ಸುಡೋಕು – ಕಥಾಸಂಕಲನ ಪುಸ್ತಕ : ಸುಡೋಕುಲೇಖಕರು: ಪ್ರದೀಪ್ ಬೇಲೂರುಪ್ರಕಟಣೆ : ಉಪಾಸನ ಬುಕ್ಸ್ದರ : 130 ಲೇಖಕರ ನುಡಿ ಇದು ನನ್ನ ನಾಲ್ಕನೇ ಪುಸ್ತಕ. ಮೊದಲು ಬರೆದಿದ್ದು ಕಥಾ ಸಂಕಲನ. ತದನಂತರ ಕಾದಂಬರಿಯ ಕಡೆ ಮನಸ್ಸು ಹರಿಯಿತು. ಕಾದಂಬರಿಯ ಆಳದಲ್ಲಿ ಮುಳುಗಿದ್ದ ನನ್ನ ಮನಸ್ಸು ಕಥೆ ಕಟ್ಟುವಿಕೆಯಲ್ಲಿ ಇರುವ ಸೊಬಗನ್ನು ಮರೆತು ಬಿಟ್ಟಿತ್ತು. ಅದಕ್ಕೆ ಲಗಾಮು ಹಾಕಿ ಮತ್ತೆ ಕಾದಂಬರಿಯ ಕಡೆ ಎಳೆದಿದ್ದೇನೆ. ಎರಡು ಕಾದಂಬರಿಯ ನಂತರ ಮತ್ತೆ ಕಥಾ ಸಂಕಲನದ ಕಡೆ ಹೆಜ್ಜೆ ಇಟ್ಟಿದ್ದೇನೆ. […]Read More
ಹೂಮಾಲೆಯಾದ ಆಂಡಾಳು ಪುಸ್ತಕ : ಹೂಮಾಲೆಯಾದ ಆಂಡಾಳುಲೇಖಕರು: ಆಶಾ ರಘುಪ್ರಕಟಣೆ : ಉಪಾಸನ ಬುಕ್ಸ್ದರ : 120 ಲೇಖಕರ ಅರಿಕೆ ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ. ಇವಳು ಪೆರಿಯಾಳ್ವಾರರ ಸಾಕುಮಗಳು. ಕಟಕಮಾಸದ ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಸಾಕ್ಷಾತ್ ಭೂದೇವಿಯೇ ಎಂದು ಪರಿಭಾವಿಸಲಾಗಿರುವ ಈಕೆಯ ಜನ್ಮದಿನೋತ್ಸವ ಜರುಗುತ್ತದೆ. ಆಂಡುಳುವಿನ ಕಥೆ ಪ್ರಸಿದ್ಧವಾಗಿರುವಂತಹುದು. ಪೆರಿಯಾಳ್ವಾರರು ದೇವರಿಗೆಂದು ಕಟ್ಟಿ ಇರಿಸುತ್ತಿದ್ದ ಹೂಮಾಲೆಯನ್ನು ಇವಳು ಮುಡಿದು ಲೋಹದ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು, […]Read More
ಶಮೀ ಶಮಯತೆ ಪಾಪಂ… ಬ್ರಹ್ಮಾಂಡದ ಪ್ರತೀ ಅಣುವಿನಲ್ಲೂ ದೈವತ್ವ ಕಾಣುವ, ಬ್ರಹ್ಮಾಂಡದಲ್ಲಿರುವ ಪ್ರತೀ ಪದಾರ್ಥದಲ್ಲೂ ಇರುವುದು ಒಂದೇ ಶಕ್ತಿ ಎಂದು ನಂಬುವ ಧರ್ಮ ಹಿಂದೂ ಧರ್ಮ. ಆ ಶಕ್ತಿಯನ್ನು ಕಂಡುಕೊಳ್ಳಲು ಮತ್ತು ಆರಾಧಿಸಲು ವಿವಿಧ ಮಾರ್ಗಗಳು ಇಲ್ಲಿವೆ. ಅವುಗಳಲ್ಲಿ ಅನೇಕ ರೀತಿಯ ಹಬ್ಬಗಳ ಮೂಲಕ ದೈವಾಚರಣೆ ಮತ್ತು ಆರಾಧನೆ ಪ್ರಮುಖ. ಧಾರ್ಮಿಕ ಆಚರಣೆ ಮತ್ತು ಶ್ರೇಷ್ಠ ಸುಂದರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವು ವಿಶಿಷ್ಟ. ಇದು ಕರ್ನಾಟಕದ ನಾಡ ಹಬ್ಬ. ಭಾರತ ದೇಶದ ವಿವಿಧೆಡೆ ಈ ಹಬ್ಬವನ್ನು […]Read More
ಭೈರಪ್ಪನವರಿರದ ಸಾಹಿತ್ಯಲೋಕದ ಶೂನ್ಯತೆ ನಮ್ಮ ಕರ್ನಾಟಕದ ಸಾಹಿತ್ಯಲೋಕದಲಿ ಚಿರಪರಿಚಿತವಾದ ಹೆಸರು ಎಸ್.ಎಲ್.ಭೈರಪ್ಪನವರದು. ಯಾವುದೇ ಗ್ರಂಥಾಲಯವಿರಲಿ, ಸಾಹಿತ್ಯ ಸಮ್ಮೇಳನವಿರಲಿ ಅಥವಾ ಪುಸ್ತಕ ಪ್ರದರ್ಶನದಂತಹ ಕಾರ್ಯಕ್ರಮದಲ್ಲಿ ಇವರ ಕಾದಂಬರಿ, ಕೃತಿಗಳು ಹೇರಳವಾಗಿ ಮಾರಾಟವಾಗದೇ ಜನಮನ್ನಣೆ ಪಡೆಯದೇ ಇರದು. ಅಂತಹ ಧೀಮಂತ ಸಾಹಿತಿ ಇವರು. ಭೈರಪ್ಪನವರ ಜನ್ಮದ ಊರು ಚನ್ನರಾಯಪಟ್ಟಣದ ಸಂತೇಶಿವರ. ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಮುಗಿಸಿ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದ ಅನೇಕ ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ತೆರೆ ಕಂಡು ಕಾದಂಬರಿಗಳಷ್ಟೆ ಯಶಸ್ಸನ್ನು […]Read More
ದೂರ ಸರಿದ ಧರ್ಮಶ್ರೀ Covid 19 ಲಾಕ್ ಡೌನ್ ಸಮಯದಲ್ಲಿ ಹಳೆಯ ಸಿನಿಮಾಗಳನ್ನು ಅದ್ರಲ್ಲೂ ಕಾದಂಬರಿ ಆಧಾರಿತ ಸಿನೆಮಾಗಳನ್ನು ನೋಡುತ್ತಿದ್ದೆ. ಆಗ “ನಾಯಿ ನೆರಳು” ಸಿನಿಮಾ ಸಿಕ್ತು, ಅಲ್ಲಿಂದ ಭೈರಪ್ಪನವರು ಪರಿಚಿತರಾದರು. ಸಿನಿಮಾ ನೋಡಿದ ಒಂದು ವಾರ ಯಾರೊಡನು ಮಾತಾಗಲಾಗದ ತಲೆಮಾರುಗಳ ದುಃಖ. ಭೈರಪ್ಪನವರ ಹೆಸರನ್ನು ಆ ವರೆಗೆ ಕೇಳಿದ ನನಗೆ ಅವರನ್ನು ನನ್ನಂಥ ಸೂಕ್ಷ್ಮ ಹೃದಯದವಳು ಓದಿ ಸೈರಸಿಕೊಳ್ಳಬಹುದಾ ಅನ್ನಿಸಿದ್ದುಂಟು. ಹೀಗಂದುಕೊಂಡವಳೆ ಮೊದಲು ಭೈರಪ್ಪನವರ ಪುಸ್ತಕ ಅಂತಾ ಕೊಂಡಿದ್ದು ‘ಮಂದ್ರ’! ಅಲ್ಲಿಂದ ಮುಂದಕ್ಕೆ ಅವರ ಬರಹಗಳ […]Read More
ವಂಶವೃಕ್ಷ – ಡಾ. ಎಸ್. ಎಲ್. ಭೈರಪ್ಪ ಪುಸ್ತಕ : ವಂಶವೃಕ್ಷಲೇಖಕರು : ಡಾ. ಎಸ್.ಎಲ್. ಭೈರಪ್ಪ ಲೇಖಕರ ಬಗ್ಗೆ ನಾನು ಏನನ್ನೂ ಹೇಳುವ ಅವಶ್ಯಕತೆಯೇ ಇಲ್ಲ. ಇವರ ಹೊಸ ಪುಸ್ತಕ ಪ್ರಕಟವಾಗುತ್ತದೆ ಎಂದರೆ ಅದನ್ನು ಓದಲು ಸಾಹಿತ್ಯಾಸಕ್ತರು ಕಾಯುತ್ತಿರುತ್ತಾರೆ. ಪುಸ್ತಕ ಬಿಡುಗಡೆಯಾದ ಮೇಲೂ ಅದರದ್ದೇ ಚರ್ಚೆ. ಇವರ ಪುಸ್ತಕಗಳು ಚರ್ಚೆಗೊಳಗಾದಷ್ಟು ಬೇರಾವ ಪುಸ್ತಕವೂ ಚರ್ಚೆಗೊಳಗಾಗಿಲ್ಲ ಎಂದೇ ಹೇಳಬಹುದು. ಇವರು ಒಟ್ಟು ೨೪ ಕಾದಂಬರಿಗಳನ್ನು ( ಧರ್ಮಶ್ರೀ, ತಬ್ಬಲಿ ನೀನಾದೆ ಮಗನೆ, ನಾಯಿ ನೆರಳು, ಗೃಹಭಂಗ, ದಾಟು […]Read More
ದಸರಾ ಹಬ್ಬಕ್ಕೆ”ಹುಟ್ಟು ಸಾವು ಎರಡರ ನಡುವೆ” ಕಾದಂಬರಿ ಬಿಡುಗಡೆ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಹಬ್ಬದ ಪ್ರಯುಕ್ತ, ಕಲ್ಬುರ್ಗಿಯ ಪ್ರಸಿದ್ಧ ಬರಹಗಾರ ಶ್ರೀ ಪ್ರಮೋದ್ ಕರ್ಣಂ ಅವರ ಮೂರನೇ ಕಾದಂಬರಿ “ಹುಟ್ಟು ಸಾವು ಎರಡರ ನಡುವೆ” ಸರಕಾರದ ಆಶ್ರಯದಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾದಂಬರಿ ಮಾನವ ಜೀವನದ ಮೂಲಭೂತ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಓದುಗರನ್ನು ಆಲೋಚನೆಗೆ ಪ್ರೇರೇಪಿಸುತ್ತದೆ. ಕಥಾ ಶೈಲಿ, ಪಾತ್ರಗಳ ಗಾಢತೆ ಮತ್ತು ಸಾಮಾಜಿಕ ಸಂದೇಶಗಳ ಮೂಲಕ ಈ ಕಾದಂಬರಿ ಓದುಗರ ಹೃದಯವನ್ನು ಗೆಲ್ಲುವ ನಿರೀಕ್ಷೆಯಿದೆ. ಬುಕ್ ಲಾಂಚ್ […]Read More
ಸಿಹಿಮಾತು – ಪ್ರೀತಿಸುವ ಹೃದಯಗಳಿಗಾಗಿ… ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ! ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು, ಮತ್ತೊಮ್ಮೆ ಮದುವೆಯ ಹಂತಕ್ಕೆ ತಿರುಗಿ ಬದುಕೇ ಆನಂದಮಯವಾಗುವುದು. ಪ್ರೀತಿಗಾಗಿ ಪ್ರಾಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ ಅದರ ಬಗ್ಗೆ […]Read More
ಆಪಾದನೆ ನನ್ನ ರೆಪ್ಪೆಯಲುಗುವ ಮುನ್ನನೀ ಹೋಗಿ ಬಿಡು ಬೇಗಮತ್ತೆಂದೂ ತಿರುಗಿ ನೋಡದೆ ತುಂಬಿದ ಕಣ್ ಕೊಳವನ್ನುಹಿಂಗಿಸಿ ಬಿಡುವೆನುತಿರುಗಿಯೂ ನೋಡದೆಹೋಗುತಿರುವ ನಿನ್ನ ನೆನೆನೆನೆದು ನೀ ತಿರುಗಿ ನೋಡಿದೆಯಾದರೇಕೊಚ್ಚಿಹೋಗಿ ಬಿಡಬಹುದುಗುರಿಯೆಡೆಗಿನ ಕನಸುಗಳುಕಣ್ಣ ಜಲಪಾತದಲಿಬೇಡ ನನಗೆ ಆಪಾದನೆ ರೆಪ್ಪೆಯಲಿ ಬಂಧಿಸಿಡುವೆನುನನ್ನೆಲ್ಲ ಸ್ವಪ್ನಗಳಏರಿಸಲಾರೆ ಬೇಡದಹೊರೆಯ ನಿನ್ನ ಹೆಗಲಿಗೆ ಪ್ರೀತಿಯಲಿ ಬಿದ್ದವರನ್ನುಕಂಡಿದ್ದೇವೆ ಸಾವಿರ ಸಾವಿರಕಂಡದ್ದನ್ನು ಅರಗಿಸಿಕೊಂಡುಕಲಿತಿದ್ದೇನೆ ಪಾಠ ನಾನೂ ನಿನ್ನ ಪ್ರೇಮದಲೇಅದರ ತಾಪದಲೇಉರಿದುರಿದು ಕಮರಿದರೂಮತ್ತೆದ್ದು ಬರುವೆನು ನಾನುನಿನ್ನ ಯಶವ ಕಣ್ತುಂಬಿಕೊಳ್ಳಲೆಂದು ನನ್ನ ಕುಡಿನೋಟದೊಳಗೆಸಿಕ್ಕಿ ನರಳಬೇಡ ನೀನುಗುರಿಯೆಡೆಗಿನ ದಾರಿಯತಪ್ಪಿಸುವ ತಿರುವು ನಾನಾಗಲಾರೆಬೇಡ ನನಗಾವ ಆಪಾದನೆ… ಸೌಜನ್ಯ […]Read More
ಪಿತೃಪಕ್ಷ ಎಂಬ ಕೃತಜ್ಞತಾ ವಿಧಿ…. ನಮ್ಮ ದೇಶದ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ವಿಧಗಳು ಮತ್ತು ವೈವಿಧ್ಯತೆಗಳು ಇವೆ. ಪ್ರತಿಯೊಂದು ಆಚರಣೆಗಳೂ ಕೂಡ ಅರ್ಥಪೂರ್ಣ ಕಾರಣಗಳು ಮತ್ತು ವಿಭಿನ್ನತೆಯನ್ನು ಒಳಗೊಂಡಿವೆ. ಅಂತಹ ಆಚರಣೆಗಳಲ್ಲಿ ಒಂದಾದ ಶ್ರಾದ್ಧ ಅಥವಾ ಪಿತೃಪಕ್ಷ ಪೂಜೆಯು ತನ್ನದೇ ಆದ ಮಹತ್ವ ಹೊಂದಿದೆ. ಪಿತೃಗಳು ಎಂದರೆ ನಮ್ಮ ಪೂರ್ವಜರು. ನಮ್ಮ ಜನ್ಮಕ್ಕೆ ಕಾರಣಕರ್ತರಾದ ಅಥವಾ ಈ ಭೂಮಿಯಲ್ಲಿ ನಮ್ಮ ಹುಟ್ಟಿಗೆ ಆಸರೆಯಾದ ಕುಟುಂಬದವರು, ತಂದೆ ತಾಯಿಗಳು ಮತ್ತು ಅವರ ಹಿಂದಿನ ತಲೆಮಾರು. ಹುಟ್ಟಿದ ಪ್ರತಿಯೊಂದು ಜೀವಿಗೂ […]Read More