ರಾಧೆಯೊಲವಿನ ಪಯಣ ಮೊದಲ ಸಲ ನೋಡಿರಲುಮನದ ಕದತೆರೆದು ನಿ ಬಂದಿದ್ದೆ..!ಒಲವಿನ ಆ ನಿನ್ನ ನೋಟಕೆ..ಕಣ್ಣಂಚಲಿ ನಾ ಬಂಧಿಯಾಗಿದ್ದೆ!! ಮಂದಹಾಸದಿ ನಿ ನಕ್ಕಾಗನೂರೆಂಟು ಕನಸು ನಾ ಕಂಡಿದ್ದೆ..!ಹೃದಯವು ಬಿಡದೆ ಮಿಡಿದಾಗಲೇ..ಇನಿಯನಿವನೇ ಎಂದು ಬಗೆದಿದ್ದೆ!! ಕಣ್ಣಬಿಂಬದಲಿ ಸದಾ ನೀನಿರಲುಜನ್ಮಜನ್ಮಗಳ ಪ್ರೀತಿಗೆ ನಾ ಕರಗಿದ್ದೆ..!ನಿ ತೋರಿದ ಒಲುಮೆಯ ಭಾವಕೆ..ಮನದಲೇ ನಿನ್ನ ನಾ ವರಿಸಿದ್ದೆ!! ಹೇಳು ಕೃಷ್ಣಾ..ನೀನೇಕೆ ನಿನಗಾಗಿಮೀಸಲಾದ ಈ ರಾಧೆಯ ತೊರೆದಿದ್ದೆ..!ಭಾವಾಂತರಾಳದಿ ಹಗಲಿರುಳು ಕಾಯುತಾ..ನಿನ್ನ ನಾ ಮನದುಂಬಿ ಪ್ರೀತಿಸಿದ್ದೆ!! ಸುಮನಾ ರಮಾನಂದಮುಂಬೈRead More
ಸುರಕ್ಷಾ ಜಾಗೃತಿ – 4(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೊಂಡನಂತರ ನಾವೆಲ್ಲರೂ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಆಟದ ಕಡೆಗೂ ಗಮನವನ್ನು ಕೊಡಬೇಕು. ಆಟವೇ? ಹಾಗಾದರೆ ಈ ಆಟ ನಮಗೆ ಜಾಗೃತಿಯನ್ನು ಹೇಗೆ ಮೂಡಿಸುತ್ತದೆ? ಸುರಕ್ಷೆಯ ದೃಷ್ಟಿಯಲ್ಲಿ ಆಟಗಳ ಮಹತ್ವವೇನು? ಆಟಗಳು ಹೇಗೆ ಸಹಕಾರಿಯಾಗುತ್ತದೆ? ಹಾಗಾದರೆ ಅಂತಹ ಆಟಗಳು ಯಾವುವು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಉದ್ಬವವಾಯಿತಲ್ಲವೇ? ಸರಿ ಹಾಗಾದರೆ ಈ ಸುರಕ್ಷಾ ಜಾಗೃತಿಯಲ್ಲಿ ಆಟಗಳ ಮಹತ್ವವೇನು? ನಾವು […]Read More
ಆನ್ಲೈನ್ ದುನಿಯಾ ನಮ್ಮ ಭದುಕು OLX ನಲ್ಲಿಟ್ಟುಪೇಸ್ ಬುಕ್ನಲ್ಲಿ ಕಾಣದ ವರಿಗಾಗಿ ಹುಡುಕಾಡಿದೆವುಟ್ವಿಟರ್ನಲ್ಲಿ ಭಾಷಣ ಬಿಗಿದುಇನ್ಸ್ಟಾಗ್ರಾಮ್ ನಲ್ಲಿ ಬೆತ್ತಲಾದಿವಿ ಯೂಟೂಬ್ ನ ರಸಪಾಕಹೊಟ್ಟೆ ತುಂಬೀಸಿತೇಗ್ರಹಿಸಲಾರದ ವಾಸನೆಗೆಬಾಯೊಳಗೆ ನೀರೂರಿದಹಾಗೆ.. ನಮ್ಮ ಸಮಸ್ಯೆಗಳಿಗೆ ಜೀ. ಪೀ. ಟಿನೆರವಾಗುವುದೆಂದುಶಾಲೆ ಕಾಲೇಜುಗಳ ಮುಚ್ಚಿಬಿಡೋಣವೇ.. ಕೈ ಬೆರಳು ಚಲಿಸುತ್ತಿರುತ್ತವೆ ನಿರಂತರಬಾಸ್ ನಂಬುವುದಿಲ್ಲ ಎಂದಿಗೂಲೊಕೇಶನ್ ವೀಡಿಯೋಆಡಿಯೋ ರೆಕಾರ್ಡಿಂಗ್ಸಾಕ್ಷಿ ಸಮೇತ ದಿನ, ಪ್ರತಿ ದಿನ, ಕಟಕಟೆಯೊಳಗೆ ಜೀವನಈ ಬದುಕೆಷ್ಟು ಸಂಕೀರ್ಣ…. ಪವನ ಕುಮಾರ ಕೆ. ವಿ.ಬಳ್ಳಾರಿಮೊಬೈಲ್ : 9663346949Read More
ಸುರಕ್ಷಾ ಜಾಗೃತಿ – 3(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಪಂಚಜ್ಞಾನೇಂದ್ರಿಯಗಳು ಎಷ್ಟು ಪರಿಣಾಮಕಾರಿಗಳಾಗಿ ಜಾಗೃತಿಯನ್ನು ಮೂಡಿಸುತ್ತವೆಯೋ ಅಷ್ಟೇ ನಿಖರವಾಗಿ ನಮ್ಮ Sixth Sense / ಆರನೆಯ ಇಂದ್ರಿಯ ನಮ್ಮನ್ನು ಜಾಗೃತಿಯ ವಿಷಯದಲ್ಲಿ ಸದಾ ಎಚ್ಚರಿಸುತ್ತಲೇ ಇರುತ್ತದೆ. ಈ ಆರನೆಯ ಇಂದ್ರಿಯ ಹೇಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಅದು ಹೇಗೆ ಮುಂಚಿತವಾಗಿ ಮುಂದೆ ನಡೆಯಬಹುದಾಗ ಘಟನೆಗಳನ್ನು ಆಲೋಚಿಸುತ್ತದೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಿ ಸುಮಾರು 98 ರಿಂದ 99% ಈ ಆರನೆಯ ಇಂದ್ರಿಯದ […]Read More
ಸ್ಟೂಡಿಯೋ ಪ್ಲಾಟ್ ವಿದೇಶ ಪ್ರವಾಸ ಎಂದರೆ ಸ್ವಲ್ಪ ಖರ್ಚು ಜಾಸ್ತಿಯೇ! ಅದರಲ್ಲೂ ಯೂರೋಪ್ ಪ್ರವಾಸ ಎಂದರೆ ಮುಗಿಯಿತು. ಹೋಟೆಲ್ಗಳು ಬಹಳ ದುಬಾರಿ, ಆದರೂ ಸರಿಯಾಗಿ ಪ್ಲಾನ್ ಮಾಡಿದರೆ ಸ್ವಲ್ಪ ಹಣವನ್ನು ಉಳಿಸಿ ಚೆನ್ನಾಗಿ ಪ್ರವಾಸ ಮಾಡಬಹುದು. ಹಾಗಾದರೇ ಏನು ಮಾಡುವುದು? ಅದಕ್ಕೊಂದು ಪರಿಹಾರವಿದೆ. ವಿದೇಶಗಳಲ್ಲಿ ಅದರಲ್ಲೂ ಯೂರೋಪ್ನಲ್ಲಿ ಸ್ಟೂಡಿಯೋ ಪ್ಲಾಟ್ ಹಾಗೂ ಹಾಸ್ಟೆಲ್ ಎಂಬ ಪ್ರವಾಸಿ ಗೃಹಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ನಾನು ಯೂರೋಪ್ ಪ್ರವಾಸ ಹೋಗಿದ್ದಾಗ ಪ್ಯಾರಿಸ್ನಲ್ಲಿ ಈ ರೀತಿಯ ಸ್ಟೂಡಿಯೋ ಪ್ಲಾಟ್ನಲ್ಲಿ ಉಳಿದುಕೊಳ್ಳಬೇಕೆಂದು ನಿರ್ಧರಿಸಿ […]Read More
ಬೆಳಕಿನತ್ತ ಬದುಕು ನೇಸರನ ಸವಿಬೆಳಕ ಬಿಂಬದಲಿತರುಣಿ ತಾ ಹೊರಟಿಹಳು ಬದುಕಿನತ್ತ!ಸಾಗಿಹಳು ಕಾನನದ ಕಡುದಾರಿಯಲಿ..ದೃಷ್ಟಿ ಮಾತ್ರ ಕರದಲಿಹ ಕಂದೀಲಿನತ್ತ!! ನೆನೆಯುತಾ ಗತಜೀವನದಾನಂದವಮೂಡಿದೆ ಅವಳ ಮನದಲಿ ಸಂತಸ!ಕಷ್ಟಗಳ ಮೆಟ್ಟಿ ನಡೆಯುತಾ ಬಂದಂತೆ..ಹೃದಯದಿ ನೇಯ್ದಿಹಳು ಹೊಸ ಕನಸ!! ಕತ್ತಲದಾರಿಯಲೂ ಆ ಪುಟ್ಟಕಂದೀಲು ತಾ ಬೆಳಕಸೂಸಿ ನಕ್ಕಂತೆ!ಬೇಗುದಿಯ ಕಾರ್ಮೋಡವದು ಸರಿದು…ಅವಳ ಬಾಳಲಿ ಮತ್ತೆ ಸಂತಸದ ಕಂತೆ!! ಬೆಳಕದು ಮೂಡುವ ದಿಗಂತದಿಪಸರಿಸಿಹ ನಿಶೆಗೆ ಕಂದೀಲಿನ ಆಸರೆ!ಅವಳ ಬದುಕು ಮತ್ತೊಮ್ಮೆ ನಕ್ಕಿತು ಸರಿಸಿ..ಮನದಾಳದಿ ಕವಿದ ಸಂಕಟದ ತೆರೆ!! ಸುಮನಾ ರಮಾನಂದRead More
ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ ‘ಆರೋಗ್ಯ ಎಂದರೆ ಮನುಷ್ಯನ ದೇಹದ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯೇ’ ಆಗಿದೆ. ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಅವರ ಸಾಮಾಜಿಕ ಸ್ಥಿತಿ. ಈ ಮೂರೂ ಸುಸ್ಥಿಯಲ್ಲಿ ಇದ್ದರೆ ಮನುಷ್ಯನು ಆರೋಗ್ಯವಾಗಿ ಇರುತ್ತಾನೆ. ಮನುಷ್ಯ ಆರೋಗ್ಯವಾಗಿ ಇರಲು ಉತ್ತಮ ಆಹಾರ ಶುದ್ಧವಾದ ಗಾಳಿ ಮತ್ತು ಶುದ್ಧವಾದ ನೀರು ಸೇವನೆ ಮಾಡಬೇಕು. ಒಂದು ಜೀವಿಯ ದೇಹ ಮತ್ತು ಮನಸ್ಸು ಸಂಪೂರ್ಣ ಸಮತೋಲನದಲ್ಲಿ […]Read More
ಅಮರಗೋಳದ ಬನಶಂಕರಿ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ನಡುವೆ ಇರುವ ನವನಗರದ ಸಮೀಪ ಅಮರಗೋಳ ಎಂಬ ಊರೊಂದಿದೆ. ಅಲ್ಲಿ ಪುರಾತನ ಕಾಲದ ದೇವಾಲಯವಿದ್ದು, ಅದು ಬನಶಂಕರಿಗೆ ಸಂಬಂಧಿಸಿದ ಪುರಾತನ ದೇವಾಲಯವಾಗಿದೆ. ಈ ದೇವಾಲಯದ ಸಮೀಪವೇ ಜಕ್ಕಣಾಚಾರ್ಯರು ನಿರ್ಮಿಸಿದ ಶಂಕರಲಿಂಗನ ದೇವಸ್ಥಾನವಿದೆ. ಈ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಈ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಮೆಟ್ಟಿಲು-ವಜ್ರ ಮತ್ತು ಚಚ್ಚೌಕ ಯೋಜನೆ ಇರುವ ನಾಗರ ಶೈಲಿಯನ್ನು ಹೊಂದಿವೆ. ಇಲ್ಲಿ ದೊರೆತಿರುವ ಶಾಸನದಲ್ಲಿ ಅಮರಗೋಳ ಊರನ್ನು ‘ಆಂಬರಗೋಳ’ ಎಂದು ಕರೆದಿರುವ ಬಗ್ಗೆ […]Read More
ಕಾಡುವ ದಿನಗಳು ಹುಲ್ಲು ಛಾಪೆಯ ಮೇಲೆ ಮೈಚಾಚಿಆಗಸವ ದಿಟ್ಟಿಸಿ ಚಂದ್ರನ ಕರೆಯುತ್ತಾನಕ್ಷತ್ರಗಳ ಜೊತೆ ಮಾತಾಡಿಅದೆಷ್ಟು ವರುಷಗಳಾಯಿತು ಹಸಿದೊಡಲು ಕಾಡುವಾಗ ಹಾದುಹೋದ ವಿಮಾನದ ಹಾರಾಟಅದೆಷ್ಟು ಹಿತವೆನಿಸಿತ್ತಾಗ..ಕತ್ತಲಲಿ ಕಾದ ಆಗಂತುಕನಆಗಮನಕ್ಕಾಗಿ ಕಾಯುವ ಘಳಿಗೆಗಳುಇನ್ನಿಲ್ಲವಾಗಿ ಅದೆಷ್ಟು ವರುಷಗಳಾಯಿತು. ಮೈ ಕೈ ತಾಗಿಸುತ್ತಾ ಪರಚುತ್ತಾಕಿಚಾಯಿಸಿ ರಾತ್ರಿಯೆಲ್ಲಾ ಹರಟುತ್ತಾಅಣ್ಣ ತಮ್ಮಂದಿರು ಹಾವಳಿಮಾಡಿಬೈಸಿಕೊಂಡು ಗಪ್ ಛುಪ್ ಆಗಿಮುಸಿ ಮುಸಿ ನಕ್ಕು ನಲಿದಾಡಿಅದೆಷ್ಟು ವರುಷಗಳಾಯಿತು ಮನೆಯಂಗಳದ ಸೆಗಣಿಯ ಘಮಲುತುಳಸಿಕಟ್ಟೆಯ ದೀಪದ ಸೊಬಗುಪುಟ್ಟ ತಂಗಿಯ ಅಕ್ಕನಅಂಗಳದ ರಂಗವಲ್ಲಿಯ ಕಂಡುಅದೆಷ್ಟು ವರುಷಗಳಾಯಿತು ಹೊ.. ಬಡತನವೇ ಸೊಗಸುಅದೆಂತಹ ಸಂಭಂದಗಳುದಿನವೂ ಸಂಭ್ರಮದ ದಿನಗಳವು..ಇಂದಿಗೂ […]Read More
ಪ್ರೇಮ ಕಾವ್ಯ ನಿನಗಾಗಿ ಬರೆದ ಎರಡಕ್ಷರದ ಕಾವ್ಯ ಮಹಾಕಾವ್ಯವಾಗಿದೆ ಪ್ರಿಯೆಭಗ್ನ ಪ್ರೇಮಿಗಳಿಗೆ ಅದೊಂದೇ ಪ್ರೇಮ ಮಾರ್ಗವಾಯಿತು ಪ್ರಿಯೆ ಗುಲಾಬಿ ತೋಟದಲ್ಲಿ ನಿಂತ ಮೇಣದ ಪ್ರತಿಮೆಯೊಂದುನಮ್ಮಂತೆ ದುಃಖದಿಂದ ಅಪ್ಪಿಕೊಂಡಂತೆ ಅಚ್ಚೊತ್ತಿರುವೆ ಪ್ರಿಯೆ ಹತ್ತಾರು ಅಧ್ಯಾಯ ನೂರಾರು ನೆನಪುಗಳನ್ನು ತುಂಬಿಕೊಂಡುಪ್ರೇಮ ಕಾವ್ಯದ ವಿರಹ ಗೀತೆಗಳ ಧ್ವನಿ ಕೇಳಿಸುತ್ತಿದ್ದವು ಪ್ರಿಯೆ ದಟ್ಟ ಕಾಡಿನಲ್ಲಿ ಒಬ್ಬಂಟಿಯಾಗಿ ಅಲೆಯುತ್ತಿರುವ ಅಂಗನೆಯನೋವುಗಳ ಪ್ರೇಮಿಗಳ ನೆರಳನ್ನಾಗಿ ಬಿಂಬಿಸಿ ಬರೆದಿರುವೆ ಪ್ರಿಯೆ ಲೋಕವೆಂಬುದು ಪ್ರೇಮಿಗಳಿಗೆ ವಿಷ ಅನ್ನದ ತುತ್ತಿಡುವಕಾಮ ಪಿಶಾಚಿಗಳ ದೊಡ್ಡ ಬ್ರಹ್ಮಾಂಡ ಬಲಿಯಾಗಬೇಡ ಪ್ರಿಯೆ ಶ್ರೀ ಹನಮಂತ […]Read More