ನೆನಪು ನಿನ್ನ ನೆನಪುಗಳೆನ್ನಮನದ ತಂತಿಯಮೀಟಿ, ನೋವಿನಾರಾಗವನು ತಾನುಡಿಸುತಿಹುದು ; ಬೆಳದಿಂಗಳೂ ಇಂದುಸುಡುವ ಬಿರುಬಿಸಿಲಾಗಿಅದರ ಜ್ವಾಲೆಗಳೆನ್ನಹೂ ಮನವ ಬೆಂಬೆತ್ತಿಕಾಡುತಿಹುದು ! ನನ್ನ ಮನವದು ತಾನುನಿನ್ನ ಬರುವಿಕೆಗಾಗಿಮಳೆಹನಿಗೆ ಬಾಯ್ದೆರೆದಚಾತಕ ಪಕ್ಷಿಯೊಲುಕಾದು ಕುಳಿತಿಹುದು; ನನ್ನ ಹೂ ಕಣ್ಗಳಲಿನಿನ್ನ ಕಾಣುವ ಆಸೆಮುಳ್ಳಂತೆ ಹೊಕ್ಕಿರಲುಕಣ್ರೆಪ್ಪೆಗಳದರೊಡನೆಕಾವಲಿಹುದು ! ನನ್ನ ಮನದಾಗಸದಚಂದ್ರ ನೀನಿಲ್ಲದೆಯೆಬೆಲ್ಲ ಜಜ್ಜಿದ ಕಲ್ಲುಮೂಲೆಯಲ್ಲಿರುವಂತೆಅಳುತಲಿಹುದು ! ನನ್ನನುಮತಿಯಿಲ್ಲದೆ,ನೆನಪುಗಳ ರಾಶಿಯನುಮಡಿಲಿಗೆರೆದ ಓ ಸಖನೆನೀನೆಲ್ಲಿರುವೆಯೆಂದುಮನ ಕೇಳುತಿಹುದು !! ಶ್ರೀವಲ್ಲಿ ಮಂಜುನಾಥRead More
ಓರ್ಕಾ – ಕೊಲೆಗಾರ ತಿಮಿಂಗಿಲ ಡಾಲ್ಫಿನ್ ಜಾತಿಗೆ ಸೇರಿದ ಸಮುದ್ರದಲ್ಲಿನ ಪರಭಕ್ಷಕಗಳ ಪೈಕಿ ಓರ್ಕಾ ತಿಮಿಂಗಿಲಗಳು ಅಗ್ರಪರಭಕ್ಷಕಗಳು ( ಅಪೆಕ್ಸ್ ಪ್ರಿಡೇಟರ್ ). ಕಿಲ್ಲರ್ ವೇಲ್ಸ್ ಎಂದು ಕರೆಯುವ ಈ ತಿಮಿಂಗಿಲಗಳು 6 ರಿಂದ 8 mt ಉದ್ದ , 3500 ಯಿಂದ 5500 ಸಾವಿರ ಕೇಜಿ ತೂಗುತ್ತವೆ. ಇವು ಡಾಲ್ಫಿನ್ ಗಳು. ಎಲ್ಲಾ ಡಾಲ್ಫಿನ್ ಗಳು ತಿಮಿಂಗಿಲಗಳೆ, ಎಲ್ಲಾ ತಿಮಿಂಗಿಲಗಳು ಡಾಲ್ಫಿನ್ ಗಳಲ್ಲ. ತಿಮಿಂಗಿಲಗಳನ್ನ (Cetacea) ಅನೇಕ ಕುಟುಂಬಗಳಲ್ಲಿ ವಿಭಾಗಿಸಿದ್ದಾರೆ. ಅವುಗಳಲ್ಲಿ Delphinidae ಎನ್ನುವುದು ಡಾಲ್ಫಿನ್ […]Read More
ನೆನಪಿನ ಹಾದಿಯಲ್ಲಿ ಒಲವಿನ ಮಳೆಯಲ್ಲಿನಿನ್ನ ನೆನಪಾಗುತಿದೆಏಕೆ ಹೀಗೆ!!?ಭಾವ ಕಂಬನಿಗಳ ಜೊತೆಗೆನನ್ನ ಕಂಬನಿಯೂ ಹರಿಯುತ್ತಿದೆ..ನೋವಿಗೋ..? ನಲಿವಿಗೋ..?ತಿಳಿಯದಾಗಿದೆಯಲ್ಲ !!!?? ನಿನ್ನ ನೆನಪಿನಲೇ ನಾನು ಬರೆಯುತ್ತೇನೆ,ಬರೆದು ನಿರಾಳವಾಗುತ್ತೇನೆ,ನಿನ್ನ ನೆನಪಾದ ಗಳಿಗೆಯಲಿ…!! ನಾ ಬರೆದಾಗ ಭಾವದ ಬಸಿರುಪ್ರಸವ ವೇದನೆ ಅನುಭವಿಸಿಒಡಲ ಮಾತುಗಳು ಹೊರಬಂದುಆಗಸದಿ ಚಂದಿರನ ಬೆಳದಿಂಗಳು ಕಂಡಾಗನಿನ್ನ ನಗು ನೆನಪಾಗುತ್ತದೆ,ನಿನ್ನ ಮುಂಗುರುಳ ನರ್ತನ ಕಣ್ಣು ತುಂಬುತ್ತದೆನಿನ್ನ ಮಂದಹಾಸದ ನೆನಪಾಗಿಮೌನವಾಗುತ್ತೇನೆ!!! ನೀ ಅಂದು ಬೆನ್ನುಮಾಡಿ ಹೋದಹಾದಿಯಲಿ ನಾನೂ ನಡೆಯುತ್ತೇನೆ,ನಿನ್ನ ಹೆಜ್ಜೆಗಳ ಅರಸುತ್ತೇನೆ,ಕಾಲ್ಗಳು ಮುಂದೆ ಸಾಗದೇ ನಿಲ್ಲುತ್ತವೆ,ನಿನ್ನ ಹೆಜ್ಜೆ ಕಂಡ ಸಂತಸಕ್ಕೋ ?ನಿನ್ನ ಹಾದಿಗುಂಟ ನಡೆದ […]Read More
ಚಂದಿರನ ಚಮತ್ಕಾರ ಕಾಣದ ಆ ದೇವನು ಸೃಷ್ಟಿಸಿದಬುವಿಯಲಿ ಸಕಲವೂ ಸುಂದರ!ಶಶಿ ಮೂಡಿಸಿಹ ಬೆಳದಿಂಗಳಲಿ..ಹೊಳೆವ ತಾರೆಗಳದೇ ಚಿತ್ತಾರ!! ಪ್ರಕೃತಿಯ ಚೆಂದದ ಮಡಿಲಲಿಅಡಗಿದೆ ಸಾವಿರಾರು ವಿಚಿತ್ರ!ಧರೆಯಂಗಳದಿ ಮೂಡಿದ ತಂಪಲಿ..ತಂಗದಿರ ನೀಡಿಹನು ಹಾಲ್ಬೆಳಕ ಸೂತ್ರ!! ರವಿ ವಸುಂಧರೆಗೆ ತರುವಂತೆಕಣ್ಕೋರೈಸುವ ಹೊಂಗಿರಣವನು!ಚಂದಿರ ಅವನಿಂದ ಕಡ ತಂದ..ಬೆಳಕಿಂದ ಹಾಸಿಹನು ಬೆಳದಿಂಗಳನು!! ಆಗಸದಿ ಹರಡಿದ ತಾರೆಗಳಒಟ್ಟುಗೂಡಿಸಿ ನಲಿವನು ಚಂದಿರ!ಕಡುಬಿಸಿಲ ತಾಪಕೆ ಬಳಲಿದ ಇಳೆಯ..ತಾ ತಂಪಾಗಿಸಿ ಬೆಳಗಿಹನು ಅಂಬರ!! ಸುಮನಾ ರಮಾನಂದRead More
ತಾಯಿಯ ಒಡಲು – ಬಂಗಾರದ ಕಡಲು ತಾಯಿಯು ಒಂದು ಪದವಾಗಿದ್ದು ಅದು ಸ್ವತಃ ಪರಿಪೂರ್ಣ ಪದವಾಗಿದೆ. ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೂಲ ಕಾರಣ. ತಾಯಿ ನಮ್ಮ ಜನ್ಮದಲ್ಲಿ ದೇವರ ಸಂಗಾತಿ. ನಾವು ದೇವರನ್ನು ನೋಡಿಲ್ಲ, ಮುಟ್ಟಿಲ್ಲ, ಆದರೆ ದೇವರನ್ನು ಕಂಡರೆ ಅದು ತಾಯಿಯಂತಾಗಬಹುದು. ತಾಯಿಯೇ ಮೊದಲ ಗುರು ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ, ತಾಯಿಯ ಸೇವೆಯು ಎಲ್ಲಾ ದೇವರ ಸೇವೆ ಮಾಡಿದ ಪ್ರತಿಫಲವಾಗಿದೆ. ಈ ಭೂಮಿಯ ಮೇಲೆ ದೇವರು ಎಲ್ಲಾ ಕಡೆ ಇರಲು ಅಸಾಧ್ಯವೆಂದು ತಿಳಿದು, ಪ್ರತಿ […]Read More
ಮುಸ್ಸಂಜೆಯ ನೋಟ ಅಂದದ ವರ್ಷಧಾರೆ ಬರುತಿದೆಚೆಂದದ ಈ ಮುಸ್ಸಂಜೆಯಲಿ!ನೊಂದ ಬುವಿಯದನಪ್ಪಿ..ಮಿಂದಂತಿದೆ ಮಣ್ಣ ಘಮಲಿನಲಿ!! ಬಂಗಾರ ಬಣ್ಣದ ಬೆಳಕಿಂದರಂಗಾಗಿದೆ ಧರೆ ಹಸಿರಿನಲಿ!ಹಿಂಗಾರಿನ ಮುಸಲಧಾರೆಯ..ಗುಂಗಿನಲಿದೆ ಇಳೆ ಹರುಷದಲಿ!! ತೆಂಗಿನ ಗರಿಗಳ ಓಲಾಟದಿರಂಗಿನ ಚಿತ್ತಾರ ಗಗನದಲಿ!ಭೃಂಗವದು ಹೂವನ್ನು ಕಾಡುವಂತೆ..ತಂಗಾಳಿ ತೀಡಿದೆ ಸಂಜೆಯಲಿ!! ಬೆರಗಿನ ಚಟಪಟ ಮಳೆಹನಿಯುಮೆರುಗಿನಿಂದಾಗಮಿಸಿ ಅವನಿಯಲಿ!ಮೂಡಿಸಿ ಚಿತ್ತಾರವನಾಗಸದಿ..ಸೊಬಗು ತಂದಿದೆ ಬೈಗಿನಲಿ!! ಸುಮನಾ ರಮಾನಂದRead More
ಜಾನಪದ ಕಣಜ ಅನಂತ ಜ್ಞಾನದಾಳವನಿಂತಲ್ಲರಹುತಲಿಭೋದಪ್ರದವೂ, ಸಾಂದ್ರವೂಆದ ಸೂಕ್ತಿಯೀ ಗಾದೆ! ಕಲಿತವರ ನುಡಿಯದುವೇದವೆಂದೆನಿಸಿದರೆ,ಜನ ಸಾಮಾನ್ಯರವೇದದಂತಿಹುದೀ ಗಾದೆ ! ಸಂಕ್ಷಿಪ್ತತೆ, ಪೂರ್ಣತೆ,ತೀಕ್ಷ್ಣತೆಯೊಡನೆ,ತಲೆತಲೆಮಾರಿನಿಂದಲೂಜನಪ್ರಿಯವು ಈ ಗಾದೆ! ಹಾಸ್ಯ,ವಿಡಂಬನೆಗಳಕೂಟ, ಅನುಭವದ,ಪ್ರಾಮಾಣಿಕತೆಯಸೂಕ್ಷ್ಮದೃಷ್ಟಿಯೀ ಗಾದೆ! ಬಿಸಿಲು-ಬೆಳದಿಂಗಳಂತೆ,ಬೆಂಕಿ-ಇಬ್ಬನಿಯಂತೆಕಾಲಕಾಲದಿ ಜನರಮನಸಿನಲ್ಲಿಹುದೀ ಗಾದೆ! ಮೆದುಳಿಗೆ ಮೇವು,ಕಾವ್ಯಗುಣಗಳ ಗಣಿ,ಜಾನಪದ ಸಾಹಿತ್ಯದಜೀವಸತ್ವವೀ ಗಾದೆ ! ಜನ ಜೀವನದವ್ಯಾಪಕ ಸತ್ವ-ತತ್ವ,ನೂರಾರು ಭಾವಗಳಅಭಿವ್ಯಕ್ತಿ ಈ ಗಾದೆ ! ಶ್ರೀವಲ್ಲಿ ಮಂಜುನಾಥಬೆಂಗಳೂರುRead More
ಗರ್ಭಿಣಿ ಹೆಂಡತಿಯ ಆರೈಕೆ ಹೀಗಿರಲಿ ಪ್ರತಿಯೊಂದು ಹೆಣ್ಣಿಗೂ ಗರ್ಭಾವಸ್ಥೆಯು ಜೀವನದ ಅತ್ಯಂತ ಅಮೂಲ್ಯವಾದ ಘಟ್ಟ. ಈ ಅವಧಿಯಲ್ಲಿ ಆಕೆಯ ಕಾಳಜಿಯು ಕುಟುಂಬದ ಸದಸ್ಯರ ಆದ್ಯ ಕರ್ತವ್ಯವಾಗಿದೆ. ಈ ಕಾಳಜಿ ತನ್ನ ಪತಿಯಿಂದಲೇ ಬಂದರೆ ಆಕೆಯ ಆಯಾಸ, ನೋವೆಲ್ಲವೂ ಮಾಯವಾಗಿಬಿಡುತ್ತದೆ. ಏಕೆಂದರೆ ಪ್ರತಿಯೊಬ್ಬ ಹೆಂಡತಿಯ ದೃಷ್ಟಿಯಲ್ಲೂ ಗಂಡನ ಆರೈಕೆ, ಪ್ರೀತಿಗೆ ಅಷ್ಟೊಂದು ಮೌಲ್ಯವಿದೆ. ಪ್ರತಿಯೊಬ್ಬ ಪತಿಯು ತನ್ನ ಗರ್ಭಿಣಿ ಮಡದಿಯನ್ನು ಖುಷಿಯಾಗಿರುವಂತೆ ಮಾಡಲು ಈ ಕೆಳಕಂಡ ವಿಚಾರಗಳ ಬಗ್ಗೆ ಗಮನ ಕೊಡುವುದು ಅಗತ್ಯ. ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆಯು ಒಂದು […]Read More
ಕನ್ನಡ ನಾಡಿನ ಕಲಾ ಕಣ್ಮಣಿ ಡಾ. ರಾಜ್ ಡಾ ರಾಜ್ ಕನ್ನಡಿಗರ ಅಪೂರ್ವ ಸಂಪತ್ತು, ಈ ನಮ್ಮ ಮುತ್ತು, ಕರುನಾಡ ಪ್ರೀತಿಯ ರಾಜಕುಮಾರ. ಹೆಸರೇ ಸೂಚಿಸುವಂತೆ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ರಾಜನಾಗಿಯೇ ಮೆರೆದು, ಅಂದೂ, ಇಂದೂ ಎಂದೆಂದೂ, ಎಲ್ಲಾ ವಯೋಮಾನದ ಚಿತ್ರರಸಿಕರಿಗೆ ಇಷ್ಟವಾಗುವ ಏಕೈಕ ಮಹಾನ್ ಕಲಾವಿದ ನಮ್ಮ ರಾಜಕುಮಾರ್. ಡಾ ರಾಜಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಗಡಿಬಾಗದ ಗಾಜನೂರು ಎಂಬ ಸಣ್ಣ ಗ್ರಾಮದಲ್ಲಿ. ಓದಿದ್ದು ನಾಲ್ಕನೇ ತರಗತಿಯಾದರೂ ತಮ್ಮ […]Read More
ಬಣ್ಣವನ್ನು ಬದಲಾಯಿಸುವ ಈ ಗೋಸುಂಬೆ ಕೆಲವೊಂದು ವ್ಯಕ್ತಿಗಳ ಎದುರುಗಡೆ ಮತ್ತು ಹಿಂದುಗಡೆಯಿಂದ ಒಂದೊಂದು ರೀತಿಯಿಂದ ಮಾತನಾಡುವವರನ್ನು, ಮಾತು ಬದಲಾಯಿಸುವವರನ್ನು ಗೋಸುಂಬೆಗಳು ಎಂದು ಸಾಮಾನ್ಯವಾಗಿ ಕರೆಯುವುದು ವಾಡಿಕೆ. ಇದರ ಅರ್ಥ ತಮಗೆ ಅಗತ್ಯವಿರುವ ರೀತಿ ತಮ್ಮ ಮನಸ್ಸನ್ನು ಬದಲಾಯಿಸುವವರು ಎಂದು ಅರ್ಥ. ಅದೇ ರೀತಿ ಇಲ್ಲೊಂದು ಹಲ್ಲಿಯ ಜಾತಿಯ ಪ್ರಾಣಿಯೊಂದಿದ್ದು, ಅದು ತಾನು ಇರುವ ವಾತಾವರಣಕ್ಕೆ ಅನುಗುಣವಾಗಿ ತನ್ನ ಮೈಯ ಬಣ್ಣವನ್ನು ಬದಲಾಯಿಸುತ್ತದೆ. ಅದರ ಹೆಸರು ‘ಗೋಸುಂಬೆ’ ಎಂದು. ಗೋಸುಂಬೆಗಳು ಹಲ್ಲಿಯ ಜಾತಿಗೆ ಸೇರಿದವುಗಳಾಗಿದ್ದು ವಿಶಿಷ್ಟ ಹಾಗೂ ಹೆಚ್ಚು […]Read More