ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-4

–ಹಾರ್ಗೀಸಾ ಸೇರಿದೇವು– ಇನ್ನೇನು ನಮ್ಮ ಬದುಕಿನ ಆ ಒಂದು ದಿನದ ಏಡನ್ ವಾಸದ ಅಂತಿಮ ಘಳಿಗೆ ಬಂದೇಬಿಟ್ಟಿತು ಅಂದುಕೊಂಡಾಗ, ಇಂಥ ಒಂದು ದೇಶಕ್ಕೆ, ದೇವರೇ ತೊರೆದು (godforsaken) ಹಾಳುಸುರಿವಂತೆ ತೋರುವ ನಾಡಿಗೆ, ಮತ್ತೆ ಎಂದಾದರೂ ಬರುವ ಸಾಧ್ಯತೆ ಖಂಡಿತ ಇಲ್ಲ ಎಂದು ಮನಸ್ಸು ಲೊಚಗುಡುತ್ತಿತ್ತು. ಅಷ್ಟು ಹೊತ್ತಿಗೆ ಬೋರ್ಡಿಂಗ್ ಆರಂಭ ಎಂಬ ಕರೆ ಧ್ವನಿವರ್ಧಕದಲ್ಲಿ ಪ್ರತಿಧ್ವನಿಸಿತು. ಕಮಲ ನನ್ನ ಕೈ ಹಿಡಿದೇ ಸಣ್ಣಸಣ್ಣ ಹೆಜ್ಜೆಗಳಲ್ಲೇ ನಡೆಯತೊಡಗಿದಳು. ಆ ಕಾಲಕ್ಕೆ ನಮ್ಮ ಬೆಂಗಳೂರಿನಂತೆ ಅಲ್ಲೂ ಸಹ ನಡಿಗೆಯಲ್ಲೇ ಹೋಗಿ […]Read More

ಕಾಡು ಕುರಿ – Barking deer

ಕಾಡು ಕುರಿ ಇದು ಜಿಂಕೆಗಳ ಜಾತಿಗೆ ಸೇರಿದ ಪ್ರಾಣಿ, ಇದಕ್ಕೆ ಬೊಗಳುವ ಜಿಂಕೆ ಎಂದೂ ಕರೆಯುತ್ತಾರೆ. ಆಂಗ್ಲದಲ್ಲಿ Barking deer ಅಥವಾ Muntjac ಎಂದು ಹೆಸರು, ನಮ್ಮ ಆಡು ಭಾಷೆಯಲ್ಲಿ ಕಾಡು ಕುರಿ ಎನ್ನುತ್ತೇವೆ ಆದರೆ ಇದು ಜಿಂಕೆಗಳ ಜಾತಿಗೆ ಸೇರಿದ ಪ್ರಾಣಿ, ಆದ್ದರಿಂದ ನಾನು ಮುಂದೆ ಬರೆಯುವಾಗ ಜಿಂಕೆ ಎಂಬ ಪದವನ್ನೇ ಬಳಸುತ್ತೇನೆ. ಇವು ಗೊರಸುಳ್ಳ ಪ್ರಾಣಿಗಳ ಸರ್ವಿಡೀ (Cervidae) ಕುಟುಂಬಕ್ಕೆ ಸೇರಿವೆ, ಎತ್ತರ 50-80 ಸೆಂ.ಮೀ, ತೂಕ 20-25 KG, ಗಂಡಿಗಿಂತ ಹೆಣ್ಣು ಚಿಕ್ಕದು, […]Read More

ಪರಾಭವ ಭಾವನಾ – 14 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ…ತಾನಿಳಿದುಕೊಂಡಿದ್ದ ಹೋಟೆಲ್ ಗೆ ಹಿಂತಿರುಗಿದಾಗ ಅಪ್ರಮೇಯನಿಗೆ ಇಂಟರ್ಪೋಲ್ ಏಜೆಂಟ್ ಸ್ಯಾಮ್ ಎದುರಾದ. ನಾಯಕ್ ನೀಲಂ ಳನ್ನು ಅಪ್ರಮೇಯನ ಹಿಂದೆ ಬಿಟ್ಟು ವಿಗ್ರಹ ಕದಿಸಲು ಸಂಚು ಹೂಡಿದ ಮುಂದೆ… -ಹದಿನಾಲ್ಕು- ಅಹೋಬಿಲದಲ್ಲಿ ಹೊಟೇಲ್‌ ರೂಮಿನಲ್ಲಿದ್ದರೂ ಚಡಪಡಿಸುತ್ತಿದ್ದ ಅಪ್ರಮೇಯ.  ಏಕೋ ಏನೋ ಬಂದಿದ್ದು ತಪ್ಪಾಯಿತಾ? ನೇರವಾಗಿ ಹೊರಟುಹೋಗಬೇಕಿತ್ತಾ? ಅವನ ಮನದಲ್ಲಿ ಅವನ ಶಿಷ್ಯರ ಬಗ್ಗೆ ಯಾವ ಕೆಟ್ಟ ಭಾವನೆಯೂ ಮೂಡದಿದ್ದುದು ಅವನಿಗೇ ಅಚ್ಚರಿಯಾಗಿತ್ತು. ಜೊತೆಗೆ ನಾಗ ಗಾಂಧಾರಿ ತಾನು ಇನ್ನು ಅಪ್ರಮೇಯನನ್ನು ನೋಡುವುದಿಲ್ಲವೆಂದೂ, ಮರಳಿ ಬೆಂಗಳೂರಿಗೆ ಹೋಗುವೆನೆಂದೂ ಫೋನ್‌ […]Read More

ಸಿನಿಮಾ ಸ್ವಾರಸ್ಯಕರ ಸಂಗತಿಗಳು-1

ಸಾವಿರ ಮೆಟ್ಟಿಲು ಚಿತ್ರ ಅಪೂರ್ಣವಾಗಿ ವರ್ಷಾಂತರದಲ್ಲಿ ಪೂರ್ಣಗೊಂಡು ಬಿಡುಗಡೆ ಕಂಡಂತೆ. ಹಲವು ಚಿತ್ರಗಳ ಪ್ರಕರಣಗಳು ನೆನಪಾಗುತ್ತಿವೆ. ಲವ್ ಅಂಡ್ ಗಾಡ್ ಮೊಘಲ್ ಎ ಆಜಾಮ್ ನಂತಹ ಅಧ್ಬುತ ಚಿತ್ರ ನಿರ್ಮಿಸಿದ ಕೆ. ಆಸಿಫ್, ಲೈಲಾ ಮಜ್ನು ಪ್ರೇಮದ ಕಥೆ ಆದರಿಸಿ “ಲವ್ ಅಂಡ್ ಗಾಡ್” ಚಿತ್ರವನ್ನು ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಪ್ರಾರಂಭಿಸಿದರು. ಗುರುದತ್ತ್, ನಿಮ್ಮಿ ನಾಸಿರ್ ಹುಸೇನ್, ಜಯಂತ್, ಪ್ರಾಣ್ ಮುಂತಾದವರ ತಾರಾಗಣ, ನೌಷಾದರ್ ಸಂಗೀತವಿದ್ದು, 1963 ರಲ್ಲಿ ಶೂಟಿಂಗ್ ಶುರುವಾಯಿತು. ಇದಕ್ಕೆ 1964 ರಲ್ಲಿ ಮೊದಲ […]Read More

ಬೆಳದಿಂಗಳ ಚುಂಬನ

ಬಾನಂಗಳದಲ್ಲಿ ಚಂದ್ರನು ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತಿರಲು, ತುಂತುರು ಸೋನೆಯ ಹನಿಗಳು ಮುತ್ತಿನಂತೆ ಕಂಗೊಳಿಸುತ್ತಿದ್ದವು. ನಿಶ್ಯಬ್ದವಾದ ರಸ್ತೆಯುದ್ದಕ್ಕೂ ತೋರಣದಂತೆ ಬೆಳೆದು ನಿಂತ ಮರಗಳು. ಇಂತಹ ಪ್ರಕೃತಿ ಸೌಂದರ್ಯದ ಹಾದಿಯಲ್ಲಿ, ಸೋನೇ ಮಳೆಯಲ್ಲಿ ತೋಯ್ದು ನೆಡೆಯುತ್ತಿದ್ದವು ಜೋಡಿ ಹಕ್ಕಿಗಳು. ಆಕೆಯಂತೂ ತಿಳಿ ನೀಲಿ ಸೀರೆಯನ್ನುಟ್ಟು ತನ್ನ ಬಲಗೈಯಲ್ಲಿ ಸೀರೆಯ ಸೆರಗನ್ನು ಹಿಡಿದು ನೆಡೆಯುತ್ತಿರಲು, ಕಾಲ್ಗೆಜ್ಜೆಯ ಸಪ್ಪಳ, ರೇಷ್ಮೆಯಂತ ಹರಡಿದ ಕೂದಲು ತಂಗಾಳಿಗೆ ಹಾರಾಡುತ್ತ, ಪದೇ ಪದೇ ಮುಂಗುರುಳು ಅವಳ ಕೆನ್ನೆಯನ್ನು ತೀಡುತ್ತಿರಲು, ಕಿವಿಯಲ್ಲಿ ಹರಳಿದ ಚುಮುಕಿ ಮಿನುಗುತ್ತಿದ್ದವು, ತನ್ನ […]Read More

ಒಂಟಿ ಮನೆ – 6

ಹಿಂದಿನ ಸಂಚಿಕೆಯಿಂದ…ದಂಪತಿಗಳ ಸಹಾಯಕ್ಕೆ ಬಂದ ಆ ಆತ್ಮವು ತನ್ನ ಶಕ್ತಿಯನ್ನು ಉಪಯೋಗಿಸುತ್ತಾ ಪತ್ನಿಯ ದೇಹದಲ್ಲಿ ಸೇರಿದ್ದ ಮಾಂತ್ರಿಕನ ಪ್ರೇಯಸಿಯ ಆತ್ಮವನ್ನು ಹೊರಗೆಳೆದು ಬಿಸಾಡಿತು. ಹೀಗೆ ಅವಳ ದೇಹದಿಂದ ಆತ್ಮ ಹೊರಬರುತ್ತಿದ್ದಂತೆ ಆಕೆಯ ದೇಹವು ಸಮಾಧಿಯ ಪಕ್ಕಕ್ಕೆ ಬಿದ್ದಿತು. ಇತ್ತ ಆಕೆಯ ಪತಿ ಕತ್ತಿಯಿಂದ ಹಗ್ಗವನ್ನು ಕತ್ತರಿಸಿ ಅದರ ಹಿಡಿತದಿಂದ ಬಿಡುಗಡೆಗೊಂಡ. ಮುಂದೆ… -ಆರು- ಆ ಪತಿಯ ಆತ್ಮವನ್ನು ಮತ್ತೆ ಅದರ ದೇಹದೊಳಕ್ಕೆ ಸೇರಿಸಲಾಯಿತು.ಆದರೂ ಆಕೆಯ ದೇಹಕ್ಕೆ ಎಚ್ಚರವಿರಲಿಲ್ಲ. ಹಗ್ಗದ ಬಂಧನದಿಂದ ಬಿಡುಗಡೆಗೊಂಡ ಆಕೆಯ ಪತಿ ತನಗೆ ಸಿಕ್ಕ […]Read More

ಕಾಜಾಣ-ಮಿಮಿಕ್ರಿ ಕೊತ್ವಾಲ – Drongo

ಸಹ್ಯಾದ್ರಿ ಮಲೆಗಳಲ್ಲೆಲ್ಲೋ ನೀವು ಪಕ್ಷಿ ವೀಕ್ಷಣೆ ಮಾಡುತ್ತಿದ್ದೀರೆಂದುಕೊಳ್ಳಿ. ಒಂದು ಹಕ್ಕಿಯ ಕೂಗು ಕೇಳುತ್ತಿದೆ, ಆದರೆ ಅದು ಕಾಣುತ್ತಿಲ್ಲ. ಪಕ್ಷಿ ವೀಕ್ಷಕರಿಗೆ ಇದು ಸಾಮಾನ್ಯ ಅನುಭವ, ಜೊತೆಗೆ ಅವರು ಆ ಪಕ್ಷಿಯನ್ನು ಹುಡುಕಿ ನೋಡುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಹೊಸದಾಗಿ ಪಕ್ಷಿ ವೀಕ್ಷಣೆಗೆ ತೊಡಗಿರುವವರನ್ನು ದಾರಿ ತಪ್ಪಿಸುವ ಕೂಗು ಎಂದರೆ ಈ ಕಾಜಾಣಗಳದ್ದು! ಏಕೆಂದರೆ ಇವು ಇತರ ಹಕ್ಕಿಗಳ ಧ್ವನಿಯನ್ನು ಚೂರೂ ಸಂದೇಹ ಬರದಂತೆ ಅನುಕರಿಸುತ್ತವೆ! ಇವನ್ನು ಪಕ್ಷಿಲೋಕದ ಮಿಮಿಕ್ರಿ ಕಲಾವಿದರು‍ ಎನ್ನಬಹುದು! ಇವುಗಳ ಇನ್ನೊಂದು ಅಭ್ಯಾಸವೆಂದರೆ ಹಾರಿ ಮತ್ತೆ […]Read More

ಆ ಎರಡು ಸಾಲುಗಳು

ಅವನೆಂದರೆ ಈಗಲೂ ಕೋಪ ನನಗೆಯಾಕೆಂದರೆ,ಅವಳಿಗೆ ನನ್ನ ಮಾರುದ್ದ ಕವಿತೆವಾಂತಿ ತರಿಸಿತುಅವನ ಎರಡೇ ಸಾಲುಗಳುಅವಳ ಹೃದಯ ಹೊಕ್ಕಿದವು ಕ್ಷಣಕ್ಕೆ ನನ್ನ ಪ್ರೀತಿಯ ಮರೆತುಮಾರುಹೋದಳು ಮೂವತ್ನಾಲ್ಕು ಬಾರಿಯಾರದೋ ಬಾಹ್ಯ ಸೌಂದರ್ಯಕ್ಕೆನನ್ನ ಮಾನ ಹರಾಜಿಗಿಟ್ಟಳುದೂರಿದಳು ಸುಖಾ ಸುಮ್ಮನೆಕೊಳ್ಳುವವರು ಸಿಗದೆನನ್ನ ಮಾನ ಬೀದಿಯಲ್ಲಿ ಕೊಳೆಯಿತು ತುಂಬಾ ಕಾಡಿದಳುಇಷ್ಟು ದಿನ ಕಾಪಾಡಿಕೊಂಡು ಬಂದಿದ್ದೆಈಗ ಆಕರ್ಷಣೆ ಎಂಬವಿಷದ ಮಾತ್ರೆಗೆ ಅಂಟಿತನ್ನನ್ನೇ ಸಾಯಿಸಿಕೊಳ್ಳುತ್ತಿದ್ದಾಳೆನನ್ನ ಪ್ರೀತಿಯನ್ನೂ ಕೂಡಲೆಕ್ಕವಿಲ್ಲದ ಹಾಗೆ ಮೆಟ್ಟಿ ನಿಂತಿದ್ದಾಳೆ ಅದೆಷ್ಪೋ ಬೇಡಿಕೊಂಡೆಇನ್ನೆಷ್ಟೋ ಪರದಾಡಿದೆಮುಳ್ಳು ಬೇಲಿ ಬಿಡಿಸಿ ದಾರಿ ಮಾಡಿದೆಆದರೆ,ಮುಳ್ಳನ್ನೇ ತಿನ್ನಲು ತಯಾರಾಗಿ ಹೋಗುತ್ತಿದ್ದಾಳೆಎದೆಯು ಸಿಡಿದುಪ್ರೇಮ ಕಾವ್ಯ […]Read More

ನಿಜಗುಣ – ಕಿರುಚಿತ್ರ

ಕುಂಭ ನಿರ್ಮಾಣ ಸಂಸ್ಥೆಯ ವತಿಯಿಂದ ಲಕ್ಷ್ಮೀನಾರಾಯಣ್ ಟಿ ಹಾಗು ಮಾಲೂರು ವಿಜಿಯವರ ಒಂದು ಕಿರು ಚಿತ್ರ. ನೋಡಿ ಹಾರೈಸಿ. ಸಾಹಿತ್ಯಮೈತ್ರಿ ತಂಡRead More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 12

ಆವ ಕೊಂಬೆಯ ಹೂವು ಆರ ಮುಡಿಗೋ ಕಾಣೆ !ಆವ ನದಿ ನೀರಾವ ಹೊಲಗದ್ದೆಗಳಿಗೊ !ಆವ ಪೆಣ್ಗಂಡುಗಳ ಒಲವು ಮತ್ತಾರಿಗೋ ?ದೇವನೊಬ್ಬನೆ ಬಲ್ಲ- || ಪ್ರತ್ಯಗಾತ್ಮ || ಹುತ್ತ ಗೆದ್ದಲ ಗೂಡು; ರೊಟ್ಟಿ ಜೇನಿನ ಗೂಡು,ಕತ್ತೆ ದುಡಿತವು ಅಷ್ಟೆ, ಅವಕಿಲ್ಲ ಲಭ್ಯ,ಹುತ್ತ ಹಾವಿನ ಪಾಲು, ಜೇನು ಮನುಜರ ಪಾಲುಎತ್ತಣದ ನ್ಯಾಯವಿದು- || ಪ್ರತ್ಯಗಾತ್ಮ || ಕೂರುಗುರು, ಕೊಂಬುಗಳು, ಕೋರೆ ಹಲ್ಲಿನ ಪ್ರಾಣಿ,ಕ್ರೂರಸರ್ಪಗಳಂಥ ವಿಷ ಜಂತುಗಳಲಿಕೂರಿತಹ ಕೈದುಗಳ ಜೊತೆಗೆ ಸರಸವು ಬೇಡ.ಮಾರಿಗೌತಣವದುವೆ- || ಪ್ರತ್ಯಗಾತ್ಮ || ಕತ್ತೆ ಕುದುರೆಯ ಹಿಂದೆ […]Read More