ಶಬ್ದಗಳು ಬಿಕ್ಕುತ್ತಲಿವೆ.ನಿನ್ನ ವಣಿ೯ಸಲುಕಂಗಳ ಕಾಂತಿ ಹಿಂಗುತಿದೆನಿನ್ನ ನೋಡುತಲಿ. ಎದೆಯೊಳಗೆ ಚಿತ್ತಾರಮನದೊಳಗೆ ರಂಗವಲ್ಲಿಎಂದು ಮುದ್ರಿಸಿದನೋನನ್ನೂಳಗಿನ ಪ್ರೇಮಿ! ಅಳಿಸಿಹಾಕು ವಿರಹಉಳಿಸು ಈ ಜೀವದುಸಿರಈ ಸಂಕಟದಿಂದಎಂದೆಂದಿಗೂ ನಿರಂತರ ಪವನ ಕುಮಾರ ಕೆ ವಿ ಬಳ್ಳಾರಿRead More
ನಮ್ಮ ಸುಂದರ ಹಕ್ಕಿಗಳಲ್ಲಿ ಒಂದಾದ ನೆಲಸಿಳ್ಳಾರಗಳು ನೆಲದ ಮೇಲೆ ಆಹಾರ ಅರಸುವ ಪ್ರಭೇದ. ಇದರ ಹೆಸರಿನಲ್ಲರಿವ “ನೆಲ” ಅದನ್ನೇ ಸೂಚಿಸುತ್ತದೆ. ಹೀಗೆಯೇ ಬಂಡೆ ಇಲ್ಲವೆ ಕಲ್ಲು ಸಿಳ್ಳಾರಗಳೂ ಇವೆ. ಅವು ಬಂಡೆಗಳ ನಡುವೆ ಹೆಚ್ಚು ಕಾಣಸಿಗುತ್ತವೆ. ನೆಲಸಿಳ್ಳಾರಗಳು ಕಾಡಿನ ನೆಲಹಾಸಿನಲ್ಲಿ ಒಣ ಎಲೆಗಳನ್ನು ತಲಕೆಳಗು ಮಾಡುತ್ತಾ ಹುಳ, ಜೇಡ ಇತ್ಯಾದಿಗಳನ್ನು ಹುಡುಕಿ, ಹಿಡಿದು ತಿನ್ನುತ್ತವೆ. ಒಟ್ಟಾರೆಯಾಗಿ ಸಿಳ್ಳಾರಗಳನ್ನು ತೆಗೆದುಕೊಂಡರೆ ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತೆಂಟು ಇಲ್ಲವೆ ಇಪ್ಪತ್ತೊಂಬತ್ತು ಪ್ರಭೇದಗಳ ಸಿಳ್ಳಾರಗಳು ಕಂಡುಬರುತ್ತವೆ. ಜೊತೆಗೆ ನಾಲ್ಕು ಅಲೆಮಾರಿ ಹಾಗೂ ಎರಡು […]Read More
ಅಮ್ಮನು ಮಾಡುವ ಅನ್ನೆ ಸೊಪ್ಪಿನ ಮಜ್ಜಿಗೆ ಸಾರನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಚಳಿಗಾಲಕ್ಕೆ ಸವಿಯಲು ಅತ್ಯಂತ ರುಚಿಕರವಾದ ಖಾದ್ಯ. ಅಷ್ಟೇ ಅಲ್ಲದೆ ಅನ್ನೆ ಸೊಪ್ಪಿನಿಂದ ಮಾಡಿದ ಪಲ್ಯ ಸಾರು ಇತ್ಯಾದಿಗಳು ನಾಲಿಗೆಗೆ ಮುದವನ್ನು ನೀಡುತ್ತದೆ. ಅನ್ನೆ ಸೊಪ್ಪು ಬಹಳ ವಿಶೇಷವಾದದ್ದು ಏಕೆಂದರೆ ಹೊಲದಲ್ಲಿ ಅಲ್ಲಲ್ಲಿ ಬೆಳೆಯುವ ಸಸ್ಯವಾಗಿದೆ. “ಐಪೊಮೊಯಿ ಅಕ್ವಾಟಿಕಾ” (Ipomoea Aquatica) ಎಂಬ ವೈಜ್ಞಾನಿಕ ಹೆಸರುಳ್ಳ ಉಭಯಚರ ಸಸ್ಯವಾಗಿದ್ದು ಇದನ್ನು ಆಂಗ್ಲ ಭಾಷೆಯಲ್ಲಿ “ವಾಟರ್ ಸ್ಪಿನಾಚ್” (Water Spinach) ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ದಕ್ಷಿಣ […]Read More
ಇಂದಿನ ವೈಜ್ಞಾನಿಕ ಯುಗದಲ್ಲಿರುವ ನಮಗೆ ಬಹಳಷ್ಟು ತಂತ್ರಜ್ಞಾನ ಬಳಕೆಯು ಅಭ್ಯಾಸವಾಗಿ ಹೋಗಿದೆ. ಅದರಲ್ಲಿಯೂ ಜಂಗಮವಾಣಿ (ಮೊಬೈಲ್) ಎಷ್ಟು ಸೌಲಭ್ಯಗಳನ್ನು ಹೊಂದಿದೆ ಎಂದರೆ, ಕೂತ ಜಾಗದಿಂದಲೇ ಬೇಕಾದವರನ್ನು ನೋಡಬಹುದು, ರಂಜಿಸಬಹುದು, ಕಲಿಯಬಹುದು, ಮಿತಿಯೇ ಇಲ್ಲದಷ್ಟು ಉಪಯೋಗ ಜಂಗಮವಾಣಿಯಲ್ಲಿ ತುಂಬಿದೆ. ಜಂಗಮವಾಣಿಯ ಸಹಾಯದಿಂದ ಜನರು ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಸಹಜವಾಗಿದೆ. ಇನ್ನು ಅದರ ದುರ್ಬಳಕೆ ಅವರವರ ಭಾವನೆಗೆ ಬಿಟ್ಟದ್ದು ಅಲ್ಲವೇ? ಹೀಗೆ ಅದೊಂದು ತಣ್ಣನೆಯ ಚಳಿ ತುಂಬಿದ, ಮಳೆ ಸುರಿಯುತ್ತಿರುವ ಮುಂಜಾನೆ, ನವ ವಿವಾಹಿತ ಸತಿ ಪತಿಯರ ವಿರಹಕಾಲ. […]Read More
ಅವಳು ಅವಳಲ್ಲ!ಕ್ಷಮಿಸಿ,ಎಲ್ಲರೂ ಊಹಿಸಿದ ಹಾಗಲ್ಲ!ಅವನೊಳಗೆ ಅವಳಾಗಿಎಲ್ಲ ಭಾವಗಳಲ್ಲೊಂದಾಗಿಗೊಂದಲಕ್ಕೀಡು ಮಾಡುತ್ತಾಳೆನನ್ನನ್ನೇ ನಾ ಪ್ರಶ್ನೆ ಮಾಡಿಕೊಳ್ಳವಂತೆ! ಗಂಡಸಿನ ನಡೆಗಡಸು ಕಾಲುಗಳುಮಾತೂ ಕೂಡ ಒರಟುಹೆಚ್ಚು ಕೆಮ್ಮಿದರೆ ಒಂದೇ ಏಟುಪಟಾಕಿ ಸಿಡಿಯುವ ಹಾಗೆಸಿಡಿಲಾಗಿ ಭೋರ್ಗರೆವಳುಕೋಪಕ್ಕೆ ಇವಳದೇ ರೂಪವಿರಬೇಕು ಮೋಟು ಜಡೆಯಜೀನ್ಸ್ ತೊಡುಗೆಯಗೋಧಿ ಬಣ್ಣದ ಒಣಕಲು ದೇಹಕಾಜಲ್ ಬೇಡದ ಕಣ್ಣುಗಳುಲಿಪ್ಸ್ಟಿಕ್ಕನ್ನೇ ಹೋಲುವ ತುಟಿಗಳುಗುಳಿಕೆನ್ನೆಗಳೇ ಅವಳ ಅಲಂಕಾರಮೂಗುತಿಯೇ ದೃಷ್ಟಿಬೊಟ್ಟುಮುಟ್ಟಿದರೆ ಖಂಡಿತ ದೊಡ್ಡ ಪೆಟ್ಟು ಆದರೂ..ನನ್ನವಳು ನೀವಂದುಕೊಂಡ ಹಾಗಲ್ಲ!ಹೂದೋಟಕ್ಕೇ ಸುಗಂಧ ಸೂಸುವ ದುಂಬಿಇಳೆಗೆ ಮಳೆಯ ಆಹ್ವಾನಿಸೋ ಮೂರುತಿರಾಶಿ ಹಣ್ಣುಗಳಲ್ಲಿನ ಸ್ವಾದಮನಬಿಚ್ಚಿ ಹಾರಾಡೋ ಹಕ್ಕಿರಚ್ಚೆ ಹಿಡಿವಳು ಬಿಕ್ಕಿ ಬಿಕ್ಕಿನನ್ನನ್ನೇ […]Read More
ಭಜರಂಗಿ ಮೊದಲ ಚಿತ್ರಕ್ಕು ಇದಕ್ಕೂ ಸಂಬಂಧವಿಲ್ಲ ನಿಜಇಂತದೊಂದು ಕಲ್ಪನೆ ಹರ್ಷ ಅವರಿಗೆ ಬಂದದ್ದು ಅದಕ್ಕೆ ಶಿವಣ್ಣ ನ ಒಪ್ಪಿಗೆ ಮೆಚ್ಚುವಂತದ್ದೇ.ಕಾಲ್ಪನಿಕ – Fantasy ಕಥೆಈ ಚಿತ್ರವನ್ನು ಹಾಗೆ ನೋಡಬೇಕುಲೋಪ ದೋಷಗಳು ಏನೇ ಇದ್ದರೂ ರಪ್ಪಂತ ಪಾಸ್ ಹಾಗುತ್ತವೆ ಮೊದಲರ್ದ ಅಕ್ಕನ ಪ್ರೀತಿಯಲ್ಲಿ ಶೃತಿ ಪ್ರೇಕ್ಷಕರನ್ನು ಆಕ್ರಮಿಸುತ್ತಾರೆ. ಇನ್ನು ನೆಪ ಮಾತ್ರಕ್ಕೆ ಅಂಜನಾ ಮತ್ತೆ ಇನ್ನು ಬರುವ ಪಾತ್ರಗಳು ಮೊದಲ ಭಜರಂಗಿ ಚಿತ್ರದಲ್ಲಿ ಅಬ್ಬರಿಸಿದ ಸೌರವ್ ಲೋಕೇಶ್ ಇಲ್ಲಿ ವೈದ್ಯೋ ನಾರಾಯಣ ಹರಿ ಇನ್ನು ಶಿವಣ್ಣ ಅಭಿನಯ ದೂಸ್ರಾ […]Read More
ಪಾರ್ಕ್ ಜಿ-ಮಿನ್ BTSನ ಇನ್ನೊಂದು ಕಾಮನಬಿಲ್ಲಿನ ಬಣ್ಣದಂತವನು. ಇವನ ಸ್ಟೇಜ್ ಹೆಸರು ಜಿಮಿನ್. 26 ವರ್ಷ ವಯಸ್ಸಿನ ಜಿಮಿನ ಹುಟ್ಟಿದ್ದು ಅಕ್ಟೋಬರ್ 13, 1995ರಂದು.ತಂದೆ, ತಾಯಿ ಮತ್ತು ತಮ್ಮನನ್ನು ಒಳಗೊಂಡ ಚಿಕ್ಕ ಕುಟುಂಬ. ಪುಟ್ಟ ಹುಡುಗನಾಗಿದ್ದಾಗ ಜಿಮಿನ್ ತಾನು ಬೆಳೆದು ದೊಡ್ಡವನಾದ ಮೇಲೆ ಹಾಡುಗಾರನಾಗುವೆ ಇಲ್ಲಾಂದ್ರೆ ಪೋಲೀಸ್ ಆಗುವೆ ಎಂದು ಕನಸು ಕಾಣುತ್ತಿದ್ದ. ವಿಧಿ ಆತನು ಹಾಡುಗಾರನಾಗಬೇಕೆಂದು ಹಾರೈಸಿತು. ಜಿಮಿನ್ ತನ್ನ ಶಾಲಾ ದಿನಗಳಲ್ಲಿ ಡ್ಯಾನ್ಸ್ ಬಗ್ಗೆ ಅಪಾರ ಒಲವು ಇರಿಸಿಕೊಂಡಿದ್ದನು. ಅವನ ಡ್ಯಾನ್ಸ್ ಟೀಚರ್ ಒಬ್ಬರು […]Read More
ಸತ್ಯ ಹರಿಶ್ಚಂದ್ರ ಸತ್ಯ ಹರಿಶ್ಚಂದ್ರ ಡಾ. ರಾಜಕುಮಾರ್ ಅಭಿನಯದ ಶ್ರೇಷ್ಠ ಹಾಗು ಯಶಸ್ವೀ ಚಿತ್ರಗಳಲೊಂದು. ಈ ಚಿತ್ರದಲ್ಲಿ ಪಂಡರೀಭಾಯಿ (ಚಂದ್ರಮತಿ) ಉದಯಕುಮಾರ್ (ವಿಶ್ವಾಮಿತ್ರ) ನರಸಿಂಹರಾಜು (ನಕ್ಷತ್ರಿಕ), ಎಂಪಿ ಶಂಕರ್ (ವೀರಭಾವು), ಕೆ ಎಸ್ ಅಶ್ವಥ್, ದ್ವಾರಕೀಶ್, ಮೇಕ್ಅಪ್ ಸುಬ್ಬಣ್ಣ,ಮತ್ತಿತರ ಕಲಾವಿದರಿಂದ ಕೂಡಿದ್ದು.ವಿಜಯ ಪ್ರೊಡಕ್ಷನ್ ನ, ಕೆ ವಿ ರೆಡ್ಡಿ ನಿರ್ಮಿಸಿ ಕನ್ನಡದ ಮೇರು ಚಿತ್ರಸಾಹಿತಿಯಾದ ಹುಣಸೂರು ಕೃಷ್ಣಮೂರ್ತಿ, ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯವನ್ನಾಧರಿಸಿ ನಿರ್ದೇಶಿಸಿದ್ದಾರೆ. ಹುಣಸೂರರು ಬರೆದ ‘ನಮೋ ಭೂತನಾಥ’, ಕುಲದಲ್ಲಿ ಕೀಳ್ಯಾವುದೋ, ಮುಂತಾದ ಹಾಡುಗಳು ಪೆಂಡ್ಯಾಲ […]Read More
ನಿಮ್ಮ ಕುಲದವರಾರೊ ನಿಧನರಾದರು ಎಂಬದುಮ್ಮಾನ ತರುವಂಥ ಸುದ್ದಿ ತಿಳಿದೊಡನೆಉಮ್ಮಳಿಸದೆಯೆ ಅವರ ಅಂತ್ಯ ಸಂಸ್ಕಾರಕ್ಕೆಒಮ್ಮತದಿ ನೆರವಾಗು- || ಪ್ರತ್ಯಗಾತ್ಮ || ಶವದ ವಾಹಕರಾರೂ ಇರದೆ ತೊಳಲಾಡುತಿರೆಅವರ ನೀ ಸಂತೈಸಿ ಜನರ ಕಲೆ ಹಾಕು,ಶವದ ವಾಹಕನಾಗಿ ಕಷ್ಟದಲಿ ನೆರವಾಗುಅವಮಾನವೇನಿಲ್ಲ- || ಪ್ರತ್ಯಗಾತ್ಮ || ಸಿರಿವಂತನಾದವಗೆ ಸರಸತಿಯ ಒಲವಿಲ್ಲಸರಸತಿಯು ಒಲಿದವನಿಗೆ ಸಿರಿ ಒಲಿಯಲಿಲ್ಲಸರಸತಿಯ ವರಪಡೆದ ಸಿರಿವಂತರಿಳೆಯೊಳಗೆಬೆರಳೆಣಿಕೆ; ಬಹಳಿಲ್ಲ- || ಪ್ರತ್ಯಗಾತ್ಮ || ಸತಿಪತಿಗಳೊಂದಾಗಿ ಬಾಳುವುದು ಅಪರೂಪಮತಭೇದದಿಂದಾಗಿ ವಿರಸವೇ ಹೆಚ್ಚುಸತಿಯೊಮ್ಮೆ ಪತಿಯೊಮ್ಮೆ ಮೇಲುಗೈ ಪಡೆಯುವರುಸತತ ಹೋರಾಟ ಬಾಳ್- || ಪ್ರತ್ಯಗಾತ್ಮ || ಎನ್. […]Read More
–ಹದಿನಾರು– ನಾವು ಕಥೆಯಲ್ಲಿ ಈಗ ಸ್ವಲ್ಪ ಹಿಂದೆ ಹೋಗಬೇಕು. ಅಪ್ರಮೇಯ ತೀರ್ಥಹಳ್ಳಿಯವನು. ಅವನ ತಂದೆ ಅವನನ್ನು ಕುಮಾರಾನಂದಸ್ವಾಮಿಗಳಿಗೆ ಒಪ್ಪಿಸುವೆನೆಂದ. ಹದಿನಾರನೇ ವಯಸ್ಸಿಗೆ ಸರಿಯಾಗಿ ಮೊದಲೇ ಹೇಳಿದಂತೆ ಅಪ್ರಮೇಯ ಅಥವಾ ಅಪ್ಪು ಜೋಷಿಮಠದ ಗುರುಗಳ ಆಶ್ರಮ ಸೇರಿದ. ಗುರುಗಳು ಅವನನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿದರು. ಇವನೇನಾದರೂ ತಂದೆಯ ಬಲವಂತಕ್ಕೆ ಇಲ್ಲಿಗೆ ಬಂದನೇ ಅಥವಾ ಅವನಿಗೂ ಇಲ್ಲಿ ಇರಲು ಇಚ್ಛೆ ಇದೆಯೇ? ಇಂತಹ ಅನೇಕ ಪ್ರಶ್ನೆಗಳು ಗುರುಗಳನ್ನು ಬಾಧಿಸಿದ್ದವು. ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ. ಏಕೆಂದರೆ ಚಿಕ್ಕವಯಸ್ಸಿನಲ್ಲೇ ಸ್ವಾಮೀಜಿಗಳಾದವರು ನಡೆಸುವ ಆಟಗಳು, […]Read More