ಕಾರ್ಮಿಕ ಬಂಧು

ಕೊರಗುವುದೇಕೆ ಕಾರ್ಮಿಕ ?ನಾವಿಲ್ಲವೇ ನಮ್ಮ ವೇದಿಕೆಯಿಲ್ಲವೇಜೊತೆ…ಕೊರಗದಿರಿ ಕರೋನ ಬಂತ್ತೆಂದುಕಟ್ಟಿರುವೆವು ಕಾರ್ಮಿಕ ವೇದಿಕೆ ನಿಮಗಾಗಿಸೇರಿದ್ದೀರಲ್ಲ ನಮ್ಮ ಜೊತೆಚಿಂತೆ ಇನ್ಯಾತಕ್ಕೆ. ಕಷ್ಟ ಕಾರ್ಪಾಣ್ಯ ಕಳೆಯುವುದು ಮೋಡದ ಹಾಗೆಕೈ ಬೆಸೆದಿದ್ದೇವಲ್ಲ ನಿಮ್ಮ ಅಂಗೈಗಳಿಗೆಕಣ್ಣೀರ ಒರೆಸುವುದು ನಮ್ಮಗಳ ಕೈನಂಬಿಕೆಯಿರಲಿ ಎಂದೆಂದಿಗೂನಮ್ಮ ವೇದಿಕೆಯೊಂದಿಗೆಸದ್ಯಕ್ಕೆ ಕಾಣಿಸಬೇಕು ನಿಮ್ಮ ಮುಗುಳುನಗೆ. ಗಿರಿಜಮ್ಮರಾಜ್ಯ ಮಹಿಳಾ ಅಧ್ಯಕ್ಷರುRead More

ಅಜಂತ ಗುಹಾಂತರ ಭಿತ್ತಿಚಿತ್ರಗಳು

ಅ-ಜಾಂತ ಎಂದರೆ ತಿಳಿಯದ್ದು ಎಂದು ಅರ್ಥ. ಹಾಗಾಗಿ ಅಜಂತ ನಾಮಧೇಯವಾಗಿದೆ. ಇದು ಹುಲಿಗಳೇ ವಾಸಿಸುವ ದಟ್ಟ ಅರಣ್ಯದಲ್ಲಿದ್ದು ವಾಘೋರ ಎಂಬ ನದಿಯ ದಡದಲ್ಲಿ ಇದೆ. ನದಿಯು ಕುದುರೆಯ ಲಾಳದ ಆಕಾರದಲ್ಲಿ ಬಾಗಿ ಮುಂದಕ್ಕೆ ಹರಿಯುತ್ತದೆ. ವ್ಯಾಘ್ರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಎಲ್ಲ ಹುಲಿಗಳೂ ನೀರು ಕುಡಿಯಲು ಇಲ್ಲಿಗೇ ಬರುವುದರಿಂದ ಈ ನದಿಗೆ ವಾಘೋರ ಎಂಬ ಹಸರು ಬಂದಿದೆ, ಈ ಪರಿಸರದ ಕಲ್ಲುಗಳು ಬಹಳ ಕಠಿಣವಾಗಿರುವುದರಿಂದ ಶಿಲಾನ್ಯಾಸಕ್ಕೆ ಸೂಕ್ತವಾದುದು ಮತ್ತು ಬೇಸಿಗೆಯನ್ನು ಬಿಟ್ಟು ಉಳಿದ ಎಲ್ಲ ಕಾಲಮಾನಗಳೂ ಬಹಳ […]Read More

ಅಪಾರ್ಟ್ಮೆಂಟು

ಕೆಲವೊಮ್ಮೆ ಮನದೊಳಗಿನ ಆಲೋಚನೆಗಳುಅಪಾರ್ಟ್ಮೆಂಟಿನ ಕಾಂಪೌಂಡಿನೊಳಗೆವಾಕಿಂಗ್ ಮಾಡಿದಂತೆ ಅಲ್ಲಲ್ಲೇ ಸುತ್ತುತ್ತಿರುತ್ತವೆಕಣ್ಣಿಗೆ ಬೀಳುವಷ್ಟರಲ್ಲೇ ಕಥೆ ಹೆಣೆಯುತ್ತಿರುತ್ತವೆ || ನಮ್ಮದು ನೋಡಿ ಹೈಫೈ ಅಪಾರ್ಟ್ಮೆಂಟುಹೇಳದಿದ್ದರೆ ನಿಮಗೆ ಅರ್ಥವಾಗುವ ಬಗೆ ಏನುಂಟು || ಏರೋಪ್ಲೇನಿನ ಬ್ಯುಸಿನೆಸ್ ಕ್ಲಾಸಿನಂತೆವಿಚಿತ್ರ ನಿಶ್ಯಬ್ದದೊಂದಿಗೆ ಜನರಿಲ್ಲಿ ಜೀವಿಸುತ್ತಾರೆರಾತ್ರಿಯ ನಿರ್ವಾತದಂತೆ ಹಗಲುಗಳೂ ಇಲ್ಲಿ ಖಾಲಿ ಖಾಲಿ || ಥೇಟು ಸುತ್ತಿ ಸುತ್ತಿ ಬರುವ ಅವವೇ ಆಲೋಚನೆಗಳಂತೆವಾಕಿಂಗು ಮಾಡುವಾಗ ಕಾಣಿಸುವುದು ಅವವೇ ಮುಖಗಳುಪರಿಚಿತರಂತೆ?!? ಪರಿಚಿತರೊಳಗಿನ ಅಪರಿಚಿತರಂತೆ || ಕಳೆದ ತಿಂಗಳು ಮೂರು ಕೆಂಪು ಆರು ಬಿಳಿ ಬಳೆ ತೊಟ್ಟುಚಡ್ಡಿ ಹಾಕಿಕೊಂಡು ಗಂಡನೊಡನೆ […]Read More

ಬಿ ಟಿ ಎಸ್ RM – ಕಿಂ ನಂಜೂನ್

ಹಾಯ್, ಹಲೋ  ಎಲ್ಲರಿಗು… ಒಬ್ಬ ಪುಟ್ಟ ಮುಗ್ಧ ಹುಡುಗ ಇದ್ದ. ಓದಿನಲ್ಲಿ ಹಿಂದೆ ಉಳಿದಿದ್ದ. ತನ್ನದೇ ಲೋಕದಲ್ಲಿ ಸದಾ ಮುಳುಗಿರುತ್ತಿದ್ದ. ಅವನಿಗಿದ್ದ ಪ್ರಪಂಚ ಒಂದೇ. ಅದು ಅವನ ತಾಯಿ. ತನ್ನ ಮಗ ಬದುಕಿನಲ್ಲಿ ಎಲ್ಲರಂತಾಗಬೇಕೆಂದರೆ ತಾನು ಮಾತ್ರ ಅವನಿಗೆ ಪ್ರೋತ್ಸಾಹಿಸಬೇಕು ಎಂದು ಅರಿತ ತಾಯಿ ಅವನನ್ನು ಜಗತ್ತಿನ ಕಹಿ ಮಾತುಗಳಿಂದ ದೂರವಿರಿಸಿ, ಅವರೆಲ್ಲರೂ ಅವನನ್ನು ಪ್ರೀತಿಸುತ್ತಾರೆಂದೂ, ಹೊಗಳುತ್ತಾರೆಂದೂ ಹೇಳುತ್ತಿದ್ದಳು. ಮುಂದೆ ಆ ಹುಡುಗನು ಜನರ ನಂಬಿಕೆ, ಪ್ರೀತಿ, ನಂಬಿಕೆ ಉಳಿಸಲು ಮಹತ್ಕಾರ್ಯ ಮಾಡಿ ಜಗತ್ತಿಗೇ ಮಾದರಿಯಾದ ವಿಜ್ಞಾನಿಯಾದನಂತೆ.  […]Read More

ಚಂದಕಿಂತ ಚಂದ ನಮ್ಮಶಾಯರಿ ಈರಣ್ಣ

ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು ಎಂದು ಬರೆದ ಕನ್ನಡ ಶಾಯರಿಗಳ ಜನಕ ಎಂದೇ ಖ್ಯಾತರಾಗಿದ್ದ ಖ್ಯಾತ ಕವಿ ಇಟಗಿ ಈರಣ್ಣ. ಚಂದಕ್ಕಿಂತ ಚಂದ ನೀನೇ ಸುಂದರನಿನ್ನ ನೋಡ ಬಂದ ಬಾನ ಚಂದಿರ ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಇನ್ನಿತರ ಕಡೆ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ)

ಸೂರ್ಯದೇವನಿಗಿಂತ ಇನ್ನು ದೇವರು ಇಲ್ಲಸೂರ್ಯನೇ ಈ ಜಗದ ಆಧಾರ ಭೂತ |ಸೂರ್ಯನಿಂದಲೆ ಸಕಲ ಜೀವಿಗಳ ಉತ್ಪತ್ತಿಸೂರ್ಯನಿಗೆ ಶರಣೆನ್ನು – || ಪ್ರತ್ಯಗಾತ್ಮ || ಸೃಷ್ಟಿ ಮೇಣ್ ಸ್ಥಿತಿ, ಲಯಕೆ ಸೂರ್ಯ ಕಾರಣಸೃಷ್ಟಿಕರ್ತನು ಇವನೆ; ಸಸ್ಯಗಳ ಪ್ರಾಣ |ದೃಷ್ಟಿಗೋಚರವಪ್ಪ ಭಗವಂತನಿವನೆ ದಿಟಇಷ್ಟಾರ್ಥದಾಯಕನು- || ಪ್ರತ್ಯಗಾತ್ಮ || ನವಗ್ರಹಗಳೆಲ್ಲವು ಇನವ ಅಂಕೆಗೊಳಪಟ್ಟಿಹವುಮಹನೀಯನಿವನೊಬ್ಬ ವಿಶ್ವಕ್ಕೆ ಒಡೆಯ |ಇಹಪರದ ಸೌಖ್ಯಕ್ಕೆ ಇವನ ಬಿಟ್ಟರೆ ಇಲ್ಲವಿಹಿತದಲಿ ಶರಣಾಗು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ವಾಚನ – ಗೌರಿ ದತ್ತ ಏನ್ ಜಿRead More

ಕರಾವಳಿ ಬಕ – Western Reef Heron or Wester Reef Egret

ಬಣ್ಣವೊಂದನ್ನು ಬಿಟ್ಟರೆ ಬೆಳ್ಳಕ್ಕಿಯ ದೊಡ್ಡಣ್ಣನೇ ಎನಿಸುವ ಈ ಬಕ, ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ನಮ್ಮ ಉಡುಪಿಯ ಸಮುದ್ರ ತಟದಲ್ಲಿಯೂ ಕಂಡುಬರುತ್ತದೆ. ಇಂಗ್ಲೀಷಿನಲ್ಲಿ Western Reef Heron ಅಥವಾ  Western Reef Egret ಎನ್ನಲಾಗುವ ಇದರ ವೈಜ್ಞಾನಿಕ ಹೆಸರು Egretta gularis. ಏನಿದು ವೈಜ್ಞಾನಿಕ ಹೆಸರು ಎಂಬ ಪ್ರಶ್ನೆ ಏಳಬಹುದು, ಕೆಲವರಿಗೆ. ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಒಂದೊಂದು ಅನನ್ಯವಾದ ಹೆಸರು ಬೇಕಲ್ಲವೆ? ಇಲ್ಲವಾದಲ್ಲಿ ಒಂದಕ್ಕೇ ಅನೇಕ ಕಡೆ ಅನೇಕ ಹೆಸರುಗಳು ಇದ್ದು ಅಧ್ಯಯನ, ಗುರುತುಹಚ್ಚುವಿಕೆಗೆ ತೊಂದರೆಯಾಗುತ್ತದೆ. […]Read More

ಯುವ ಸಾಹಿತ್ಯ ಪ್ರತಿಭೆ – ಅನಂತ್

“ಋಣಭಾರ” ಕಥಾಸಂಕಲನಕ್ಕೆ ಸಾಹಿತ್ಯ ಶರಭ ಪ್ರಶಸ್ತಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಪ್ಪಟ ಹಳ್ಳಿ ಪ್ರತಿಭೆ ಅನಂತ ಅವರ ಚೊಚ್ಚಲ ಕೃತಿ ಋಣಭಾರ ಕಥಾಸಂಕಲನ ಇದೀಗ ಮೂರನೆಯ ಪ್ರಶಸ್ತಿ ಪಡೆದುಕೊಂಡಿದೆ. 2020 ರಲ್ಲಿ ಪ್ರಕಟಗೊಂಡ ಈ ಕಥಾಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರ ಚೊಚ್ಚಲ ಕೃತಿ ಬಹುಮಾನ ಹಾಗೂ ಹೆಬ್ಬಗೋಡಿ ಗೋಪಾಲ್ ದತ್ತಿ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಗುರುಕುಲ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಸಾಹಿತ್ಯ ಶರಭ ಪ್ರಶಸ್ತಿಗೆ ಕೃತಿ ಆಯ್ಕೆಯಾಗಿದೆ ಎಂದು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ […]Read More

ಕೊನೆಗೂ ಅರ್ಥವಾಗದವಳು

ಅವಳ ನಾಲಿಗೆಗಿಂತ ಅವಳ ಮುಂಗುರುಳೇ ಹೆಚ್ಚು ಮಾತನಾಡುತ್ತವೆ!ಏಕೆಂದರೆ, ಅವಳು ಮಾತನಾಡುವಾಗ ಹಾರಾಡುವ ಮುಂಗುರುಳು,ಫಳ-ಫಳ ಹೊಳೆಯುವ ಕಣ್ಞುಗಳು,ಅತೀ ಕೋಮಲವಾಗಿ ಹೊರಡುವ ಧ್ವನಿ, ಎಲ್ಲದರಲ್ಲಿಯೂ ಸಮ್ಮೋಹನ ಶಕ್ತಿ ಕಾಣದಿರಲಾರದು. ನನ್ನ ಅವಳ ಪರಿಚಯ ಅತೀ ಹಳೆಯದಾದರೂ,ಪರಿಚಯವಾದಾಗಿನಿಂದ ಪ್ರಶ್ನೆಯಾಗಿಯೇ ಕಾಡುತ್ತಿದ್ದಾಳೆ!ಅವಳು ” ಹೀಗೇ” ಎಂದು ಹೇಳುವುದು ನನ್ನಿಂದ ಮಾತ್ರವಲ್ಲ, ಅವಳನ್ನು ಹತ್ತಿರದಿಂದ ಬಲ್ಲ ಯಾರಿಗೂ ಸಾಧ್ಯವಾಗಿಲ್ಲ.ಬಹುಶಃ ಸಾದ್ಯವಾಗಲಿಕ್ಕೂ ಇಲ್ಲ! ” ವಿವೇಕಶೂನ್ಯ ಆಲೋಚನೆಗಳೆಲ್ಲವೂ ನಮ್ಮ ದುಃಖಕ್ಕೆ ಕಾರಣ” ಎಂಬ ನಿಲುವಿನ ಅವಳು, ಪಿರಿಯಡ್ ಇದ್ದಾಗ ಮಾತ್ರ ಕ್ಲಾಸಿಗೆ ಹೋಗುತ್ತಾಳೆ.ಬಾಕೀ ಸಮಯವನ್ನೆಲ್ಲಾ ಅಕ್ಕಮಹದೇವಿ,ವಿವೇಕಾನಂದ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ)

ಶ್ರೀವಾಣಿ ಕಲ್ಯಾಣಿ ಅಜನ ಪಟ್ಟದ ರಾಣಿಭಾವನಾ ಪ್ರಕಟಣೆಗೆ ಚೋದಿಸೈ ಮನವ |ಆವ ವಾಙ್ಮಂತ್ರದಿಂ ರಸಋಷಿಗಳಾದರೋಆವಾಹಿಸುವೆನದನೆ- || ಪ್ರತ್ಯಗಾತ್ಮ || ಸರ್ವಭಾಷಾಮಯೀ ವಿಶ್ವಭಾರತಿ ತಾನುಗೀರ್ವಾಣಿ ಕಲ್ಯಾಣಿ ಅಮೃತ ರೂಪಿಣಿಯು |ಸರ್ವಮಂಗಳೆ ವರದೆ ವಾಕ್ ಶುದ್ಧಿ ವಾಕ್ ಸಿದ್ಧಿಸರ್ವದಾ ದಯೆಗೆಯ್ಗೆ- ಪ್ರತ್ಯಗಾತ್ಮ || ಪೂರ್ಣವನು ಪೂರ್ಣದಿಂ ಕೂಡಿ ಕಳೆದರೂ ಕೂಡಪೂರ್ಣವೇ ಉಳಿಯುವುದು ಕಡೆಗೆ ಎಂದೆಂದೂ |ಪೂರ್ಣವಿದು ಪೂರ್ಣವದು ಪೂರ್ಣದಿಂದಲೆ ಎಲ್ಲಪೂರ್ಣತೆಗೆ ಶರಣೆನ್ನು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ ವಾಚನ – ಗೌರಿ ದತ್ತ ಏನ್ ಜಿRead More