ಸಿನಿಮಾ ಎಂದರೆ ಎಲ್ಲರಿಗೂ ಇಷ್ಟವಾದಂತಹ ಹಾಗೂ ಅತಿ ಶೀಘ್ರವಾಗಿ ಜನಗಳಿಗೆ ಮನ ಮುಟ್ಟುವ ಒಂದು ಮಾಧ್ಯಮ. ಜನರ ಎಷ್ಟೋ ಕನಸುಗಳಿಗೆ ಹಾಗೂ ಕಲಾಭಿರುಚಿಯ ಕೃಷಿಗೆ ನೀರು ಹಾಕಿ ಪೋಷಿಸಿರುವಂಥ ಒಂದು ಅದ್ಭುತ ವೇದಿಕೆ. ಸಿನಿಮಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಸಿನೆಮಾವನ್ನು ಹಾಗೂ ಅದರಲ್ಲಿ ಪಾತ್ರ ವಹಿಸುವ ಕಲಾವಿದರನ್ನು ಆರಾಧಿಸದವರಿಲ್ಲ. ಎಷ್ಟೋ ಪಾತ್ರಗಳನ್ನು ತಾನೇ ಎನ್ನುವ ಹಾಗೆ ಅನುಭವ ಪಡೆಯುತ್ತಾ ಖುಷಿ ಪಡುತ್ತಾರೆ. ಪಾತ್ರ ಅತ್ತಾಗ ಅಳುವಂತೆ ಮಾಡುವುದು. ಪಾತ್ರ […]Read More
–ಮೊಗದಿಶುವಿನಲ್ಲಿನ ಮೊದಲ ಮನೆ (ಕಳ್ಳರ ಹಾವಳಿ)– ನಾನು ಈ ಮೊದಲೇ ನನ್ನ ಹಿಂದಿನ ಸಂಚಿಕೆಯೊಂದರಲ್ಲಿ, ಇಂಗ್ಲೆಂಡಿಗೆ ಸಾಧ್ಯವಾದರೆ ಪ್ರಯತ್ನಿಸಿ ಹೋಗುವ ಇಚ್ಛೆಯ ಬಗ್ಗೆ ತಿಳಿಸಿದ್ದೆ. ಅದಕ್ಕಾಗಿ, ಅರ್ಜಿಯ ಸಂಗಡ ಬ್ರಿಟಿಷ್ ಪೌಂಡ್ ಸ್ಟರ್ಲಿಂಗುಗಳ ಡ್ರಾಫ್ಟ್ ಕೂಡ ಕಳಿಸಬೇಕಾಗಿತ್ತು. ಆದರೆ ಯುದ್ಧನಿರತ ಹಾರ್ಗೀಸಾದಲ್ಲಿ ಎಲ್ಲ ಪ್ರಕಾರದ ಸಂಪರ್ಕಗಳೂ ಒಮ್ಮೆಲೇ ಕಡಿತವಾಗಿದ್ದುದರಿಂದ ಅದು ಅಸಾಧ್ಯವಾಗಿತ್ತು. ಹಾಗಾಗಿ ರಜೆಗೆ ಹೋದಾಗ ಭಾರತದಿಂದಲೇ ಕಳಿಸಲು ಯೋಚಿಸಿದ್ದೆ ಎಂದು. ಭಾರತದಲ್ಲಿ ನನ್ನ ಗೆಳೆಯನನ್ನು ವಿಚಾರಿಸಲಾಗಿ, ಅದರ ಅಂತಿಮ ಗಡುವು ಮುಗಿದು ಕೇವಲ ಎರಡು ದಿನ […]Read More
ನಾನು ವಸಂತನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ ನಮ್ಮ ಊಟ ಮುಗಿಸಿ ಇನ್ನು ಉಳಿದ ಅರ್ಧ ಗಂಟೆ ಒಂದು ಮರದ ಕೆಳಗೆ ನಿಂತು ಹರಟೆ ಹೊಡೆಯುವುದು ನಮ್ಮ ದಿನನಿತ್ಯದ ಹವ್ಯಾಸವಾಗಿತ್ತು. ಅಲ್ಲಿಗೆ ಹೆಚ್ಚು ಕಡಿಮೆ ಅರ್ಧ ಕಚೇರಿಯೇ ಬಂದು ಸೇರುತಿತ್ತು. ಸುಮಾರು ನಾಲ್ಕೈದು ದಿನದಿಂದ ನಮ್ಮ ಟೀಮಿನ ‘ಸುನಿಲ್’ ಕಾಣಿಸುತ್ತಿರಲಿಲ್ಲ. ಆಶ್ಚರ್ಯವೆಂದರೆ ಆಫೀಸಿಗೆ ಬಂದು ಕೂಡ ನಮ್ಮ ಜೊತೆ ಬರದೇ ಆಫೀಸಿನ ಕೆಳಗೇ ನಿಂತು ಕಾಲಕಳೆಯುತಿದ್ದ. ಇದರ ಬಗ್ಗೆ ಜೊತೆಗಿರುವವರನ್ನು ವಿಚಾರಿಸಿದಾಗ ಯಾರ ಮೇಲೋ ಮುನಿಸಿಕೊಂಡಿರಬೇಕು […]Read More
ದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ, ಮಹಿಳೆಯರು ಅಸಹಾಯಕರಾಗಿದ್ದಾರೆ ಆದರೆ ನಿರಂತರ ಪುರುಷರ ದೌರ್ಜನ್ಯದಿಂದ ಬೇಸತ್ತ ಕೆಲವು ನೊಂದ ಮಹಿಳೆಯರು ಸಿಡಿದೆದ್ದಿದ್ದಾರೆ ತಿರುಗಿಬಿದ್ದಿದ್ದಾರೆ. ಇಂತಹ ಸಿಡಿದೆದ್ದ ಮಹಿಳೆಯರಲ್ಲಿ ನಮಗೆ ಮೊದಲು ನೆನಪಾಗುವುದು ಉತ್ತರಪ್ರದೇಶದ ಚಂಬಲ್ ಕಣಿವೆಯ ಡಕಾಯಿತ ರಾಣಿ ಪೂಲನ್ ದೇವಿ, ತನ್ನ ಮೇಲೆ ಪದೆ ಪದೆ ಅತ್ಯಾಚಾರ ನಡೆಸುತ್ತಿದ್ದವರ ಮೇಲೆ ತಿರುಗಿ ಬಿದ್ದು ಹಲವರನ್ನು ಕೊಂದು ಹಾಕಿ ಡಕಾಯಿತ ರಾಣಿಯಾಗಿದ್ದು ಈಗ ಇತಿಹಾಸ. ಈಗ ಅದೆ ಉತ್ತರ ಪ್ರದೇಶದ ಬುಂದೇಲ್ ಖಂಡದ ಮಹಿಳೆಯೊಬ್ಬಳು ಪ್ರಪಂಚದಾದ್ಯಂತ […]Read More
ಆಸೆ ತಾರೆಗಳಹೂದೋಟದಲಿನಿನ್ನ ನಗುಮೊಗವಕಾಣುವಾಸೆ!ನೀ ನಕ್ಕಾಗ ನಿನ್ನಹೊಳೆವ ದಂತಗಳಲಿನನ್ನ ಪ್ರತಿಬಿಂಬವಕಾಣುವಾಸೆ!! ಶಂಕಿತ ನಾನುನನ್ನವಳಪ್ರೇಮ ಸೋಂಕಿತ!ಆದರೆಅವಳ ದೃಷ್ಟಿಯಲ್ಲಿನಾನಿನ್ನೂ ಶಂಕಿತ!! ಜೊತೆಗಿರಲು ನಿನ್ನ ಮುದ್ದಾದ ರೂಪಹೂ ನಗೆಯ ಕಂಡುಪ್ರೀತಿ ಇನ್ನೂ ಹೆಚ್ಚಾಗಿದೆ!ಸಲುಗೆಯ ಸ್ನೇಹ ಕಂಡುಬಯಕೆಯ ಸಿಹಿ ಉಂಡುಸದಾ ನಿನ್ನ ಜೊತೆಗಿರಲುಈ ಜೀವ ಬಯಸಿದೆ! ಏಟು ನೋಟದಲ್ಲೂಒಮ್ಮೊಮ್ಮೆಏಟು ಬೀಳುತ್ತದೆ!ಅವಳುನೋಡಿಯೂನೋಡದಂತೆಹಾದು ಹೋದಾಗ!! ಡಾII ಪರಮೇಶ್ವರಪ್ಪ ಕುದರಿRead More
ಕಾಸಿರಲು ಕೈಯಲ್ಲಿ ದುಂದುವೆಚ್ಚವು ಬೇಡಹಾಸಿಗೆಯು ಇದ್ದಷ್ಟು ಕಾಲುಗಳ ಚಾಚುಕಾಸು ಗಳಿಸಲು ಪಟ್ಟ ಪಾಡುಗಳ ನೆನೆಯುತ್ತಕಾಸಿಗಿಹ ಬೆಲೆಯರಿಯೊ- || ಪ್ರತ್ಯಗಾತ್ಮ || ಹಣವು ಕೈಯೊಳಗಿರಲು ಸುಮ್ಮನಿರುವುದೆ ಮನವು?ಮನವು ಚಂಚಲ ಕಪಿಯು ಅದ ನಂಬಬೇಡಹಣವ ಬ್ಯಾಂಕಿನಲಿರಿಸು ಬಡ್ಡಿ ಬೆಳೆವುದು ಮತ್ತೆಮನೆಯವರ ರಕ್ಷಿಪುದು- || ಪ್ರತ್ಯಗಾತ್ಮ || ಕಿರು ಹಣತೆ ಜ್ಯೋತಿಯನು ಕಿರಿದೆನ್ನಬಹುದೇನು ?ಇರುಳ ಕಗ್ಗತ್ತಲಿನ ಕೋಣೆಗದು ಸಾಕುಇರುವೆಡೆಯೆ ಕೈಲಾದುದನಿತೆಸಗು; “ಕೊರಗದಿರು”ಕಿರಿದೆನ್ನದಿರು ಸೇವೆ- || ಪ್ರತ್ಯಗಾತ್ಮ || ಪೊಡವಿ ಲಿಂಗದ ಮೇಲೆ ನಭದ ಧಾರಾಪಾತ್ರೆಎಡೆಬಿಡದೆ ಸುರಿವ ಮಳೆ ಕುಂಭಾಭಿಷೇಕ,ಗುಡುಗು ಘಂಟಾಘೋಷ; ಮಿಂಚು […]Read More
ಭೂಮಿ – 1 ಸಮುದ್ರ ವಸನೇ ದೇವಿ ಪರ್ವತಸ್ಥನ ಮಂಡಲೇ Iವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷ ನಮೋಸ್ತುತೆ II ಭೂಮಿ ಸೂರ್ಯನ ಸಂಸಾರದಲ್ಲಿ 3 ನೇ ಗ್ರಹ. ಸೌರಮಂಡಲದಲ್ಲಿ 5 ನೇ ಅತಿ ದೊಡ್ಡ ಗ್ರಹ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡಗ್ರಹ, ಇದಲ್ಲದೆ ಎಲ್ಲರಿಗೂ ತಿಳಿದಿರುವಂತೆ ಇಡೀ ಬ್ರಹ್ಮಾಂಡದಲ್ಲೇ ಜೀವಸಂಕುಲವನ್ನು ಹೊಂದಿರುವ ಏಕೈಕ ಕಾಯ ಭೂಮಿ. ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯ 460 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು. ಭೂಮಿಯ ನೈಸರ್ಗಿಕ […]Read More
ನಗರದ ರಸ್ತೆಗಳಲ್ಲಿ ತಲೆಯಮೇಲೆ ಮೂಟೆ ಹೊತ್ತು ಹೋರಾಟ ಹೆಂಗಸನ್ನು ಕರೆದು ಕೇಳಿದರೆ ಮೂಟೆಯ ತುಂಬ ಹೊನಗೊನ್ನೆ ಸೊಪ್ಪನ್ನು ಮಾರುತ್ತಾ ಹೊರಟಿದ್ದಳು. ಕೆಲವರಿಗಷ್ಟೇ ಪರಿಚಯ ಈ ಸೊಪ್ಪು. ಹಳ್ಳಿಯ ಸೊಗಡಿನಲ್ಲಿ ಬೆಳದವರಿಗೆ ಇದರ ಪರಿಚಯ ಹೆಚ್ಚು. “ಆಲ್ಟರ್ ನ್ಯಾಂಥೀರ ಸೆಸ್ಸಿಲಿಸ್” ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಕೆಸರು ನೀರಿನಲ್ಲಿ ಬೆಳೆಯುತ್ತದೆ. ತಿಳಿಹಸುರಿನ ಎಲೆಯ ಕಾಂಡ ಹೊಂದಿದ್ದು, ಪುಟ್ಟ ಎಲೆಗಳು ಹಾಗು ಬಿಳಿಯ ಹೂಗಳಿಂದ ಕೂಡಿರುತ್ತದೆ. ಕೆಸರಿನಲ್ಲಿ ಬಳ್ಳಿಗಳಂತೆ ತೇಲುತ್ತಾ ಬೆಳೆಯುತ್ತದೆ. ಕೆರೆ ಹೊಂಡಗಳ ದಂಡೆಗಳೇ ಈ ಸಸ್ಯಕ್ಕೆ […]Read More
ಹಿಂದಿನ ಸಂಚಿಕೆಯಿಂದ… ತಮ್ಮನ್ನು ಬೆಂಬೆತ್ತಿದ ಫಿಲಿಪ್ ಮತ್ತು ನೀಲಂ ಬಗ್ಗೆ ಶ್ಯಾಮ್ ಗೆ ಅರಿವಿತ್ತು ಆದರಿಂದ ಒಂದು ನಿರ್ಜನ ಪ್ರದೇಶದಲ್ಲಿ ಗಾಡಿಯನ್ನು ನಿಲ್ಲಿಸುತ್ತಲೇ ಅಪ್ರಮೇಯನಿಗೆ ತಾನು ಇಂಟರ್ಪೋಲ್ ಏಜೆಂಟ್ ಎಂದು ತಿಳಿಸಿದ. ಅಷ್ಟರಲ್ಲಿ ಫಿಲಿಪ್ ಕಡೆಯವರಿಂದ ಗುಂಡಿನ ಚಕಮಕಿ ಶುರುವಾಗಿ ನೀಲಂ ಹಿಂದಿನಿಂದ ಬಂದು ಶ್ಯಾಮ್ ತಲೆಗೆ ಹೊಡೆದು ಮೂರ್ಛೆಗೊಳಿಸಿ ಅಪ್ರಮೇಯನನ್ನು ಪೂರ್ತಿ ಹುಡುಕಾಡಿ ವಿಗ್ರಹಗಳು ಇಲ್ಲವೆಂದು ಖಚಿತಪಡಿಸಿಕೊಂಡು ಲಗೇಜ್ ಗಳನ್ನಾದರೂ ಹುಡುಕೋಣ ಎಂದು ಹೋದರು. ಅಷ್ಟರಲ್ಲಿ ಶ್ಯಾಮ್ ಗೆ ಎಚ್ಚರವಾಗಿ ದಾಳಿ ಮಾಡಿದ್ದು ಫಿಲಿಪ್ ಎಂದು […]Read More
— ೧೨ — ಒಗಾದನ್ ಯುದ್ಧ! – 3 ವಿಮಾನ ನಿಲ್ದಾಣದಿಂದ ಮೊದಲ ದಿನ, ಸೀಟುಗಳು ದೊರಕದೆ ಮರಳಿ ಮನೆಗೆ ಬಂದು, ಇದ್ದುದರಲ್ಲಿ ಏನೋ ಬೇಯಿಸಿ ತಿಂದು ಮಲಗಿಯೂ ಬಹಳ ಸಮಯ ನಿದ್ದೆ ಬರದೆ ಹೊರಳಾಡಿ, ಕೊನೆಗೆ ಬೆಳಗಿನಿಂದ ನಡೆದ ಪ್ರಹಸನದ ದುಗುಡದಿಂದಲೇ ಸುಸ್ತಾಗಿದ್ದ ಕಾರಣವೋ ಎಂಬಂತೆ, ಅಂತೂ ರಾತ್ರಿ ಸರಿ ಹೊತ್ತಿಗೆ ನಿದ್ದೆ ಹತ್ತಿ, ಏಳುವಾಗ ದಡಬಡ. ಬೆಳಿಗ್ಗೆ ಯಥಾಪ್ರಕಾರ ಗಂಟುಮೂಟೆ ಗಾಡಿಗೆ ತುಂಬಿ ಮರುಪ್ರಯತ್ನಕ್ಕೆ ಹೋಗಿ, ಆ ದಿನವೂ ಇಲ್ಲದೆ ವಾಪಸ್ಸು ಬಂದದ್ದಾಯಿತು. ಹೀಗೆ […]Read More