ಕಾರ್ಟೂನಿಸ್ಟ್ ಜೀವನ್ ಗೆ ಜೀವಮಾನದ ಪ್ರಶಸ್ತಿ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರಾದ ಜೀವನ್ ಶೆಟ್ಟಿ ಅವರ ಕಾರ್ಟೂನ್ ಕ್ಷೇತ್ರದ ನಿರಂತರ ಸೇವೆಯನ್ನು ಗುರುತಿಸಿ ‘ಕರ್ನಾಟಕದ ವ್ಯಂಗ್ಯಚಿತ್ರಕಾರರ ಸಂಘವು ಕೊಡ ಮಾಡುವ ಜೀವಮಾನದ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿ ಪ್ರದಾನವು ಇದೇ ಸೆಪ್ಟೆಂಬರ್ 6 ರಂದು ನಡೆಯಲಿದೆ. ಬೆಂಗಳೂರಿನ ಎಂ ಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಇರುವ ಭಾರತೀಯ ವ್ಯಂಗ್ಯಚಿತ್ರ ಸಂಸ್ಥೆಯ ಗ್ಯಾಲರಿಯಲ್ಲಿ ಬೆಳಗ್ಗೆ 11 ಕ್ಕೆ ರಾಜ್ಯದ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ ನೆರವೇರಲಿದೆ. ವೃತ್ತಿ ಬ್ಯಾಂಕ್ – […]Read More
ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ….. ನಾನು ಈ ಲೇಖನ ಬರೆಯುವುದಕ್ಕೆ ಕಾರಣ ನನ್ನ ಜೀವ, ಅದು ನಮ್ಮ ತಾಯಿಯ ಭಿಕ್ಷೆ. ನಾನು ಇಲ್ಲಿಯವರೆಗೆ ಬದುಕಿದ್ದೇವೆ ಎಂದರೆ ಅದಕ್ಕೆ ಕಾರಣ ನನ್ನ ಜೀವನ, ಅದು ನಮ್ಮ ತಂದೆಯ ಭಿಕ್ಷೆ. ಈ ಜನ್ಮ ಜೀವನದಲ್ಲಿ ನಾವೆಲ್ಲ ಅಕ್ಷರಸ್ಥರು ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಣ, ಅದು ನಮ್ಮ ಗುರುಗಳ ಭಿಕ್ಷೆ. ಪ್ರತಿ ವ್ಯಕ್ತಿಯ ಹೃದಯದಲ್ಲಿ ಅಕ್ಷರದ ಬೀಜ ಬಿತ್ತಿ, ಆ ವ್ಯಕ್ತಿಯ ಬದುಕಿಗೆ ದಾರಿದೀಪವಾಗಿರುವ ಸಮಸ್ತ ಗುರು ಬಳಗಕ್ಕೆ […]Read More
ಕಣ್ಣೋಟದ ಸವಿಸತ್ಯ ನೋಡುವಾ ನೋಟವು ತಿಳಿಯಾಗಿರೆಮನಸಲಿ ಒಂದು ಸಂಚಲನ !ನೋಟದಿ ಕುಹಕವೇ ತುಂಬಿರೆಅಂತರಂಗದಲಿ ನಿತ್ಯ ಕದನ !! ಪ್ರಕೃತಿಯಲಿ ಕಾಣುವಾ ಸೊಬಗುಕೋಟಿ ಕೊಟ್ಟರೂ ನಿಲುಕದು!ಕಂಗಳಲಿ ಕಾಡುವ ಮೆರುಗುಮನದಲಿ ಸಂತಸವಿರೆ ದೊರೆವುದು !! ದೂರದ ಬೆಟ್ಟವು ನುಣ್ಣಗೆಂಬ ನುಡಿಲೋಕದಿ ಆಗಿರಲು ಕಹಿಸತ್ಯ!ಕಣ್ಣಂಚಲಿ ತುಂಬಿದ ನೋವುಕಣ್ಣೀರಾಗಿ ಹರಿದಾಗಲೇ ಬಾಳು ಸವಿಪಥ್ಯ!! ಹಸಿರ ಕಾನನವು ಬೆಸೆದಂತೆಜನಜೀವನದಲಿ ಒಂದು ನಂಟು!ಹೆಣ್ಣಿನ ಕಂಗಳಲಡಗಿದ ಭಾವವುಎಂದೂ ಬಿಡಿಸಲಾರದ ಬ್ರಹ್ಮಗಂಟು!! ಸುಮನಾ ರಮಾನಂದಕೊಯಮತ್ತೂರುRead More
ಸಂಗೀತ ಸಂಜೆ – ಸ್ವರಸಿರಿ ಕೊಬಾಲ್ಟ್ ಕಲಾ ಸಂಸ್ಥೆ ದಿನಾಂಕ 3ರ ಆಗಸ್ಟ್ ಭಾನುವಾರ 2025 ರಾಜರಾಜೇಶ್ವರಿ ನಗರದ ಕೊಬಾಲ್ಟ್ ಕಲಾ ಗ್ಯಾಲರಿಯಲ್ಲಿ “ಸ್ವರಸಿರಿ” ಹೆಸರಿನಲ್ಲಿ ಹಿಂದೂಸ್ತಾನಿ ಸಂಗೀತ ಸಂಜೆ ಹಮ್ಮಿಕೊಂಡಿತ್ತು. ಶ್ರೀಮತಿ ರೇಷ್ಮಾ ಭಟ್ಟ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಮಾಡಿರುವ ಸಾಧನೆಯಿಂದಾಗಿ, ತಮ್ಮ ಧ್ವನಿಸಂಪತ್ತಿನಿಂದಾಗಿ ಬೇರೆ ಬೇರೆ ರಾಗಗಳ ಮೂಲಕ ಶ್ರೋತೃಗಳ ಮನತಣಿಸುವುದರಲ್ಲಿ ಸಫಲರಾದರು. ಮೊದಲಿಗೆ ರಾಗ ಮುಲ್ತಾನಿಯಲ್ಲಿ ವಿಲಂಬಿತ್ ಲಯದಲ್ಲಿ ಪ್ರಾರಂಭಿಸಿ ದೃತ್ ತೀನ್ ತಾಲದಲ್ಲಿ ಪ್ರಸ್ತುತ ಪಡಿಸಿದರು. ತಮ್ಮ ಸ್ವರ ಸಾಧನೆ, ರಾಗದಲ್ಲಿಯ […]Read More
ಸಂಪ್ರದಾಯ ಆಚರಣೆ ಮತ್ತು ಮಹತ್ವ ಭಾರತವು ವಿವಿಧ ರಾಜ್ಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದೆ. ಭಾರತೀಯ ಮೂಲದ ಧರ್ಮಗಳಾದ ಹಿಂದೂ ಧರ್ಮ, ಜೈನ ಮತ್ತು ಬೌದ್ಧ ಧರ್ಮಗಳೆಲ್ಲವೂ ಧರ್ಮ ಮತ್ತು ಕರ್ಮವನ್ನು ಆಧರಿಸಿವೆ. ಸಂಪ್ರದಾಯ ಎಂದರೆ ಆಚರಣೆ, ದೃಷ್ಟಿಕೋನಗಳು ಮತ್ತು ಧೋರಣೆಗಳ ಒಂದು ವ್ಯಾಪ್ತಿ. ಇಲ್ಲಿನ ಧರ್ಮ ಮತ್ತು ಸಂಪುದಾಯಗಳು ಬಹಳ ಆಳವಾದ ಬೇರುಗಳನ್ನು ಹೊಂದಿರುವ ನೆಲವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಈ ಸಂಪ್ರದಾಯಗಳು ಮತ್ತು ಆಚರಣೆಗಳು ಪ್ರಾಚೀನ ಕಾಲದಿಂದ ಬಂದು ಆಧುನಿಕ […]Read More
ನಾಗಾರಾಧನೆಯ ನಾಗರ ಪಂಚಮಿ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನವನ್ನು (ಪಂಚಮಿ) ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ. ಈ ದಿನ ನಾಗನಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿ ಆಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ (ಆದಿಶೇಷ) ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸೆಂದು […]Read More
ಖಿನ್ನತೆಯೇತಕೆ ಕಾಡುವೆ… ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಯೆಂದರೆ ಮಾನಸಿಕ ಖಿನ್ನತೆ. ಅದರಲ್ಲೂ ಈ ಸಮಸ್ಯೆಗೆ ಬೇಗ ಒಳಗಾಗುವವರು ಸ್ತ್ರೀಯರೇ ಹೆಚ್ಚು.ಈ ಮಾನಸಿಕ ಖಿನ್ನತೆ ಯಾಕಾಗಿ ಬರುತ್ತದೆ ? ಆಧುನಿಕ ಜೀವನ ಶೈಲಿ, ಒತ್ತಡ, ನಮಗಾಗಿ ನಾವು ಕೊಡಲಾಗದ ಒಂದಷ್ಟು ಸಮಯ, ಸೂಕ್ಷ್ಮ ಮನಃಸ್ಥಿತಿ, ಅತಿಯಾದ ನಿರೀಕ್ಷೆ, ಕ್ಷಣಿಕ ವಿಷಯ ಸುಖಗಳ ಹಂಬಲ, ಈ ಎಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿವೆ. ವಿಶೇಷವಾಗಿ ಸ್ತ್ರೀಯರಿಗಾದರೆ ಕಾಡುವ ತಿಂಗಳ ಸಮಸ್ಯೆಯಿಂದ ಹಾರ್ಮೋನ್ ಗಳ ವ್ಯತ್ಯಾಸ, ಜೊತೆಗೆ ಜವಾಬ್ದಾರಿಗಳ […]Read More
ಹೊಸ ಭಾವಲಾಸ್ಯ ತಾಳ ತಪ್ಪದ ಮೌನರಾಗಕೆಮನವು ಮೂಕಭಾವ ತಳೆದಿದೆ!ಕುಳಿರ್ಗಾಳಿಯ ದಾಳಿಯಲೂ…ಚಿಗುರಿದೆಲೆಗಳು ನಗುತಿವೆ!! ಬತ್ತಿದೆದೆಯಲಿ ಹೊಸ ಕನಸುಗರಿಗೆದರಿ ಚೈತನ್ಯವು ಮೂಡಿದೆ!ರೆಂಬೆಕೊಂಬೆಗಳಲಿ ನಂಬಿಕೆಯುಕ್ಕಿಸಿ..ಹಚ್ಚಹಸಿರು ತಾ ನಲಿದಿದೆ!! ದಿಕ್ಕು ತಪ್ಪಿಸುವ ಕತ್ತಲೆಯಲಿನಂದದ ಬೆಳಕು ಉಳಿಯಲಿ!ಅವನೆಣಿಸಿದಾಗ ಪಯಣ ನಿಲುವುದು..ಜಡ ಬದುಕಿನ ನಿಲ್ದಾಣದಲಿ!! ವಿಸ್ತರಿಸಿದ ಅಂಬರದ ಕ್ಷಿತಿಜದೊಳುಮುಚ್ಚಿದ ಕಂಗಳಲಿ ಅಡಗಿದೆ ಬೆಳಕು!ಸತ್ಯದ ನಿಲುವಿಗೆ ನಿಜದೊಳು..ಮನತೆರೆದು ನೋಡಲು ನಲ್ಮೆಯ ಬದುಕು!! ಸುಮನಾ ರಮಾನಂದ,ಕೊಯಮತ್ತೂರುRead More
ಸಲೋನಿ ಶಾಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ ಬೇಗೂರು ವಿಶ್ವಪ್ರಿಯ ಬಡಾವಣೆಯಲ್ಲಿ ಸಲೋನಿ ಶಾಲೆಯು 25 ವರ್ಷ ಪೂರೈಸಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ದಿನಾಂಕ: 26-07-2025 ರಂದು ಶನಿವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಕಲಾವಿದ ಗಣಪತಿ ಎಸ್. ಹೆಗಡೆ ಗೀತ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಪತಿ ಹೆಗಡೆಯವರು ಮಾತನಾಡಿ ಮಕ್ಕಳಿಗೆ ಶಿಕ್ಷಣದಲ್ಲಿ ಕಲೆಯ ಮಹತ್ವವನ್ನು ತಿಳಿಸಿದರು. ಗೀತ ಚಿತ್ರಕ್ಕೆ ಹಾಡಿನ ಮೂಲಕ ಅನೂಪ ಹೆಗಡೆ ಸಾಥ್ ನೀಡಿದರು. ನೂರಾರು […]Read More
ನನ್ನ ಅಪ್ಪ – ಕೆ ಎಸ್ ನ ಕೃತಿ : ನನ್ನ ಅಪ್ಪ – ಕೆ ಎಸ್ ನಲೇಖಕರು:ಕೆ ಎನ್ ಮಹಾಬಲಪ್ರಕಾಶಕರು:ಬಹುರೂಪಿಬೆಲೆ: 200/- ಕವಿಯ ಮನ ತಿಳಿಯಲು ಆತ್ಮಚರಿತ್ರೆಯನ್ನೋ ಅಥವಾ ಕುರಿತಾದ ಕೃತಿಗಳನ್ನೋ ಓದಬೇಕು. ಆದರೂ ಸಂಪೂರ್ಣವಾದ ವಿವರಗಳನ್ನು ತಿಳಿಯಬೇಕೆಂದರೆ ಕವಿಯ ಅತ್ಯಂತ ಹತ್ತಿರದವರು ಅದನ್ನು ಬರೆದಿರಬೇಕು. ಪ್ರಸ್ತುತ ಪುಸ್ತಕ “ನನ್ನ ಅಪ್ಪ -ಕೆ ಎಸ್ ನ” ಅಂತಹ ಪುಸ್ತಕಗಳಲ್ಲಿ ಒಂದು. ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿಯವರ ಬಗ್ಗೆ ಗೊತ್ತಿಲ್ಲದ ಕನ್ನಡಿಗರು ಕಡಿಮೆ ಎಂದೇ […]Read More