ಖ್ಯಾತ ಲೇಖಕರಾದ “ಯತಿರಾಜ್ ವೀರಾಂಬುಧಿ” ಯವರು ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಥೆ, ಕಾದಂಬರಿ, ಅಂಕಣ, ಹಾಸ್ಯ ಲೇಖನ ಅನುವಾದ ಹೀಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮಜಲುಗಳಲ್ಲಿನ ಇವರ ಸೇವೆ ಅಮೋಘವಾದದ್ದು. ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ‘ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ! […]Read More
ಉರಿದುರಿದು ಬೀಳುವವರಿಗೆಉರುವಲಾಗಲಿ ನಮ್ಮ ನಗುವುಇರಲಿಬಿಡಿ ಬೆಚ್ಚಗೆ ಕೆಲವರಾದರೂ ನಗುವು ನಮಗದು ಸಹಜ ಧರ್ಮಉರಿದುಕೊಳ್ಳುವುದು ಅವರ ಕರ್ಮಆಗಿರಲಿ ಇದುವೇ ಬಾಳಮರ್ಮ ನಾವು ಅತ್ತರೂ ಕೊರಗದವರುನಾವು ನಕ್ಕಾಗ ಸೊರಗಿಹರುನಮ್ಮವರೆಂದಿಗೂ ಆಗದ ಇವರುತೋರಿಕೆಯ ಸೋಗಲಾಡಿ ಸುಭಗರು ಇರುತ್ತಾರೆ ಸುತ್ತಲೂ ಇಂಥವರುಹುಳಿ ಹಿಂಡುವ ಕಾಯಕದವರುಬಲಿಬೀಳದಿರಿ ಇವರು ನರಿಗಳಂಥವರು ನಕ್ಕು ನಗಿಸುವುದು ಸುಲಭವೆನ್ನದಿರಿನಗುವಿನೊಳಗೂ ಇರಬಹುದುಕಡಲಂಥ ದುಃಖ ದುಮ್ಮಾನ ನೂರು ಸ್ವಸ್ಥ ನಗುವ ಲೇಪನವೊಂದೇಹೆಚ್ಚಿಸುವುದು ಮೊಗದ ಚೆಲುವಿಂಗೆಹರಿಸುವುದದು ಸ್ನೇಹದ ಪರಿಶುದ್ಧಗಂಗೆ ಉರಿದುರಿದು ಬೀಳುವವರಿಗೆಉರುವಲಾಗಲಿ ನಮ್ಮ ನಗುವುಇರಲಿಬಿಡಿ ಬೆಚ್ಚಗೆ ಕೆಲವರಾದರೂ ಸೌಜನ್ಯ ದತ್ತರಾಜ ಚಿತ್ರಗಳು : pininterestRead More
ತುಂಕೂರ್ ಸಂಕೇತ್ ಸಣ್ಣವಳಿದ್ದಾಗಪೀಟಿ ಮಾಸ್ತರರವಿಶಲ್ಲಿನ ಶಿಳ್ಳೆ! ಬೆಳೆದು ಬೆಡಗಿಯಾಗಿಬಳುಕಿ ನಡೆವಾಗಪಡ್ಡೆ ಹುಡುಗರಕ್ಯಾತೆ ಮಾಡುವ ಶಿಳ್ಳೆ! ಪಕ್ಕಾ ಗೃಹಿಣಿಯಾಗಿಅಡುಗೆ ಕೋಣೆ ಸೇರಿದರೆಕೂಗಿ ಕರೆಯುತ್ತೆಅಡುಗೆಯ ಕುಕ್ಕರ್ಶಿಳ್ಳೆ ಹಾಕಿ! ಬಿಡದೀ ಮಾಯೇವಯಸ್ಸಾದ ಮೇಲೆವೃದ್ಧಾಶ್ರಮ ಸೇರಿದರೆಪಕ್ಕದ ಬೆಟ್ಟದಿಂದಕೂಗುತ್ತೆ ಶಿಳ್ಳೇ ಕ್ಯಾತಶಿಳ್ಳೇ ಹಾಕಿ! ತುಂಕೂರ್ ಸಂಕೇತ್Read More
ಕಲ್ಗುಂಡಿ ನವೀನ್ ನಮ್ಮ ತೋಟಗಳಲ್ಲಿ, ಉದ್ಯಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಬೆಳ್ಗಣ್ಣ ಸಹ ಒಂದು! ಪ್ರಧಾನವಾಗಿ ಹಸಿರು-ಹಳದಿ ಬಣ್ಣದ ಸರಿಸುಮಾರು ಗುಬ್ಬಚ್ಚಿ ಗಾತ್ರದ ಈ ಹಕ್ಕಿಯ ಕಣ್ಣಿನ ಸುತ್ತ ಅಚ್ಚಬಿಳಿಬಣ್ಣದ ಉಂಗುರವಿರುತ್ತದೆ. ಅದೇ ಕಾರಣಕ್ಕೆ ಈ ಹಕ್ಕಿಯನ್ನು ಬೆಳ್ಗಣ್ಣ ಎಂದು ಕರೆಯುವುದು. ಇಂಗ್ಲಿಷಿನಲ್ಲಿಯೂ ಇದನ್ನು ವೈಟ್ ಐ (Indian White-eye Zosterops palpebrouses) ಎಂದೇ ಕರೆಯುತ್ತಾರೆ. ದಕ್ಷಿಣ ಏಷ್ಯಾದಲ್ಲಿ ಎರಡು, ಜಗತ್ತಿನಾದ್ಯಂತ 94 ಬಗೆಯ ಬೆಳ್ಗಣ್ಣಗಳಿವೆ. ದಕ್ಷಿಣ ಏಷ್ಯಾದಲ್ಲಿನ ಎರೆಡು ಬಗೆಯವು ಎಂದರೆ ಭಾರತದಲ್ಲಿ ಕಂಡುಬರುವ ಬೆಳ್ಗಣ್ಣ […]Read More
ಲೇಖಕರು: ಆರ್ ಬಿ ಗುರು ಬಸವರಾಜಮುದ್ರಣ: ಸಾಹಿತ್ಯಲೋಕ ಪಬ್ಲಿಕೇಷನ್ಬೆಲೆ : 150 /- ಓಡು ಮಿಲ್ಖಾ ಓಡು 1947 ರ ದೇಶ ವಿಭಜನೆ ಸಮಯದಲ್ಲಿ ಎಷ್ಟೋ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದರು. ಅವರುಗಳಲ್ಲಿ ಮಿಲ್ಕಾ ಸಿಂಗ್ ಒಬ್ಬರು. ಇದು ಕೇವಲ ಮಿಲ್ಖಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಖಾಸಿಂಗ್ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ.• ಸತತ ಮೂರು ವರ್ಷ ಬರಿಗಾಲಿನಲ್ಲಿ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ […]Read More
ಅಂದು ಆಗಸ್ಟ್ 6 ‘ಟ್ಸುಟೊಮು ಯಮಗುಚಿ’ ಎಂಬ 29 ವರ್ಷದ ಜಪಾನಿಗ ತುಂಬ ಖುಷಿಯಲ್ಲಿದ್ದ. ಮಿಟ್ಸುಬಿಷಿ ಕಂಪನಿಯ ಪರವಾಗಿ ಹಿರೋಷಿಮಾ ನಗರಕ್ಕೆ ಬಂದ ಟ್ಸುಟೊಮು ಮೂರು ತಿಂಗಳು ಊರಿಗೆ ವಾಪಸಾಗದೆ ತೈಲ ಟ್ಯಾಂಕರ್ ಗಳ ರೂಪು ರೇಷೆಯ ಕೆಲಸದಲ್ಲಿ ನಿರತನಾಗಿದ್ದ. ಒಮ್ಮೆ ಪ್ರಾಜೆಕ್ಟ್ ಕೆಲಸ ಮುಗಿಯಿತು. ಮಾರನೆಯ ಅವನು ತನ್ನ ಊರಿಗೆ ಮರಳಿ ತನ್ನ ಮಡದಿ ‘ಹಿಸಾಕೊ’ ಮತ್ತು ಮಗ ‘ಕತ್ಸುತೋಶಿ’ ಯರನ್ನು ಸೇರುವ ಖುಷಿಯಲ್ಲಿದ್ದ. ಹಾಗಾಗಿ ಬೆಳಿಗ್ಗೆಯೇ ಎದ್ದು ನೌಕಾ ಪ್ರದೇಶವನೊಮ್ಮೆ ಕೊನೆಯ ಬಾರಿಗೆ ನೋಡಿ […]Read More
ಕರ್ನಾಟಕದಲ್ಲಿ ನಾಗಮಂಡಲವು ಸಾಂಸ್ಕೃತಿಕ, ಜಾನಪದೀಯ, ಚಿತ್ರಕಲಾತ್ಮಕ, ಆಚರಣ ಸಿದ್ಧಾಂತಗಳ ದೃಷ್ಠಿಕೋನದಲ್ಲಿ ಬಹಳ ಮುಖ್ಯವಾದ ಆಧ್ಯನಶೀಲ ಅಂಶವಾಗಿದೆ. ರಾಜಸ್ಥಾನದ ನಿಮಾಡ್ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಂಡಣ ಎಂಬ ರಂಗೋಲಿ ಬಿಡಿಸುವ ಪದ್ದತಿ ಇದೆ. ವಿಶೇಷವೆಂದರೆ ನಾವು ಕರ್ನಾಟಕದ ಕರಾವಳಿಯಲ್ಲಿ ಬಳಸುವ ಮಂಡಲ ಮತ್ತು ರಾಜಾಸ್ಥಾನದಲ್ಲಿ ಬಳಸುವ ಮಂಡಣ ಎಂಬ ಪದವು ಅಧ್ಯಯನದ ದೃಷ್ಠಿಯಲ್ಲಿ ಬಹಳ ಪ್ರಮುಖ ಎನಿಸುತ್ತದೆ. ಪದೋಚ್ಛಾರಣೆಯು ಒಂದೇ ರೀತಿಯಾಗಿದ್ದರೂ ಆ ಚಿತ್ತಾರಗಳು ಬಿತ್ತರಿಸಿಕೊಳ್ಳುವ ಗುರಿ ಮಾತ್ರ ಬೇರೆಯಾಗಿರುತ್ತದೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳಲ್ಲಿ […]Read More
ಈ ವಾರದ ಬಿಗ್ ಬಾಸ್ ಸೀಸನ್ 8 ಎಲ್ಲ ಸ್ಪರ್ದಿಗಳು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗುವ ಮೂಲಕ ಶುರುವಾಯಿತು. ಶಮಂತ್ ಮತ್ತು ಅರವಿಂದ್ ಕೆ ಪಿ ಎಲಿಮಿನೇಷನ್ ನಿಂದ ಇಮ್ಮ್ಯೂನಿಟಿ ಪಡೆದಿದ್ದರು. ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಎರಡು ತಂಡಗಳನ್ನು ತಾವೇ ರಚಿಸಿ ‘ದಂಡ ಯಾತ್ರೆ’ ಎಂಬ ಹೆಸರಿನಲ್ಲಿ ಟಾಸ್ಕ್ ನೀಡಿದ್ದರು. ಮಂಜು ಪಾವಗಡ, ದಿವ್ಯ ಯು, ದಿವ್ಯ ಸುರೇಶ್, ಶಮಂತ್, ಮತ್ತು ಚಕ್ರವರ್ತಿ ಒಂದು ತಂಡವಾಗಿ ತಮ್ಮನ್ನ “ನಿಮಗೈತೆ ಇರು” ಎಂದು ಕರೆದುಕೊಂಡರೆ […]Read More
ಕತ್ತಲು ಒಳಗೋ, ಹೊರಗೋ!?ಬೆಳಕು ಒಳಗೋ, ಹೊರಗೋ!? ಕಾಡ ಗಾಢಾಂಧಕಾರದಲ್ಲಿಸಾವಿರಾರು ಮಿಣುಕು ಹುಳುಗಳದ್ದೇದೀಪದ ಮೆರವಣಿಗೆ! ತನ್ನ ಮುಂದಿನ ಕತ್ತಲ ಸೀಳಿಕೊಂಡುಹಾರುವ ಈ ಪುಟ್ಟ ಹುಳುಹಿಂದುಳಿದವರಿಗೆ ಬೆಳಕಾಗಿದೆ! ವಿಜ್ಞಾನಿಗಳು ರೇಡಿಯಂ ಅನ್ನುಕಂಡು ಹಿಡಿಯುವ ಮುನ್ನವೇ…ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿಅದನ್ನು ಇಟ್ಟು ಕಳಿಸಿದ್ದಾನೆ! ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,ದಾರಿ ದೀಪವಾಗಿ!ಹುಲಿ, ಬೆಕ್ಕು, ನಾಯಿ, ನರಿತೋಳಗಳಂತಹ ಜೀವಿಗಳಲ್ಲಿಕಣ್ಣಾಗಿಸಿದ್ದಾನೆ! ಈ ಜಗವು ಹೀಗಿದ್ದರೂ ಗೀಜಗವುತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದುಈ ಮಿಣುಕು ಹುಳುವನ್ನೇ! ಶಕುನಿ ತಾ ತನ್ನ ತಂಗಿ ಗಾಂಧಾರಿಯಕತ್ತಲ ಭಯ ಹೋಗಿಸಲು ಹುಡುಕ ಬಂದದ್ದುಈ ಬೆಳಕ ಹುಳುವನ್ನೇ! ಪುರಾಣದ […]Read More
ನಿನ್ನೊಂದಿಗಿಷ್ಟು ಮಾತುದೀರ್ಘ ಮೌನದ ನಂತರವೂಉಳಿದದ್ದು ಇನ್ನಷ್ಟು ಮತ್ತಷ್ಟುನೀನೇ ಬೇಕೆಂಬ ವಾಂಛೆ ನಿನ್ನೆಡೆಗಿನ ಆಕರ್ಷಣೆಗೆಇದು ಇಷ್ಟೇ ಎಂದುಗೆರೆ ಎಳೆಯಲಾರೆಆಗಸದಷ್ಟು ಎಂದುಬಾಯಲ್ಲಿ ಹೇಳಿ ಬೀಗಲಾರೆ ನಿನ್ನ ಆರಾಧಿಸಲುನನ್ನವೇ ಕಾರಣಗಳುಂಟುನಿನಗಾಗಲಿ ಜಗಕಾಗಲಿವಿವರಿಸಲಾಗದ ನಂಟು ನೀ ತೋರಿದ ಸ್ನೇಹಕ್ಕೆಪ್ರೀತಿ ಪ್ರೇಮಗಳೆಂದುನೀನು ಹೆಸರಿಸಲಾರೆಅದು ಅಷ್ಟೇ ಎಂದುನಾನು ಕಡೆಗಣಿಸಲಾರೆ ನಿನ್ನೊಲುಮೆ ನನ್ನೆದೆಯಲಿಅರಳಿ ಹೂವಾಗಿದೆಕಾನನದ ಕುಸುಮವೊಲುಸುಗಂಧ ಸೂಸುತಿದೆ ನಿನ್ನೊಂದು ಮಾತಿಗೆಕಾಯುವ ತವಕದೊಳಗೂಪುಳಕಗೊಳ್ಳುವ ಪರಿಇರಲಿ ಹೀಗೇ, ಹೃದಯಅರಳುತಿರಲಿ ಪ್ರತಿ ಮುಂಜಾನೆ ಸೌಜನ್ಯ ದತ್ತರಾಜ ಫೋಟೋ ಕೃಪೆ : ವರ್ಲ್ಡ್ ಆರ್ಟ್ ಕಮ್ಯೂನಿಟಿRead More