಲ್ಲದೆ ಓಡಾಡುವುದೇ ಸ್ವತಂತ್ರವೇ? ಅಥವಾ ರಾಜರ ಆಡಳಿತದಿಂದ ರಾಜಕಾರಣಿಗಳ ಆಡಳಿತಕ್ಕೆ ದೇಶ ಒಗ್ಗಿಕೊಂಡದ್ದೇ ಸ್ವತಂತ್ರವೆ? ಬಹಳ ಸುಲಭದ ಈ ಪ್ರಶ್ನೆಗೆ ನಿಖರ ಉತ್ತರವೇನಾದರೂ ಸಿಕ್ಕರೆ ಅಂದು ನಾವು ನಿಜಕ್ಕೂ ಸ್ವತಂತ್ರರೆಂದುಕೊಳ್ಳಬಹುದು. ಏಳು ದಶಕಗಳ ಹಿಂದೆ ನಡೆದ ಘಟನೆಗಳೇ ನಮಗೆ ಗೂತ್ತಿಲ್ಲ. ಕೆಲವರಿಗೆ ಗೊತ್ತಿದ್ದರು ನೆನಪಿಲ್ಲ. ಇನ್ನು ಸ್ವಾತಂತ್ರ್ಯದ ಬಗ್ಗೆ ಮಾತನಾಡು ಎಂದರೆ, ವಾಟ್ಸಪ್ ಸ್ಟೇಟಸ್ ಹಾಕುವುದು, ಸ್ಟೋರಿ ಅಪ್ಲೋಡ್ […]Read More

ಸೂರಕ್ಕಿಗಳು – Sun Bird

ಮಕರಂದವ ಕುಡಿವ ಈ ಬೆಟ್ಟುದ್ದ ಹಕ್ಕಿಗಳು! ತಾಳಿ ತಾಳಿ ಬೆಟ್ಟುದ್ದ ಹಕ್ಕಿಗಳು ಎಂದ ಕೂಡಲೆ ಹಮ್ಮಿಂಗ್‍ ಹಕ್ಕಿಗಳು ಎಂದುಕೊಳ್ಳ ಬೇಡಿ! ಹಮ್ಮಿಂಗ್ ಹಕ್ಕಿಗಳು ಭಾರತದಲ್ಲಿ ಇಲ್ಲ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಕಂಡುಬರುವ ಪುಟ್ಟಹಕ್ಕಿಗಳು ಹಲವಾರು ಇವೆ, ಸೂರಕ್ಕಿಗಳು, ಹೂ ಕುಟುಕಗಳು, ಜೇಡಹಿಡುಕಗಳು ಹೀಗೆ. ಇಂದು ನಾವು ಕೇವಲ ಸೂರಕ್ಕಿಗಳನ್ನು ಕುರಿತು ತಿಳಿಯೋಣ. ಇವು ಪುಟ್ಟಗಾತ್ರದ ಆದರೆ ತುಸು ಬಾಗಿದ, ಉದ್ದವಾದ ಕೊಕ್ಕಿರುವ ಹಕ್ಕಿಗಳು. ಈ ರೂಪದ ಕೊಕ್ಕು ಇವಕ್ಕೆ ಹೂವಿನ ತಳಭಾಗವನ್ನು ತಲುಪಿ ಮಕರಂದ […]Read More

ದೇವರು ಬೇಕಾಗಿದ್ದಾರೆ

‘ದೇವರು ಬೇಕಾಗಿದ್ದಾರೆ’ ಕನ್ನಡ ಚಿತ್ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ 13 ರಂದು ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನವನ್ನು ಈಗ ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ `ದೇವರು ಬೇಕಾಗಿದ್ದಾರೆ’ ಚಿತ್ರದಲ್ಲಿ ಏನಿದೆ? ಮಕ್ಕಳ ಮುಗ್ಧ ಮನಸ್ಸಿನ ತುಮಲಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಕತೆಯು ಚಿಕ್ಕದೇ ಅದರ ಅದಕ್ಕೊಂದು ವಿಸ್ತಾರವಾದ ಅರ್ಥ ಕೊಟ್ಟು ಚಿತ್ರವನ್ನು ಹಲವು ಪದರಗಳಲ್ಲಿ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ `ದೇವರು’ ಯಾರು? ಎಂಬುದೇ ಚಿತ್ರದ […]Read More

ಪರಾಭವ ಭಾವನಾ – 3 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ ಅಪ್ರಮೇಯನ ಮನಸಿನಲ್ಲಿ ಗುರುಗಳ ದೇಹದ ಮೇಲೆ ಸುತ್ತ ಗಾಯಗಳು ಹೇಗಾದವು ಎಂಬ ಚಿಂತೆಗೆ ಬೀಳುತ್ತಾನೆ.ಅವರು ಇಟ್ಟಿಕೊಂಡಿದ್ದ ರಹಸ್ಯಗಳಾದರು ಏನು ? —ಮೂರು— ಪ್ರಪಂಚದಲ್ಲಿನ ದುಷ್ಟತನಕ್ಕೆ ಕೊನೆಯೇ ಇಲ್ಲವೇನೋ… ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ‍‍ಧರ‍್ಮಸಂಸ್ಥಾಪನಾರ‍್ಥಾಯ ಸಂಭವಾಮಿ ಯುಗೇ ಯುಗೇ|| ಎನ್ನುತ್ತಾನೆ ಆ ದೇವದೇವ. ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ‍್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿ ಬರುತ್ತೇನೆ ಎಂದಿದ್ದಾನೆ. ಆದರೆ ಇನ್ನೂ ಒಂದು ಮಾತು ನಾವು ಕೇಳಿದ್ದೇವೆ. ಪಾಪದ ಕೊಡ ತುಂಬುವವರೆಗೂ ಶಿಕ್ಷೆ […]Read More