ಮಾರ್ಕೋಲು ಹಾಗು ನೂತನ ಜಗದಾ ಬಾಗಿಲು ಕೃತಿಗಳ ಲೋಕಾರ್ಪಣೆ

ಮಾರ್ಕೋಲು ಹಾಗು ನೂತನ ಜಗದಾ ಬಾಗಿಲು ಕೃತಿಗಳ ಲೋಕಾರ್ಪಣೆ 20 ಜುಲೈ ಭಾನುವಾರದಂದು ‘ಉಪಾಸನ ಬುಕ್ಸ್’ ಪ್ರಕಾಶನ ಸಂಸ್ಥೆಯ ವತಿಯಿಂದ ನನ್ನ ರಚನೆಯ ‘ಮಾರ್ಕೋಲು’ ಕಾದಂಬರಿ ಹಾಗೂ ನನ್ನ ಸಂಪಾದನೆಯ, 58 ಕಥೆಗಾರರ ಕಥೆಗಳನ್ನು ಒಳಗೊಂಡ ‘ನೂತನ ಜಗದಾ ಬಾಗಿಲು’ ಕಥಾ ಸಂಕಲನವು ಬೆಂಗಳೂರಿನ ಮಲ್ಲೇಶ್ವರದ ‘ಗಾಂಧಿ ಸಾಹಿತ್ಯ ಸಂಘ’ದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟರೂ ಲೇಖಕರೂ ಆದ ಶ್ರೀ ಶ್ರೀನಿವಾಸ ಪ್ರಭು ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಶ್ರೀ ಲಿಂಗರಾಜ ಸೊಟ್ಟಪ್ಪನವರು ‘ಮಾರ್ಕೋಲು’ ಕಾದಂಬರಿಯನ್ನು ಪರಿಚಯಿಸಿದರೆ, […]Read More

ಮೌನ ಕಲಹ

ಮೌನ ಕಲಹ ಮನೆಯೊಳಗೆಸದ್ದು ಗದ್ದಲಗಳಿಲ್ಲ,ಮನದಿ ಮುಗಿಯದಶಂಕೆ, ಕೋಲಾಹಲ. ಕದ ತಟ್ಟಿದರೆಮರುತ್ತರವಿಲ್ಲ,ಬೀಗ ಬಿಗಿದ ಮನೆಎಲ್ಲರ ಮನವೀಗ. ಕತ್ತಿಯಂಚಿನ,ಬಂದೂಕದ ಸದ್ದಿನಯುದ್ಧವೊಂದನ್ನೇಯುದ್ದವೆನ್ನಲಾಗದು. ದುಃಖ ಹೆಪ್ಪುಗಟ್ಟಿಸದ್ದಿಲ್ಲದೆಯೂನಡೆಯುತ್ತಲಿದೆಎಲ್ಲೆಡೆ ಮೌನಕಲಹ ! ಶ್ರೀವಲ್ಲಿ ಮಂಜುನಾಥRead More

ಭಾರತದ ನಯಾಗರ ಗೋಕಾಕ್ ಫಾಲ್ಸ್

ಭಾರತದ ನಯಾಗರ ಗೋಕಾಕ್ ಫಾಲ್ಸ್ ಕರ್ನಾಟಕದ ಎರಡನೇ ಅತೀ ದೊಡ್ಡ ಜಲಪಾತವೆಂದು ಗೋಕಾಕ್ ಜಲಪಾತವನ್ನು ಕರೆಯಲಾಗುತ್ತದೆ. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಇದು ಕೆನಡಾ ಮತ್ತು ಅಮೇರಿಕ ದೇಶದ ನಡುವೆ ಇರುವ ನಯಾಗರ ಜಲಪಾತದಂತೆ ಕಾಣಿಸುವುದರಿಂದ ಇದನ್ನು ಭಾರತದ ನಯಾಗರವೆಂದು ಕರೆಯುತ್ತಾರೆ. ಸುಮಾರು 180 ಅಡಿ ಎತ್ತರದಿಂದ ಧುಮುಕುವ ನೀರು ಇಲ್ಲಿ ರಮಣೀಯವಾಗಿ ಕಾಣುತ್ತದೆ. ಮಳೆಗಾಲದ ಜೂನ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೂ ಈ […]Read More

ಚಂದಿರನ ಹೊಂಬೆಳಕು

ಚಂದಿರನ ಹೊಂಬೆಳಕು ಬಂದಿಹನು ಚಂದಿರ ಚೆಂದದಿಆ ಕತ್ತಲ ಇರುಳಿನಲಿ !ತಂದಿಹನು ನಗುವನು ಸೊಗದಿ..ತನ್ನ ದಿವ್ಯ ಬೆಳದಿಂಗಳಲಿ!! ತನ್ನೊಳು ಕರಗದ ಕಲೆಯಿದ್ದರೂನೀಡುವಾ ಬೆಳಕಿಗೆ ರಾಜಿಯಿಲ್ಲ!ರಜನಿಯ ಆ ನೀರವತೆಯಲಿ..ಇಳೆಗೆ ಸುಂದರ ಬೆಳಕಾಯಿತಲ್ಲ !! ಕೌಸಲ್ಯ ರಾಮನಿಗೆ ತೋರಿದಮುದ್ದು ಚಂದಿರನಿವನು!ಗಣಪನ ಹೊಟ್ಟೆಯ ಕಂಡು ನಕ್ಕುಶಾಪಕೊಳಗಾದ ಶಶಾಂಕನಿವನು!! ದಿನದ ತಾಪವನು ನೀಗಿದಿನಕರ ತಂಪನು ತಂದಿಹನು!ಕೊಡುವ ಮನಸ್ಸಿರದ ಸ್ವಾರ್ಥಜನರ ನೋಡುತಾ ನಗುತಿಹನು!! ಸುಮನಾ ರಮಾನಂದRead More

ಮಾರ್ಕೋಲು – ಚಿಂತನಾರ್ಹ ಕಾದಂಬರಿ

ಮಾರ್ಕೋಲು – ಚಿಂತನಾರ್ಹ ಕಾದಂಬರಿ ಕಾದಂಬರಿ : ಮಾರ್ಕೋಲುಲೇಖಕರು : ಆಶಾ ರಘುಪ್ರಕಟಣೆ : ಉಪಾಸನ ಪ್ರಕಾಶನ ಪ್ರಸಿದ್ಧ ಕಾದಂಬರಿಗಾರ್ತಿ ಆಶಾ ರಘು ಅವರ ಇತ್ತೀಚಿನ ಕಾದಂಬರಿ ’ಮಾರ್ಕೋಲು’. ಈಗಾಗಲೇ ಹಲವಾರು ಅರ್ಥಪೂರ್ಣ-ಸ್ವಾರಸ್ಯಕರ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಆಶಾ ರಘು ಅವರು ತಮ್ಮ ಪ್ರಯೋಗಶೀಲತೆಯಿಂದ, ಸೊಗಸಾಗಿ ಕಥೆ ಕಟ್ಟುವ ಸಂವಿಧಾನ ಕೌಶಲದಿಂದ, ಜಾನಪದದಿಂದ ಹಿಡಿದು ಕಾಲ್ಪನಿಕ-ಐತಿಹಾಸಿಕ-ಸಾಮಾಜಿಕ-ಪೌರಾಣಿಕದವರೆಗೆ ಹರಿದಾಡುವ ತಮ್ಮ ಕಾದಂಬರಿಗಳ ವಸ್ತುವೈವಿಧ್ಯದಿಂದ; ಪೌರಾಣಿಕದ ಅತಿ ಶಿಷ್ಟಭಾಷೆಯಿಂದ ಸಾಮಾಜಿಕದ ಆಡುಮಾತು ಹಾಗೂ ಕಸಿಗೊಂಡ ಗ್ರಾಮ್ಯ ಭಾಷಾ […]Read More

ನೂತನ ಜಗದಾ ಬಾಗಿಲು – ವಿವಿಧ ಲೇಖಕರ ಕಥಾಸಂಕಲನ

ನೂತನ ಜಗದಾ ಬಾಗಿಲು – ವಿವಿಧ ಲೇಖಕರ ಕಥಾಸಂಕಲನ ನಾನು ನನ್ನ ಮೊದಲ ಕಾದಂಬರಿ ’ಆವರ್ತ’ ದ ಅರಿಕೆಯಲ್ಲಿ ಒಂದು ಸಾಲು ಬರೆದಿದ್ದೆ. ’ಭಾಷೆಯೊಂದನ್ನು ಆಡಲು ಕಲಿತ ಮೇಲೆ ಅದು ಎಂದಿನಿಂದಲೋ ನನ್ನ ಧ್ವನಿಯಲ್ಲಿ ಅಡಗಿತ್ತು ಎನ್ನಿಸುವಂತೆ, ಕೃತಿಯೊಂದನ್ನು ರಚಿಸಿದ ಮೇಲೆ ಅದು ಎಂದಿನಿಂದಲೋ ನನ್ನೊಳಗೆ ಅಡಗಿದ್ದ ಬುದ್ಧಿಭಾವಾನುಭವಗಳ ಒಟ್ಟಾರೆ ಪ್ರಕ್ರಿಯೆಯ ಹೊರಚೆಲ್ಲಿದ ಒಂದು ಭಾಗ ಎನ್ನಿಸುತ್ತದೆ’ ಎಂದು. ಅಂತೆಯೇ ಎಲ್ಲರೊಳಗೂ ಅಸಂಖ್ಯಾತ ಕಥೆಗಳಿವೆ. ಅದು ಯಾವುದಾವುದೋ ರೂಪದಲ್ಲಿ ಹೊರಗೆ ಪ್ರಕಟಗೊಳ್ಳುತ್ತದೆ. ಬರವಣಿಗೆಯ ಮೂಲಕ ಹೊರಹಾಕಲು ಗೊತ್ತಿಲ್ಲದವರೂ […]Read More

UTI -ಮೂತ್ರನಾಳದ ಸೋಂಕು

UTI -ಮೂತ್ರನಾಳದ ಸೋಂಕು ಈ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳವನ್ನು ಬಾಧಿಸುತ್ತದೆ.ಈ ದಿನಗಳಲ್ಲಿ ಇದೊಂದು ಸಾಮಾನ್ಯ ಸೋಂಕಾಗಿದ್ದು, ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೂತ್ರನಾಳದ ಸೋಂಕಿಗೆ ಕಾರಣಗಳು ಇ-ಕೊಲೈ ಬ್ಯಾಕ್ಟೀರಿಯಾದಾ ಸೋಂಕುಕಡಿಮೆ ನೀರು ಕುಡಿಯುವುದುನೀರನ್ನೇ ಕುಡಿಯದೆ ಇರುವುದು,ಅತಿಯಾದ ಹುಳಿಯುಕ್ತ, ಮಸಾಲೆಯುಕ್ತ ಪದಾರ್ಥ ಸೇವನೆ, ಹೆಚ್ಚು ಸಕ್ಕರೆ ಇರುವ ಆಹಾರ ಸೇವನೆಕಾರ್ಬೊನೇಟೆಡ್ ಪಾನೀಯಗಳು,ಕಾಫಿ, ಚಾಕೊಲೇಟುಗಳನ್ನು ಅತಿಯಾಗಿ ತಿನ್ನುವುದು,ಅಸುರಕ್ಷಿತ ಲೈಂಗಿಕ ಕ್ರಿಯೆ,ಶುಚಿಯಿಲ್ಲದ ಶೌಚಾಲಯದ ಬಳಕೆ,ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೀಟಾಣುಗಳು ಮೂತ್ರನಾಳಕ್ಕೆ ಹೋದಾಗ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಹಾರ್ಮೋನ್ ಬದಲಾವಣೆಗಳು,ಮೂತ್ರಪಿಂಡದ […]Read More

ಮಾರ್ಕೋಲು… ಒಂದು ಜಾನಪದ ಕಾದಂಬರಿ

ಮಾರ್ಕೋಲು… ಒಂದು ಜಾನಪದ ಕಾದಂಬರಿ ಕೃತಿ: ಮಾರ್ಕೋಲುಲೇಖಕರು: ಶ್ರೀಮತಿ ಆಶಾ ರಘುಪ್ರಕಟಣೆ: ಉಪಾಸನ ಬುಕ್ಸ್ ಶ್ರೀಮತಿ ಆಶಾ ರಘು ರವರ ಮಾತು: “ನಮ್ಮ ಕುಟುಂಬದಲ್ಲಿ ಒಬ್ಬರಾಗಿ ಬೆರೆತುಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ನನ್ನ ಬಾಲ್ಯದ ದಿನಗಳಲ್ಲಿ ಪುನರಾವರ್ತಿತವಾಗಿ ಹೇಳುತ್ತಿದ್ದ ವಿಧಿಯಮ್ಮನ ಜನಪದ ಕಥೆಯು ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕಕ್ಕೆ ಹೋಲುತ್ತಿದ್ದುದನ್ನು ಸಾಹಿತ್ಯಾಸಕ್ತಿ ಬೆಳೆದ ನಂತರದ ದಿನಗಳಲ್ಲಿ ಕಂಡುಕೊಂಡೆ. ಸಿಗ್ಮಂಡ್ ಫ್ರಾಯ್ಡ್ ಈ ಕಥೆಯ ಹಿನ್ನೆಲೆಯಲ್ಲಿ ‘ಈಡಿಪಸ್ ಕಾಂಪ್ಲೆಕ್ಸ್’ ಎಂಬ ಮಾನಸಿಕ ಪರಿಕಲ್ಪನೆಯೊಂದನ್ನು ಹೆಸರಿಸಿದ್ದಾನೆ. ವಿಧಿಯಮ್ಮನ ಕಥೆಯನ್ನು ಕಾದಂಬರಿಯಾಗಿಸುವ ಕನಸು […]Read More

ಮೇಘದಾಟ

ಮೇಘದಾಟ ಏಣಾಂಕನೊಡಗೂಡಿಅನಂತ ಆಗಸವಿಂದುಚಂದ್ರಿಕೆಯ ಮಳೆಯನ್ನುತಾ ಸುರಿಸುತಿಹುದು; ದೇವ ಕನ್ನಿಕೆಯರಿಂದುಹಾಲ್ಕೆನೆಯ ಮೋಡವನುಒಯ್ಯನೆ ಬಾನಿನಲ್ಲಿತೇಲಿ ಬಿಡುತಿಹರು ; ಹಾಲ್ಗಡಲ ರಥವೇರಿಕುಳಿತ ಉಡುಪನನುಅಗಣಿತ ತಾರೆಯರುಆವರಿಸುತಿಹರು; ಅಕಲ್ಪಿತ ನಗೆಯೊಂದುತುಟಿಯಂಚಿನಲಿ ಮಿಂಚಿಮೇಘದಾಟಕೆ ಸಾಕ್ಷಿತಾನಾಗುತಿಹುದು !! ಶ್ರೀವಲ್ಲಿ ಮಂಜುನಾಥRead More

“ರೇಮಂಡ್ಸ್” ಅಧಿಪತಿಯ ಕರುಣಾಜನಕ ಕಥೆ…

“ರೇಮಂಡ್ಸ್” ಅಧಿಪತಿಯ ಕರುಣಾಜನಕ ಕಥೆ… ಶ್ರೀಮಂತಿಕೆ ಶಾಶ್ವತವಲ್ಲ. ತಾನೊಬ್ಬ ಶ್ರೀಮಂತ ವ್ಯಕ್ತಿ ಆಗಬೇಕೆಂಬ ಬಯಕೆ ಇಂದಿನ ದಿನದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುವುದು ಸಹಜ. ನಿಜವಾಗಿ ಸಂಪತ್ತು ಅಥವಾ ಶ್ರೀಮಂತಿಕೆ ಎನ್ನುವುದು ಒಂದು ವ್ಯಕ್ತಿಯಲ್ಲ, ಬದಲಾಗಿ ಅದೊಂದು ಸಾಧನದ ಪ್ರತಿರೂಪ ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲದೇ ಭೌತಿಕ ಯುಗದಲ್ಲಿ ಹಣವಿಲ್ಲದ ಜೀವನವನ್ನು ಊಹೆ ಮಾಡುವುದೂ ಅಸಾಧ್ಯ. ಇದಕ್ಕಾಗಿ ಮನುಷ್ಯನು ತನ್ನ ಬದುಕನ್ನು ಸುಲಲಿತ ಮತ್ತು ಆರಾಮ ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಗಳಿಸಲು ಹಪಹಪಿಸುತ್ತಾನೆ. ಯಾವುದರಲ್ಲಿ ಆದರೂ ಒಂದಷ್ಟು […]Read More