ತೆರೆಯ ಮೇಲಿನ ಇಬ್ಬರು ಹರಿಶ್ಚಂದ್ರರ ವಿವರ ಪ್ರವರದ ಅವಲೋಕನ ಮಾಡಿದ ನನಗೆ ಇಬ್ಬರು ಪುರಂದರದಾಸರು ಕಳೆದ ವಾರ ದರ್ಶನ ನೀಡಿದರಷ್ಟೆ. ಈ ವಾರ ಇಬ್ಬರು ಕಾಳಿದಾಸರು ಅಚ್ಚರಿಗೊಳಿಸಿದ್ದಾರೆ. 1983 ರಲ್ಲಿ ತೆರೆಕಂಡ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನಾಗಿ ನಮ್ಮ ಮೈ ಮರೆಯುವಂತೆ ತನ್ಮಯಗೊಳಿಸಿದರೆ, ಭೋಜರಾಜನಾಗಿ ಅಚ್ಚರಿಗೊಳಿಸಿದ್ದರು. ವಿದ್ಯಾಧರೆಯಾಗಿ ಜಯಪ್ರದ ಸಮ್ಮೋಹನ ಗೊಳಿಸಿದ್ದರು. ಕಾಳಿಕಾದೇವಿಯಾಗಿ ಸಾಕ್ಷಾತ್ ಜಗನ್ಮಾತೆಯೇ ಆಗಿ ಕಂಡಿದ್ದರು. ರೇಣುಕಾಶರ್ಮರ ಚಿತ್ರಕಥೆ ಮತ್ತು ಸಮರ್ಥ ನಿರ್ದೇಶನದಲ್ಲಿ ಈ ಚಿತ್ರ ನಿಸ್ಸಂದೇಹವಾಗಿ ಪುಷ್ಕಳ ಭಾರಿ ಭೂರಿ ಭೋಜನವೇ ಆಗಿತ್ತು. […]Read More
— ೮ — ಕೆಂಪು ಸಮುದ್ರದ ತೀರ ಹಾರ್ಗೀಸಾದಲ್ಲಿ ಶಾಬ್ ಬಡಾವಣೆಗೆತಲಪುವುದೇ ಒಂದು ಆನಂದಮಯ ಅನುಭಾವ. ಅದೊಂದು ಮಿನಿ ಅರಣ್ಯದ ಹಸಿರ ರಾಶಿಯೊಳಗೆ ಹೊಕ್ಕಂತೆ. ಎಲ್ಲೆಲ್ಲೂ ಗಿಡಮರಗಳು. ದೂರದೂರದಲ್ಲಿರುವ, ಕಲ್ಲಿನಲ್ಲಿ ನಿರ್ಮಿಸಿದ ಒಂದೊಂದೇ ಚಿಕ್ಕಚಿಕ್ಕ ಬಂಗಲೆ ಥರದ ಮನೆಗಳು. ಅಲ್ಲದೆ ಮನೆಗಳು ಮುಗಿದ ನಂತರದ ಸರಹದ್ದಿನ ಆಚೆಗೆ ಇರುವುದೆಲ್ಲ ಕಾಡು; ದಟ್ಟವಾದುದಲ್ಲ. ಬಹುಶಃ ಆ ಕಾಡೊಳಗೆ ಕೆಲ ಬುಡಕಟ್ಟುಗಳ ಜನ ವಾಸಿಸುವ ಕಿರಿದಾದ ಹಳ್ಳಿಗಳು ಇದ್ದಿರಬೇಕು. ಏಕೆಂದರೆ ಅನೇಕ ಬಾರಿ, ಅಂಥವರ ಓಡಾಟ ಅಲ್ಲೆಲ್ಲ ಇದ್ದೇ ಇರುತ್ತದೆ. […]Read More
ನೀವು ಬದರಿಯಾತ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ “ಅರೆ! ಈ ಕಾಗೆಗೆ ಹಳದಿ ಕೊಕ್ಕಿದೆ!” ಎನಿಸಬಹುದು. ಹಾಗೆಯೇ, ಕಾಲು ಕೆಂಪಗಿದಯಲ್ಲಾ ಎಂದೂ ಎನಿಸಬಹುದು. ಹೌದು! ಆ ಪ್ರದೇಶಗಳಲ್ಲಿ ಹಳದಿ ಕೊಕ್ಕಿನ ಕಾಗೆ ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಇದನ್ನು Yellow-billed Chough Pyrrhocorax graculus ಎನ್ನುತ್ತಾರೆ. ಕಾಗೆಗಳ ಕುಟುಂಬಕ್ಕೇ ಸೇರುತ್ತವೆ. ಹಾಗೆಯೇ, ಕೆಂಪು ಕೊಕ್ಕಿನ ಕಾಗೆಯೂ ಕಂಡುಬರುತ್ತದೆ. ಹಳದಿ ಕೊಕ್ಕು, ಕೆಂಪು ಕಾಲನ್ನು ಬಿಟ್ಟರೆ ಉಳಿದಂತೆ ಕಾಗೆಯಂತೆಯೇ ಕಾಣುತ್ತದೆ. ಬೇಸಿಗೆಯಲ್ಲಿ ಆ ಪ್ರದೇಶಗಳಲ್ಲಿ ಕಂಡುಬರುವ ಕೀಟಗಳನ್ನು ತಿಂದರೆ ಚಳಿಗಾಲದಲ್ಲಿ ಹಣ್ಣುಗಳನ್ನು ತಿನ್ನುತ್ತದೆ. ಒಂದು ಬಗೆಯ […]Read More
ತುಮಕೂರು ಜಿಲ್ಲೆ ಲಲಿತ ಕಲೆಗಳ ತವರೂರು ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ನಮ್ಮ ಕಲಾ ಸಾಧಕರಿಗೆ ಸಲ್ಲುತ್ತದೆ. ಸಾಂಪ್ರದಾಯಿಕ ರೂಪದಲ್ಲಿದ್ದ ಚಿತ್ರಕಲೆಯನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಿಸಿ ಕಲಾ ಶಿಕ್ಷಣ ನೀಡಿ ಸಾವಿರಾರುಕಲಾವಿದರು, ಶಿಕ್ಷಕರನ್ನು ನಿರ್ಮಿಸಿದ ಕೀರ್ತಿ ಇಂದು ಕಲಾಗುರು “ಕಿಶೋರ್ ಕುಮಾರ್” ರವರಿಗೆ ಸಲ್ಲುತ್ತದೆ. ಮೂಲತಃ ಗುಲಬರ್ಗಾ ಜಿಲ್ಲೆ ಷಹಪುರದ ಬಾವೈಕ್ಯ ಗ್ರಾಮದ “ಸೂರಯ್ಯ ಹಿರೇಮಠ ಹಾಗು ಸುಶೀಲಮ್ಮ” ನವರ ಮಗನಾಗಿ ಹುಟ್ಟಿದ “ಕಿಶೋರ್ ಕುಮಾರ್” ಗುಲಬರ್ಗಾದ ‘ಐಡಿಯಲ್ ಸ್ಕೂಲ್ ಆಪ್ ಆರ್ಟ್ನ’ […]Read More
ಮೃದು ಸ್ವಭಾವದ ಸತಿಗೆ ಕಡು ಕೋಪಿಯಾದ ಪತಿಸದುಗುಣದ ಗಂಡನಿಗೆ ಪೆಂಡಿರತಿ ಧೂರ್ತೆಇದುವರೆಗೆ ಕಾಣೆನೈ ಅನ್ಯೋನ್ಯ ದಾಂಪತ್ಯಇದು ಯಾವ ಶಾಪವೈ- || ಪ್ರತ್ಯಗಾತ್ಮ || ಬಾಳು ಹಾಳೆನಬೇಡ, ಬೀಳುಗೆಳೆಯಲು ಬೇಡಬಾಳು ಹಸನಾಗಿಸುವ ಕಜ್ಜವನು ಮಾಡುಬಾಳಿನೊಳು ನಂಬಿಕೆಯ ಕಳೆದುಕೊಳ್ಳಲು ಬೇಡಬಾಳು ಬಂಗಾರವೈ- || ಪ್ರತ್ಯಗಾತ್ಮ || ಕಲೆಗಾಗಿ ಕಲೆಯೆಂದು ತಿಳಿದವರು ಹೇಳುವರುಕಲೆಯು ಜೀವನಕಾಗಿ ನೋಡು ಕಣ್ತೆರೆದುಕಲೆಯು ಜೀವನಕಾಗಿ ಜೀವನವು ಕಲೆಗಾಗಿಕಲೆ ಬಿಟ್ಟು ಬೇರಿಲ್ಲ- || ಪ್ರತ್ಯಗಾತ್ಮ || ಬೆಕ್ಕು ಕಣ್ ಮುಚ್ಚುವುದು ಇಲಿಯ ಹಿಡಿಯಲಿಕೆಂದುಕೊಕ್ಕರೆಯ ಧ್ಯಾನವದು ಕೊಳೆ ಮೀನಿಗಾಗಿಪಕ್ಕೆಯಲಿ ಇರಿಯುವರು […]Read More
ವೃತ್ತಿಯಲ್ಲಿ ಶಿಕ್ಷಕರು ಹಾಗು ಸಾಹಿತ್ಯ ಸೇವೆಯಲ್ಲಿ ಹಿರಿಯರಾದ ಡಾ. ಪರಮೇಶ್ವರಪ್ಪ ಕುದರಿ ಯವರು ನಮ್ಮ ಸಾಹಿತ್ಯಮೈತ್ರಿ ಪತ್ರಿಕೆಗೆ ವಿನಂತಿಸಿಕೊಂಡಾಗಲೆಲ್ಲ ಪ್ರೀತಿಯಿಂದ ತಮ್ಮ ಬರಹಗಳನ್ನು ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪುಸ್ತಕ ಪ್ರಕಾಶನವೊಂದರ ಕೆಲಸಕ್ಕಾಗಿ ಚಿತ್ರದುರ್ಗ ದಿಂದ ಬೆಂಗಳೂರಿಗೆ ತಮ್ಮ ಆತ್ಮೀಯ ಮಿತ್ರರಾದ ಹುರಳಿ ಬಸವರಾಜ್ ಜೊತೆ ಆಗಮಿಸಿದಾಗ ವಿನಂತಿಸಿಕೊಂಡಿದ್ದಕ್ಕೆ ನಮ್ಮ ಮನೆಗೆ ಬಂದು ಪ್ರೀತಿಯಿಂದ ಆಶೀರ್ವದಿಸಿ ತಮ್ಮ ಕೆಲವು ಹನಿಗವಿತೆಗಳನ್ನು ಕೊಟ್ಟು ಖುಷಿಯಿಂದ ಹಾರೈಸಿದ್ದಾರೆ. ಅವುಗಳನ್ನು ಸಂಚಿಕೆ ರೂಪದಲ್ಲಿ ಪ್ರತಿ ವಾರ ಪ್ರಕಟವಾಗುತ್ತದೆ. ಅಕ್ಷರ ಅಂದು […]Read More
ಸತ್ಯ ಹರಿಶ್ಚಂದ್ರ – ಮುಂದುವರೆದ ಭಾಗ ಕಳೆದ ವಾರ ಹರಿಶ್ಚಂದ್ರ ಕಥೆಯಾಧರಿಸಿ ಕನ್ನಡದಲ್ಲಿ ತೆರೆಕಂಡ ಎರಡು ಚಿತ್ರಗಳನ್ನು ನೆನಪು ಮಾಡಿಕೊಂಡೆವಷ್ಟೇ. ಅದರಲ್ಲಿ ಒಂದು ಮಾಹಿತಿ ಜಾರಿಹೋಗಿದೆ. ವಿಜಯ ಪ್ರೊಡಕ್ಷನ್ ರವರು ಅದನ್ನು ಏಕ ಕಾಲದಲ್ಲಿ ಕನ್ನಡ ಮತ್ತು ತೆಲಗು ಎರಡೂ ಭಾಷೆಯಲ್ಲಿ ನಿರ್ಮಿಸಿದ್ದು ತೆಲುಗಿನಲ್ಲಿ ಎನ್. ಟಿ. ರಾಮರಾವ್ ಹರಿಶ್ಚಂದ್ರ ನಾಗಿ ನಟಿಸಿದ್ದರು. ಇದು ಮಾತ್ರವಲ್ಲದೆ 1963 ರಲ್ಲಿ ಹರಿಶ್ಚಂದ್ರ ಕಥೆ ಹಿಂದಿಯಲ್ಲಿ ತೆರೆ ಕಂಡಿತ್ತು. ಆ ಚಿತ್ರದ ಹೆಸರು “ಹರಿಶ್ಚಂದ್ರ ತಾರಾಮತಿ” ಎಂದು.ಬಿ. ಕೆ. ಆದರ್ಶ್ […]Read More
ಹಿಂದಿನ ಸಂಚಿಕೆಯಿಂದ…ದಂಪತಿಗಳ ಪ್ರೀತಿ ಪಾತ್ರವಾದ ಆತ್ಮವು ಸದ್ದು ಬಂದ ಜಾಗದ ಬಾಗಿಲನ್ನು ಒದ್ದನಂತರ ಅಲ್ಲಿದ್ದ ದುಷ್ಟ ಆತ್ಮಗಳು ಬೆದರಿ ಕಂಗಾಲಾಗಿ ವಾಪಸ್ಸು ಅಲ್ಲಿದ್ದ ಅಷ್ಟದಿಗ್ಬಂಧನದಲ್ಲಿ ಸೇರಿ ಹೋಗುತ್ತವೆ. ದಂಪತಿಗಳು ಆ ಅಷ್ಟ ದಿಗ್ಬಂಧನದ ಸಮಸ್ಯೆಯಿಂದ ಹೊರಬರಲು ಮುಂದಿನ ದಾರಿ ತೋರುವಂತೆ ಮೊರೆಯಿಡ್ಡುತ್ತಾರೆ. ಆತ್ಮವು ಅವಿತಿರುವ ಶಿವಲಿಂಗವನ್ನು ಹುಡುಕಿ ತೆಗೆದು ಪೂಜೆ ಸಲ್ಲಿಸಿದರೆ ಪರಿಹಾರ ದೊರಕಿ ನನಗೂ ಸಹ ಮುಕ್ತಿ ದೊರೆಯುವುದು ಎಂದು ಹೇಳಿತು. ಆಗ ದಂಪತಿಗಳು ಮಕ್ಕಳ ನೆರವಿನಿಂದ ಶಿವಲಿಂಗವನ್ನು ಹುಡುಕಿ ತೆಗೆದು ಪೂಜೆ ಸಲ್ಲಿಸಿದಾಗ ತಕ್ಷಣವೇ […]Read More
ಹಿಂದಿನ ಸಂಚಿಕೆಯಿಂದ…ಡ್ರೈವರ್ ರೂಪದಲ್ಲಿದ್ದ ಶ್ಯಾಮ್ ಗೆ ಅಪ್ರಮೇಯನನ್ನು ಕೊಲ್ಲಲು ಶಾರ್ಪ್ ಶೂಟರ್ ಆಗಮಿಸಿರುವ ಸುದ್ದಿ ಕಳವಳನ್ನುಂಟು ಮಾಡಿತ್ತು. ಆದರಿಂದ ಪುಣೆ ಗೆ ತಾನು ಬರುವೆನು ಎಂದು ಅಪ್ರಮೇಯನ ಜೊತೆಯಲ್ಲೇ ಹೊರಟ. ಮುಂದೆ… —ಹದಿನೇಳು– ರಸ್ತೆಯ ಮೇಲೆ ಕಾರೋಡುತ್ತಿತ್ತು. ಅಪ್ಪುವಿನ ಮನಸ್ಸು ಈಗ ಬಹಳವೇ ಶಾಂತವಾಗಿತ್ತು. ಸಾಯಲು ಸಿದ್ಧನಾದ ಮೇಲೆ ಬೇರೆಲ್ಲವೂ ಗೌಣವಾಗಿಬಿಡುವುದೆಂಬ ವಿಷಯ ಅವನಿಗೆ ತಿಳಿದಿತ್ತು. ನೆನ್ನೆ ಡ್ರೈವರ್ ಶ್ಯಾಮ್ ಬಳಿ ವಾಸಾಂಸಿ ಜೀರ್ಣಾನಿ ಶ್ಲೋಕವನ್ನು ಹೇಳಿದ ಮೇಲೆ ಅವನ ಮನಸ್ಸಿನಲ್ಲಿ ಜಾತಸ್ಯ ಹಿ ಧ್ರುವೋ ಮೃತ್ಯುಃ| […]Read More
–ಶಬೆಲ್ಲಿ ತೊರೆದು– ಮುಂದೇನು ಹಾಗಾದರೆ! ಮುಸ್ತಫಾ,ಘಂಟೆ ಕಳಚಿ ಕಾಲ ಮೇಲೆ ಬಿದ್ದಂತೆ ಕೊಟ್ಟಿದ್ದ ಖಡಕ್ ಏಟು, ಅದರಿಂದ ಮುಖದಮೇಲೆ ಆವರಿಸಿದ್ದ ಕಟುಸತ್ಯದ ಗಂಟುಗಳಿದ್ದ ಹಾಗೆಯೇ, ಚಾಲಕನಿಗೆ ಥ್ಯಾಂಕ್ಸ್ ಹೇಳಿ, ಪೆಟ್ಟು ತಿಂದ ಪ್ರಾಣಿಯ ಥರ ಹೋಟೆಲ್ ರೂಮ್ ಸೇರಿದವನೇ, ಹಸಿವಾಗುವವರೆಗೂ ರೂಮಲ್ಲಿ ಬಿದ್ದುಕೊಂಡಿದ್ದು, ಊಟ ಎಂಬ ಮತ್ತೊಂದು ‘ಸಂಭ್ರಮ’ ಕ್ಕಾಗಿ ಮೇಲೆ ಹೋಗಿ ಕೂತೆ.‘ಹೌದು, ಅಣ್ಣ ಹೇಳಿದ್ದ ಆ ಡಾ. ಜಾರ್ಜ್ ಬಗ್ಗೆ, ಯಾರನ್ನ ಕೇಳಲಿ?ನನಗೆ ಪರಿಚಯಗಳಾದರೂ ಎಲ್ಲಿ, ಈ ಊರಲ್ಲಿ? ಅಕಸ್ಮಾತ್ ಅವರು ಬರಲೇ ಇಲ್ಲ; […]Read More