ಮನದೊಳಮಿಡಿತ ಪುಸ್ತಕದ ಶೀರ್ಷಿಕೆಯೇ ಅತ್ಯಂತ ಆಕರ್ಷಕ ಹಾಗೂ ಕುತೂಹಲವನ್ನು ಉಂಟುಮಾಡುವಂತಿದೆ!! ಮನದ ಒಳ ಮಿಡಿತ…ಮನಸಿನ ಒಳಗೆ ನಡೆಯುವ,ಉದ್ಭವಿಸುವ, ನೆಲೆ ನಿಲ್ಲುವ ಭಾವನೆಗಳೇ ಈ ಮನದ ಒಳಗಿನ ಮಿಡಿತ ಎಂದರೆ ತಪ್ಪಲ್ಲ ಎಂದು ಭಾವಿಸುವೆ. ಮಿಡಿತಗಳ ಭಾವಗಳು ಹತ್ತು ಹಲವು! ಅದರಲ್ಲಿ ಕೆಲವು ಮಿಡಿದು ಸದ್ದುಮಾಡುತ್ತವೆ!ಕೆಲವು ಮಿಡಿದು ರೋಮಾಂಚನ ಗೊಳಿಸುತ್ತವೆ!ಕೆಲವು ಅಂತರಂಗದ ಜೊತೆ ಘರ್ಷಣೆಗೂ ನಿಲ್ಲುತ್ತವೆ!!ಮತ್ತಷ್ಟು ಮನಸಿಗೆ ಮುದ ನೀಡುತ್ತವೆ!! ಈ ಎಲ್ಲಾ ಬಗೆಯ ಭಾವನೆಯ ಮಿಡಿತದ ಅನಾವರಣ ಈ ಸಂಕಲನದಲ್ಲಿ ಅಡಗಿ ಕುಳಿತಿವೆ! ಮಿಡಿತದ ಪರಿಣಾಮ ಆಯಾ […]Read More
ಶುಭಾಶಯ ಹೊಸತು ವರುಷದಆದಿಯಲ್ಲಿಸವಿಗನಸೊಂದುಮನದಲಿ ಮೂಡಲಿ! ಮಾವು ಬೇವಿನಚಿಗುರಿನಂದದಿನಿಮ್ಮ ಬಾಳಿದುನಳನಳಿಸಲಿ! ಮನದ ಮರಿಕೋಗಿಲೆಯುಉಲ್ಲಾಸದಲೆತಾ ಹಾಡಲಿ ! ಮಳೆಯಬಿಲ್ಲಿನಬಣ್ಣವೆಲ್ಲವುನಿಮ್ಮ ಕಣ್ಣಲಿಪ್ರತಿಫಲಿಸಲಿ ! ಹೊಂಗೆ ಹೂವಿನನವಿರುಗಂಪಿನಘಮಲುನಿಮ್ಮನಾವರಿಸಲಿ! ನವನಾವೀನ್ಯದಮಧುರ ಭಾವದಿನಿಮ್ಮ ಮನವದುಬೀಗಲಿ ! ಕಷ್ಟ ಬರಲೀ,ಸುಖವೇ ಇರಲಿ,ಸಮಚಿತ್ತದಿಬಾಳು ಸಾಗಲಿ !! ಯುಗಾದಿ ಹಬ್ಬದ ಶುಭಾಶಯಗಳು. ಶ್ರೀವಲ್ಲಿ ಮಂಜುನಾಥRead More
ನವ ಯುಗದ ಆದಿ ಈ ಯುಗಾದಿ..! ಯುಗಾದಿ ಎಂದರೆ ಮೊದಲು ನೆನಪಾಗುವುದು ಬೇವುಬೆಲ್ಲದ ಮಿಶ್ರಣ, ಜೊತೆಗೆ ವಸಂತಮಾಸದ ಚಿಗುರು. ಯುಗಾದಿ ಹಲವು ಆರಂಭಗಳಿಗೆ ಮುನ್ನುಡಿ. ಚೈತ್ರ ಶುದ್ಧ ಪಾಡ್ಯಮಿಯ ದಿನವೆ ಯುಗಾದಿ. ಋತುಗಳ ರಾಜ ವಸಂತಕಾಲ ಆರಂಭವಾಗುವ ಈ ದಿನದಿಂದ ಸೂರ್ಯ ಕೊಂಚ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಕಾಲ. ಅಧಿಕೃತವಾಗಿ ಬೇಸಿಗೆಕಾಲ ಆರಂಭವಾಗುವ ದಿನ. ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಪ್ರತೀವರ್ಷದ ಯುಗಾದಿಗೂ ಹಳತರ ಅಂತ್ಯ ಮತ್ತು ಹೊಸ ಸಂವತ್ಸರದ ಆರಂಭವಾಗುತ್ತದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ […]Read More
ಕುಂಭಮೇಳದಲ್ಲೊಂದು ಸುತ್ತು – 2 ಭಾರತ ದೇಶವು ಆಧ್ಯಾತ್ಮಿಕತೆಯ ನೆಲೆವೀಡು ಎಂಬುದು ಎಲ್ಲರಿಗೂ ತಿಳಿದಿದೆ,.ದೇಶದ ಮೂಲೆ ಮೂಲೆಗಳಲ್ಲಿ ವಿಭಿನ್ನ ಧಾರ್ಮಿಕ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ನಾವು ಇಲ್ಲಿ ಕಾಣಬಹುದು. ನಮ್ಮ ದೇಶದ ಹಲವು ಸ್ಥಳಗಳು ಬಹಳ ಜನಪ್ರಿಯವಾಗಿವೆ. ಇಲ್ಲಿನ ಆಚರಣೆಗಳು ಮತ್ತು ಧಾರ್ಮಿಕ ಮೆರವಣಿಗೆಗಳಿಂದಾಗಿ ಇಡೀ ಜಗತ್ತಿಗೆ ಪರಿಚಯಿಸಲ್ಪಟ್ಟಿವೆ. ಅಂತಹ ಆಚರಣೆಗಳಲ್ಲಿ, ಕುಂಭಮೇಳವೂ ಒಂದು. ಕುಂಭಮೇಳವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಗುರುತಿಸಲಾಗಿದೆ. ನಮ್ಮ ದೇಶದಲ್ಲಿ ನಡೆಯುವ ನಾಲ್ಕು ಪ್ರಮುಖ ಕುಂಭಮೇಳಗಳು ಪ್ರಸ್ತುತ ನಾವು ಪ್ರಯಾಗರಾಜ್ನ […]Read More
ಬಂಧನದ ಪರಿ ಶರಧಿಯ ಸೇರಲು ಹೊರಟಿದೆ ಹೊಳೆಯುಕಡಲ ತೆರೆಯೂ ಆರ್ಭಟವ ಮಾಡುತಿದೆ !ಸಡಗರದ ಸಮ್ಮಿಲನಕೆ ಹಾತೊರೆದು..ಸವಿಬಂಧನದ ಭಾವದಲಿ ಒಂದಾಗಿದೆ!! ಮಲ್ಲಿಗೆಯ ಮೊಗ್ಗರಳಿ ಪರಿಮಳವ ಬೀರುತಾದುಂಬಿಗಳ ಹಿಂಡನು ತನ್ನತ್ತ ಸೆಳೆದಿದೆ!ಧರೆಯ ಹಸಿರ ತೆನೆಯು ಆಗಸದತ್ತ ನೋಡಿ..ಬಂಧನದ ಈ ಪರಿಗೆ ತಾ ಮುಗುಳ್ನಕ್ಕಿದೆ!! ಗೂಡನು ತೊರೆದು ಬಾನಲಿ ಹಾರಾಡಿಹಹಕ್ಕಿಯು ಮುಸ್ಸಂಜೆಗೆ ಮನೆಯತ್ತ ಮರಳಿದೆ!ಬದುಕಿನ ಬಂಧನದಿ ಕ್ಷಣದ ಸಂತಸ ಮಿಗಿಲೆಂಬ..ಸತ್ಯವನರಿತು ಬಾಳ ಪಥವ ನಡೆಸಿದೆ!! ಆ ಬಾನು ಬುವಿಯು ಕ್ಷಿತಿಜದಲಿಒಲವಿನ ಸವಿ ಬಂಧನಕೆ ಬೆಸೆದಿದೆ!ದೈವಕೃಪೆಯಲಿ ಅರಳಿದ ಈ ಬಾಳಪುಟದಿ..ಹೊಸತೊಂದು ಭಾಷ್ಯವ ತಾ […]Read More
ಕೀರ್ತಿಶನಿ ನನಗೇನು ಹಂಬಲವೋ ದುರಾಸೆಯದುಎಲ್ಲರ ಗಮನ ಸೆಳೆಯುವ ಅಭಿಲಾಷೆಯುನಾ ಮಾಡಿದ ಕಾರ್ಯ ಇತರರಿಗೆ ತೋರಿಸಲುಹಿಡಿದಿಹುದು ಎನಗೆ ಕೀರ್ತಿಶನಿಯು ಜನ್ಮ ನೀಡಿದ ಮಾತೆಯು ಬಯಸದ ಬಯಕೆಅಕ್ಷರವನಿತ್ತ ಗುರು ಕಾಣದ ಅತ್ಯಾಸೆಯುಬದುಕು ಕೊಟ್ಟ ಭಾಷೆ ಬೇಡದ ಕಾಮನೆಯುನನಗೇಕೆ ಹಿಡಿಯಿತೋ ಕೀರ್ತಿಶನಿಯು ತ್ರಿಪದಿಗಳಲಿ ಜೀವನ ಬೋಧಿಸಿ ಸರ್ವಜ್ಞಭಾಮಿನಿಯಲಿ ಭಾರತ ಕೊಟ್ಟ ಕುಮಾರವ್ಯಾಸಅನಾಮಧೇಯನಾಗಿ ಬರೆದ ಮುದ್ದಣ ಕವಿಇವರಿಗಿಲ್ಲದ ಕೀರ್ತಿಶನಿಯು ನನಗೇತಕೋ ಎನ್ನ ಸಾಧನೆಗಳನು ಕಂಡು ಜನರುಗುರುತು ಹಿಡಿದು ಮೆಚ್ಚಿ ಹೊಗಳಲುಅದುವೇ ಕೀರ್ತಿಯ ಶ್ರೀರಕ್ಷೆಯುಬೇಡಿ ಬಯಸದಿರು ಕೀರ್ತಿಶನಿಯನು ಸಿ.ಎನ್. ಮಹೇಶ್Read More
ಮಹಾ ಕುಂಭ ಮೇಳ – ಆಧ್ಯಾತ್ಮ ಮತ್ತು ಪುಣ್ಯ ಸ್ನಾನ ಪ್ರಯಾಗರಾಜದಲ್ಲಿ ನಡೆದ ಮಹಾ ಕುಂಭ ಮೇಳವು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರಮುಖ ಅಂಗವಾಗಿ ಜಗತ್ತಿಗೆ ಪ್ರತಿನಿಧಿಸಿದೆ. ಇದು ವಿಶ್ವದಲ್ಲೇ ಆಯೋಜನೆಗೊಂಡ ಅತ್ಯಂತ ಮಹತ್ವಪೂರ್ಣ ಧಾರ್ಮಿಕ ಸಮಾರಂಭಗಳಲ್ಲಿ ಒಂದಾಗಿದೆ. ಮಹಾ ಕುಂಭವು ಆಯುಧಿ ಪುಣ್ಯ ಸ್ನಾನದ ಜೊತೆಗೆ ಆಧ್ಯಾತ್ಮಿಕ ಕ್ರಿಯೆಗಳ ಪರಿಪಾಲನೆಗೆ ಪ್ರಮುಖ ವೇದಿಕೆಯಾಗಿತ್ತು. ಮಹಾ ಕುಂಭ ಮೇಳದ ಮಹತ್ವ ಮಹಾ ಕುಂಭ ಮೇಳವು 144 ವರ್ಷಕ್ಕೊಮ್ಮೆ ನೆಡೆಯುವ ಪ್ರಮುಖ ಧಾರ್ಮಿಕ ಸಮಾರಂಭವಾದುದರಿಂದ ಇಲ್ಲಿನ […]Read More
ಈ ಹೃದಯ ಮಾರಾಟಕ್ಕಿದೆ ಈ ಹೃದಯ ಮಾರಾಟಕ್ಕಿದೆಬನ್ನಿ ಗ್ರಾಹಕರೇ ಬನ್ನಿಸೀಮಿತ ಅವಧಿಗೆ ಮಾತ್ರವೇ ಉಂಟುಮಾರಾಟದ ಕೊಡುಗೆಗಳು ಲಭ್ಯನಿಯಮಗಳು ಅನ್ವಯ. ಕೊಳ್ಳುವವನ ಅಧೀನಈ ಹೃದಯ ಸ್ವಾಧೀನಈ ದೇಹ ಪರಾಧೀನ!ಹೃದಯದ ನೋವುಗಳು ಅಗಣಿತಕೊಳ್ಳಲೇಬೇಕಿದೆ ಗ್ರಾಹಕ ಸಂಭ್ರಮದ ಜೊತೆ ಜೊತೆಗೆ ಹೃದಯದ ಭಾರಕೆ ಸೊರಗಿದೆಒಲವೆಂಬ ದೀಪದ ಬೆಳಕುಅದೆಷ್ಟು ದಿನ ಉರಿದೀತುಬಯಸುವಂತಿಲ್ಲ ನೀವು ನಿರಂತರಹಣತೆ ಹಚ್ಚುವವನು ಬರಲಾರನೇ?ನಿರೀಕ್ಷೆಗೆ ಕೊನೆಯೆಂದು ಹಳತು ಎನ್ನುವಂತಿಲ್ಲ,ಈ ಹೃದಯದ ಕವಾಟಿನಲಿಅದೆಷ್ಟೋ ಕನಸುಗಳು ಬೆಚ್ಚಗೆ ಮಲಗಿವೆ ಹಾಗೆಯೇ,ಎಚ್ಚರಗೊಳಿಸುವವನ ತಾಕತ್ತು ಯಾರು ಬಲ್ಲರು..ಕನಸುಗಳು ಮಾತ್ರ ಮಾರಾಟಕ್ಕಿಲ್ಲಬನ್ನಿ ಗ್ರಾಹಕರೇ ಬನ್ನಿ ಈ ಹೃದಯ […]Read More
ಚಿಟ್ಟೆಗಳು ಒಂದು ಪ್ರದೇಶ ಆರೋಗ್ಯಕರ ಪರಿಸರ ಹೊಂದಿದೆ ಎಂದು ಹೇಳಬೇಕಾದರೆ ಆ ಪ್ರದೇಶದಲ್ಲಿ ಹಲವು ಗುಣಲಕ್ಷಣಗಳು ಇರುತ್ತವೆ. ಆ ಲಕ್ಷಣಗಳು ಪ್ರಾಣಿ ಪಕ್ಷಿ ಹುಳಹುಪ್ಪಟೆ ಸೇರಿದಂತೆ ಹಲವಾರು ವಿದದ ವೃಕ್ಷಗಳು ಇತ್ಯಾದಿಗಳು ಇರಬಹುದು. ಚಿಟ್ಟೆ ಮತ್ತು ಜೇನ್ನೋಣಗಳು ನಮ್ಮ ಸುತ್ತಲಿನ ಆರೋಗ್ಯಕರ ಪರಿಸರವನ್ನ ಸೂಚಿಸುತ್ತವೆ.ಇವುಗಳ ಮುಖ್ಯ ಆಹಾರ ಹೂವುಗಳ ಮಕರಂದ. ಎಲ್ಲಿ ಹೂವುಗಳು ಇರುತ್ತವೆಯೋ ಅಲ್ಲಿ ಮಕರಂದ ಹೀರಲು ಚಿಟ್ಟೆ ಹಾಗೂ ಜೇನ್ನೊಣಗಳು ಧಾವಿಸುತ್ತವೆ. ಯಾವ ಪ್ರದೇಶದಲ್ಲಿ ಅಪಾರ ಪ್ರಮಾಣದ ವೈವಿಧ್ಯಮಯ ಹೂವುಗಳು ಇದಾವೆ ಎಂದರೆ ಅಲ್ಲಿ […]Read More
ತನಗಗಳು ತನಗ ಫಿಲಿಪೈನ್ಸ್ ದೇಶದ ಕಾವ್ಯ ಪ್ರಕಾರ, ಈ ಕಾವ್ಯ ಪ್ರಕಾರಕ್ಕೂ ಜಪಾನಿನ ಹೈಕು ವಿಗೂ ಕೆಲವು ಹೋಲಿಕೆಗಳಿವೆ. ಹೈಕು ಮೂರು ಸಾಲಿನ ಕವಿತೆ, ತನಗ ನಾಲ್ಕು ಸಾಲಿನ ಸಾಲುಗಳ ಕವಿತೆ. ಪ್ರತಿ ಸಾಲು ಏಳು ಪದಗಳಿಂದ ಕೂಡಿರುತ್ತದೆ. ಈ ಕಾವ್ಯ ಪರಂಪರೆ ಅಂತ್ಯಪ್ರಾಸವುಳ್ಳ ಕವಿತೆ, ವಿವಿಧ ವಿನ್ಯಾಸಗಳಿಗೆ ಆಸ್ಪದವಿದೆ ಇಲ್ಲಿ ಲಯ ಮತ್ತು ಸಿಲಬಲ್ ಮನಗಳು ಇರುವುದರಿಂದ ಕವಿಯ ಸಾಮರ್ಥ್ಯವನ್ನು ಓರಗೆ ಹಚ್ಚುತ್ತವೆ. ತನಗಗಳ ನಿನ್ನ ಅಂತರಂಗದಾನೋವಿಗೆ ಕಿವಿಯಾಗು,ಅದುವೆ ನಿನ್ನಾ ಬಾಳಮುನ್ನಡೆಯ ದಿಕ್ಸೂಚಿ!!**ಹಕ್ಕಿ ರೆಕ್ಕೆಗಳಂತೆಸುಖ ದುಃಖ […]Read More