ನಿನ್ನ ದೇಹಕ್ಕಿದು ತಿಳಿದಿಲ್ಲ

ಹೇ ನೀನು, ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನು ಯಾರೆಂದುನಿನೆಷ್ಟು ಮುಖ್ಯ ಮನೆಯವರಿಗೆಂದುನೀನೆನು ಕೆಲಸ ಮಾಡುತ್ತೀ ಎಂದುನೀನು ನಡೆಯುವವನೋ, ಓಡುವವನೋ, ಹಾರುವವನೋ ಎಂದು… ನಿನ್ನ ದೇಹಕ್ಕಿದು ತಿಳಿದಿಲ್ಲ ;ನಿನ್ನನು ಮೆಚ್ಚುವವರೆಷ್ಟೆಂದುನಿನ್ನ ನಿಂದಿಸಿ ಹಣಿಯಲು ಹಪಹಪಿಸುವರೆಷ್ಟೆಂದುನಿನ್ನಿಂದ ಒಳಿತುಂಡವರ್ಯಾರೆಂದುನೀನು ವಂಚಿಸಿದವರು ಏನಾದರೆಂದು ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನ್ಯಾವ ಜಾತಿಯವನೆಂದುನೀನೇನು ತಿನ್ನುತ್ತೀ ಎಂದುನೀನು ಪೂಜಿಸುವ ದೇವರ್ಯಾರೆಂದುನೀನು ಆಸ್ತಿಕನೋ,ನಾಸ್ತಿಕನೋ ಎಂದು ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನು ಗೆದ್ದ ಪ್ರಶಸ್ತಿಗಳುಸೋತ ಪಂದ್ಯಗಳು ಎಷ್ಟೆಂದುನಿನ್ನ ಪ್ರೀತಿಸುವವರೆಷ್ಟುನಿನ್ನ ದ್ವೇಷಿಸುವವರೆಷ್ಟೆಂದು ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನು ಕವಿಯೆಂದುನೀನು ಕಾರ್ಮಿಕನೆಂದುನೀನೊಬ್ಬ ಅಪ್ಪನೂ,ಅಮ್ಮಳೂಅಣ್ಣನೂ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-5

ಮೊಗದಿಶು ಕಂಡೆ ಅಂತೂ ನನ್ನ ವೃತ್ತಿ ಬದುಕಿನ ಮುಂದಿನ ಕಾರ್ಯಕ್ಷೇತ್ರದ ಮಣ್ಣಿನಮೇಲೆ ಕಾಲಿಟ್ಟಿದ್ದಾಗಿತ್ತು. ಅಲ್ಲಿ ಇನ್ನು ಮುಂದೆ ಅದೆಷ್ಟು ಸಂವತ್ಸರಗಳ ಬದುಕೋ ಏನೋ; ಸದ್ಯಕ್ಕೆ ಯಾರ ಊಹೆಗೂ ನಿಲುಕದ್ದು. ನನ್ನನ್ನು ಹಾರ್ಗೀಸಾದ, ‘ಸರ್ಕಾರಿ ನೌಕರರ ವಿಮೆಯ ಔಷಧಾಲಯ’ದ ಕೆಲಸಕ್ಕೆ ಕರೆಸಿಕೊಳ್ಳಲಾಗಿತ್ತು. ಹಾಗಾದರೆ ಮೊಗದಿಶುಗೆ ಟಿಕೆಟ್ ಕಳಿಸಿದ್ದರೇಕೆ? ಅಣ್ಣನಿಂದ ಕೇಳಿದ ಮೇಲೆ ತಿಳಿಯಿತು. ಆ ಸಂಸ್ಥೆಯ ಕೇಂದ್ರ ಕಾರ್ಯಸ್ಥಾನ ಇರುವುದು, ರಾಜಧಾನಿ ಮೊಗದಿಶುವಲ್ಲಿ; ಆದ್ದರಿಂದ, ಅಲ್ಲಿಗೇ ಮೊದಲು ಹಾಜರಾಗಬೇಕೆಂದು (Duty Reporting Headquarters) ನಿಯಮ. ಹಾರ್ಗೀಸಾ ತಲಪಿದ ಮೊದಲ […]Read More

ಪರಾಭವ ಭಾವನಾ – 15 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಅಪ್ರಮೇಯ ಅಹೋಬಿಲಂ ನಲ್ಲಿನ ನರಸಿಂಹ ದೇವರ ಮೂರ್ತಿಗಳನ್ನು ನೋಡಿ ವಿಸ್ಮಯನಾಗಿದ್ದಾಗ ನಾಯಕ್ ನ ಆದೇಶದಂತೆ ನೀಲಾಂಬರಿ ಅಪ್ಪುವನ್ನು ಚಂಚಲಗೊಳಿಸಲು ಪ್ರಯತ್ನಿಸುತ್ತಾಳೇ ಆದರೆ ಪಾಲಿಸುವುದಿಲ್ಲ. ಆದರೆ ಅಪ್ರಮೇಯನಿಗೆ ಇವಳ ವಿಗ್ರಹ ಕಡಿಯುವ ಹುನ್ನಾರ ಬಹು ಬೇಗ ಅರ್ಥವಾಗುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮಿಯ ದರ್ಶನಕ್ಕೆ ಅಪ್ರಮೇಯ ಪ್ರಯಾಣಿಸುತ್ತಾನೆ. ಮುಂದೆ… —ಹದಿನೈದು– ಸುಮಾರು ಎರಡೂವರೆ ಗಂಟೆ ಪ್ರಯಾಣ ಮಾಡಿ ಕರ್ನೂಲು ತಲುಪಿದ್ದರು. ಕಳ್ಳ ಶಿಷ್ಯನಿಗೆ ಇದೊಂದು ಶಾಪದಂತಿತ್ತು. ಇದೆಂತಹ ಬೇಡದ ಉಪದ್ವ್ಯಾಪ! ನೇರವಾಗಿ ಆಶ್ರಮದ ಕಡೆಗೆ ಹೋಗಿದ್ದರೆ ಎಲ್ಲಾದರೂ ಆ ವಿಗ್ರಹಗಳನ್ನು […]Read More

ನಲಿವ ನಾಗದಳಿ

ಹಳ್ಳಿಗಳಲ್ಲಿ ಹಿತ್ತಲಿನತ್ತ ನಡೆದರೆ ಪುಟ್ಟ ಹಸಿರನ ತೋಟ ಕಾಣ ಬರುತ್ತದೆ. ಈ ಹಸಿರಿನ ತೋಟದಲ್ಲಿ ಅತಿ ಬಳಕೆಯ ಸಸ್ಯಗಳು ಹೂ ಬಿಡುವ ಸಸ್ಯಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಇವುಗಳ ನಡುವೆ ನಾಗದಳಿ ಸಸ್ಯವು ಕೂಡ ಕಾಣಬಹುದು. ನೋಡಲು ಎಳೆ ಬೂದು ಹಸಿರಿನ, ಪುಟ್ಟ ಎಲೆಗಳು, ಸೂಕ್ಷ್ಮವಾದ ಹಳದಿ ಹೂವುಗಳನ್ನು ಹೊಂದಿರುವ ಗಿಡಮೂಲಿಕೆ ನಾಗದಳಿ. ನಾಗದಳಿಯ ವಿಶೇಷತೆ ಎಂದರೆ ಹತ್ತಿರ ಸುಳಿದರೆ ಸಾಕು ಸುಗಂಧವನ್ನು ಸೂಸುತ್ತದೆ. ಹಳ್ಳಿಗಳಲ್ಲಿ ಕಡ್ಡಾಯವಾಗಿ ಈ ಸಸ್ಯವನ್ನು ಬೆಳೆಸಲು ಕಾರಣ ಈ ಗಿಡಮೂಲಿಕೆ ಬೆಳದಲ್ಲಿ […]Read More

ಸಿನಿಮಾ ಸ್ವಾರಸ್ಯಕರ ಸಂಗತಿಗಳು-2

ವಸಂತಸೇನೆ ವಸಂತಸೇನೆಯ ತೆರೆಯ ಮೇಲಿನ ದಂಡಯಾತ್ರೆಗಳು ವಸಂತಸೇನೆಯ ಕಥೆಯತ್ತ ಸಿನೆಮಾ ಮಂದಿಯ ಆಸಕ್ತಿ ಉಂಟಾಗಲು ಕಾರಣ 5ನೇ ಶತಮಾನದ ಮಹಾನ್ ಸಂಸ್ಕೃತ ಭಾಷಾ ಕವಿ, ನಾಟಕಕಾರ ಶೂದ್ರಕ ನೆಂಬ ಮಹಾ ಪಂಡಿತ ರಚಿಸಿದ “ಮೃಚ್ಛಕಟಿಕ’ ಎಂಬ ನಾಟಕ. ವಸಂತಸೇನೆ ಎಂಬ ಅಪ್ರತಿಮ ಸುಂದರಿ ಗಣಿಕೆಯ ಬದುಕಿನ ಕಥಾನಕ, ಚಾರುದತ್ತನೆಂಬ ಬ್ರಾಹ್ಮಣ ಗಣಿಕ ವಸಂತಸೇನೆಯ ಮೋಹದಲ್ಲಿ ಬಿದ್ದು ಅನುಭವಿಸುವ ಕಷ್ಟ ಕೋಟಲೆಗಳ ರಂಜನೀಯ ಪ್ರಸ್ತುತಿ. ಮೊದಲಬಾರಿಗೆ ಮೃಚ್ಛಕಟಿಕ ನಾಟಕ ಕನ್ನಡ ಚಲನಚಿತ್ರವಾಗಿದ್ದು 1941 ರಲ್ಲಿ. ಕನ್ನಡ ಚಿತ್ರರಂಗದ ಭೀಷ್ಮರೆಂದೇ […]Read More

ಅನುದಿನವೂ ಬೆಳಕಾಗಿ ಬದುಕೋಣ

ಅನಿರೀಕ್ಷಿತವಾಗಿ ಕಷ್ಟಗಳು, ಆಪತ್ತುಗಳು ಬಂದೆರಗಿದಾಗ ದಿಕ್ಕೇ ತೋಚದಂತಾಗುತ್ತದೆ. ಕರೋನ ಸೋಂಕಿನ ಕರಾಳ ನರ್ತನಕ್ಕೆ ಇಡೀ ವಿಶ್ವವೇ ಕಂಗೆಟ್ಟು ಹೋಗಿತ್ತು. ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಆಚೆ ಬಾರದೆ ಕುಳಿತು ಪೇಪರ್ ಓದುತ್ತಿದ್ದಾಗ ಒಂದು ಮನೋಲ್ಲಾಸ ಘಟನೆ ಬರಹ ರೂಪದಲ್ಲಿ ಪ್ರಕಟವಾಗಿದ್ದು ಬಹು ದೊಡ್ಡ ಮಾನವೀಯತೆಯ ದರ್ಶನವನ್ನು ಕಷ್ಟದೊಂದಿಗೆ ಸ್ಪಂದನೆ, ಸಹಕಾರಗಳ ಕುರಿತು ವಿಷಯ ಒಂದು ಹೀಗಿತ್ತು. ಒಮ್ಮೆ ಹಾಲು ದೇವರ ಬಳಿ ಒಂದು ವರವ ಕೇಳಿತು “ದೇವರೇ ನಾನು ಹಾಲು ನಾನು ಹಸು ಎಮ್ಮೆಗಳಿಂದ ಹೊರಬಂದಾಗ ಶುದ್ಧವಾಗಿಯೇ […]Read More

ಒಂಟಿ ಮನೆ – 7

ಹಿಂದಿನ ಸಂಚಿಕೆಯಿಂದ…ದಂಪತಿಗಳ ಸಹಾಯಕ್ಕೆ ಬಂದ ಇನ್ನೊಂದು ಆತ್ಮವನ್ನು ಕಂಡು ವಿಚಲಿತಳಾದ ಪ್ರೇಯಸಿಯ ಆತ್ಮ ತನ್ನ ಪ್ರಿಯಕರನಾದ ಮಾಂತ್ರಿಕನ ದೇಹ ಹೊಕ್ಕಿತು. ಇದರ ಅರಿವಿಲ್ಲದ ಮಾಂತ್ರಿಕನ ಸಹಚರ ಮಾಂತ್ರಿಕನ ಕತ್ತನ್ನು ಕತ್ತರಿಸಿಬಿಟ್ಟ. ದಂಪತಿಗಳು ತಮ್ಮ ಸಹಾಯಕ್ಕೆ ಬಂದ ಆತ್ಮಕ್ಕೆ ಕೈ ಮುಗಿದು ಮುಂದೆ ಹೋಗುವ ದಾರಿಯ ಬಗ್ಗೆ ಸಲಹೆ ಕೇಳಿದರು. ಆತ್ಮವು ಅಷ್ಟ ದಿಗ್ಬಂಧನದ ಮೊದಲ ಹಂತದಿಂದ ಹೊರ ನಡೆಸುವ ಹೊಣೆ ತನ್ನದೆಂದು ಹೇಳುತ್ತ ಅಲ್ಲಿಂದ ಅವರನ್ನು ಅಲ್ಲಿಂದ ಕರೆದೊಯ್ಯಲು ಸಜ್ಜಾಯಿತು ಮುಂದೆ… ಅಲ್ಲಿಂದ ಮುಂದೆ ನಡೆದು ಅಲ್ಲಿಯೇ […]Read More

ನೀರಿನಲ್ಲಿನ ಕಾಗೆ! – Cormorants

ಕಪ್ಪಗಿದೆ ಎಂಬ ಕಾರಣದಿಂದ ಕಾಗೆ ಎನಿಸಿಕೊಂಡಿರುವ ಹಕ್ಕಿ ನೀರುಕಾಗೆ. ಹೆಸರೇ ಹೇಳುವಂತೆ ಇದು ಒಂದು ನೀರ ಹಕ್ಕಿ. ಇಂಗ್ಲಿಷಿನಲ್ಲಿ ಇದನ್ನು ಕಾರ್ಮೊರಂಟ್ (Cormorants) ಎನ್ನುತ್ತಾರೆ. ಭಾರತ ಉಪಖಂಡದಲ್ಲಿ ನಾಲ್ಕು ಮತ್ತು ಜಗತ್ತಿನಲ್ಲಿ ಸುಮಾರು ನಲವತ್ತು ಬಗೆಯ ನೀರು ಕಾಗೆಗಳಿವೆ. ಪ್ರಧಾನವಾಗಿ ಕಪ್ಪು ಬಣ್ಣದವು. ಮೀನೇ ಪ್ರಧಾನವಾದ ಆಹಾರ. ಉಪಖಂಡದಲ್ಲಿ ಪಿಗ್ಮಿ ನೀರುಕಾಗೆ, ಸಣ್ಣ ನೀರುಕಾಗೆ, ದೊಡ್ಡ ನೀರುಕಾಗೆ ಮತ್ತು ಇಂಡಿಯನ್ ಶಾಗ್ ಎಂದು ಕರೆಯಲಾಗುವ ಇನ್ನೊಂದು ಬಗೆಯ ನೀರುಕಾಗೆ ಕಂಡುಬರುತ್ತವೆ. ಒಳ್ಳೆಯ ಮುಳುಗು ಹಕ್ಕಿಗಳು. ನೀರಿನೊಳಗೆ ಮುಳುಗಿಯೂ […]Read More

ಸರದಿ ಮುರಿದ ಅಪ್ಪು

ಅಪ್ಪು ಇನ್ನಿಲ್ಲ… ಬೆಳಿಗ್ಗೆ ಎಂದಿನಂತೆ ಜಿಮ್ಮಿನಲ್ಲಿ ಕಸರತ್ತು ಮಾಡುತಿದ್ದಾಗ ಮೊದಲನೇ ಲಘು ಹೃದಯಾಘಾತವಾಗಿದೆ ನಂತರ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಎರಡನೆಯ ಆಘಾತವಾಗಿದೆ. ಸುಮಾರು 11 30 ರ ವೇಳೆಗೆ ವಿಕ್ರಂ ಆಸ್ಪತ್ರೆಗೆ ದಾಖಲಾದ ಅಪ್ಪು ಮದ್ಯಾಹ್ನವಾಗುವಷ್ಟರಲ್ಲಿ ಹಿಂತಿರುಗಿ ಬಾರದ ಲೋಕಕ್ಕೆ ಹೋಗಿಬಿಟ್ಟ. ಅಭಿಮಾನಿಗಳ, ಹಿತೈಷಿಗಳ, ಪ್ರೀತಿಪಾತ್ರ ಮನೆಯವರು ಬೆಳಿಗ್ಗೆಯಿಂದ ಮಾಡಿದ ದೇವರಲ್ಲಿನ ಪ್ರಾರ್ಥನೆಗೆ ದೇವರು ಕಿವಿ ಕೊಡಲಿಲ್ಲ. ಕೊನೆಗೂ ಅಪ್ಪ ಅಮ್ಮನ ಬಳಿ ತನ್ನ ಸರದಿಯನ್ನು ಮುರಿದ ಅಪ್ಪು ಹೋಗೇಬಿಟ್ಟ. 1975 ಮಾರ್ಚ್ 17 ರಂದು ರಾಜಕುಮಾರ್ ದಂಪತಿಗಳಿಗೆ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 13

ಹರಿವ ನೀರಿಗೆ ಎದುರು ಈಜದಿರು ಎಂದೆಂದುನೀರಿನೊಳಗಿಳಿಯದಿರು ಸುಳಿಗಳಿದ್ದಾವು,ಬಿರುಗಾಳಿಯೊಡನೆ ಮಳೆ-ಗುಡುಗು-ಸಿಡಿಲುಗಳಿರಲುಹೊರ ಹೊರಡದಿರು ಜೋಕೆ- || ಪ್ರತ್ಯಗಾತ್ಮ || ಅಧಿಕಾರವಿದ್ದಾಗ ಅಧಿಕ ಗೌರವವುಂಟು,ಅಧಿಕಾರವಿಲ್ಲದಿರೆ ಕಡೆಗಣಿಪರಯ್ಯಅದಕಾಗಿ ಕೊರಗದೆಯೆ ತಾಳ್ಮೆ ವಹಿಸಲು ಬೇಕುಅದುವೆ ಲೋಕದ ರೂಢಿ- || ಪ್ರತ್ಯಗಾತ್ಮ || ಹಳೆಯ ಗೆಳೆಯರು ಇಲ್ಲ; ಒಂಟಿಯಾದೆನು ಎಂದುಕಳವಳಿಸಬೇಡಯ್ಯ ಹೇ ವಯೋವೃದ್ಧ !ಹಳೆಯದೆಲ್ಲವು ಹೋಗಿ ಹೊಸತು ಬರಲೇ ಬೇಕುಇಳೆಯ ಧರ್ಮವೆ ಹಾಗೆ- || ಪ್ರತ್ಯಗಾತ್ಮ || ಕಳೆದುಕೊಂಡಿದ್ದ ಫೋರ್ಡ್ ಒಂದು ಪೆನ್ನಿ ಹಣವಕಳವಳಿಸಿ ಕೊನೆಗದನು ಹುಡುಕಿ ಹೊರತೆಗೆದಕಳೆದುದಲ್ಪವೊ ಹಿರಿದೊ ಬಾಳಿನೊಳಗೆಂದೆಂದುಸುಳಿಯಬಾರದುಪೇಕ್ಷೆ- || ಪ್ರತ್ಯಗಾತ್ಮ || […]Read More