ಧಾರವಾಡದಲ್ಲಿ ದೀಪಾವಳಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಇಲ್ಲಿನ ವಿಶೇಷತೆ ಎಂದರೆ ಚಿತ್ರರಚನಾ ಆಚರಣೆ. ಈ ಚಿತ್ರಸಂಪ್ರದಾಯವು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿನ ಜನಸಮುದಾಯವು ಸಗಣಿಯಲ್ಲಿ ಬೊಂಬೆಗಳ ಹಾಗೆ ವಿನ್ಯಾಸ ಮಾಡಿ ಪಾಂಡವರ ಆಕಾರಗಳನ್ನು ಮನೆಯ ಅಂಗಳದಲ್ಲಿ ಸ್ಥಾಪಿಸುತ್ತಾರೆ. “ಪಾಂಡವರು ನರಕ ಚತುರ್ಥಿಯಂದು ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ಅವರು ನಮ್ಮ ಮನೆಗೂ ಬರುತ್ತಾರೆ” ಎಂಬ ನಂಬಿಕೆ ಇವರದು. ಅವರು ಸಿಧ್ಧಪಡಿಸಿದ ಐದು ಪಾಂಡವರು ಮತ್ತು ದ್ರೌಪದಿಯ ಗೊಂಬೆಗಳನ್ನು […]Read More
ಬಸಳೆ ಸೊಪ್ಪಿನ ಪರಿಚಯ ಬಹಳಷ್ಟು ಜನರಿಗೆ ಇರುತ್ತದೆ. ಬಸಳೆಯು ಬಳ್ಳಿಯಂತೆ ಹಬ್ಬಿ ಅದರಲ್ಲಿ ಎಲೆ ಹೂವು ಹಾಗು ಹಣ್ಣುಗಳನ್ನು ಬಿಡುತ್ತದೆ. ಈ ಬಳ್ಳಿಗಳಲ್ಲಿ ಬೆಳೆದ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಬಸಳೆಯ ಸಸ್ಯವು ‘ಬ್ಯಾಸಲೇಸಿಯಿ‘ (ಬ್ಯಾಸೆಲೇಸೀ) ಕುಟುಂಬಕ್ಕೆ ಸೇರಿದ್ದು. ಇದರ ವೈಜ್ಞಾನಿಕ ಹೆಸರು ‘ಬ್ಯಾಸೆಲ ರೂಬ್ರ’ ಎಂದು ಇದನ್ನು ಭಾರತದಲ್ಲಿ ಹೆಚ್ಚಾಗಿ ಬಳಸುವುದರಿಂದ ‘ಇಂಡಿಯನ್ ಸ್ಪಿನಿಚ್’ (ಬಹುವಾರ್ಷಿಕ ಬಳ್ಳಿ) ಎಂದು ಕೂಡ ಕರೆಯಲ್ಪಟ್ಟಿದೆ. ಏಷ್ಯಾ ಖಂಡದ ಉಷ್ಣ ಪ್ರದೇಶಗಳಲ್ಲಿ ಬಸಳೆಯ ಬಳ್ಳಿಗಳು ಬೆಳೆಯುತ್ತವೆ. ಎರಡು ಬಗೆಗಳಲ್ಲಿ ಬೆಳೆಯುವ […]Read More
ಹಿಂದಿನ ಸಂಚಿಕೆಯಿಂದ… ಅಪ್ರಮೇಯ ಬೆಂಗಳೂರನ್ನು ಇಷ್ಟು ಬೇಗ ಬಿಡಬೇಕೆಂಬ ಇಚ್ಛೆ ಇರಲಿಲ್ಲ ಆದರೆ ತನ್ನಲ್ಲಿರುವ ವಿಗ್ರಹಗಳ ಭದ್ರತೆಗಾಗಿ ನಿಂತಲ್ಲೇ ನಿಲ್ಲದೆ ದಕ್ಷಿಣ ಭಾರತವನ್ನು ಒಂದಿಷ್ಟು ಧರ್ಮ ಪ್ರಚಾರವನ್ನು ಮಾಡುತ್ತಾ ಸುತ್ತೋಣವೆಂದು ಹೈದರಾಬಾದ್ ಗೆ ಹೋಗೋಣವೆಂದು ನಿರ್ಧರಿಸಿ ಶಿಷ್ಯರ ಹಾಗು ನಾಗ ಗಾಂಧಾರಿಯ ಜೊತೆ ರೈಲು ಹತ್ತಿದ. ಮುಂದೆ… –ಒಂಬತ್ತು- ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರು ಬೆಳಗ್ಗೆ. ನಂತರ ಹೊಟೇಲ್ಗೆ ಮರಳಿ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆದರು. ಸಂಜೆ ಸಣ್ಣ ಗುಡ್ಡವೊಂದರ ಮೇಲಿನ ಬಿರ್ಲಾ ಮಂದಿರ್ನವರ ಹಾಲ್ನಲ್ಲಿ […]Read More
ಮನುಷ್ಯನ ಜೀವನದಲ್ಲಿ ಪ್ರಕೃತಿಯ ಕೊಡುಗೆ ಅಪಾರವಾಗಿದೆ. ಗಿಡ ಮರಗಳು ಹಾಗೂ ಸಕಲ ಜೀವರಾಶಿಗಳು ಅಂದರೆ ಮನುಷ್ಯನೂ ಸೇರಿ ಪ್ರಕೃತಿಯ ಒಂದು ಭಾಗವೆ. ಮನುಷ್ಯನ ಜೀವನಕ್ಕೆ ಮುಖ್ಯವಾದ ಅಂದರೆ, ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ನಮಗೆ ಪ್ರಕೃತಿಯು ನೀಡಿದ ಕೊಡುಗೆಯೇ ಸರಿ. ಮನುಷ್ಯನ ದೇಹ ಐದು ಪಂಚ ಮಾಹಾಭೂತಗಳಿಂದಾಗಿದೆ. ಮಣ್ಣು, ವಾಯು, ಅಗ್ನಿ, ಆಕಾಶ, ನೀರು, ಆದುದರಿಂದ ಹುಟ್ಟಿನಿಂದ ಸಾಯುವವರೆಗೂ ನಾವೆಲ್ಲಾ ಇದರೊಂದಿಗೆ ಬಾಳಬೇಕು. ಇದಕ್ಕೆ ಕೃತಜ್ಞತರಾಗಿರಬೇಕು. ಈ ಐದು ಪಂಚಭೂತಗಳು ನಮ್ಮ ಪ್ರಕೃತಿಯಲ್ಲಿರುವ ಒಂದು ವೈಶಿಷ್ಟ್ಯವೇ ಸರಿ. ದೇವರ […]Read More
ಕಥೆ ಬರೆಯಬೇಕು! ಹೀಗೊಂದು ಚಡಪಡಿಕೆ, ಸುಮಾರು ಎರಡು ತಿಂಗಳಿಂದಲೂ ನನ್ನನ್ನು ಹಿಂಡುತ್ತಿದೆ. ನಾನು ಕಥೆಗಾರನಾ? ನನಗೆ ಗೊತ್ತಿಲ್ಲ. ಕಥೆ ಬರೆಯುವುದು ನನ್ನ ಚಟವೇ ಇರಬಹುದು ಎಂದುಕೊಂಡಿದ್ದೇನೆ. ನಾನು ಇದಕ್ಕೂ ಮುಂಚೆ ಹಲವು ಕಥೆ ಬರೆದಿದ್ದೇನೆ. ಆದರೆ ಅವು ‘ಕಥೆ’ ಎಂಬ ದೃಷ್ಟಿಯಿಂದ ಪರಿಪೂರ್ಣವಾಗಿವೆಯೇ ? ಗೊತ್ತಿಲ್ಲ.ಮುಖ್ಯವಾಗಿ ಕಥೆ ಎಂದರೆ ಏನೆಂದೇ ನನಗೆ ಗೊತ್ತಿಲ್ಲ. ‘ಒಳ್ಳೆಯ ಕಥೆ’ ಎಂಬುದು ನನಗಿನ್ನು ಅರ್ಥವೇ ಆಗಿಲ್ಲ. ಸಾಹಿತ್ಯಾಸಕ್ತರು ಮೆಚ್ಚಿಕೊಂಡಿದ್ದನ್ನೇ ನಾನು ಮುಗುಮ್ಮಾಗಿ ಒಪ್ಪಿಕೊಂಡಿದ್ದೇನೆ. ಹೀಗೆ ನನ್ನ ಕಥೆಗಳು ಕಥೆಗಳಾ? ಎಂಬ ಭಯದಿಂದಲೆ […]Read More
ಅರೇ! ಯಾವುದೋ ಔಷಧದ ಹೆಸರಿನಂತಿರುವ ಇದು ಹಕ್ಕಿಯೇ ಎಂದು ನಿಮಗನ್ನಿಸಬಹುದು! ಹೌದು ಇದು ಹಕ್ಕಿಯೇ! ನಮ್ಮಲ್ಲಿನ ಅತಿ ಮುದ್ದಾದ ಹಕ್ಕಿಗಳಲ್ಲಿ ಒಂದು ಈ ಪ್ರಾಟಿನ್ಕೋಲ್. ಕನ್ನಡದಲ್ಲಿ ಇವನ್ನು ಚಿಟವ ಎಂದು ಕರೆಯುತ್ತಾರೆ. ಕವಲುಬಾಲದ ಚಿಟವ, ಸಣ್ಣ ಚಿಟವ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ನೀರಿನಾಸರೆಗಳ ಸಮೀಪ ಕಂಡುಬರುವ ಇವು ಕಲ್ಲು, ಮರಳಿನ ಭೂಭಾಗದೊಂದಿಗೆ ಸೇರಿಹೋಗುವಂತಹ ಗರಿಹೊದಿಕೆಯನ್ನು ಹೊಂದಿದೆ. ಗುಬ್ಬಿ ಮತ್ತು ಮೈನಾದ ನಡುವಿನ ಗಾತ್ರದ ಪುಟ್ಟಕಾಲು ಮತ್ತು ಪುಟ್ಟ ಕೊಕ್ಕಿನ ಹಕ್ಕಿ. ಭಾರತದಾದ್ಯಂತ ಮತ್ತು ಪಾಕಿಸ್ಥಾನ, ನೇಪಾಳ, […]Read More
ಮೈಸೂರ್ನಾಗೆ ಹುಟ್ಟಿದ್ದಂತೆ ಸಿನ್ಮಾ ‘ವಂಸದ ವೃಕ್ಸ’ಕೊನೆವರ್ಗೂವೆ ಬಯ್ಸಿದ್ ಆತ ‘ಒಲವಿನ್ ಆಸ್ರೆ’ ಪಕ್ಸಕಣಗಾಲ್ ಹಿಡ್ದು ‘ನಾಗರಹಾವಿ’ಗ್ ಕೊಟ್ಬುಟ್ರಂತೆ ಮೋಕ್ಸಹಾಲುಂಡ ತವ್ರಿನ್ ಕರ್ಣನ್ನಂಗೆ ದಾನ ಮಾಡ್ತಿದ್ ಭಿಕ್ಷ ಪ್ರಾಯಕ್ ಬಂದಿದ್ ರಾಮಾಚಾರಿಗ್ ನಾಗರ್ ಹಾವಿನ ರೋಸ‘ದಾದಾ’ ಸಿನ್ಮದಾಗ್ ಹಾಕ್ತಿದ್ನಂತೆ ಎಲ್ಡೆಲ್ಡ್ ಮೂರ್ಮೂರ್ ವೇಸಭಾರ್ತಿ ಅಮ್ಮ ಆಗೊದ್ಲಂತೆ ‘ಕರ್ಣ’ನ್ ಹೃದಯದ್ ಸ್ವಾಸ‘ಹೃದಯದ್ ಗೀತೆ’ ಪೀರ್ತಿ ಪ್ರೇಮಕ್ ‘ಈ ಬಂಧನ’ದ್ ವಾಸ ನೋಡಾಕ್ ಕಣ್ಗಳ್ ಸಾಲ್ದಾಗಿತ್ತು ‘ಸಾಹಸ ಸಿಂಹ’ನ್ ಅಂದಅಂಬಿ ಜೋತ್ಯಾಗ್ ಸೇರ್ಬುಟ್ಟಾಂದ್ರೆ ‘ದಿಗ್ಗಜ್ರು’ಎಂತ ಚೆಂದ‘ಆಪ್ತಮಿತ್ರ’ನ್ ದೋಸ್ತಿ ಅಂದ್ರೆ ತಿಂದಂಗ್ ಸೀ […]Read More
ಸಪ್ಟೆಂಬರ್ 18 ಇವತ್ತು. ಕಲಾಭಿಮಾನಿ ಕನ್ನಡಿಗರ ಪಾಲಿಗೆ ಇಂದಿನ ದಿನ ಒಂದು ವಿಶೇಷ ದಿನವೆಂದೇ ಹೇಳಬಹುದು. ಮರೆಯದ ಮಾಣಿಕ್ಯ ʼಸಾಹಸ ಸಿಂಹʼ ವಿಷ್ಣುವರ್ಧನ್ ರವರ 71 ನೇ ಜನ್ಮದಿನೋತ್ಸವ ಸಂಭ್ರಮ ಅಭಿಮಾನಿಗಳಿಗೆ. ವಿಷ್ಣುವರ್ದನ್ ರವರು ಇಂದು ನಮ್ಮ ಜೊತೆಗಿಲ್ಲದಿದ್ದರೂ. ಮನಸ್ಸಲ್ಲಿ ಮಾತ್ರ ಅಜರಾಮರ, ಸರ್ವಕಾಲಿಕ ನೆನಪಾಗಿ ಉಳಿದಿದ್ದಾರೆ. ಅವರ ಬಗ್ಗೆ ಹೇಳುವಂತದ್ದು ಎಲ್ಲವೂ ಕನ್ನಡಿಗರಿಗೆ ಹೆಚ್ಚಾಗಿ ಗೊತ್ತಿರುವಂತದ್ದೆ. ಹೊಸದಾಗಿ ಏನಿಲ್ಲವಾದರು, ಈ ಸಮಯದಲ್ಲಿ ಅವರ ನೆನಪಿನಲ್ಲಿ ಅವರ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದು ಖುಶಿಯ ವಿಚಾರ. ವಿಷ್ಣುವರ್ಧನ್ […]Read More
ಭಾರತೀಯ ವೇದಾಂತ ಆಧುನಿಕ ಭೌತವಿಜ್ಞಾನದ ಸಮಸ್ಯೆಗಳನ್ನು ಪರಿಹರಿಸಲು ಸ್ಫೂರ್ತಿ ಎನ್ನುವವರು ಪ್ರೊ ಎಚ್ಆರ್ಆರ್. ಪ್ರೊ ಎಚ್ ಆರ್ ರಾಮಕೃಷ್ಣರಾವ್ ನಾಡಿನ ಹೆಸರಾಂತ ಭೌತವಿಜ್ಞಾನ ಪ್ರಾಧ್ಯಾಪಕರು, ವಿಜ್ಞಾನ ಲೇಖಕರು, ಸಂವಹನಕಾರಾದ ಪ್ರೊ ಎಚ್ಆರ್ಆರ್ ಈ ಕ್ಷೇತ್ರದ ಬಹುದೊಡ್ಡ ಹೆಸರು. ಬರೆಹ, ಭೌತವಿಜ್ಞಾನ ಪಠ್ಯಪುಸ್ತಕ ರಚನೆ, ಸ್ನಾತಕೋತ್ತರ ಅಧ್ಯಯನಕ್ಕೆ ಪಠ್ಯಕ್ರಮ ವಿನ್ಯಾಸ, ಆಕಾಶವಾಣಿ, ದೂರದರ್ಶನಗಳಲ್ಲಿ ವಿಜ್ಞಾನ ಬೋಧನೆ ಹಾಗೂ ಖ್ಯಾತ ವಿಜ್ಞಾನಿಗಳ ಸಂದರ್ಶನ ನಡೆಸಿ ಉನ್ನತವಿಜ್ಞಾನವನ್ನು ಜನಮಾನಸಕ್ಕೆ ಹತ್ತಿರ ತಂದವರು. ಸಾಕ್ಷ್ಯಚಿತ್ರದಂತಹ ಮಾಧ್ಯಮಗಳಲ್ಲೂ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡವರು. ಕ್ರೈಸ್ಟ್ […]Read More
ದೀವಿಗೆಯ ಹಚ್ಚಿ ದಾರಿ ತೋರುವದಾರಿಗೆ?ನನ್ನ ಮನೆಯು ಕತ್ತಲಲ್ಲಿದೆಸಣ್ಣ ಬೆಳಕಿಂಡಿ ಬೇಕಿದೆ… ನಾನು ಯಾವ ರಾವಣನನ್ನು ಕೊಳ್ಳಲು ಹೊರಟಿಲ್ಲ ಈಗಿನ ಸ್ಥಿತಿಗೆನನ್ನೊಳಗಿನ ರಾವಣನನ್ನು ಹೊರಗೆಳೆದುನೂಕಬೇಕಿದೆ ಆಚೆಗೆ ಹಿಂತಿರುಗಿ ನೋಡಿದರೆ ಬದುಕುಇದ್ದಲ್ಲೇ ಸುತ್ತುತ್ತಿದ್ದೇನೆಯಾವುದು ದಾರಿ? ಎಲ್ಲಿಗೆ ಪಯಣಗಮ್ಯವೆತ್ತ? ಇಲ್ಲ ಸಮಚಿತ್ತ!ನಾನು ಸಾಗಬೇಕಿದೆ ಸಾಗಲೇಬೇಕಿದೆ ಸುಸ್ತಿರದೆಡೆಗೆ ಸಾಕು ಎನಿಸಿದಾಗ ನಿಲ್ಲಲಾಗುತ್ತದೆಯೇ?ಹೋರಾಡುವುದೊಂದೇ ಭಾಗ್ಯಗುರುವು ಅರಿವು ನನ್ನೊಳಗೆನನಗೆ ನಾನೇ ನಿರ್ದೇಶಕವಿಧಿಯೆಂಬ ದೇವರಿಗೆ ಕೈ ಮುಗಿದುಸಾಗುವ ತನಕ… ಒಮೊಮ್ಮೆ ನೆನಪಿಸಿಕೊಳ್ಳುತ್ತೇನೆನಾನು ಒಂಟಿ ಪಯಣಿಗನಿಂತರೆ ಮರಣ ಸಾಗುತ್ತಿದ್ದರೆ ಜೀವನ. ಪವನ ಕುಮಾರ ಕೆ ವಿ ಬಳ್ಳಾರಿ9663346949Read More