ಸೈಕಲ್ ಸೈಕಲ್

ಸೈಕಲ್ ಸೈಕಲ್ ಚಿಕ್ಕವರಿದ್ದಾಗ ಸೈಕಲ್ ಸಿಕ್ಕಿತೆಂದರೆಖುಷಿಯೋ ಖುಷಿ ಹೀರೋ ಆಗಲಿಅಟ್ಲಾಸ್ ಆಗಲಿ ಸಿಕ್ಕ ಸೈಕಲ್ ಸಿಂಹಾಸನವೇರಿತಾಸಿನ ಬಾಡಿಗೆಗೆ ಹದಿನಾರಾಣೆಒಮ್ಮೊಮ್ಮೆ ಎಂಟಾಣೆಗೆ ಅರ್ಧ ತಾಸು ಹೆಸರಿಗೆ ಬರೆಯಿಸಿಪಡೆದದ್ದು ಸಿಹಿ ತಿನಿಸು ತಿಂದಷ್ಟು ಹಿಗ್ಗು ಚಡ್ಡಿ ದೋಸ್ತ ಏರಿದ ಸೈಕಲ್ ಹಿಂದೆನಗು ನಗುತ್ತಾ ಇಳಿಯುತ್ತಿದ್ದ ಚಡ್ಡಿ ಏರಿಸುತ್ತಾಓಡಿ ಹೋಗುತ್ತಿದ್ದುದು ಎಷ್ಟೊಂದು ಖುಷಿ ಇತ್ತುಏರು ದಿಬ್ಬದಲ್ಲಿ ತಿಣುಕಾಡುತ್ತಿದ್ದ ಸೈಕಲ್ ಜೋರಾಗಿ ತಳ್ಳಿಇಳುವಿಗೆ ಸುಯ್ಯೆನ್ನುವಾಗ ನಾನೇ ಹೊಡೆದಷ್ಟು ಸಂಭ್ರಮಪಟ್ಟುಸಾವಿರ ಸಾರಿ ನಕ್ಕದ್ದು ಇಂದಿಗೂ ಗಟ್ಟಿಯಾದ ಹಲ್ಲಿಗೆ ಜೀವಂತ ಪೈಪೋಟಿಯಿಂದ ಹೋಗುತ್ತಿದ್ದದಿನದ ಸಾಲಿಗೆ ಚಕ್ಕರ್ […]Read More

ಕಾಗೆಯ ಗುಣಾವಲೋಕನ

ಕಾಗೆಯ ಗುಣಾವಲೋಕನ ಕಾಗೆಯ ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು. ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ. ಬಣ್ಣದಲ್ಲಿ ಕಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲಾ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯನ್ನು ನೋಡಿಕೊಂಡು ಅದರಿಂದ ಕಲಿಯಬೇಕಾಗಿರುವುದು ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು. ಕಾಗೆಯಿಂದ […]Read More

ಅವನ ನೆನಪು

ಅವನ ನೆನಪು ಅವ ಬಂದಿದ್ದಹುಣ್ಣಿಮೆಯ ಚಂದ ಕನಸಿನಂತೆವಿರಹದಿ ಬೆಂದ ರಾಧೆಗೆಕೃಷ್ಣ ಕಂಡಂತೆಬಸವಳಿದ ಗೋಪಿಯಬರಸೆಳೆದು ಅಪ್ಪಿದಗೋಪಿಲೋಲನಂತೆ ಬಂದಿದ್ದ ಅವಬೇಸಿಗೆಯಲಿ ತಂಪನೂಡುವಮಳೆಯಂತೆಚಳಿಗಾಲದಮಧ್ಯಾಹ್ನದ ಹೊಂಬಿಸಿಲಂತೆ ಬಂದಿದ್ದ ಅವಕಡುಬಡವನೆದುರುಕೊಪ್ಪರಿಗೆ ಐಶ್ವರ್ಯಬಂದು ಬಿದ್ದಂತೆತಾಯಿಯೊಡಲಿಂದ ಅಗಲಿದಮಗುವು ಮತ್ತೆಅಮ್ಮನ ತೊಡೆಯೇರಿದಂತೆ ಅವ ಬಂದಿದ್ದಜನ್ಮಜನ್ಮಗಳ ಪಾಪತೊಳೆದಂತೆಪುಣ್ಯ ಫಲವೆಲ್ಲವೂಸಂಚಯವಾಗಿಮಾನವರೂಪ ಪಡೆದಂತೆಮನದಾನಂದದಂತೆನಿಂತಿದ್ದ ಎದೆಬಡಿತಮತ್ತೆ ಶುರುವಾದಂತೆ ಹೀಗೆ ಬಂದು ಹಾಗೆ ದೇವರಂತೆಮಾಯವಾದವನ ಕಾಣಲುಮತ್ತೆಷ್ಟು ತಪಗೈಯಬೇಕೋಇನ್ನೆಷ್ಟು ಕಾಯಬೇಕೋತಿಳಿದಿಲ್ಲವಾದರೂಅವ ಕೊಟ್ಟ ನೆನಪುಗಳಭದ್ರವಾಗಿಟ್ಟುಕೊಳ್ಳುವಎದೆಗೂಡಂತೂ ಗಟ್ಟಿಯಿದೆಮನದೊಳಗವನ ಭಿತ್ತಿಚಿತ್ರವಿದೆ. ಸೌಜನ್ಯ ದತ್ತರಾಜRead More

ಪ್ಲ್ಯಾಟಿಪಸ್ ಮತ್ತು ಎಕಿಡ್ನಾ

ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಮರಿಗಳಿಗೆ ಜನ್ಮನೀಡಿ ಮೊಲೆಯುಣಿಸುವುದು ಸಾಮಾನ್ಯವಾಗಿ ಸಸ್ತಿನಿಗಳ ಪ್ರಮುಖ ಲಕ್ಷಣ‌, ಇದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಕೆಲವೊಂದು ಸಸ್ತಿನಿಗಳು ಪಕ್ಷಿ ಮತ್ತು ಸರೀಸೃಪಗಳಂತೆ ಮೊಟ್ಟೆಯಿಟ್ಟು ಪಕ್ಷಿಗಳಂತೆ ಕಾವುಕೊಟ್ಟಾದ ಮೇಲೆ ಹೊರಬರುವ ಮರಿಗಳಿಗೆ ಹಾಲುಣಿಸುತ್ತವೆ. ಈ ವಿಭಾಗದಲ್ಲಿ ಬರುವ ಸಸ್ತಿನಿಗಳನ್ನ ಓವಿಪರಸ್ (Oviparous) ಸಸ್ತಿನಿಗಳು ಎಂದು ಕರೆಯುತ್ತಾರೆ. ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಈ ಗುಂಪಿನಲ್ಲಿ ಬರುವ ಪ್ರಮುಖ ಸಸ್ತಿನಿಗಳು. ಪ್ಲ್ಯಾಟಿಪಸ್ ಪ್ಲಾಟಿಪಸ್ ಗ್ರೀಕ್ ಮೂಲದ ಪದ. ಮೊನೊಟ್ರೀಮ್‌ (Monotreme) ವಿಭಾಗದಲ್ಲಿ ಬರುವ ಪ್ರಾಣಿಗಳಲ್ಲಿ ಪ್ಲಾಟಿಪಸ್ […]Read More

ಸವಿಸಂಜೆಯ ಚಿತ್ತಾರ

ಸವಿಸಂಜೆಯ ಚಿತ್ತಾರ ಅಂಬರದ ನೀಲಬಣ್ಣದಿಅಂದದ ಚಿತ್ತಾರವದು ಕಂಡಿದೆ!ಹೊನ್ನಿನ ರಂಗಲಿ ದಿಗಂತವು..ತನ್ನಿರುವನು ತಾನೇ ಮರೆತಂತಿದೆ!! ಅಹಸ್ಕರನ ಕಿರಣವು ಮಾಸಿ ತನ್ನಆಯಸ್ಸನು ಮರುದಿನಕೆ ದೂಡಿದೆ!ಮತ್ತದೇ ಉತ್ಸಾಹದಿ ಆಗಮಿಸಿರಲು..ಬತ್ತದಿಹ ಚೈತನ್ಯವ ಜಗಕೆ ತಂದಿದೆ!! ಪ್ರತಿದಿನವೂ ಅದೇ ಬೆಳಗುಪ್ರತಿನಿಮಿಷವೂ ಅದೇ ಸೊಬಗು!ನಿತ್ಯವೂ ಲೋಕ ತನ್ನಂತೆ ತಾ ನಡೆದು..ಮಿಥ್ಯವಿರದ ಪ್ರಕೃತಿ ತಾ ಅರಳಿದ ಮೆರುಗು!! ಮಾನವನ ಇಹದ ಬದುಕಲಿಯೂಮಾಸದಿಹ ಇಳಿಸಂಜೆಯು ಕಾಯುತಿದೆ!ಕಪ್ಪುಬಿಳುಪಿನ ರಂಗಿನಲಿ ತನಗೆ…ಒಪ್ಪಾದ ಬಣ್ಣವನು ಹುಡುಕುತಿದೆ!! ಸುಮನಾ ರಮಾನಂದಮುಂಬೈRead More

ಹೈಪೋಥೈರಾಯ್ಡಿಸಮ್ಮ್ – Hypothiroidism

ಹೈಪೋಥೈರಾಯ್ಡಿಸಮ್ಮ್ – Hypothiroidism ಹೈಪೋಥೈರಾಯ್ಡಿಸಮ್ ಅನ್ನು ಅಂಡರ್ ಆಕ್ಟಿವ್ ಥೈರಾಯ್ಡ್ ಎಂದೂ ಕರೆಯಲಾಗುತ್ತದೆ, ಇದು ರೋಗಿಯ ಥೈರಾಯ್ಡ್ ಗ್ರಂಥಿ (ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆ-ಆಕಾರದ ಗ್ರಂಥಿ) ಸಾಕಷ್ಟು ಥೈರಾಯ್ಡ್ ಹಾರ್ಮೋನ್ (ಥೈರಾಕ್ಸಿನ್) ಅನ್ನು ರಕ್ತಪ್ರವಾಹಕ್ಕೆ ಉತ್ಪಾದಿಸಲು ಮತ್ತು ಸ್ರವಿಸಲು ವಿಫಲವಾದ ಸ್ಥಿತಿಯಾಗಿದೆ. ಹೈಪೋಥೈರಾಯ್ಡಿಸಮ್ ಒಂದು ದೈಹಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ದೇಹವು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ, ಹೆಚ್ಚಾಗಿ ಈ ಕಾಯಿಲೆ ಸ್ತ್ರೀಯರನ್ನು ಬಾಧಿಸುತ್ತದೆ ಪುರುಷರಿಗೂ ಇದು ಬರುವ ಸಾಧ್ಯತೆ ಇದೆ. ಥೈರಾಯಿಡ್ ಗ್ರಂಥಿಯ ಅಸಮತೋಲನ ಸ್ರವಿಸುವಿಕೆಯಿಂದ ಬೇರೆ ಬೇರೆ […]Read More

ಸಮಾಜ ಸಮನ್ವಯ

ಸಮಾಜ ಸಮನ್ವಯ ನಮ್ಮೂರ ಬೆಟ್ಟದ ತುದಿಯಲ್ಲಿಉದಯಿಸುವ ಸೂರ್ಯನಿಗೆಎದ್ದೇಳು ಮಂಜುನಾಥ ಏಳು ಬೆಳಗಾಯಿತುಎನ್ನುವ ಸ್ವಾಗತ ಗೀತೆಪ್ರತಿ ದಿನವೂನಮ್ಮೂರಿನ ದೇವಾಲಯದಲ್ಲಿ ಕೇಳಿ ಬರುತಿತ್ತು ಬೆಳಗಿನ ಜಾವ ನಾಲ್ಕು ಘಂಟೆಗೆಮಠ ಮಂದಿರದಲ್ಲಿ ಮೈಕ್ ಹತ್ತಿಸಿದರೆಶುಕ್ಲಾಂಬರದರಂ ಶಶಿವರ್ಣಂ ಚತುರ್ಭುಜಂನೊಂದಿಗೆ ಮುಂದುವರಿಯುತ್ತಿತ್ತು… ಮಂದಿರದ ಮೈಕ್ ನೊಂದಿಗೆ ಮಸೀದಿಯಲ್ಲಿ ಕೂಗುತ್ತಿದ್ದ ಆಜಾನಧ್ವನಿಯೂ ಗಾಳಿಯಲ್ಲಿ ವಿಲೀನಗೊಂಡು ತೇಲಿಮಠದ ಸ್ವಾಗತ ಗೀತೆಯೊಂದಿಗೆ ಬೆರೆತುಅರಳುವ ಮೊಗ್ಗುಗಳಿಗೆ, ಹಾರುವ ಹಕ್ಕಿಗಳಿಗೆ,ಮೊಳಕೆಯೊಡೆಯುವ ಬೀಜಕ್ಕೆ, ಕೂಗುವ ಕೋಳಿಗೆ,ಇಂಪಾದ ಸಂಗೀತದೊಂದಿಗೆ ಶುಭ ಕೋರುತಿತ್ತು ನಿನ್ನೆಯ ಕತ್ತಲೆಯ ಬಾನಿನ ಮುಸುಕಿನಲ್ಲಿಹಕ್ಕಿಗಳ ಹಿಂಡು ರಂಗೋಲಿ ಹಾಕಿಕರಗುವ ಚಂದಿರನಿಗೂ ದಾರಿ […]Read More

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವಾಕ್ ಸ್ವಾತಂತ್ರ್ಯ… ತನ್ನ ಭಾವನೆಗಳು ಹಾಗೂ ಅಭಿಪ್ರಾಯಗಳನ್ನು ಇತರರ ಜತೆ ಹಂಚಿಕೊಳ್ಳುವ ಅಥವಾ ವ್ಯಕ್ತಪಡಿಸುವ ಮುಕ್ತವಾದ ಅವಕಾಶವಿದ್ದು ಇದು ಆತನ ಸಾಂವಿಧಾನಿಕ ಹಕ್ಕೂ ಆಗಿರುತ್ತದೆ. ಇದು ಮುಖ್ಯವಾಗಿ ವಿವಿಧ ರೀತಿಯ ಪ್ರತಿಭಟನೆಗಳು, ಮನವಿಗಳು ಅಥವಾ ವ್ಯವಸ್ಥೆಯನ್ನು ವಿರೋಧಿಸುವುದರ ಮೂಲಕವೂ ಅಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆ ಅಥವಾ ಪ್ರಾತಿನಿಧ್ಯವನ್ನು ಪಡೆಯುತ್ತಿರುವುದು ಮಾಧ್ಯಮಗಳು. ಅವುಗಳಲ್ಲಿ ಪ್ರಮುಖವಾಗಿ ಟೀವಿ ಮಾಧ್ಯಮಗಳು ಹಾಗೂ ವೃತ್ತಪತ್ರಿಕೆಗಳು ಮತ್ತು […]Read More

ಬದುಕುವ ಪರಿ

ಬದುಕುವ ಪರಿ ಈ ಬದುಕೊಂದು ಅವಕಾಶಗಳಮಹಾ ಸಾಗರಬೆದರದಿರು ಎಂದಿಗೂ,ಹೂರದೂಡಿಬಿಟ್ಟಾರು,ಈ ಜಗದಾಚೆಗೂ ನಿಲ್ಲದಿರು ತುಸು ಹೊತ್ತುವಿಶ್ರಾಂತಿಗೆ ಸಯಯವಿಲ್ಲದಿಲ್ಲಎಂದಿಗಾದರೂ ನೀ ಮಹಾ ವಿಶ್ರಾಂತ ಸಮಯ ಎಲ್ಲರಿಗೂ ಒಂದೇಆದರೇತಕೆ ವಿಭಿನ್ನ ನೀ ನಂಬಿದ ಜನ.ಎಲ್ಲ ತಿಮಿಂಗಿಲಗಳಿಗೂ ಜಾಗವಿದೆ ಇಲ್ಲಿಹುಡುಕದಿರು ಜಾಗವ ಸಣ್ಣ ಬಾವಿಯೊಳಗೆ ನಾವು ಸಾಗುತ್ತಲಿರೋಣಸಾಧ್ಯವಾದರೆ ಸಮಾಜದ ಜೊತೆ, ಜೊತೆಗೆ.ಇಲ್ಲದಿರೆ ಒಂಟಿ ಸಲಗದಂತೆಬದುಕಿ ಬಿಡೋಣ ಒಮ್ಮೊಮ್ಮೆ ನಿಜ ಸಂತನಂತೆ!!! ಪವನ ಕುಮಾರ ಕೆ ವಿಬಳ್ಳಾರಿRead More

ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ ಸಿರಿಯ ಪಂಜರವ ಹರಿದೊಗೆದುಸುಖದ ಮೂಲವ ಹುಡುಕುತಬೋಧಿ ವೃಕ್ಷದಡಿ ತಪವಗೈದುದಿವ್ಯ ಜ್ಞಾನವನು ಪಡೆದರು ಬುದ್ಧ ಅಳುವವರ ಕಂಬನಿಯೊರೆಸಲುವರ್ಗ ವರ್ಣ ಲಿಂಗ ಭೇದಗಳಳಿಸಲುಗುಡಿಸಲೊಳಿರುವವರ ಹುಡುಕುತನಡೆದರು ಕರುಣಾಮೂರ್ತಿ ಬುದ್ಧ ಕೊಲ್ಲಲಿಲ್ಲ ನೀವು ಪಾಪಿಗಳನುದ್ವೇಷಿಸಲಿಲ್ಲ ನೀವು ಕೋಪಿಗಳನುಕಿತ್ತೊಗೆದಿರಿ ನೀವು ಪಾಪಿಗಳಮನದಾಳದ ಕೊಳೆತ ಕಸವನು ದುಃಖದ ಮೂಲ ಆಸೆಯ ಬಿಡಿಸಿಶುದ್ಧಾಚರಣೆಯ ದೀಕ್ಷೆಯ ನೀಡಿಜ್ಞಾನಾರ್ಥಿಗಳಿಗೆ ಜ್ಞಾನ ದಾಸೋಹಆರಂಭಿಸಿದ ವಿಶ್ವಗುರು ಬುದ್ಧ ಜ್ಞಾನದ ಸುದೀಪ ಹೊತ್ತಿಸಿಅಜ್ಞಾನದ ತಮವ ಓಡಿಸಿದಕರುಣಾಳು ಬೆಳಕು ಬುದ್ಧಮತ್ತೊಮ್ಮೆ ಅವತರಿಸಿ ಬನ್ನಿ ಡಾ. ಗುರುಸಿದ್ಧಯ್ಯಾ ಸ್ವಾಮಿಅಕ್ಕಲಕೋಟ ಮಹಾರಾಷ್ಟ್ರಮೊಬೈಲ್ 9175547259Read More